ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು. ಬಂಡವಾಳ ಕಡಿಮೆ, ಗಳಿಕೆ ಜಾಸ್ತಿ ಅದಕ್ಕಾಗಿ ಕನ್ನಡ ಕಂಪಿನ ಮಾಧ್ಯಮದಿಂದ ಕೆಳಗೆ ಉಲ್ಲೇಖಿಸಿದ ಬಿಜನೆಸ್ ಗಳಿಗೆ ತಗಲುವ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ನಿಮಗೆ ಉಪಯೋಗವಾದರೆ ಒಳ್ಳೆಯದು.

1.ವಾಟರ್ ಪ್ಲಾಂಟ್ :-
ಜನರ ಅನಿಸಿಕೆ ಮತ್ತು ಅನುಭವಗಳ ಪ್ರಕಾರ ನಗರ ಪಟ್ಟಣಗಳಲ್ಲಿ ಲೋಕಲ್ ಬಾಡಿಗಳ ಮೂಲಕ ಸರಬರಾಜು ಮಾಡುವ ನೀರು ಅಶುದ್ಧ ಮತ್ತು ಕುಡಿಯಲು ಯೋಗ್ಯ ವಿರುವದಿಲ್ಲ. ಆದಕಾರಣ ಜನ ಪ್ರಾಯವೆಟ್ ಆರ್. ಓ ನೀರು, ಬಾಟಲ್ ಬಂದ್ ನೀರಿನ ಬೇಡಿಕೆ ಮಾಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ನಾವು ಯಾಕೆ ಇಂತಹ ಪ್ಲಾಂಟಗಳನ್ನು ಪ್ರಾರಂಭಿಸಬಾರದು? ಇಂತಹ ಪ್ಲಾಂಟ್ ನ್ನು ನಿರ್ಮಿಸಲು ಮೊದಲು ಯೋಚಿಸುವದೆನೆಂದರೆ ನೀರಿನ ಟಿ ಡಿ ಎಸ್ ಲೇವಲ್ ಜಾಸ್ತಿ ಇರಬಾರದು. ನಂತರ ಸರಕಾರದಿಂದ ಲಾಯಸನ್ಸ್ ಮತ್ತು ಐ ಎಸ್ ಐ ನಂಬರ್ ತೆಗೆದುಕೊಳ್ಳುವದು ಮಹತ್ವದ್ದು.

ಎಷ್ಟೋ ಕಂಪನಿಗಳು ಕಮರ್ಶಿಯಲ್ಲಾಗಿ ಆರ್ ಓ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಇದರ ವೆಚ್ಚ 50 ಸಾವಿರ ₹ ಗಳಿಂದ 2 ಲಕ್ಷ ₹ ಗಳ ವರೆಗೆ ತಗಲುವದು. ಜೊತೆಗೆ ಕಡಿಮೆ ಎಂದರೆ 100 ಜಾರ್ ಗಳನ್ನು ಖರೀದಿಸ ಬೇಕಾಗುವದು. ಅವು 20 ಲೀಟರ್ ಕ್ಯಾಪೆಸಿಟಿ ಇರುವಂತಹದು. ಇವೆಲ್ಲವುಗಳಲ್ಲಿ ನಿಮಗೆ 4 ರಿಂದ 5 ಲಕ್ಷ ₹ ಗಳವರೆಗೆ ಖರ್ಚಾಗುವದು. ಈ ಹಣ ನಿಮಗೆ ಹೆಚ್ಚು ಅನಿಸಿದರೆ ಲೋನ್ ಸಲುವಾಗಿ ಬ್ಯಾಂಕ್ ಗೂ ಸಹ ಅಪ್ಲಾಯ್ ಮಾಡಬಹುದು. ಈ ತರಹದ ಪ್ಲಾಂಟ್ ಒಂದನ್ನು ಪ್ರಾರಂಭಿಸಿದರೆ ಪ್ರತಿ ಗಂಟೆಗೆ 1000 ಲೀಟರ್ ನೀರಿನ ಪ್ರೋಡಕ್ಶನ್ ವಾಗುವದರಿಂದ ನೀವು ಕಡಿಮೆ ಎಂದರೆ 30 ರಿಂದ 50 ಸಾವಿರ ₹ ಗಳನ್ನು ಗಳಿಸಬಹುದು.
