ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚರಕ ಸಂಹಿತೆ ಇಂದಿಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಗ್ರಂಥ ಎಂದು ಎಲ್ಲ ವೈದ್ಯರು ಒಕ್ಕೊರಲಿನಿಂದ ಒಪ್ಪುತ್ತಾರೆ , ಹೊಸ ಆರೋಗ್ಯ ಸಮಸ್ಯೆಗಳು , ಜಟಿಲ ಕಾಯಿಲೆಗಳು ಉತ್ಪತ್ತಿ ಆದಾಗ ವೈಜ್ಞಾನಿಕ ಪ್ರಪಂಚ ಆಸೆ ಭರವಸೆಗಳಿಂದ ನೋಡುವುದು ಈ 2ನೇ ಶತಮಾನದ ಗ್ರಂಥದೆಡೆಗೆ , ಚರಕ ಸಂಹಿತೆಯಲ್ಲಿ ಅಗ್ನಿವೇಶ ಎಂಬ ವಿದ್ಯಾರ್ಥಿಯು ಗುರುವಾದ ಅತ್ರೇಯರಲ್ಲಿ ನಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳಿದ್ದಾನೆ -ಹಿತಕರವಾದ ಅಥವಾ ಅಹಿತಕರವಾದ ಆಹಾರ ಸೇವಿಸುವ ಎರಡು ತರಹದ ಜನರಲ್ಲಿ ಕೂಡ ಕೆಲವರು ಆರೋಗ್ಯದಿಂದ ಇರುತ್ತಾರೆ ,ಕೆಲವರು ರೋಗಿಗಳಾಗುತ್ತಾರೆ ಅಂತಹ ಸಂಧರ್ಭದಲ್ಲಿ ಹಿತ ಅಥವಾ ಅಹಿತ ಆಹಾರದಿಂದಲೇ ಆರೋಗ್ಯ , ಅನಾರೋಗ್ಯಗಳಾಯಿತು ಎಂದು ಹೇಗೆ ನಾವು ನಿಶ್ಚಯಿಸಿಕೊಳ್ಳಬಹುದು ಎಂಬುದೇ ಆ ಪ್ರಶ್ನೆ.
ಇದಕ್ಕೆ ಉತ್ತರಿಸುತ್ತಾ ಅತ್ರೇಯರು ಹೇಳುತ್ತಾರೆ ಕೇವಲ ಹಿತಾಹಾರ ಸೇವನೆಯಿಂದ ಎಲ್ಲ ರೋಗಗಳ ಆತಂಕ ನಿವಾರಣೆ ಅಸಾಧ್ಯ. ಏಕೆಂದರೆ ಅಹಿತ ಆಹಾರಕ್ಕೂ ಮಿಗಿಲಾಗಿ ರೋಗದ ಉತ್ಪತ್ತಿಗೆ ಇನ್ನು ಅನೇಕ ಕಾರಣಗಳಿರುತ್ತವೆ. ಉದಾಹರಣೆಗೆ-ಕಾಲ ವಿಪರ್ಯಾಯ ಎಂದರೆ ಋತು ಕಾಲಕ್ಕೆ ಅನುಸಾರ ಗುಣಗಳಾದ ಚಳಿ ಸೆಖೆ ಮಳೆಗಳು ತೀವ್ರವಾಗಿ ಏರು ಪೆರು ಆಗುವುದು ,ಇದು ರೋಗಕಾರಕ ಕ್ರಿಮಿಗಳನ್ನು ಬಲಪಡಿಸುವುದು ನಮ್ಮ ಶರೀರ ಬಲವನ್ನು ಕಡಿಮೆ ಮಾಡುವುದು.
ಪ್ರಜ್ಞಾಪರಾಧ – ಆರೋಗ್ಯಕ್ಕೆ ಹಾನಿಕರ ಎಂದು ತಿಳಿದು ತಿಳಿದು ಮಾಡುವಂತಹವು ಅನೇಕ ಗುಟ್ಕಾ ,ತಂಬಾಕು ಸೇವನೆಯಿಂದ ಹಿಡಿದು ಐಸ್ ಕ್ರೀಮ್ , ಅತಿ ಮಾಸಲೆಗಳನ್ನು ತಿಂದು ಅಸಿಡಿಟಿ ಮಾಡಿಕೊಳ್ಳುವುದು, ಹಸಿವಿಲ್ಲದಿದ್ದರು ಕೂಡ ಅತಿಯಾಗಿ ತಿನ್ನುವುದು, ಶುಚಿಯಾಗಿ ಕೈ ಕಾಲು ತೊಳೆಯದೆ ಇರುವುದು ,ಸ್ವಚ್ಛ ಬಟ್ಟೆ ಧರಿಸದಿರುವುದು , ಎಲ್ಲವು ಪ್ರಜ್ಞಾಪರಾಧಗಳೇ ,ನಮ್ಮ ಜ್ಞಾನೇಂದ್ರಿಯಗಳಿಗೆ ಒಗ್ಗದ ಶಬ್ದ ,ಸ್ಪರ್ಶ ,ರೂಪ , ರುಚಿ , ಹಾಗು ವಾಸನೆಗಳನ್ನು ಅನುಭವಿಸುವುದು ಇತ್ಯಾದಿ.
ಪ್ರತಿ ವ್ಯಕ್ತಿಯ ಶರೀರದ ರಕ್ತ ಮಾಂಸಾದಿ ಧಾತುಗಳು ,ವಾಸಿಸುವ ಸ್ಥಳ,ಶರೀರ ಬಲ ,ಕಾಲ- ವಾತಾವರಣ , ಸ್ಥೂಲ ಜೀರ್ಣ ಶಕ್ತಿ ಹಾಗು ಸೂಕ್ಷ್ಮವಾದ ಪ್ರತಿ ಕೋಶಗಳ ಮೈಟೊಕಾಂಡ್ರಿಯ ದಲ್ಲಿ ಆಗುವ ಜೀರ್ಣ ಕ್ರಿಯೆ ,ವಯಸ್ಸು , ಅಹಿತದ ಪ್ರಮಾಣ ಇತ್ಯಾದಿ ಅನೇಕ ಕಾರಣಗಳ ವಿವಿಧ ರೀತಿಯ ಸಂಯೋಗದಿಂದ ವ್ಯಾಧಿ ಉತ್ಪತ್ತಿ ಆಗುತ್ತದೆ ಅದಕ್ಕಾಗಿಯೇ ಅದೇ ರೋಗವು ಕೆಲವರಲ್ಲಿ ಶೀಘ್ರವಾಗಿ ಉತ್ಪತ್ತಿ ಆಗಬಹುದು ಕೆಲವರಲ್ಲಿ ನಿಧಾನವಾಗಿ , ಹಾಗು ಸಣ್ಣದಾಗಿಯೂ ಬರಬಹುದು ಅಥವಾ ಉಗ್ರ ರೂಪ ತಾಳಿ ಸಾವಿಗೂಕಾರಣ ಆಗಬಹುದು. ಇದೇ ಕಾರಣಕ್ಕಾಗಿ ಯಾವುದೇ ಕೊರೊನದಂತಹ ಸಾಂಕ್ರಾಮಿಕ ಕಾಯಿಲೆಗಳು ಕೂಡ ಒಂದೇ ಮನೆಯ, ಒಂದೇ ಕಚೇರಿಯ ಎಲ್ಲರಿಗು ಒಂದೇ ತರಹದಲ್ಲಿ ಭಾದಿಸುತ್ತಿಲ್ಲ.
ಮುಂದುವರಿದು ಅತ್ರೇಯರು ಸಾಂಧರ್ಭಿಕವಾಗಿ ಹೇಳುತ್ತಾರೆ “ನಾನಾವೃತ ಮುಖೋ ಜೃಂಭ ,ಕ್ಷವತು, ಹಾಸ್ಯಾಂ ವಾ ಪ್ರವರ್ತಯೇತ್” ಅಂದರೆ ಬಾಯಿ ಹಾಗು ಮೂಗನ್ನು ಮುಚ್ಚದೆ ಆಕಳಿಸುವುದು ,ಸೀನುವುದು ,ನಗೆಯಾಡುವುದು ಮಾಡಬಾರದು ,ಮೂಗಿನ ಹೊಳ್ಳೆಗಳಿಗೆ ಬೆರಳು ಹಾಕುವುದು ,ಉಗುರು ಕಚ್ಚುವುದು ,ಕಂಡ ಕಂಡಲ್ಲಿ ಉಗುಳುವುದು ,ಮಲಮೂತ್ರಗಳ ವಿಸರ್ಜನೆಯನ್ನು ಕೂಡ ಆರೋಗ್ಯದ ದೃಷ್ಟಿಯಿಂದ ಮಾಡದಂತೆ ಎಚ್ಚರಿಸಿದ್ದಾರೆ ,.
ವ್ಯಾಧಿಕ್ಷಮತ್ವ- ಆಯುರ್ವೇದದಲ್ಲಿ ವ್ಯಾಧಿಕ್ಷಮತ್ವ ಎಂಬುದು ಬಹುಚರ್ಚಿತ ವಿಷಯವಾಗಿದ್ದು ಅದನ್ನೇ ಶರೀರ ಬಲ ಅಥವಾ ಈ ದಿನಗಳಲ್ಲಿ ಇಮ್ಯೂನಿಟಿ ಎಂದು ಕರೆಯುತ್ತಾರೆ ,ವ್ಯಾಧಿ ಕ್ಷಮತ್ವ ಎಂದರೆ ವ್ಯಾಧಿ ಬಲವನ್ನು ವಿರೋಧಿಸುವ ಶರೀರ ಹಾಗು ಮನಸ್ಸಿನ ಶಕ್ತಿಯಾಗಿದ್ದು ವ್ಯಾಧಿ ಬರದಂತೆ ತಡೆಯುವುದರೊಂದಿಗೆ ,ಬಂದರೋಗದಿಂದ ಬೇಗನೆ ಗುಣಮುಖವಾಗಲು ಪ್ರಧಾನ ಕಾರಣವಾಗಿರುವ ಪ್ರತಿರೋಧಕ ಶಕ್ತಿಯೇ ಆಗಿರುತ್ತದೆ ಅದರ ಕೊರತೆಯಿಂದಾಗಿ ಅನೇಕ ವಯಸ್ಕರು , ಹೃದ್ರೋಗಿಗಳು ಕೊರೋನ ಕ್ಕೆ ಬಲಿಯಾಗುವುದು ಗೋಚರಿಸುತ್ತಿದೆ ,
ಶರೀರ ಬಲ ಚರಕ ಸಂಹಿತೆ ಪ್ರಕಾರ ಮೂರು ತರಹದ್ದಾಗಿರುತ್ತದೆ ,
1) ಸಹಜ ಬಲ- ಇದು ಜನ್ಮದಿಂದ ಪ್ರಾಪ್ತಿ ಆಗುವಂತದ್ದು ,ಅಪ್ಪ ಅಮ್ಮನಿಂದ ಉತ್ಪತ್ತಿ ಆದ ವೀರ್ಯ ಅಂಡಾಣು, ಗರ್ಭಿಣಿಯ ಆಹಾರ ಹಾಗು ಅವರ ಮನಸ್ಸಿಗೆ ಅನುಗುಣವಾಗಿರುತ್ತದೆ , ಸಧೃಡ ದೇಹ ಇದ್ದು ದುರ್ಬಲ ಮನಸ್ಸಿರಬಹುದು ಅಥವಾ ಬಲಹೀನ ಶರೀರದಲ್ಲಿ ಅಪ್ಪ ಅಮ್ಮನಿಗೆ ಅನುಗುಣವಾಗಿ ಸತ್ವಯುತ ಮನಸ್ಸಿರಬಹುದು.
2) ಎರಡನೆಯದು ಕಾಲಜ ಬಲ- ಎಂದರೆ ಋತುವಿಗೆ ಹಾಗು ವಯಸ್ಸಿಗೆ ಅನುಸಾರವಾಗಿ ಉದಾಹರಣೆಗೆ ಹೇಮಂತ ಶಿಶಿರ ಋತುಗಳಲ್ಲಿ ಸಹಜವಾಗಿ ಶರೀರ ಬಲ ಹೆಚ್ಚಿದ್ದು ಕಾಯಿಲೆಗಳು ಕಮ್ಮಿ ಇರುವುದು ಕಂಡು ಬರುತ್ತದೆ ಅಂತೆಯೇ ಬಾಲ್ಯ , ಯೌವನ ಹಾಗು ವೃದ್ಧಾಪ್ಯ ಕಾಲಾನುಸಾರ ಶರೀರ ಬಲ.
3) ಮೂರನೆಯದಾಗಿ ಯುಕ್ತಿ ಕೃತ ಬಲ- ಅಂದರೆ ನಮ್ಮ ಬುದ್ಧಿವಂತಿಕೆಯಿಂದ ಶರೀರ ಬಲವನ್ನು ಪಡೆದುಕೊಳ್ಳುವುದು ಇದರಲ್ಲಿ ವ್ಯಾಯಾಮ, ಹಾಲು , ತುಪ್ಪ, ಹಣ್ಣುಗಳ ಸೇವನೆ , ಒಳ್ಳೆಯ ದಿನಚರಿ ಪಾಲನೆ ,ಲೇಹ್ಯ ರಾಸಾಯನದಂತಹ ಔಷಧಿಗಳು ಇಂದಿನ ಯುಗದ ವ್ಯಾಕ್ಸೀನ್ ಕೂಡ ಒಳಗೊಂಡಂತೆ ಇದೆ.
ವ್ಯಾಧಿಕ್ಷಮತ್ವ ಎಂಬುದು ಆಯುರ್ವೇದದ ಸಿದ್ಧಾಂತ ಪ್ರಕಾರ ಪೋಲಿಯೋ, ದಡಾರ ಅಥವಾ ಇತರೆ ಯಾವುದೇ ವ್ಯಾಕ್ಸೀನ್ ನಂತೆ ಯಾವುದೇ ಒಂದು ನಿರ್ದಿಷ್ಟ ಕ್ರಿಮಿಯ ರೋಗದ ವಿರುದ್ಧವಾಗಿ ಇರುವುದಿಲ್ಲ, ಇದು ಎರಡು ವಿಷಯಗಳ ಆಧಾರಿತವಾಗಿ ಇದೆ.
ಮೊದಲನೆಯದಾಗಿ ಕಾಯಿಲೆ ತರುವ ಕ್ರಿಮಿಗೆ ಅನುಕೂಲಕರವಾಗುವಂತೆ ನಮ್ಮ ದೇಹ ಇದ್ದಾಗ ಕಾಯಿಲೆ ಆಗುತ್ತದೆ ಹಾಗು ಎರಡನೆಯದಾಗಿ ಎಲ್ಲ ವ್ಯಕ್ತಿಗಳು ಕೂಡ ಒಂದೇ ಮಟ್ಟಕ್ಕೆ ಕಾಯಿಲೆಗೆ ಒಳಪಡುವುದಿಲ್ಲ. ,ತಾತ್ಪರ್ಯ ಏನೆಂದರೆ ಹೇಗೆ ಅನುಕೂಲವಾದಂತ ಭೂಮಿ ಸಿಗದಿದ್ದರೆ ಬಿತ್ತಿದ ಬೀಜ ತಾನೇ ನಾಶವಾಗುವುದೋ ,ಇಂಧನ ಇಲ್ಲದ ಅಥವಾ ಗಾಳಿ ಇಲ್ಲದೆ ಬೆಂಕಿ ಹೇಗೆ ಆರುವುದೋ ಅಂತೆಯೇ ವ್ಯಾಧಿಕ್ಷಮತ್ವದಿಂದಾಗಿ ವ್ಯಾಧಿಗೆ ಅನುಕೂಲ ಪರಿಸ್ಥಿತಿ ನಮ್ಮ ದೇಹದಲ್ಲಿ ಇಲ್ಲದಿದ್ದಾಗ ಸಹಜವಾಗಿ ಸಾಂಕ್ರಾಮಿಕ ಹಾಗು ಇತರೆ ಕಾಯಿಲೆಗಳ ವಿರುದ್ಧ ದೇಹ ಗೆಲ್ಲುತ್ತದೆ , ಕ್ರಿಮಿ ಯಾವುದು ಎಂಬುದು ಮುಖ್ಯ ಅಲ್ಲ ನಮ್ಮ ಶರೀರ ಹೇಗಿದೆ ಎಂಬುದೇ ಅತಿ ಮುಖ್ಯ.
ವ್ಯಾಧಿಕ್ಷಮತ್ವ ಎಂಬುದು ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟಕ್ಕಿರುವ ವಸ್ತುವಲ್ಲ ,ಆರೋಗ್ಯವನ್ನು ಕಾಪಾಡಲು ಬೇಕಾದ ಆಹಾರ ,ವಿಹಾರ, ನಿದ್ರೆ , ಒತ್ತಡ ರಹಿತ ಜೀವನ ಹಾಗು ದಿನಚರಿಗಳಲ್ಲಿ ಅಡಗಿದೆ ,ಅಂತೆಯೇ ಮನೆ ಮದ್ದಿಗೆ ಹೇಳುವ ಅರಶಿನ ಇತ್ಯಾದಿ ಮಸಾಲೆಗಳು ಮಾತ್ರ ಆಯುರ್ವೇದ ಅಲ್ಲ ಅವು ಆಯುರ್ವೇದದ ಔಷಧಿ ಸಮುದ್ರದಿಂದ ಒಂದು ಹನಿ ತೆಗೆದಂತೆ ಮಾತ್ರ .
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿಶ್ವ ಮಹಿಳಾ ದಿನದಂದು ಬಾಲಿವುಡ್ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬಾಲಿವುಡ್ ನ ಕೆಲ ನಟರ ಪತ್ನಿಯರು ಕೇವಲ ಸ್ಟಾರ್ಸ್ ಪತ್ನಿಯರಾಗಿ ಗುರುತಿಸಲ್ಪಡುವುದಿಲ್ಲ. ತಮ್ಮದೇ ಬ್ಯುಸಿನೆಸ್ ಶುರು ಮಾಡಿ, ಅದ್ರಲ್ಲಿ ಹೆಸ್ರು ಮಾಡಿದವರ ಸಂಖ್ಯೆ ಸಾಕಷ್ಟಿದೆ. ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದವರು ರಜನಿಕಾಂತ್. ಅವ್ರ ಪತ್ನಿ ಲತಾ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರ್ತಾರೆ. ಲತಾ, ಮಕ್ಕಳ ಶಿಕ್ಷಣಕ್ಕಾಗಿ ದಿ ಆಶ್ರಮ ಹೆಸರಿನ…
ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಮಂಡ್ಯ ಜೆಡಿಎಸ್ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದ್ದು, ಸಿನಿಮಾ ರಂಗದವರು ಬಂದರೆ ಮಂಡ್ಯದ ಜನ ಮರುಳಾಗುವುದಿಲ್ಲ ಎಂದು ಹೇಳಿದ್ದಾರೆ. ‘ಗಜಕೇಸರಿ’, ‘ಐರಾವತ’ ಬಂದರೂ, ಗೆಲ್ಲುವುದು ‘ಅಭಿಮನ್ಯು’ ನಿಖಿಲ್ ಎಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಚಾರ ಮಾಡಿ ಸಿದ್ದರಾಮಯ್ಯ, ಆನಂದ ಅಪ್ಪುಗೋಳ, ಕೆ….
ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದು ಆದರೆ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸುತ್ತಿರುವ ಆರ್ಸಿಬಿಗೆ ಶಾಕಿಂಗ್ ಸುದ್ದಿ ಲಭಿಸಿದೆ. 360 ಡಿಗ್ರಿ ಶಾಟ್ ಖ್ಯಾತಿಯ ಎಬಿ ಡಿವಿಲಿಯರ್ಸ್ ಪಾಕಿಸ್ತಾನದ ಸೂಪರ್ ಲೀಗ್ನಲ್ಲಿ ಕಳೆದ 2 ದಿನಗಳ ಹಿಂದೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಸದ್ಯ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇದರ ಬೆನ್ನಲ್ಲೇ ಎಬಿಡಿ ಐಪಿಎಲ್ ವೇಳೆಗೆ ಫಿಟ್ ಆಗುತ್ತಾರ ಎಂಬ ಅನುಮಾನಗಳು ಅಭಿಮಾನಿಗಳನ್ನು ಕಾಡುತ್ತಿದೆ. ಐಪಿಎಲ್ ಆರಂಭಕ್ಕೆ ಇನ್ನು 3 ವಾರಗಳಷ್ಟೇ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಹಾಲು ಸಂಪೂರ್ಣ ಆಹಾರ. ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಗಳನ್ನು ಒದಗಿಸುತ್ತದೆ.ಬೆಲ್ಲವನ್ನು ಸಕ್ಕರಗೆ ಬದಲಿಯಾಗಿ ಉಪಯೋಗಿಸುತ್ತಾರೆ. ಬೆಲ್ಲದಿಂದ ಅನೇಕ ಸಿಹಿ ಪದಾರ್ಥಗಳನ್ನೂ ಮಾಡುತ್ತಾರೆ. ಸಕ್ಕರೆಗಿಂತ ಬೆಲ್ಲವನ್ನು ಸೇವಿಸುವುದರಿಂದ ಹೆಚ್ಚಿನ ಲಾಭವಿದೆ. ಬಿಸಿ ಬಿಸಿ ಹಾಲಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಿದರೆ ಹೇಗಿರುತ್ತದೆಂದು ಗೊತ್ತೆ? ತುಂಬಾ ರುಚಿಕರವಾಗಿರುತ್ತದೆ…! ಕೆಲವರು ಹೀಗೆ ಬಿಸಿ ಹಾಲಿಗೆ ಬೆಲ್ಲವನ್ನು ಸೇರಿಸಿ ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಕೇವಲ ರುಚಿಕರವಾಗಿರುವುದೇ ಅಲ್ಲದೇ ಇತರೆ ಅನಾರೋಗ್ಯ ಸಮಸ್ಯೆಗಳು…
ನೌಕರರು, ಉದ್ಯೋಗಿಗಳ ವಲಯಕ್ಕೆ ಶುಭ ಸುದ್ದಿ ಇಲ್ಲಿದೆ. ಸೆಪ್ಟಂಬರ್ 26, 27 ರಂದು ಬ್ಯಾಂಕ್ ಮುಷ್ಕರವಿದ್ದು, ಸತತವಾಗಿ 5 ದಿನ ರಜೆ ಇರುವುದರಿಂದ 5 ದಿನ ಮೊದಲೇ ವೇತನ ನೀಡಲು ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 26, 27 ರಂದು ಬ್ಯಾಂಕ್ ವಿಲೀನ ವಿರೋಧಿಸಿ ಮುಷ್ಕರ ನಡೆಯಲಿದೆ. 28 ರಂದು 4ನೇ ಶನಿವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ. 29 ರಂದು ಭಾನುವಾರ ಕೂಡ ರಜೆ ಇರುತ್ತದೆ. ಸೆಪ್ಟೆಂಬರ್ 30 ರಂದು ಬ್ಯಾಂಕುಗಳ ಅರ್ಧ ವಾರ್ಷಿಕ ವಹಿವಾಟು…
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…