ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತಮ ದಾಂಪತ್ಯ ಜೀವನವೆಂದರೆ ಹೇಗಿರಬೇಕು ಎಂಬುದನ್ನೂ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸನ್ಮಾರ್ಗ..

ಪಂಡಿತ್ ಸುದರ್ಶನ್ ಆಚಾರ್ಯ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು 9663542672
ಹಿಂದೂ ವಿವಾಹ ಪದ್ಧತಿಯಲ್ಲಿ ಗಂಡು-ಹೆಣ್ಣುಗಳು ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಮಾತೆಂದರೆ ಧರ್ಮೇಚ,ಅರ್ಥೇಚ, ಕಾಮೇಚ ನಾತಿಚರಿತಾಮಿ, ನಾತಿಚರಿತವ್ಯಂ. ಅಂದರೆ ದಾಂಪತ್ಯದ ಹೊಸಿಲಲ್ಲಿ ನಿಂತಿರುವವರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಈ ಭಾಷೆ ದಾಂಪತ್ಯದ ಪರೀಕ್ಷೆಗೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತದೆ. ಪರಸ್ಪರರು ಧರ್ಮವಾಗಿ ನಡೆದುಕೊಂಡರೆ, ಸಂಪತ್ತಿಗಾಗಿ ಪರಿತಪಿಸದೇ ಅತಿಯಾಸೆ ಪಡದಿದ್ದರೆ, ಕಾಮಾತುರತೆಯಲ್ಲಿ ಅನ್ಯರೊಂದಿಗೆ ಸಂಬಂಧವಿಟ್ಟುಕೊಳ್ಳದಿದ್ದರೆ ಅಂಥ ಜೋಡಿಗಳೆಂದಿಗೂ ಪರಸ್ಪರ ಅನುಮಾನ ಪಡದೇ ಬಾಳುತ್ತವೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ಹಾಗಾಗಿಯೇ ಮದುವೆ ಸಂದರ್ಭದಲ್ಲಿ ಈ ಪರಸ್ಪರ ಮಾತುಕೊಟ್ಟುಕೊಳ್ಳುವ ‘ಮಾತು’

ಪಂಡಿತ್ ಸುದರ್ಶನ್ ಆಚಾರ್ಯ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು 9663542672
ಆದರೆ ದಾಂಪತ್ಯದಾಚೆಗಿನ ಕೂಡಾವಳಿಯಂತಿರುವ ಇತ್ತೀಚಿನ ಲಿವಿಂಗ್ ಟುಗೆದರ್ ಅನ್ನುವ ಅಪಭ್ರಂಶ ಪರಸ್ಪರರನ್ನು ಯಾವ ಮಾತಿಗೂ, ಪ್ರಮಾಣಕ್ಕೂ, ನಂಬಿಕೆಗೂ ಕಟ್ಟುಹಾಕದ ಕಾರಣ ಬಹುತೇಕ ನಗರಗಳಲ್ಲಷ್ಟೇ ಚಾಲ್ತಿಯಲ್ಲಿರುವ ಇಂಥ ಸಂಬಂಧಗಳು ದೈಹಿಕ ಕಾಮನೆ ತೀರಿ, ಹಣದ ಪ್ರಶ್ನೆಯೇ ದೊಡ್ಡದಾದಾಗ ಕಡಿದು ಬೀಳುತ್ತವೆ. ವಿಚ್ಛೇದನವೆನ್ನುವುದು ಇಂಥವರಿಗೊಂದು ಆಟ.
