News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಆಧ್ಯಾತ್ಮ

ಆ ದಿನ ಈ ಯಾಗ ಪೂರ್ಣವಾಗಿ ನಡೆದಿದ್ದರೆ,ಈ ದಿನ ನಾವು ನೋಡಲಿಕ್ಕೆ ಹಾವಿನ ಸಂತತಿಯೇ ಇರುತ್ತಿರಲಿಲ್ಲ!ಯಾಕೆ ಗೊತ್ತಾ..?ಈ ಲೇಖನಿ ಓದಿ…

3202

ಆಗ ಹಸ್ತಿನಾಪುರದಲ್ಲಿ ಪರೀಕ್ಷಿತನ ಮಗ ಜನಮೇಜಯನು ರಾಜ್ಯ ಆಳುತಿದ್ದ. ಅವನ ಅಸ್ತಾನಕ್ಕೆ ಉತ್ತಂಕನೆಂಬ ಮುನಿಯು ಆಗಮಿಸಿದ. ಈ ಮುನಿಗೆ ತಾನು ತಕ್ಷಕಎಂಬ ಹಾವಿನಿಂದ ಒದಗಿದ ಅನ್ಯಾಯಕ್ಕಾಗಿ ಸೇಡು ತೀರಿಸಿಕೊಳ್ಳಲು ಜನಮೇಜಯನ ಆಸ್ಥಾನಕ್ಕೆ ಬಂದಿದ್ದ.   ಹಾಗಾಗಿ ತನಗೆ ನಮಸ್ಕರಿಸಿದ ರಾಜನನ್ನೂ ಅವನ ಪರಿವಾರವನ್ನು ಅಷಿರ್ವದಿಸಿದ. ರಾಜನು ನೀಡಿದ ಆಸನದಲ್ಲಿ ಕುಳಿತು ಅತಿಥ್ಯ ಸ್ವೀಕರಿಸಿದ. ಎಲ್ಲರ ಕುಶಲವನ್ನೂ ವಿಚಾರಿಸಿದ. ಅನಂತರ ರಾಜನನ್ನೂ ಕುರಿತು – ‘’ ಮಹಾರಾಜ ! ನೀನು ನಿನ್ನ ತಂದೆ ಪರಿಕ್ಷಿತನ ದುರ್ಮರಣಕ್ಕೆ ಪ್ರತೀಕಾರ  ಕೈಗೊಂಡರುವೆಯ ?’’ – ಎಂದು ಪ್ರಶ್ನಿಸಿದ. ಜನುಮೆಜಯನನ್ನು – ಪ್ರತಿಕರವೇ ? ಯಾರ ಮೇಲೆ ಏಕೆ ?’’ ಎಂದ. ಉತ್ತಂಕನು – ‘’ ಜನಮೇಜಯ ! ನಿನ್ನ ತಂದೆಯನ್ನು ಅಮತ್ಯರೂ ಸೇನಾಪತಿಗಳು. ಇತರರೂ ಎಚ್ಹರಿಕೆಯಿಂದ ಕಾವಲೂ ಕಾಯುತ್ತಿದ್ದರೂ, ತಕ್ಷಕನು ಅವರ ಕಣ್ಣು ತಪ್ಪಿಸಿ ನಿಮ್ಮ ತಂದೆಯನ್ನು ಮೋಸದಿಂದ ಸಯಿಸಿಲಿಲ್ಲವೇ ? ಅದಕ್ಕೆ ನೀನು ಪ್ರತಿಕಾರ ಮಾಡಬೇಡವೇ ? – ಎಂದು ಕೇಳಿದ.

