News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಆಧ್ಯಾತ್ಮ

ಈ 5 ವಸ್ತುಗಳಿಂದ ಭಗವಾನ್ ಶಿವ ಲಿಂಗವನ್ನು ಎಂದಿಗೂ ಪೂಜಿಸಬಾರದು..!

2425

ಭಗವಾನ್ ಶಿವ, ತ್ರಿಮೂರ್ತಿಗಳಾದ  ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು,  ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ.  ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ   ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.

 

ಭಗವಾನ್ ಶಿವನಿಗೆ ದೇವತಗಳಾಗಲಿ, ಮನುಷ್ಯರಾಗಲಿ, ರಾಕ್ಷಸರಾಗಲಿ ಎಲ್ಲರೂ ಒಂದೇ ಎಂಬ ಭಾವವಿದ್ದು,ಯಾರಿಗೂ ಭೇದ ಭಾವ ಮಾಡುವುದಿಲ್ಲ. ಆದ್ದರಿಂದ ಶಿವನು ಅತ್ಯಂತ ಕರುಣಾಮುರ್ತಿಯಾಗಿದ್ದು, ನಿಜವಾದ ಭಕ್ತಿಗೆ ಬೇಗ ಒಲಿಯುತ್ತಾನೆ. ನಾವು ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜಿಸುತ್ತೇವೆ.ಮತ್ತು ಶಿವನನ್ನು ಪೂಜಿಸಲು ಅನೇಕ ವಿಧಾನಗಳಿವೆ. ಆದ್ರೆ ಶಿವನನ್ನು ಪೋಜಿಸುವಾಗ ಜನರು ತಮ್ಮ ಭಕ್ತಿಯ ಪರಾಕಾಷ್ಟೆಯಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ.

ಹಾಗಾದ್ರೆ ಶಿವಲಿಂಗ ಪೂಜೆ ಹೇಗೆ ಮಾಡ್ಬೇಕು ಮತ್ತು ಹೇಗೆ ಮಾಡಬಾರದು?

1. ತುಳಸಿ ಹೂಗಳನ್ನು ಶಿವಪೂಜೆಗೆ ಬಳಸಬಾರದು.    

 ಹಿಂದೂ ಪುರಾಣಗಳ ಪ್ರಕಾರ ದಂಭ ಎಂಬ ರಕ್ಕಸನಿದ್ದು, ಅವನಿಗೆ ಮಕ್ಕಳಿಲ್ಲದ ಕಾರಣ, ಭಗವಾನ್ ನಾರಾಯಣನನ್ನು ಪ್ರಾರ್ಥಿಸಲಾಗಿ, ಅವನಿಗೆ ಜಲಂಧರ್   ಎಂಬ ಪುತ್ರನು ಜನಿಸಿದನು. ಈ ಜಲಂಧರ್’ನು ತ್ರಿಲೋಕಾದಿಪತಿಯಾಗಬೇಕೆಂಬ ಆಸೆಯಿಂದ, ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದನು. ತಪಸ್ಸಿಗೆ ಒಲಿದ ಬ್ರಹ್ಮದೇವರು ಪ್ರತ್ಯಕ್ಷನಾಗಲು, ಯಾವ ದೇವತೆಗಳು ನನ್ನನ್ನು ಸೋಲಿಸಬಾರದೆಂಬ ವರವನ್ನು ಬೇಡಿದನು. ವರವನ್ನು ಕೊಟ್ಟ ಬ್ರಹ್ಮದೇವರು, ಈ ವರವು ಕೃಷ್ಣ ಕವಚವನ್ನು ಭೋದಿಸಿ, ಧರ್ಮಧ್ವಜನ ಮಗಳಾದ ತುಳಸಿಯನ್ನು ಮದುವೆಯಾಗಲು ತಿಳಿಸಿದನು. ನಿನ್ನ ಅಮರತ್ವವು ಶ್ರೀ ಕೃಷ್ಣ ಕವಚ ಮತ್ತು ತುಳಸಿ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದನು.