ದಿವ್ಯ ಎನ್ನುವುದಕ್ಕೆ ಪವಿತ್ರ, ಸುಂದರ, ಶ್ರೇಷ್ಠ ಅನ್ನುವ ರ್ಥಗಳಿರುವಂತೆಯೇ ಪರೀಕ್ಷೆ ಅನ್ನುವ ಮತ್ತೊಂದು ಅರ್ಥವೂ ಇದೆ. ಆ ಕಾರಣಕ್ಕಾಗಿಯೇ ದಾಂಪತ್ಯವೆನ್ನುವುದೂ ದಿವ್ಯ ಅನುಸಂಧಾನವೇ. ಏಕೆಂದರೆ ಗಂಡು-ಹೆಣ್ಣುಗಳು ಪರಸ್ಪರ ಸಂಸಾರದಲ್ಲಿ ಪಾವಿತ್ರತೆಯನ್ನು ಕಾಪಾಡಿಕೊಳ್ಳುತ್ತಲೇ ಸಂಸಾರದ ಸುಂದರ ಮತ್ತು ಶ್ರೇಷ್ಠತೆಯನ್ನು ಮೆರಸಬಹುದು. ಅದರ ಜೊತೆಗೇ ಸದಾ ದಾಂಪತ್ಯ ಪರೀಕ್ಷೆಗೂ ಒಡ್ಡಿಕೊಳ್ಳುತ್ತಲೇ ಇರಬಹುದು. ಅಗ್ನಿ ದಿವ್ಯ, ಪಾಷಾಣ ದಿವ್ಯ, ತಪ್ತಮಾಲ ದಿವ್ಯ ಹೀಗೆ ಹಲವು ಹತ್ತು ಪರೀಕ್ಷೆಗಳನ್ನು ಆರೋಪಿಯ ಅಪರಾಧವನ್ನು ಪತ್ತೆಮಾಡಲು ನಮ್ಮ ಧರ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸಂಸಾರವೆಂಬ ಲೌಕಿಕದ ಜಗತ್ತಿನಲ್ಲೂ ಅಪರಾಧವೆಸಗುವವರಿದ್ದೇ ಇರುತ್ತಾರೆ. ಅಂಥವರ ಪರೀಕ್ಷೆಗೂ ‘ದಿವ್ಯ’ ಸಾಧನವಾಗಿದೆ.
ವೈವಾಹಿಕ ಬದುಕಿಗೆ ಕಾಲಿಟ್ಟ ಗಳಿಗೆಯಿಂದಲೇ ಈ ಅವಲಂಬನೆ ಮೊದಲಾಗುತ್ತದೆ. ದಾಂಪತ್ಯ ಜೀವನದ ದಿವ್ಯ ಕೂಡ ಜೊತೆಗೇ ಸುರುವಾಗುತ್ತದೆ. ಅರ್ಥಾತ್ ಬದುಕಿನ ಏರಿಳಿತಗಳು, ಕತ್ತಲು ಬೆಳಕುಗಳು, ಆಕರ್ಷಣ ವಿಕರ್ಷಣಗಳು ದಾಂಪತ್ಯದ ನಿಜದ ದಿವ್ಯಗಳು. ಅವನ್ನು ಹಾದೇ ಮುಂದಡಿಯಿಡಬೇಕಾದ ಅನಿವಾರ್ಯತೆ. ಒಂದು ಸುಳ್ಳು ಹಲವು ಗೊಂದಲಗಳನ್ನು ಸೃಷ್ಟಿಸಿದರೆ ಕಾಣಿಸಿದ ಸತ್ಯಗಳು ಅವಕುಂಠನಗೊಳಿಸಿದ ನಿಜಗಳು ಲೆಕ್ಕಕ್ಕೆ ಸಿಕ್ಕದವು, ಅನುಭವದ ಕಡಲಲ್ಲಿ ತೇಲಿಬಂದ ಬೆಣ್ಣೆಯ ಮುರುಕುಗಳು.

ದಾಂಪತ್ಯವೆನ್ನುವುದೇ ಒಂದು ಧರ್ಮ. ಅದಕ್ಕೆ ಬದ್ಧವಾಗಿ ಅದರ ಅನುಶಾಸನದಂತೆ ನಡೆದುಕೊಂಡವರಿಗೆ ಅದೊಂದು ಸ್ವರ್ಗ. ಧರ್ಮೇಚ ನಾತಿಚರಾಮಿ ಅನ್ನುವ ಮಾತು ಆಗಷ್ಟೇ ಅರ್ಥಗಳಿಸಿಕೊಳ್ಳುತ್ತದೆ. ಆದರೆ ಸುಳ್ಳುಗಳು ಸಂಸಾರಗಳನ್ನು ಒಡೆಯುತ್ತವೆ. ಇನ್ನು ಅರ್ಥೇಚ ಅನ್ನುವುದು ಶಬ್ದಾರ್ಥದಲ್ಲಲ್ಲದೇ ಕಾಂಚಾಣ ಸಿದ್ಧಿಯಲ್ಲೂ ಮನನಮಾಡಿಕೊಳ್ಳಬೇಕು. ಗಳಿಕೆಯೇ ಮುಖ್ಯವಾಗಿ ಇತರ ಸಹಜ ಬಯಕೆಗಳನ್ನು ಅದುಮಿಟ್ಟರೆ ಸಂಸಾರದ ಸುಖ ನಾಶವಾಗುತ್ತದೆ. ಕಾಮೇಚ ನಾತಿಚರಾಮಿ ಅನ್ನುವುದು ಕೇವಲ ದೈಹಿಕ ವಾಂಛೆಯ ನಿಗ್ರಹಣೆಯಲ್ಲ ಬದಲಿಗೆ ಅದು ಲೌಕಿಕದ ಇತರ ಆಕರ್ಷಣೆಗಳಿಂದಲೂ ಮುಕ್ತವಾಗುವ ಉಪಾಯ.