2.ಚಿಲಿಂಗ್ ಪ್ಲಾಂಟ್ :-
ನಗರ ಪಟ್ಟಣಗಳಲ್ಲಿ ಬಾಟಲ್ ಜೊತೆಗೆ 10 ರಿಂದ 15 ಲೀಟರ್ ಕ್ಯಾನ್ ಗಳಲ್ಲೂ ನೀರಿನ ಸಪ್ಲಾಯ್ ಮಾಡಲಾಗುತ್ತದೆ. ಈ ನೀರು ಚಿಲಿಂಗ್ ಪ್ಲಾಂಟ್ ನಿಂದ ಸರಬರಾಜು ಮಾಡಲಾಗುತ್ತದೆ. ಆರ್ ಓ ನೀರಿನ ಪ್ಲಾಂಟ್ ತರಹನೆ ಒಂದು ಒಳ್ಳೆಯ ಗ್ರಾವುಂಡ್ ವಾಟರ್ ಕ್ವಾಲಿಟಿ ಹಾಗೆ ಇದ್ದರೆ ಚಿಲಿಂಗ್ ಪ್ಲಾಂಟ್ ಇನ್ ಸ್ಟಾಲ್ ಮಾಡಿ ಕೊಡುತ್ತಾರೆ.

ಈ ಚಿಲಿಂಗ್ ವಾಟರ್ ಪ್ಲಾಂಟನಲ್ಲಿ ನೀರಿನಲ್ಲಿಯ ಬ್ಯಾಕ್ಟೇರಿಯಾಗಳನ್ನು ಸಾಯಿಸಿ ನೀರನ್ನು ತಂಪು ಮಾಡುತ್ತಾರೆ. ಈ ನೀರನ್ನು ದಿನಾಲು ಮನೆಗಳಿಗೆ, ಅಂಗಡಿಗಳಿಗೆ ಪೂರೈಕೆ ಮಾಡುವರು. ಈ ಪ್ಲಾಂಟ್ ವ್ಯವಸಾಯಕ್ಕೆ 2 ರಿಂದ 4 ಲಕ್ಷ ₹ ಗಳ ಖರ್ಚು ತಗಲುವದು. ಇದರಿಂದ ಪ್ರತಿ ತಿಂಗಳು 30 ರಿಂದ 40 ಸಾವಿರ ₹ ಗಳ ಗಳಿಕೆ ಸಾಧ್ಯ.
3.ದೊಡ್ಡ ದೊಡ್ಡ ಕಂಪನಿಗಳ ಡೀಲರ್ ಶಿಪ್ ತೆಗೆದುಕೊಳ್ಳುವದು:-
ದೇಶದಲ್ಲಿ ಅನೇಕ ದೊಡ್ಡ ಕಂಪನಿಗಳು ಬಾಟಲ್ ನೀರಿನ ವ್ಯವಸಾಯ ಮಾಡುತ್ತಿದ್ದಾರೆ. ಇವುಗಳಲ್ಲಿ ಬಿಸಲೆರಿ, ಎಕ್ವಾಫಿನಾ, ಕಿನ್ಲೆ ಈ ಬ್ರಾಂಡ್ ಗಳ 200 ಎಂ ಎಲ್ ನಿಂದ ಹಿಡಿದು ಲೀಟರ್ ವರೆಗೆ ಹಾಗೂ ಲೀಟರ್ ಮೇಲ್ಪಟ್ಟು ಸಹ ದೊಡ್ಡ ಬಾಟಲ್ ಗಳಿಗೆ ಮಾರ್ಕೆಟ್ ನಲ್ಲಿ ತುಂಬಾ ಬೇಡಿಕೆ ಇದೆ.

ನೀವು ಈ ಕಂಪನಿಗಳ ಡಿಸ್ಟ್ರಿಬ್ಯುಷನ್ ತೆಗೆದುಕೊಂಡು ವ್ಯಾಪಾರ ಮಾಡಬಹುದು. ಕಡಿಮೆ ಎಂದರೆ ಇದರಲ್ಲಿ ನಿಮಗೆ 5 ಲಕ್ಷ ₹ ಗಳ ವರೆಗೆ ಬಂಡವಾಳ ಹೂಡಬೇಕಾಗುವದು. ಈ ಬಂಡವಾಳದಲ್ಲಿ ಹೆಚ್ಚು ಸಹ ಮಾಡಬಹುದು.
4.ವಾಟರ್ ಎ ಟಿ ಎಂ ನಿಂದಲೂ ಬಿಜನೆಸ್ ಪ್ರಾರಂಭಿಸಬಹುದು:-
ಎಷ್ಟೋ ಕಂಪನಿಗಳು ವಾಟರ್ ಎ ಟಿ ಎಂ ಪ್ಲಾಂಟ್ ನಿರ್ಮಿಸಿ ಕೊಡುತ್ತಾರೆ. ಅದನ್ನು ನೀವು ಖರೀದಿಸಿ ಬೇರೆ ಬೇರೆ ಸ್ಥಳಗಳಲ್ಲಿ ಇನ್ಸ್ಟಾಲ್ ಮಾಡಬಹುದು. ಮತ್ತು ನೀವು ಈ ಕಂಪನಿಗಳ ಪ್ರೆಂಚಾಯಜಿಯನ್ನು ಸಹ ತೆಗೆದುಕೊಳ್ಳಬಹುದು. ಉದಾಹರಣೆಗೆ ಪಿರಾಮಲ್ ಸರ್ವಜಲ ಹೆಸರಿನ ಕಂಪನಿ ವ್ಯಾಪಾರಿಗಳಿಗೆ ಫ್ರೆಂಚಾಯಿಜಿಯನ್ನು ಕೊಡುತ್ತಿದೆ. ಇದರಲ್ಲಿ ಕಂಪನಿಯ ಕಡೆಯಿಂದಲೆ ಇನ್ ಸ್ಟಾಲೆಶನ್, ಮೆಂಟನೆನ್ಸ್, ರಿಪ್ಲೆಸ್ ಮೆಂಟ್ ತರಹದ ಎಲ್ಲ ಸರ್ವಿಸಗಳನ್ನು ಕೊಡುತ್ತಾರೆ. ಇಂಥ ಎ ಟಿ ಎಂ ಗಳ ಮುಖಾಂತರ ನೀವು ತಿಂಗಳಿಗೆ 25 ರಿಂದ 50 ಸಾವಿರ ₹ ಗಳ ಗಳಿಕೆ ತಿಂಗಳಿಗೆ ಪಡೆಯಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…
ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್ ರಸ್ತೆಯಲ್ಲಿರುವ ಕ್ಲಬ್ ಸಿಟ್ರಸ್ ಸಲೂನ್ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್ಗೆ ತೆರಳಿದ್ದರು. ಈ ವೇಳೆ…
ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕು. ಯಾಕಂದ್ರೆ ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು ಶೇ.35ರಷ್ಟು ಕಡಿಮೆಯಾಗುತ್ತದೆ.
ಈಗಂತೂ ಸರ್ಕಾರಿ ಸಂಸ್ಥೆಗಳಲ್ಲಿ ನಮಗೆ ಬೇಕಾದ ದಾಖಲಾತಿಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ…ಆದರೆ ನಮಗೆ ಗೊತ್ತಿಲ್ಲದ ವಿಷಯವೇನೆಂದರೆ ಕೆಲವೊಂದು ಸೌಲಭ್ಯಗಳನ್ನು ತುಂಬಾ ಸರಳವಾಗಿ ನಾವು ಪಡೆದುಕೊಳ್ಳಬಹುದು.ಅದರಲ್ಲಿ ಒಂದು, ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…
MAYOON N/ BIOTECHNOLOGIST / KOLAR ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.. ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್…