ಜಲಂಧರ್ ಯಾವುದೇ ದೇವತೆಗಳಿಂದ ಸೋಲಿಸಬಾರದು ಎಂಬ ವರವನ್ನು ಹೊಂದಿದ್ದರಿಂದ, ವಿಷ್ಣು ಜಲಂಧರ್ ಅವರ ಹೆಂಡತಿ ತುಳಸಿಯ ಪವಿತ್ರತೆಯನ್ನು ಉಲ್ಲಂಘಿಸಬೇಕಾಯಿತು. ಆಕೆಯ ಪತಿಯ ಮರಣದ ನಂತರ,ಈ ದ್ರೋಹದಿಂದ ಕೋಪಗೊಂಡ ತುಳಸಿಯು, ತನ್ನ ದೈವಿಕ ಎಲೆಗಳಿಂದ ಶಿವನನ್ನು ಆರಾಧಿಸದಂತೆ ಬಹಿಷ್ಕರಿಸಿದಳು.

2. ಕೇದಗೆ ಹೂಗಳನ್ನು ಶಿವಪೂಜೆಗೆ ಬಳಸಬಾರದು.                                                                          

ಒಮ್ಮೆ ಬ್ರಹ್ಮ ಮತ್ತು ವಿಷ್ಣು ದೇವತೆಗಳ ನಡುವೆ ಯಾರೂ ಸವ್ರೋತ್ತಮರೆಂದು ವಾದ ಏರ್ಪಡುತ್ತದೆ. ಇಬ್ಬರ ನಡುವೆ ಅತಿ ಘೋರವಾದ ವಾದ ಉಂಟಾಗಲು, ಆಗ ಇವರ ಮಧ್ಯ ಆದಿ ಅನ್ತ್ಯಗಳಲ್ಲಿದ ಬೃಹದಾಕಾರವಾದ ಅಗ್ನಿ ಸ್ಥಂಭ ಲಿಂಗವು ಏರ್ಪಡುತ್ತದೆ. ಭಗವಾನ್ ಶಿವನು ಲಿಂಗದ ರೂಪದಲ್ಲಿ ಕಾಣಿಸಿಕೊಂಡು, ಈ ಲಿಂಗದ ಆದಿ, ಅಂತ್ಯ ಕಂಡುಹಿಡಿದವರು ಸವ್ರೋತ್ತಮರೆಂದು ಘೋಷಿಸುತ್ತಾರೆ. ಆಗ ಬ್ರಹ್ಮ ಮತ್ತು ನಾರಾಯಣರು ಲಿಂಗದ ಆದಿ ಮತ್ತು ಅಂತ್ಯ ಹುಡುಕಲು ಹೊರಡುತ್ತಾರೆ. ನಾರಾಯಣನು ಲಿಂಗದ ತುದಿಯ ಕಡೆ, ಮತ್ತು ಬ್ರಹ್ಮನು ಲಿಂಗದ ಶಿರದ ಕಡೆ ಹುಡುಕಲು ಹೊರದುತ್ತಾರೆ. ಆದ್ರೆ ಭಗವಾನ್ ನಾರಾಯಣನಿಗೆ ಅಂತ್ಯ ಸಿಗದೇ, ಈ ಶಿವ ಲಿಂಗಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದು ನಿರ್ಧರಿಸಿ, ವಾಪಸ್ ಆಗುತ್ತಾರೆ.