ದಾಂಪತ್ಯದಲ್ಲಿ ಪ್ರೀತಿ, ಪಾವಿತ್ರ್ಯ,ನಿಷ್ಠೆ, ಸಾಮರಸ್ಯಗಳನ್ನು ಉಳಿಸಿ ಬೆಳಸಿಕೊಳ್ಳುವುದು ನಿಜಕ್ಕೂ ದಿವ್ಯವೇ. ದಾಂಪತ್ಯದಿವ್ಯದಲ್ಲಿ ಮಿಂದು ಪವಿತ್ರವಾಗುವ ಜೋಡಿಗೆ ದಾಂಪತ್ಯವೆನ್ನುವುದು ಕೇವಲ ದೈಹಿಕ ಕಾಮನೆಯ ಅಥವ ವ್ಯಾವಹಾರಿಕತೆಯ ಕುರುಹಲ್ಲ. ಬದಲಿಗೆ ಅದು ಅವರ ವ್ಯಕ್ತಿ ಜೀವನದ ಉದಾತ್ತೀಕರಣ ಮತ್ತು ಸಮಷ್ಠಿಯ ಹಿತ ಸಾಧನ. ಪರಿಶುದ್ಧ ವೈವಾಹಿಕ ಜೀವನ ಹಾಗೂ ಹಿತವಾದ ಕೌಟುಂಬಿಕ ಬಾಂಧವ್ಯ ಧರ್ಮೇಚ ಅರ್ಥೇಚ, ಕಾಮೇಚ ಮಾತುಕೊಟ್ಟುಕೊಂಡಿರುವವರೆಲ್ಲರ ಮಂತ್ರವಾದರೆ ವಿಚ್ಛೇಧನೆಗಳ ಪ್ರಾಬಲ್ಯ ಕಡಿಮೆಯಾದೀತು..
ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗೆ ಪರಿಹಾರ ಸೂಚಿಸುವರು 9663542672
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ.
ಹೊಸ ವರ್ಷ ಶುರುವಾಗಿದೆ. ಹೊಸ ವರ್ಷ ಒಳ್ಳೆಯದನ್ನು ನೀಡಲಿ ಎಂದು ಎಲ್ಲರೂ ಬಯಸ್ತಾರೆ. ಹೊಸ ವರ್ಷ ಕೆಲವರ ಅದೃಷ್ಟ ಬದಲಿಸಿದ್ರೆ ಮತ್ತೆ ಕೆಲವರ ದುರಾದೃಷ್ಟಕ್ಕೆ ಕಾರಣವಾಗಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಹೊಸ ವರ್ಷ ಯಾವ ರಾಶಿಗೆ ಯಾವ ಫಲ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಮಕರ ಸಂಕ್ರಾಂತಿ ನಂತ್ರ ವೃಶ್ಚಿಕ ರಾಶಿಯವರ ಅದೃಷ್ಟ ಬದಲಾಗಲಿದ್ದು ಏನೆಲ್ಲಾ ಬದಲಾವಣೆಗಳು ಆಗಲಿದೆ ನೋಡಿ… ಹೊಸ ವರ್ಷದಲ್ಲಿ ಈ ರಾಶಿಯವರ ಅದೃಷ್ಟ ಬದಲಾಗ್ತಿದೆ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಅರ್ಧಕ್ಕೆ ನಿಂತ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಈ…
ಒಂದು ಸಣ್ಣ ಕಾಯಿಲೆಗೆ ಹೆಚ್ಚು ಹೆಚ್ಚು ದುಡ್ಡು ಪೀಕಿಸುವ ಈಗಿನ ಆಸ್ಪತ್ರೆಗಳ ಮಂದಿಯನ್ನು ನೋಡಿದರೆ ಈಕೆ ಬಹಳ ಸಿಂಪಲ್ ಅನಿಸದೇ ಇರೋದಿಲ್ಲ , ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಆದರೂ ಈಕೆ ಆ ಊರಿನ ಹಳ್ಳಿಗರ ಪಾಲಿಗೆ ಡಾಕ್ಟರ್ ಯಾವ ಎಂಬಿಬಿಎಸ್ ಓದಿಲ್ಲ ಯಾವ ಸರ್ಜನ್ ಕೂಡ ಅಲ್ಲ ಅಷ್ಟೇ ಅಲ್ಲದೆ ಯಾವುದೇ ಫಾರಿನ್ಗೆ ಹೋಗಿ ಅಲ್ಲಿ ಓದಿಕೊಂಡು ಬಂದಿಲ್ಲ.ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಹಿಳೆಯ ಹೆಸರು ಜಡೇ ಮಾದಮ್ಮ…
ಮೊಬೈಲ್ ಫೋನ್ ಬಳಕೆದಾರರು ತಮ್ಮ ಮೊಬೈಲ್ಗೆ ಬರುವ ಕರೆಯನ್ನು ಸ್ವೀಕರಿಸಲಿ ಅಥವಾ ಸ್ವೀಕರಿಸದಿರಲಿ. ಇನ್ಮುಂದೆ ಕೇವಲ 30 ಸೆಕೆಂಡ್ ರಿಂಗಣಿಸಲಿದೆ!ಅಂತೆಯೇ ಲ್ಯಾಂಡ್ಲೈನ್ ಫೋನ್ಗಳು 60 ಸೆಕೆಂಡ್ ರಿಂಗಣಿಸಲಿವೆ! ಅರೆ, ಇದೇನಿದು ಎಂದು ಹುಬ್ಬೇರಿಸಬೇಡಿ.ಮೊಬೈಲ್ ಫೋನ್ಗಳ ರಿಂಗಣವನ್ನು30 ಸೆಕೆಂಡ್ಗಳಿಗೆ ಮತ್ತು ಲ್ಯಾಂಡ್ಲೈನ್ ಫೋನ್ಗಳ ರಿಂಗಣವನ್ನು 60 ಸೆಕೆಂಡ್ಗಳಿಗೆ ಸೀಮಿತಗೊಳಿಸಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಆದೇಶ ಹೊರಡಿಸಿದೆ. ಒಳ ಬರುವ ಕರೆಗಳ ರಿಂಗಣ ಸಮಯವನ್ನು ಸೀಮಿತಗೊಳಿಸುವ ನಿಯಮದ ತಿದ್ದುಪಡಿಯಿಂದಾಗಿ ಮೊಬೈಲ್ಫೋನ್ ಮತ್ತು ಲ್ಯಾಂಡ್ಲೈನ್ ಗ್ರಾಹಕರಿಗೆ ನೀಡಲಾಗುವ ಸೇವೆಗಳ ಗುಣಮಟ್ಟವನ್ನು…
ಕ್ಯಾನ್ಸರ್ ಕಾಯಿಲೆ ಜೊತೆಗೆ ಮಾರಕ ಕಾಯಿಲೆಯಾದ ಎಚ್ಐವಿ ಏಡ್ಸ್ಗೂ ಕೂಡ ರಾಮಬಾಣವೊಂದನ್ನು ಗಡಿಜಿಲ್ಲೆಯ ರೈತನೊಬ್ಬ ಕಂಡುಹಿಡಿದಿದ್ದು ಸಾವಿನ ಅಂತಿಮ ಕ್ಷಣಗಳ ಎಣಿಸುವ ಎಚ್ಐವಿ ಸೋಂಕಿತರಿಗೆ ಆಶಾಕಿರಣವಾಗಿದ್ದಾರೆ. ಮಹೇಶ್ ಕುಮಾರ್ ಎಂಬ ರೈತ ಹಲವಾರು ವರ್ಷಗಳಿಂದ ತಮ್ಮ ಮನೆಯ ಮುಂದೆ ಬೆಳೆದ ಒಂದು ಮರದ ಎಲೆಗಳಿಂದ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಸದ್ಯ ಈಗ ಅದೇ ಎಲೆಯಗಳಲ್ಲೇ ಎಚ್.ಐ.ವಿ ಏಡ್ಸ್ ಸೋಂಕಿತರಿಗೂ ಕೂಡ ಚಿಕಿತ್ಸೆ ನೀಡುತ್ತಿದ್ದು, ಸೋಂಕಿತರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗತೊಡಗಿದೆ. ಎಷ್ಟೋ ಮಂದಿ ಮಾರಣಾಂತಿಕ…
ನಾವು ಮನುಷ್ಯರು ತಾವು ವಾಸವಿರುವ ಮನೆಯನ್ನೇ ಸ್ವಚ್ಚವಾಗಿಡುವುದಕ್ಕೆ, ಸೋಮಾರಿತನ ತೋರುತ್ತಾರೆ. ಇನ್ನು ಅಕ್ಕ ಪಕ್ಕದ ಜಾಗ ಅಥವಾ ಬೇರೆ ಜಾಗಗಳನ್ನು ಸ್ವಚ್ಚವಾಗಿದುವುದರ ಬಗ್ಗೆ ಯೋಚಿಸೋದು ತಂಬಾ ದೂರ ಬಿಡಿ.