ಜನಮೇಜಯನಿಗೆ ತನ್ನ ತಂದೆಯು ಮರಣಹೊಂದಿದ ಸನ್ನಿವೇಶದ ಸ್ಮರಣೆಯಾಗಿ ದುಃಖ ಉಕ್ಕಿ ಬಂತು. ತಕ್ಷಕನ ಮೇಲೆ ಅಪಾರ ಕೋಪ ಉಂಟಾಯಿತು. ‘’ಋಷಿಕುಮಾರ ! ಕರ್ತವ್ಯ ಮರೆತಿದ್ದ ನನ್ನನ್ನು ಎಚರಿಸಿದಿರಿ. ತುಂಬ ವಂದನೆಗಳು. ಆಹಾ ನಮ್ಮ ತಂದೆಯವರ ಮರಣಕ್ಕೆ ಕಾರಣನಾದ ಆ ತಕ್ಷಕನ ವಂಶವನ್ನೇ ತೊಡೆದೂ ಹಾಕಿಬಿಡಬೇಕೆನ್ನಿಸುತ್ತದೆ. ಅದಕ್ಕಾಗಿ ನಾನೇನೂ ಮಾಡಬೇಕು, ದಯವಿಟ್ಟು ತಿಳಿಸಿ’’ – ಎಂದು ಕೇಳಿಕೊಂಡ ಆಗ ಸಮೀಪದಲ್ಲಿದ್ದ ಪುರೋಹಿತರು ‘’ಮಹಾರಾಜ ! ಸರ್ಪಸತ್ರವೆಂಬ ಮಹಾಯುಗವೊಂದಿದೆ. ಈ ಯಾಗವನ್ನು ಮಾಡಿ ಸರ್ಪಗಳೆಲ್ಲವನ್ನು ಅಗ್ನಿಗೆ ಆಹುತಿ ನೀಡಬಹುದಲ್ಲಾ !’’ ಎಂದರು. ಜನಮೇಜಯನು ಕೂಡಲೇ ರುತ್ವಿಜರನ್ನು ಕರೆಸಿದನು ‘’ನಾನು ಸರ್ಪಯಾಗ ಮಾಡಲು ನಿಶ್ಚಯಿಸಿದ್ದೇನೆ. ಅದಕ್ಕೆ  ಬೇಕಾದ ಸಿದ್ದತೆಗಳನ್ನು ನಡೆಸಿ’’ – ಎಂದ ಸರ್ಪಯಾಗದ ಸಿದ್ದತೆಗಳಾರಂಬಿಸಿದವು.

ಸೌತಿಗಳು ಹೇಳುತ್ತಿದ್ದ ಕಥೆಯನ್ನು ಕೇಳುತ್ತಿದ್ದ ನೈಮಿಷಾರಣ್ಯದ ಋಷಿಗಳ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸಿದವು. ಅವರು ‘’ಸೌತಿಗಳೆ ! ನಮಗೆ ಕೆಲವು ಸಂಶಯಗಳು ಉಂಟಾಗಿವೆ. ಅವನ್ನು ದಯವಿಟ್ಟು ಪರಿಹರಿಸಿ. ಉತ್ತಂಕನು ತನಗೆ ತೊಂದರೆ ನೀಡಿದ ತಕ್ಷಕನೊಬ್ಬನ ಮೇಲೆ ಮಾತ್ರ ಪ್ರತೀಕಾರ ಕೈಗೊಳ್ಳದೆ ಇಡೀ ಸರ್ಪಕುಲವನ್ನೇ ನಾಶ ಮಾಡುವ ಪ್ರಯತ್ನ ಮಾಡಿದ್ದೂ ಸರಿಯೇ ಅಲ್ಲದೆ, ಆ ಯಾಗ ಮಾಡಿದ ಮೇಲೆ, ಇಡೀ ಸರ್ಪಕುಲವೇ ನಾಶವಾಗಿ ಬಿಡಬೇಕಾಗಿತ್ತಲ್ಲವೇ ? ಹಾಗಾಗದೇ ಇಗಲೂ ಸರ್ಪಕುಲ ಉಳಿದುಕೊಂಡಿದೆಯಲ್ಲಾ. ಅದಕ್ಕೆ ಕಾರಣವೇನು ?’’ – ಎಂದು ಕೇಳಿದರು. ಇಲ್ಲಿ ಓದಿ:-ಸರ್ಪಗಳ ತಾಯಿ ತನ್ನ ಮಕ್ಕಳಾದ ಸರ್ಪಗಳಿಗೆ ಕೊಟ್ಟ ಶಾಪ ಹಾಗೂ ಸರ್ಪಗಳು ಮತ್ತು ಗರುಡ ಹುಟ್ಟಿದ ಕತೆ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ…

‘’ಈಗ ನಿಮಗೆ ಎಲ್ಲವೂ ಸ್ವಷ್ಟವಾಗಿರಬೆಕಲ್ಲವೇ ? ಕದ್ರುವಿನ ಶಾಪವೇ ಸರ್ಪಯಾಗದ ಮೂಲಕಾರಣ ಉತ್ತಂಕ ಮತ್ತು ಜನಮೇಜಯರು ಬರೀ ನಿಮಿತ್ತರು ಮಾತ್ರ.