ಸುಲಭವಾಗಿ ತನ್ನ ಸೋಲನ್ನು ಒಪ್ಪದ ಬ್ರಹ್ಮದೇವರು, ಆದಿಯನ್ನು ಕಂಡುಹಿಡಿಯಲು ಹೋಗುತ್ತಿರುವಾಗ ಲಿಂಗದಿಂದ ಜಾರುತ್ತಿದ್ದ ಕೇದಗೆ ಪುಷ್ಪವನ್ನು ಕಂಡ ಬ್ರಹ್ಮದೇವರು, ಕೆದಗೆಯೊಡನೆ ಸಂಧಾನ ಮಾಡಿಕೊಂಡು, ನಾನು ಲಿಂಗದ ಆಡಿಯನ್ನು ಕಂಡೆ ಎಂಬ ಸುಳ್ಳನ್ನು ಹೇಳಬೇಕೆಂದು, ಕೇದಗೆ ಪುಷ್ಪವನ್ನು ಸಾಕ್ಷಿಯಾಗಿ ಕರೆತಂದನು. ಶಿವನಿಗೆ ನಾನು ಈ ಲಿಂಗದ ಆದಿಯನ್ನು ಕಂಡೆ ಎಂದು, ಸಾಕ್ಷಿಯಾಗಿ ಕೇದಗೆ ಪುಷ್ಪವನ್ನು ಕೇಳಲಾಗಿ, ಕೇದಗೆ ಪುಷ್ಪವು ಕೂಡ ಬ್ರಹ್ಮನ ಮಾತಿಗೆ ಸಹಕರಿಸಿತು. ಆಗ ಬ್ರಹ್ಮದೇವರ ಸುಳ್ಳಿನಿಂದ ಕ್ರುದ್ದನಾದ ಶಿವನು, ಇನ್ನುಮುಂದೆ ಮೂರು ಜಗತ್ತುಗಳಲ್ಲಿ ಯಾರೊಬ್ಬರೂ ನಿನ್ನನ್ನು ಪೂಜಿಸದಂತೆ ಇರಲಿ ಎಂಬ ಶಾಪವನ್ನು ಕೊಟ್ಟನು. ಹೀಗಾಗಿ ಕೇದಗೆಯ ಸುಳ್ಳು ಸಾಕ್ಷಿಯನ್ನು ಹೇಳಿದ್ದರಿಂದ ಕೇದಗೆಯ ಭಗವಾನ್ ಶಿವನ ಪೂಜೆಗೆ ಅರ್ಹವಲ್ಲದ ಹೂವಾಗಿದೆ.

3.ಹರಿಶಿಣವನ್ನು ಶಿವಪೂಜೆಗೆ ಬಳಸಬಾರದು.      

 ಎಲ್ಲಾ ಪೂಜೆಗಳಲ್ಲೂ ಹರಿಶಿಣವನ್ನು ಹೆಚ್ಚಾಗಿ ಬಳಸಲಾಗುತ್ತದೆ.ಶಿವಲಿಂಗಕ್ಕೆ ಎರಡು ಭಾಗಗಳಿವೆ, ಒಂದು ಶಿವನೊಂದಿಗೆ ಸಂಬಂಧ ಹೊಂದಿದ್ದರೆ ಮತ್ತೊಂದು ದೇವಿ ಪಾರ್ವತಿಯೊಂದಿಗೆ ಸಂಭಂದ ಹೊಂದಿದೆ.ಹಾಗೂ  ಸ್ತ್ರೀತ್ವವನ್ನು ಪ್ರತಿನಿಧಿಸುತ್ತದೆ. ಹರಿಶಿಣವನ್ನು ಸೌಂದರ್ಯವರ್ಧಕವಾಗಿ, ಮಹಿಳೆಯರು ಬಳಸುವುದರಿಂದ, ಇದನ್ನು ಶಿವಲಿಂಗದಲ್ಲಿ ಬಳಸಲಾಗುವುದಿಲ್ಲ ಆದರೆ ನೀವು ಜಲಧಾರಿಯ ಮೇಲೆ ಬಳಸಬಹುದು.

4. ಕುಂಕುಮ ಶಿವಪೂಜೆಗೆ ಬಳಸಬಾರದು.     

  ವಿವಾಹಿತ ಮಹಿಳೆಯರಿಗೆ ಕುಂಕುಮ್ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಮಹಿಳೆಯರು ತಮ್ಮ ಪತಿಯ ದೀರ್ಘಾವಧಿಯ ಆಶೀರ್ವಾದವನ್ನು ಪಡೆಯುತ್ತಾರೆ.

ಆದರೆ ಭಗವಾನ್ ಶಿವನು ಲಯಕರ್ತನಾಗಿರುವುದರಿಂದ, ಕುಂಕುಮದೊಂದಿಗೆ ಪೂಜಿಸುವುದು ಮಂಗಳಕರವಲ್ಲ.

5. ತೆಂಗಿನಕಾಯಿ ನೀರನ್ನು ಶಿವಪೂಜೆಗೆ ಬಳಸಬಾರದು.       

ತೆಂಗಿನಕಾಯಿ ಕೂಡ ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಪ್ರತಿ ಹಿಂದೂ ಪೂಜಾದಲ್ಲಿ ತೆಂಗಿನಕಾಯಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ನಾವು ಅನೇಕ ಮಂಗಳಕರ ಕಾರ್ಯಕ್ರಮಗಳಲ್ಲಿ ದೇವರಿಗೆ ತೆಂಗಿನಕಾಯಿಯನ್ನು ಹೊಡೆಯುತ್ತೇವೆ. ಒಬ್ಬನು ಶಿವನಿಗೆ ತೆಂಗಿನಕಾಯಿ ನೀಡಬಹುದು, ಆದರೆ ಶಿವಲಿಂಗವನ್ನು ತೆಂಗಿನ ನೀರಿನೊಂದಿಗೆ ಪೂಜಿಸಬಾರದು.

ಶಿವಲಿಂಗಕ್ಕೆ ನೀಡುವ ಎಲ್ಲವನ್ನೂ ನಿರ್ಮಲಯಾ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ನದಿಗಳು, ಸರೋವರಗಳು ಮತ್ತು ಸಮುದ್ರದಲ್ಲಿ ಹೊರತುಪಡಿಸಿ ಎಲ್ಲಿ ಬೇಕಾದರೂ ಸೇವಿಸದಂತೆ ನಿಷೇಧಿಸಲಾಗಿದೆ. ಮತ್ತು ದೇವತೆಗಳ ಮೇಲೆ ಅರ್ಪಿಸಿದ ನಂತರ ತೆಂಗಿನ ನೀರು ಸೇವಿಸುವುದರಿಂದ ಅದನ್ನು ಕುಡಿಯಲು ಕಡ್ಡಾಯವಾಗಿ ಪರಿಗಣಿಸಲಾಗುತ್ತದೆ, ಹಾಗಾಗಿ ಅದನ್ನು ಶಿವಲಿಂಗ ಪೂಜೆಯಲ್ಲಿ ಬಳಸಲಾಗುವುದಿಲ್ಲ.

 

 

 

      

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports

    Multiple Layout Options

    A number of such two-sided contests may be arranged in a tournament producing a champion. Many sports leagues make an annual champion by arranging games in a regular sports season, followed in some cases by playoffs. Hundreds of sports exist, from those between single contestants, through to those with hundreds of simultaneous participants, either in…

  • ಸಿನಿಮಾ

    ಅರ್ಜುನ್ ಸರ್ಜಾ ಶ್ರುತಿ ಹರಿಹರನ್ ಮೀಟೂ ಪ್ರಕರಣಕ್ಕೆ ಈಗ ರಾಜಕೀಯ ಪ್ರವೇಶ..!

    ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರು ಇಂದು ವಿಚಾರಣೆಗೆ ಹಾಜರಾಗಿದ್ದು, ಇದೀಗ ಈ ಪ್ರಕರಣಕ್ಕೆ ರಾಜಕೀಯ ಪ್ರವೇಶ ಕೂಡ ಆಗಿದೆ. ನಟ ಅರ್ಜುನ್ ಸರ್ಜಾ ಪೋಲಿಸ್ ವಿಚಾರಣೆ ವೇಳೆ ಬಿಜೆಪಿಯ ತೇಜಸ್ವಿನಿ ರಮೇಶ್ ಕೂಡ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ ತಂದೆಯವರು ಮೂಲತಃ ಆರ್‍ಎಸ್‍ಎಸ್ ನವರಾಗಿದ್ದು ಎಡಪಂಥಿಯರು ಸರ್ಜಾ ಮೂಲಕ ಮೋದಿಯನ್ನು ಟಾರ್ಗೆಟ್…

  • ಗ್ಯಾಜೆಟ್

    ಜಿಯೋ ಗ್ರಾಹಕರೇ ಎಚ್ಚರ..!ಇನ್ಮೇಲೆ ಈ ಆಫರ್ ಸಿಗಲ್ಲ!ಯಾಮಾರಿದ್ರೆ ನಿಮ್ಮ ಜೋಬಿಗೆ ಬೀಳುತ್ತೆ ಕತ್ತರಿ..!

    ಸದ್ಯ ಭಾರತದಲ್ಲಿ ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು ರಿಲಯನ್ಸ್ ಜಿಯೋ ಸಂಸ್ಥೆ. ತನ್ನ ಜನಪ್ರಿಯ ಯೋಜನೆಯಾದ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಿ, ಇನ್ಮೇಲೆ ಜಿಯೋ ಫ್ರೀ ವಾಯ್ಸ್ ಕಾಲ್ ಅನ್ನು

  • ಉಪಯುಕ್ತ ಮಾಹಿತಿ

    ಪ್ರಪಂಚದ ಮೊದಲ ವರ್ಲ್ಡ್ ಮ್ಯಾಪ್ ಕಂಡುಹಿಡಿದದ್ದು ಯಾರೂ ಗೊತ್ತಾ..?ಗೊತ್ತಾದ್ರೆ ತುಂಬಾ ಹೆಮ್ಮೆ ಪಡ್ತೀರಾ!ಮುಂದೆ ಓದಿ…

    ಇಡೀ ಭೂಮಿ ಕೌತುಗಳ ಆಗರ, ಭಾರತ ಹಾಗು ಇಲ್ಲಿನ ಹಿಂದೂ ಧರ್ಮವನ್ನು ಇಂದು ಇಡೀ ವಿಶ್ವದಾದ್ಯಂತ ಇರುವ ಬಹತೇಕ ದೇಶಗಳು ಸಂಶೋಧನೆ ಮಾಡುತಿದ್ದಾವೆ..! ಶ್ರೀ ಕೃಷ್ಣನ ದ್ವಾರಕೆಯ ಒಂದು ಪ್ರಾಂತ್ಯ ಸ್ಯಾಟಲೈಟ್ ನಿಂದ ನೋಡಿದರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆಯೇ ಕಾಣುತ್ತದೆ. ಮಾನಸ ಸರೋವರ ಹೃದಯದ ಆಕಾರದಲ್ಲಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತ ಸರ್ಪಗಳ ಹೆಡೆಯನ್ನೇ ಹೋಲುವುದು.

  • ಜ್ಯೋತಿಷ್ಯ

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗ.. ನಿಮ್ಮ ರಾಶಿ ಇದೆಯಾ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಅನುಭವಿಗಳ ಸಲಹೆಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು.   .ನಿಮ್ಮ ಸಮಸ್ಯೆ.ಏನೇ .ಇರಲಿ…

  • ಉಪಯುಕ್ತ ಮಾಹಿತಿ

    ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯೇ?ಹಾಗಿದ್ದರೆ ಈ ಯೋಜನೆಯಿಂದ ನಿಮಗೆ ಸಿಗುತ್ತೆ 2000!ಈಗಲೇ ಈ ಮಾಹಿತಿ ನೋಡಿ

    ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ಇದೇ ತಿಂಗಳಿಂದ ಹಣ ನೀಡಲು ಶುರು ಮಾಡಲಿದೆ. ಈ ಯೋಜನೆಯಡಿ 2 ಹೆಕ್ಟೆರ್ ನಷ್ಟು ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಹಣ ಜಮಾ ಆಗಲಿದೆ. ವರ್ಷಕ್ಕೆ 6 ಸಾವಿರ ರೂಪಾಯಿ ಖಾತೆಗೆ ಬರಲಿದೆ. ಮೂರು ಕಂತಿನಲ್ಲಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಾರ್ಚ್ ತಿಂಗಳಿನಲ್ಲಿ ಮೊದಲ ಕಂತಿನ ಹಣ 2000 ರೂಪಾಯಿ ಸಿಗಲಿದೆ. ಆದ್ರೆ ಇದಕ್ಕೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ….