ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ಪುಟ್ಟ ದೇಶ ಇಸ್ರೇಲ್, ಎಷ್ಟೇ ತೊಂದರೆಗಳು ಬಂದ್ರೂ ಕೂಡ ಎದೆಗುಂದದೆ, ಬಂದ ತೊಂದರೆಗಳನ್ನು ಎದುರಿಸಿ ಹೇಗೆ ಬೆಳೆದಿದೆ ಎಂದರೆ….ಆ ಇಸ್ರೇಲಿನ ಅದೆಷ್ಟೋ ಪಟ್ಟು ದೊಡ್ಡದಾಗಿರೋ ನಮ್ಮ ಭಾರತಕ್ಕೇನು ಆ ರೀತಿ ಬೆಳೆಯೋ ಅವಕಾಶಗಳೇ ಸಿಕ್ಕಿರಲಿಲ್ಲವಾ ? ಅನ್ನೋದು ನಮಗೆ ನಾವೇ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ !
ಇದುವರೆಗೂ ಇಸ್ರೇಲಿನ ಮೇಲೆ 171 ಸೂಸೈಡ್ ಬಾಂಬರ್ ಅಟ್ಯಾಕ್ ಆಗಿವೆ ! ಪ್ರತಿ ಅಟ್ಯಾಕಿಗೆ ಪ್ಲಾನ್ ಹಾಕಿದವನು ಒಬ್ಬನೇ ಆಗಿರಲಿ ಅಥವಾ ರಾಷ್ಟ್ರವೇ ಆಗಿರಲಿ ಇಸ್ರೇಲಿಗರು ಬಿಟ್ಟದ್ದೇ ಇಲ್ಲ ವರ್ಷಗಟ್ಟಲೆ ಹುಡುಕಿದ್ದಾರೆ ಒಬ್ಬೊಬ್ಬ ಅಯೋಗ್ಯ ಉಗ್ರರನ್ನಂತೂ ಸತತ ಹತ್ತು ಹದಿನೆಂಟು ವರ್ಷಗಳಾದರೂ ಬಿಟ್ಟಿಲ್ಲ ಅವನು ಪಾತಾಳದಲ್ಲಡಗಿದ್ದರೂ ಹುಡುಕಿ ಬೆರಸಾಡಿ ಕತ್ತರಿಸಿದ ನಂತರವೇ ಅವರು ಸುಮ್ಮನಾಗಿರುವುದು.
ಇಸ್ರೇಲಿಗೆ ತೊಂದರೆ ಕೊಟ್ಟರೆಂಬ ಕಾರಣಕ್ಕೆ ಕೇವಲ ಒಂದು ದೇಶವಲ್ಲ…….”ಈಜಿಪ್ಟ್.ಜೋರ್ಡಾನ್.ಟ್ರಾನ್ಸ್ .ಸಿರಿಯಾ.ಲೆಬನಾನ್.ಸೌದಿ ಅರೇಬಿಯಾ.ಹೋಲಿವರ್.ಅಲಾ.ಸೋವಿಯತ್ ಯೂನಿಯನ್.ಪಲ್ವೋ.ಅಲ್ಜೀರಿಯಾ.ಮೊರಕ್ಕೋ.ಕ್ಯೂಬಾ.ಜಮ್ಮೌಲ್.ಅಮಾಲ್.ಉನಲು.ಹಮಾಸ್.ಪ್ವಾ “ಇವಿಷ್ಟೂ ದೇಶಗಳ ಮೇಲೆ ಯುದ್ದವಿಮಾನಗಳೊಂದಿಗೆ ತಿರುಗಿ ಬಿದ್ದು ಕಿರಲಿಕೊಂಡು ಓಡುವಂತೆ ಮಾಡಿದ್ದಾರೆ. ಇಲ್ಲಿ ಓದಿ:- 2000 ವರ್ಷಗಳಿಂದ ಭಾರತದ ರಾಜನಿಗಾಗಿ ಕಾಯುತ್ತಿತ್ತು ಈ ದೇಶ!!!
ಅದೂ ಸಾಲದೆಂಬಂತೆ 70 ಒಬ್ಬಂಟಿ ಉಗ್ರರನ್ನ ಟಾರ್ಗೆಟ್ ಮಾಡಿ ಮೊಸ್ಸಾದ್ ಕಡೆಯಿಂದ ಕೊಲ್ಲಿಸಿದರು. ಯಾಕೆಂದರೆ ಮತ್ತೊಮ್ಮೆ ಯಾರೊಬ್ಬ ಉಗ್ರಗಾಮಿ ತಮ್ಮ ದೇಶದ ಕಡೆ ಕಣ್ಣು ಹಾಕಿದರೆ ನಾನೆಲ್ಲಿದ್ದರೂ ನನ್ನ ಸಾವು ಖಚಿತ ಎಂದು ಜ್ಞಾನೋದಯ ಮಾಡಿಸಲಿಕ್ಕಾಗಿ ಹಾಗೂ ಅದೇ ಹಾದಿಯಲ್ಲೇ ಆತನನ್ನು ಕಳುಹಿಸಿದ ದೇಶವನ್ನೂ ಅಟ್ಟಾಡಿಸಿಕೊಂಡು ಹೊಡೆದಿದೆ .ಅದು ಮಾಡಿರುವ ಲೀಗಲ್ ಇಲ್ಲೀಗಲ್ ಮೊಸ್ಸಾದ್ ಆಪರೇಸನ್ನುಗಳಿಗಂತೂ ಲೆಕ್ಕವೇ ಇಲ್ಲ .
ಅವರಿಗೆ ಗೊತ್ತಿರುವುದು ಅದೊಂದೇ ಇಸ್ರೇಲನ್ನು ಯಾರೂ ಕೆಣಕಬಾರದು.ಇಸ್ರೇಲ್ ಒಳಗಡೆ ಒಂದೇ ಒಂದು ಮಗುವಿನ ಕಿರುಬೆರಳಿಗೆ ಯಾವೊಬ್ಬ ಗಾಯ ಮಾಡಿದರೂ ಅವನನ್ನು ಬಿಡುವ ಮಾತೇ ಇಲ್ಲ ಅಷ್ಟೇ ! ಇದೆಲ್ಲಾ ಬದಿಗಿಡಿ ಒಂದು ಕಾಲದಲ್ಲಿ ಬಾರ್ಡರಿನಲ್ಲಿ ಕಾಯುತ್ತಿದ್ದ ಇಸ್ರೇಲ್ ಸೈನಿಕರತ್ತ ದಪ್ಪ ಕಣ್ಣು ಬಿಟ್ಟು ಗುರಾಯಿಸಿದ್ದಕ್ಕಾಗಿಯೇ ಜೊರ್ಡಾನಿನ 200 ತಲೆಗಳನ್ನು ಉಡಾಯಿಸಿ ವಿಶ್ವಸಂಸ್ಥೆಯ ಮುಂದೆ ಅಪರಾಧಿಯಾಗಿಯೂ ನಿಂತಿತ್ತು ಇಸ್ರೇಲ್ ! ಈ ವಿಶ್ವಸಂಸ್ಥೆಯಿಂದ ಬೈಸಿಕೊಳ್ಳುವುದು ಇಸ್ರೇಲಿಗೇನೂ ಹೊಸದಲ್ಲ.
ಇಷ್ಟೆಲ್ಲಾ ಪುರಾಣ ಓದಿದಿರಲ್ಲಾ ಇಲ್ಲಿ ಎಲ್ಲಾದರೂ ಆ ಇಸ್ರೇಲಿನ ಪ್ರಧಾನಿ ಹೆಸರು ಬಂದಿದೆಯಾ ? ಯಾಕೆ ಪ್ರಧಾನಿ ಹೆಸರು ಬಂದಿಲ್ಲಾ ಎಂದರೆ ಅವರಿಗೆ ಮುಖ್ಯವಾಗಿರುವುದು 70ವರ್ಷ ಬದುಕಿ ಸಾಯುವ ಪ್ರಧಾನಿಯಲ್ಲ ! …..ನೆನಪಿರಲಿ ! ಅವರಿಗೆ ಮುಖ್ಯವಾಗಿರುವುದು ದೇಶ !!
ನಾವೀಗ ತಯಾರಿಸೋ ಒಂದು ಬಾಂಬು 50.000 ಸಾವಿರ ಇಸ್ರೇಲಿಗಳನ್ನ ಸಾಯಿಸತ್ತೆ ಅಂತ ಸುಮ್ಮನೆ ಡೈಲಾಗ್ ಹೊಡೆದದ್ದಕ್ಕೇ ಹೋಗಿ ಇರಾಕ್ ಸುಟ್ಟರಲ್ಲ ಆಗ ಸುಟ್ಟದ್ದೂ ಕೂಡ ಇಸ್ರೇಲ್ ಅಷ್ಟೇ! ನಮ್ ಪ್ರಧಾನಿ ಸುಟ್ಟಿದ್ದು ಅಂತ ಅವರೆಲ್ಲೂ ಬರೆದುಕೊಂಡಿಲ್ಲ.
ವಿಮಾನ ಹೈಜಾಕ್ ಮಾಡಿದಾಗ “ಸಂಧಾನದ ಮಾತೇ ಇಲ್ಲ ! ನಮ್ಮವರು 200 ಜನ ಹೈಜಾಕ್ ಆಗಿರುವವರು ಸಾಯುವುದೇ ನಿಜವಾದಲ್ಲಿ …ಇನ್ನು ಅರ್ಧ ಗಂಟೆಯಲ್ಲಿ ಇಡೀ ಆಫ್ರಿಕಾ ಸುಟ್ಟುಬಿಡುತ್ತೇನೆ !. ಎಂದು ಕಿರುಚಿಕೊಂಡನಲ್ಲಾ ಆ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಆಗಲೂ ಕೂಡ ಎಂಟಬ್ಬೇ ಆಪರೇಶನ್ ಮಾಡಿದ್ದು ಇಸ್ರೇಲ್ ಎಂದು ಇತಿಹಾಸದ ಪುಟಗಳಲ್ಲಿ ಅವರು ಬರೆದುಕೊಂಡರೇ ಹೊರತು “ಇಝಾಕ್ ರಬಿನ್ “ಮಾಮ ಮಾಡಿದ್ದು ಇದು ಅಂತ ಬರೆದುಕೊಂಡಿಲ್ಲ ಅವರು.
ಇದುವರೆಗೂ ಭಾರತದಲ್ಲಿ ಹತ್ತುಸಾವಿರದಷ್ಟು ಉಗ್ರರ ದಾಳಿಗಳಾಗಿವೆ ಆದರೆ ನಮ್ಮ ದೇಶದ ಮಗುವಿಗೆ ಗಾಯ ಮಾಡಿದ ದೇಶವನ್ನು ಇನ್ನರ್ಧ ಗಂಟೆಯಲ್ಲಿ ಸಿಗಿದುಬಿಡುತ್ತೇನೆ ಎಂದ ಒಬ್ಬ ಪ್ರಧಾನಿ ಹೆಸರು ಹೇಳಿ ನೊಡೋಣ ! ಇಲ್ಲ ಅನ್ನೋದೇ ಸರಿಯಾದ ಉತ್ತರ.
ಹಾಗೂ ನೋಡುವುದಾದರೆ, ಲಾಲ್ ಬಹದ್ದೂರ್ ಶಾಸ್ತ್ರಿ ಇದೇ ಇಸ್ರೇಲ್ ವ್ಯಕ್ತಿತ್ವದವರು, ಒಂದು ಸಲ ಪಾಕಿಸ್ತಾನವನ್ನು ಮತ್ತೊಮ್ಮೆ ಚೀನಾವನ್ನು ತಲೆ ಬಾಗಿಸಿದ್ದರು .ಮತ್ತಾರೂ ಇಲ್ಲವೇ ಇಲ್ಲ .
“ಒಂದು ಉಗ್ರರ ದಾಳಿ ನಡೆದರೆ ನಮ್ಮತನವನ್ನು ಸಾಬೀತುಪಡಿಸಿಕೊಳ್ಳಲು ಇದು ಒಂದು ಅವಕಾಶ ” ಎಂದು ನಮ್ಮವರು ಇದುವರೆಗೂ ತಿಳಿದೇ ಇಲ್ಲ ಅಂತ ನಾವು ಅಂದುಕೊಂಡರೆ ನಾವೇ ದಡ್ಡರಾಗಿಬಿಡುತ್ತೇವೆ ಇವರಿಗೆ ಎಲ್ಲವೂ ಗೊತ್ತಿದೆ ಆದರೆ ಯುದ್ಧ ಮಾಡಿದರೆ ಅಥವಾ ಉಗ್ರರನ್ನು ಅಟ್ಟಾಡಿಸಿಕೊಂಡು ಹೊಡೆಯಿರಿ ಎಂದು ಆಣತಿ ಕೊಟ್ಟರೆ ತಮ್ಮ ಕುರ್ಚಿಗೆ ಸಂಚಕಾರ ಎಂದು ಚೆನ್ನಾಗಿ ತಿಳಿದಿದ್ದಾರೆ ಅಷ್ಟೇ !
ಕೃಪೆ:-ಕಂಟೆಂಟ್ ಫ್ರಮ್ ಅಂತರ್ಜಾಲ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
2017ರಲ್ಲಿಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ 25ರಂದು ಬಿಡುಗಡೆಮಾಡಿರುವ ಅಧ್ಯಯನ ವರದಿ. ನವೆಂಬರ್ 25, ಮಹಿಳೆಯರ ವಿರುದ್ಧದ ಹಿಂಸಾಚಾರ ತಡೆಗೆ ಗೊತ್ತು ಮಾಡಲಾದ ಅಂತರರಾಷ್ಟ್ರೀಯ ದಿನವೂ ಹೌದು. ಈ 87 ಸಾವಿರವಾಗಲೀ 50 ಸಾವಿರವಾಗಲೀ ಸರ್ಕಾರಿ ಲೆಕ್ಕದಿಂದ ತೆಗೆದುಕೊಂಡದ್ದುಮಾತ್ರ ಎಂಬುದನ್ನು ಗ್ರಹಿಸಿದರೆ, ಇದರಾಚೆಗಿನ ಸತ್ಯದ ಭೀಕರತೆಯನ್ನು ಊಹಿಸಬಹುದು….
ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಹುತೇಕ ದ್ವಿಚಕ್ರ ವಾಹನಗಳು ಪೆಟ್ರೋಲ್ ಎಂಜಿನ್ ಸಹಾಯದಿಂದ ಚಲಿಸುತ್ತಿರುವುದು ಎಂದು ನಮಗೆಲ್ಲಾ ತಿಳಿದೇ ಇದೆ. ಜೊತೆಗೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳು ಕೂಡಾ ಬಿಡುಗಡೆಯಾಗುತ್ತಿದ್ದು, ಪೆಟ್ರೋಲ್ ಎಂಜಿನ್ ಬೈಕ್ಗಳಿಗೆ ಟಕ್ಕರ್ ನೀಡುವುದಕ್ಕೆ ಸಜ್ಜಾಗುತ್ತಿವೆ. ಹೀಗಿರುವಾಗ ಇಲ್ಲೊಬ್ಬ ಅಸಾಮಿ ಕೋಕಾಕೋಲಾದಿಂದ ಬೈಕ್ ಚಾಲನೆ ಮಾಡುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾನೆ. ವಾಹನಗಳ ಇಂಧನಗಳ ಬೆಲೆ ಕಡಿತಗೊಳಿಸುವುದಕ್ಕೆ ಜಗತ್ತಿನಾದ್ಯಂತ ಹಲವು ಹೊಸ ಇಂಧನ ಮಾದರಿಗಳನ್ನು ಪತ್ತೆಹಚ್ಚಲು ಹತ್ತಾರು ಸಂಶೋಧನೆಗಳು ನಡೆಯುತ್ತಿದ್ದು, ಇಲ್ಲೊಬ್ಬ ಯುವಕ ಮಾತ್ರ ಒಂದು ಸಾಧಾರಣ ಕೂಲ್…
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ, ತಂತ್ರಜ್ಙಾನ ಬೆಳೆಯುತ್ತಿದ್ದಂತೆ ಬ್ಯಾಂಕಿಂಗ್ ವ್ಯವಹಾರಗಳು ಸಹ ಎಲ್ಲರಿಗೂ ಸುಲಭವಾಗುತ್ತಿದೆ. ಹಾಗೆಯೇ ಇಂಟರ್ನೆಟ್ ಹ್ಯಾಕಿಂಗ್ , ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ.ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ. ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಪಾವತಿ ಮಾಡುವುದು, ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು…
ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ ನಿರ್ಮಿಸಲು ಮುಂಬೈ ಮೆಟ್ರೋ ನಿಗಮ ನಿರ್ಧರಿಸಿದೆ, ಕಾಮಗಾರಿಯೂ ಆರಂಭಗೊಂಡಿದೆ. ಗ್ಯಾಲರಿ ಧಾರಾವಿ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವೆ ಮೀಠಿ ನದಿ ಆಳದಲ್ಲಿ ಅಂದಾಜು 170 ಮೀಟರ್ ಉದ್ದದ ಮೆಟ್ರೋ ಸಾಗಲಿದೆ. ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್ ಸೇಂಟ್ಸ್ ಚರ್ಚ್ ಈ ಯೋಜನೆಗೆ ಸುಮಾರು 54 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನದಿ ಕೆಳಗೆ ಸುರಂಗ ಕೊರೆಯುವ ಮೊದಲು ಸುರಕ್ಷಿತ ಪರದೆ…
ಮಂಡ್ಯದ ಹುಡುಗಿ ವರಲಕ್ಷ್ಮಿ ಆಟ-ಪಾಠ ಎಲ್ಲದರಲ್ಲೂ ಸದಾ ಮುಂದು. ಆಶುಭಾಷಣ ಮಾಡುವುದರಲ್ಲಿ ಈಕೆ ಎತ್ತಿದ ಕೈ. ಕಬಡ್ಡಿ ಕೂಡ ಆಡುವ ವರಲಕ್ಷ್ಮಿಗೆ ಮುಂದೆ ಟೀಚರ್ ಆಗಿ ಬಡ ಮಕ್ಕಳಿಗೆ ಪಾಠ ಹೇಳಿಕೊಡುವ ಆಸೆ ಇದೆ. ಜೊತೆಗೆ ಸಿ.ಎ (ಚಾರ್ಟರ್ಡ್ ಅಕೌಂಟೆಂಟ್) ಆಗುವ ಕನಸಿದೆ. ಬೆಟ್ಟದಷ್ಟು ಆಸೆ ಹೊತ್ತು ‘ಕನ್ನಡದ ಕೋಟ್ಯಧಿಪತಿ’ ವೇದಿಕೆಗೆ ಬಂದಿದ್ದ ಈ ಪುಟ್ಟ ಹುಡುಗಿಯ ಕನಸು ಒಂದೇ ಕ್ಷಣದಲ್ಲಿ ನುಚ್ಚು ನೂರಾಗಿದ್ದು ಮಾತ್ರ ದುರಾದೃಷ್ಟಕರ. ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಕೋಟಿ ರೂಪಾಯಿ ಗೆಲ್ಲಲೇಬೇಕು ಎಂಬ ಛಲ…
ಒಬ್ಬ ವ್ಯಕ್ತಿಯನ್ನ ಸಮಾಜ ಉತ್ತಮ ವ್ಯಕ್ತಿಯಾಗಿ ನೋಡುವುದು ಆತನ ವರ್ತನೆ ಮತ್ತು ಮಾನವೀಯತೆ ಗುಣಗಳಿಂದ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ವ್ಯಕ್ತಿ ಅದೃಷ್ಟ ಬದಲಾವಣೆ ಆಗಲು ಜಾಸ್ತಿ ಸಮಯ ಕೂಡ ಬೇಕಾಗಿಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ. ಇನ್ನು ಅದೃಷ್ಟ ಅನ್ನುವುದು ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ ಮತ್ತು ಕೆಲವೊಮ್ಮೆ ಇರುವ ಅದೃಷ್ಟ ನಮ್ಮನ್ನು ದೂರ ಆದರೆ ಇನ್ನು ಕೆಲವು ಭಾರಿ ಅದೃಷ್ಟ ನಮ್ಮನ್ನ ಹುಡುಕಿಕೊಂಡು ಬರುತ್ತದೆ. ನಾವು ಹೇಳುವ ಈ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಫರ್ನಿಚರ್…