ಜನಮೇಜಯನು ತಾನು ನಿಶ್ಚಯಸಿದ್ದಂತೆ ಸರ್ಪಯಾಗವನ್ನು ಪ್ರಾರಂಬಿಸಿದರು. ಯಾಗದಲ್ಲಿ ಹೋತೃ. ಅದ್ವರ್ಯು, ಉದ್ಗಾತೃ  ಬ್ರಹ್ಮ ಎಂಬ ನಾಲ್ಕು ಪ್ರಮುಕ ಪುರೋಹಿತರಿರುತ್ತಾರೆ. ಇವರಿಗೆ ಋತ್ವಿಕ್ಕುಗಳೆಂದು ಹೆಸರು. ಋಗ್ವೇದದ ಮಂತ್ರಗಳನ್ನು ಪಠಿಸಿ ಯಾಗದ ಹವಿಸ್ಸನ್ನು ತೆಗೆದುಕೊಂಡು ಹೋಗುವಂತೆ ದೇವತೆಗಳನ್ನು ಅಹ್ವಾನಿಸುವವನೇ ಹೋತೃ. ಪ್ರಾರ್ಥನಾ ನಿಯಮಗಳ ಸಂಗ್ರಹವಾದ ಯಜುರ್ವೇದದಲ್ಲಿ ಪರಿಣಿತನಾಗಿದ್ದು ದೇವತೆಗಳನ್ನೂ ಕರೆಯುವಾಗ ‘ಸ್ವಾಹಾ’ ಎನುತ್ತಾ ಅಗ್ನಿಕುಂಡದಲ್ಲಿ ತುಪ್ಪವನ್ನು ಹಾಕುವವನು ಅದ್ವರ್ಯ. ಉಚ್ಚಸ್ವರದಲ್ಲಿ ದೇವತೆಗಳನ್ನು ಕುರಿತು ಸಾಮವೇದದ ಮಂತ್ರಗಳನ್ನು ಇಂಪಾಗಿ ಹಾಡುವವನು ಉದ್ಗಾತೃ ಅಥರ್ವವೇದದಲ್ಲಿ ಪಂಡಿತನಾಗಿದ್ದು ಯಗ್ನಯಾಗದಿಗಳ ಅಧ್ಯಕ್ಷಸ್ಥಾನವನ್ನು ಅಲಂಕರಿಸುವವನು ಬ್ರಹ್ಮ. ಜನುಮೆಜಯನು ಮಾಡಿದ ಸರ್ಪಯಾಗದಲ್ಲಿ ಚ್ಯವನಮಹರ್ಶಿಯ ವಂಶಸ್ಥಾನದ ಚಂಡ ಭಾರ್ಗವನೆಂಬುವವನು ಹೋತೃವಾಗಿದ್ದನು. ವಿದ್ವಾಂಸನಾದನು ಕೌತ್ಸನು ಉದ್ಗಾತೃವಾಗಿದ್ದನು. ಶಾಙ್ಗರವ, ಪಿಂಗಲರು ಅಧ್ವರ್ಯವಾಗಿದ್ದರು. ಜೈಮಿನಿಯ ಬ್ರಹ್ಮನಾಗಿದ್ದನು.

ಆ ಸರ್ಪಯಾಗದಲ್ಲಿ ಋತ್ವಿಜರು ಸರ್ಪಗಳ ಹೆಸರನ್ನು ಹೇಳಿ ಅವುಗಳನ್ನು ಅಗ್ನಿಯ ಬಳಿಗೆ ಆಕರ್ಶಿಸಿ ‘ಸ್ವಾಹಾ’ ಎನ್ನುತ್ತಿದ್ದರು. ಕೂಡಲೇ ಆಯಾ ಸರ್ಪಗಳು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದಲ್ಲಿ ಬಂದು ಬಿಳುತಿದ್ದವು ಅಗ್ನಿಯ ಬಳಿಗೆ ಬರುವಾಗ ಅವು ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದವು. ಪರಸ್ವರ ಧೈನದಿಂದ ನೋಡುತ್ತ ನಿತ್ತುಸಿರುಬಿದುತ್ತಿದ್ದುವು. ಬೆದರಿಕೆಯಿಂದ ಬುಸುಗುಟ್ಟುತ್ತಿದ್ದವು; ದಾರುಣವಾಗಿ ಶಬ್ಧಮಾದುಡುತಿದ್ದವು ವಿಲಿವಿಲಿ ವದ್ದಾಡುತಿದ್ದವು. ಬಿಳಿಯ ಹಾವುಗಳು, ಕಾಳಿಂಗ ಸರ್ಪಗಳು ನೀಲವರ್ಣದ ದೊಡ್ಡ ಹಾವುಗಳು ಮಾರಿನಗರಗಳು, ಎಲ್ಲವೂ ಪ್ರದೀಪ್ತನಾದ ಯಜ್ಞೆಶ್ವರನಲ್ಲಿ ಬಂದು ಬೀಳುತಿದ್ದವು. ಹೀಗೆ ಲಕ್ಷೋಪಲಕ್ಷ ಸರ್ಪಗಳು ಅಗ್ನಿಯಲ್ಲಿ ಬಿದ್ದು ಪ್ರಾಣ ಬಿಟ್ಟವು.

ಜನುಮೆಜಯನು  ಮಾಡುತಿದ್ದ ಯಾಗವನ್ನು ನೋಡಿ ತಕ್ಷಕನು ಭಿತನಾದನು. ತನ್ನ ಗೆಳೆಯ ದೆವೆಂದ್ರನನ್ನು ಮೊರೆ ಹೋದನು. ‘’ನನ್ನನ್ನು ಮಾಡುತಿದ್ದಾನೆ ನನ್ನನ್ನು ಅಗ್ನಿಗೆ ಆಹುತಿ ಕೊಡುವುದಕ್ಕಾಗಿ ಜನುಮಜೆಯನು ಸರ್ಪಯಾಗವನ್ನು ಮಾಡುತಿದ್ದಾನೆ. ನನ್ನ್ನನ್ನು ಕಾಪಾಡು’’ – ಎಂದು ಬೇಡಿಕೊಂಡನು ಆಗ ಇಂದ್ರನು ‘’ನೀನು ನನ್ನ ಅರಮನೆಯಲ್ಲಿ ಇದ್ದುಬಿಡು. ಇಲ್ಲಿ ಅಗ್ನಿಯ ಭಯವಿಲ್ಲ ‘’ ಎಂದು – ಎಂದು ದೈರ್ಯ ಹೇಳಿದನು. ತಕ್ಷಕನು ಇಂದ್ರನನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲಿಯೇ ನಿಂತನು.

ಆ ಸಮಯದಲ್ಲಿ ವಾಸುಕಿ ಮೊದಲಾದ ಸರ್ಪಗಳ ತಮ್ಮ ತಂಗಿಯ ಮಗನಾದ ಆಸ್ತಿಕನ ಬಳಿಗೆ ಹೋದರು, ‘’ಆಕಸ್ಮಿಕ ! ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು’’ – ಎಂದರು ಅಸ್ಥಿಕನು ‘’ಮಾವಂದಿರ ! ನಿಮ್ಮನ್ನು ಉಳಿಸಲು ಏನು ಮಾಡಬೇಕೆಂದು ಹೇಳಿ. ಖಂಡಿತ ಮಾಡುತ್ತೇನೆ’’-ಎಂದನು. ವಾಸುಕಿಯು ‘’ಮಗೂ ! ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು ‘’-ಎಂದನು ಆಸ್ತಿಕನು ಕೂಡಲೇ ಯಜ್ಞಶಾಲೆಯ ಕಡೆ ಹೆಜ್ಜೆ ಹಾಕಿದನು.

ಇತ್ತ ಸರ್ಪಯಾಗದಲ್ಲಿ ಅನೇಕ ಸರ್ಪಗಳು ಯಜ್ಞೆಶ್ವರನಿಗೆ ಆಹುತಿಯಾದರು ತಕ್ಷಕ ಮಾತ್ರ ಕಾಣಿಸಿಕೊಂಡಿರಲಿಲ್ಲ. ಜಾನುಮಜೆಯನು ಹೊತೃವನ್ನು ಕುರಿತು ‘’ಸ್ವಾಮಿ ! ನನ್ನ ಪರಮವೈರಿಯಾದ ತಕ್ಷಕನೆ ಇನ್ನೂ ಬಂದಿಲ್ಲವಲ್ಲ. ಅವನನ್ನು   ಬೇಗ ಬರ ಮಾಡಿಕೊಂಡು ಅಗ್ನಿಗೆ ಅರ್ಪಿಸಿ’’ ಎಂದ. ಹೊತೃವು ತಕ್ಷಕನನ್ನು ಆಕರ್ಷಿಸುವ ಮಂತ್ರವನ್ನು  ಪಟಿಸಿದನು ಆದರೂ ತಕ್ಷಕನು ಬರಲಿಲ್ಲ. ಆಗ ರುತ್ವಿಜಯರಿಗೆ ತಕ್ಷಕನು ಇಂದ್ರನು ಆಶ್ರಯ ಪಡೆದಿರುವುದು ತಿಳಿಯಿತು. ಅವರು ‘’ ಇಂದ್ರನು ತಕ್ಷಕನಿಗೆ ಆಶ್ರಯ ಕೊಟ್ಟಿದ್ದಾರೆ ಆ ಇಂದ್ರನ ಸಹಿತ ತಕ್ಷಕನು ಬರಲಿ’’- ಎಂದು ಮಂತ್ರ ಹೇಳಿದರು. ಆಗ ಇಂದ್ರನು ಭಯಗೊಂಡು ತನ್ನನ್ನು ಬಲವಾಗಿ ಅಪ್ಪಿಕೊಂಡಿದ್ದ ತಕ್ಷಕನನ್ನು ಕೆಳಕ್ಕೆ ಕೆಡವಿಬಿಟ್ಟನು ಭ್ಯಯವಿಹ್ವಲನಾದ ತಕ್ಷಕನು ಮಂತ್ರದಿಂದ ಆಕರ್ಷಿತನಾಗಿ ಅಗ್ನಿಯ ಕಡೆಗೆ ಬೀಳತೊಡಗಿದನು.

ಇದೇ ಸಮಯಕ್ಕೆ ಸರಿಯಾಗಿ ಅಸ್ತೀಕನು ಯಜ್ಞಶಾಲೆಯ ಬಳಿಗೆ ಬಂದನು ಉಚ್ಚದ್ವನಿಯಲ್ಲಿ ಯಜ್ಞವನ್ನು ಕುರಿತು ಸ್ತೋತ್ರಮಾಡಲು ಪ್ರಾರಂಬಿಸಿದನು. ಜನಮೇಜಯ ಋತ್ವಿಜರು ಅಗ್ನಿ ಎಲ್ಲರನ್ನೂ ಪ್ರಶಂಸಿಲಾರಂಬಿಸಿದರು ಆ ಬಾಲಕನ ಗಾಂಬಿರ್ಯ ಮುಖ ಸೌಂದರ್ಯ ಕಂಠಮಾದುರ್ಯಗಳನ್ನು ಕಂಡು ಜನಮೇಜಯ ಪ್ರೀತನದನು, ಭ್ರಾಹ್ಮಣ ಕುಮಾರ ! ನಿನಗೆ ಬೇಕಾದ ವರವನ್ನು ಕೇಳಿಕೋ’’- ಎಂದ ಅಸ್ತಿಕನು ‘’ಈ ಕ್ಷಣದಿಂದಲೇ ಯಾಗವನ್ನು ನಿಲ್ಲಿಸು ಮಹಾರಾಜ!’’- ಎಂದು ಪ್ರಾರ್ಥಿಸಿದನು.

ಜನಮೇಜಯನು ದಿಗ್ಮುಡನಾದನು ಆಸ್ಥಿಕನು ‘ಭೂಮಿಯನ್ನೋ ಹಣವನ್ನೋ ದಾನವಾಗಿ ಕೇಳಬಹುದೆಂದು ಅವನು ಭಾವಿಸಿದ್ದನು ಆದರೆ ಆ ಬಾಲಕ ಯಜ್ಞ್ಯವನ್ನೇ ನಿಲ್ಲಿಸಬೇಕೆಂದು ಕೆಳುತಿದ್ದಾನೆ ಅದೂ ಈ ಕ್ಷಣದಿಂದಲೇ ತಕ್ಷಕನು ಅಗ್ನಿಕುಂಡದೊಳಗೆ ಬೀಳುವ ಮುನ್ನವೇ ಆದರೆ ಮಾಡುವುದೇನು ? ಮಾತು ಕೊಟ್ಟಾಗಿದೆ ಹಿಂದೆಗೆಯುವ ಹಾಗಿಲ್ಲ. ತನಗೆ ಅಪಾರ ಸಂಕಟವಾದರೂ ಸಹ ಜನಮೇಜಯನು ಸಮಾಧಾನತಂದುಕೊಂಡ. ‘’ಹಾಗೆಯೆ ಆಗಲಿ’’ ಎಂದ ಕೂಡಲೇ ಸರ್ಪಗಳು ಅಗ್ನಿಯಲ್ಲಿ ಬೀಳುವುದು ನಿಂತುಹೋಯಿತು. ಇನ್ನೇನು ಯಜ್ಞೆಶ್ವರನಿಗೆ ಅಹುತಿಯಗುತ್ತಾನೆ ಎಂದುಕೊಳ್ಳುವುಷ್ಟರಲ್ಲಿ ತಕ್ಷಕನು ತಪ್ಪಿಸಿಕೊಂಡು ಬಿಟ್ಟ. ಸೌತಿಗಳು ಹೇಳಿದ ಸರ್ಪಯಾಗದ ಕಥೆಯನ್ನು ಕೇಳಿ ಆಶ್ರಮವಾಸಿಗಳ ಮೈ ರೋಮಂಚನಗೊಂಡಿತು.

About the author / 

Editors Pick

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?

    ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮುಖ್ಯಮಂತ್ರಿ ಬದಲಾವಣೆ ಅಂತಿಮ ಹಂತ ತಲುಪಿದ್ದು, ಮುಖ್ಯಮಂತ್ರಿ Siddaramaiah ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ರಾಜೀನಾಮೆ ಘೋಷಣೆ ಹೇಗೆ ನಡೆಯಿತು? ಬೆಂಗಳೂರಿನಲ್ಲಿರುವ ಸಭೆಯೊಂದರಲ್ಲಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜ್ಯಪಾಲ Thawarchand Gehlot ನಗರದಲ್ಲಿರದ ಕಾರಣ, ಅವರ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ 29 ಜನವರಿ, 2019 ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆ ಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ…

  • ಜ್ಯೋತಿಷ್ಯ

    ಶ್ರೀ ಗುರು ರಾಘವೇಂದ್ರ ಸ್ವಾಮಿಯನ್ನು ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatpp ಮೆಸೇಜ್ ಮಾಡಿ ಮೇಷ…

  • inspirational

    ಸ್ಮಾರ್ಟ್‌ಫೋನ್‌ ಬಳಕೆಯಿಂದಾಗಿ ಗಂಡ-ಹೆಂಡತಿ ಮಧ್ಯೆ ಬಿರುಕು

    ಇಂದಿನ ಸ್ಮಾರ್ಟ್‌ಫೋನ್‌ಗಳೇ ಗಂಡ-ಹೆಂಡತಿಯ ನಡುವೆ ದೂರ ಹೆಚ್ಚಿಸುತ್ತಿವೆಯೇ? ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಮೊಬೈಲ್ ಕೈಯಲ್ಲೇ ಇರುತ್ತದೆ. ಆದರೆ ಇದೇ ಸ್ಮಾರ್ಟ್‌ಫೋನ್‌ಗಳು ಈಗ ಕುಟುಂಬ ಸಂಬಂಧಗಳ ಮೇಲೆ, ವಿಶೇಷವಾಗಿ ಗಂಡ-ಹೆಂಡತಿ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬ ಆತಂಕಕಾರಿ ವರದಿಗಳು ಹೊರಬಿದ್ದಿವೆ. ಭಾರತದಲ್ಲಿ ನಡೆದ ಹಲವು ಅಧ್ಯಯನಗಳು ದಾಂಪತ್ಯ ಜೀವನದಲ್ಲಿ “ಮೊಬೈಲ್ ಅಂತರ” ವೇಗವಾಗಿ ಹೆಚ್ಚುತ್ತಿದೆ ಎಂದು ಸೂಚಿಸುತ್ತಿವೆ. ಏನು ಹೇಳುತ್ತಿವೆ ಅಧ್ಯಯನಗಳು? ಭಾರತದಲ್ಲಿ…

  • ಉಪಯುಕ್ತ ಮಾಹಿತಿ, ದೇಶ-ವಿದೇಶ, ಹಣ

    ಈ ದೇಶಗಳಲ್ಲಿ ನಮ್ಮ ದೇಶದ ಒಂದು ರೂಪಾಯಿಗೆ ಇರುವ ಬೆಲೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ನಮ್ಮ ಭಾರತ ದೇಶದಲ್ಲಿ ಹಣದ ವಿಷಯದ ಬಗ್ಗೆ ಮಾತನಾಡುವಾಗ ನಮ್ಮ ರುಪಾಯಿಯನ್ನು ಬೇರೆ ದೇಶದ ಕರೆನ್ಸಿಗಳ ಜೊತೆ ಹೋಲಿಸಿ ಮಾತನಾಡುವುದುಂಟು. ಅದರಲ್ಲೂ ಅಮೇರಿಕಾದ ಡಾಲರ್ ಜೊತೆಗೆ  ಹೋಲಿಸಿಕೊಂಡು ಮಾತನಾಡುವುದು ಜಾಸ್ತಿ. ಅದರಲ್ಲೂ ನಮ್ಮ ರುಪಾಯಿ ಮುಂದೆ ಡಾಲರ್ ಮೌಲ್ಯ ಜಾಸ್ತಿ ಇರುವುದರಿಂದ ಅದರ ಬಗ್ಗೆಯೇ ನಮ್ಮಲ್ಲಿ ಚರ್ಚೆ ನಡೆಯುತ್ತದೆ. ಆದರೆ ನಮಗೆ ಗೊತ್ತೇ ಇಲ್ಲದ ವಿಷಯ ಏನಪ್ಪಾ ಅಂದ್ರೆ ಜಗತ್ತಿನಲ್ಲಿ ನಮ್ಮ  ದೇಶದ ರುಪಾಯಿಗಿಂತ ಕಡಿಮೆ ಬೆಲೆಯುಳ್ಳ ಕರೆನ್ಸಿ…

  • ಸುದ್ದಿ

    ‘ಮೇಕಪ್ ಮಾಡದ ದೃಶ್ಯಗಳನ್ನೆ ಹೆಚ್ಚು ತೋರಿಸಿದ್ದಾರೆ’ ಎಂದ ಚೈತ್ರಾ ಹೇಳಿಕೆಗೆ ಸುದೀಪ್ ಗರಂ..!

    ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಎರಡನೇ ವಾರ ಚೈತ್ರಾ ವಾಸುದೇವನ್ ಎಲಿಮಿನೇಟ್ ಆದರು. ದೊಡ್ಮನೆಯಿಂದ ಚೈತ್ರಾ ಅವರನ್ನ ಹೊರಗೆ ಕರೆದ ಸುದೀಪ್ ವೇದಿಕೆ ಮೇಲೆ ಮಾತುಕತೆ ಮುಂದುವರಿಸಿದರು. ಈ ವೇಳೆ ಚೈತ್ರಾ ವಾಸುದೇವನ್ ಅವರಿಗೆ ತಮ್ಮ ಎರಡು ವಾರದ ಜರ್ನಿ ಕುರಿತು VT (ವಿಡಿಯೋ ದೃಶ್ಯ) ತೋರಿಸಲಾಯಿತು. ಈ ವಿಡಿಯೋ ನೋಡಿದ ಚೈತ್ರಾ ವಾಸುದೇವನ್’ ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ’ ಒಂದು ವಿಚಾರಕ್ಕೆ ಕಾಮೆಂಟ್ ಮಾಡಿದರು. ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ…