ಇತಿಹಾಸ

ರಾಣಿ ಪದ್ಮಿನಿಗೂ ಮತ್ತು ಅಲ್ಲಾವುದ್ದೀನ್ ಖಿಲ್ಜಿಗೂ ಇದ್ದ ನಿಜವಾದ ಸಂಬಂದ ಏನು ಗೊತ್ತಾ..?ಪದ್ಮಾವತಿಯು ಬೆಂಕಿಗೆ ಹಾರಿ ಸತ್ತಿದ್ದು ಏಕೆ?ರೋಚಕವಾಗಿದೆ ರಾಣಿ ಪದ್ಮಿನಿಯ ರಿಯಲ್ ಸ್ಟೋರಿ…

1664

ರಾಣಿ ಪದ್ಮಿನಿ 13ನೇ ಶತಮಾನದ ರಾಜಸ್ಥಾನದ  ಮೇವಾಡ್ ಸಂಸ್ಥಾನ (ಈಗಿನ ಚಿತ್ತೋಡಗಢ, ರಾಜಸ್ಥಾನ) ರಾಜ ರಾವಲ್ ರತನ ಸಿಂಗ್ ನ ರಾಣಿಯಾಗಿದ್ದಳು.ರಾಣಿ ಪದ್ಮಿನಿಯು ತುಂಬಾ ಸೌಂದರ್ಯವತಿಯಾಗಿದ್ದಳು ಕೂಡ. ಆಗ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ದೊರೆಯಾಗಿ ದೆಹಲಿಯನ್ನಾಳುತ್ತಿದ್ದ, ಆತನೊಬ್ಬ ಹಿಂದೂ ವಿರೋಧಿ, ವಿಕೃತ ಕಾಮಿ & ಸಲಿಂಗಕಾಮಿಯೂ ಆಗಿದ್ದ.

ಅಲ್ಲಾವುದ್ದೀನ್ ಖಿಲ್ಜಿ ಬರೆದ ಆ ಪತ್ರದಲ್ಲಿ ಏನಿತ್ತು..?

ಆತನಿಗೆ ರಾಣಿ ಪದ್ಮಿನಿಯ ಸೌಂದರ್ಯದ ಬಗ್ಗೆ ಹೇಗೋ ತಿಳಿದು ಆಕೆಯನ್ನ ತನ್ನ ಕಾಮತೃಷೆಗಾಗಿ ಬಳಸಿಕೊಳ್ಳಬೇಕೆಂದು ಆಸೆಯಾದಾಗ ಆತ ಮಾಡಿದ ಕುತಂತ್ರವೆಂದರೆ ಆತ ಮೇವಾಡಕ್ಕೆ ಪತ್ರವೊಂದನ್ನ ಬರೀತಾನೆ. “ರಕ್ಷಾ ಬಂಧನ ಸದ್ಯದಲ್ಲೇ ಇರೋದ್ರಿಂದ ನಾನು ನಿನ್ನ(ರಾವಲ್ ರತನ ಸಿಂಗ್) ಹೆಂಡತಿ(ರಾಣಿ ಪದ್ಮಿನಿ)ಯನ್ನ ತಂಗಿಯಂತೆ ಸ್ವೀಕರಿಸಿದ್ದೇನೆ, ರಕ್ಷಾಬಂಧನಕ್ಕೆ ನಿನ್ನ ರಾಜ್ಯಕ್ಕೆ ಬಂದು ನಿನ್ನ ಹೆಂಡತಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತೇನೆ”

ಇದನ್ನ ಓದಿದ ರಾವಲ್ ಸಿಂಗ್ “ಸರಿ ಆಯಿತು ಆದರೆ ಒಂದು ಷರತ್ತು, ನನ್ನ ಹೆಂಡತಿ ಮುಖತಃ ನಿನ್ನ ಕೈಗೆ ರಾಖಿ ಕಟ್ಟಲ್ಲ ಆದರೆ ಆಕೆ ಅದಕ್ಕೆ ಪೂಜೆ ಮಾಡಿ ಇಟ್ಟಿರುತ್ತಾಳೆ ಅದನ್ನ ನಿನ್ನ ಕೈಗೆ ನಮ್ಮ ರಾಣಿಯ ಸಖಿಯರು ಕಟ್ತಾರೆ” ಅಂತ ವಾಪಸ್ ಪತ್ರ ಬರೀತಾನೆ.

ಅಲ್ಲಾವುದ್ದೀನ್ ಖಿಲ್ಜಿಯ ಷಡ್ಯಂತ್ರ:-

ಇದಕ್ಕೊಪ್ಪಿದ ಖಿಲ್ಜಿ ದೆಹಲಿಯಿಂದ ಹೊರಟು ಗುಪ್ತವಾಗಿ ತನ್ನ ದೊಡ್ಡ ಸೈನ್ಯವನ್ನ ಚಿತ್ತೋಡಗಢದಲ್ಲಿ ಬಿಡಾರ ಹೂಡಿಸಿ, ರಾವಲ್ ಸಿಂಗನ ಆಸ್ಥಾನಕ್ಕೆ ಒಂದಿಬ್ಬರು ಸಂಗಡಿಗರ ಜೊತೆ ಬರ್ತಾನೆ, ಬಂದ ಅತಿಥಿಗೆ ಆದರ ಆತಿಥ್ಯಗಳೂ ಸಿಕ್ಕವು, ಆತನ ಕೈಗೆ ರಾಖಿ ಕಟ್ಟಲು ಬಂದ ರಾಣಿಯ ಸಖಿಯನ್ನ ಕಂಡ ಅಲ್ಲಾವುದ್ದೀನ್ ಹೇಳ್ತಾನೆ “ನಾನು ಒಂದೇ ಒಂದು ಬಾರಿ ನನ್ನ ತಂಗಿ ಸಮಾನಳಾದ ಪದ್ಮಿನಿಯನ್ನ ನೋಡಬೇಕಲ್ಲ?”

ಇದಕ್ಕೆ ರಾಜ ಹೇಳ್ತಾನೆ “ಸರಿ ಆಯಿತು ಆದರೆ ಒಂದು ಷರತ್ತು, ರಾಣಿ ಮುಖತಃ ನಿಮಗೆ ತನ್ನ ಮುಖ ತೋರಿಸಲ್ಲ, ಆಕೆ ಆಕೆಯ ಅರಮನೆಯ ಹೊರಾಂಗಣದಲ್ಲಿ ನಿಂತಿರುತ್ತಾಳೆ, ಆಕೆಯ ಪ್ರತಿಬಿಂಬ ಒಂದು ರೂಮಿನ ಕನ್ನಡಿಯಲ್ಲಿ ಕಾಣುತ್ತೆ, ಆ ಪ್ರತಿಬಿಂಬದಲ್ಲಿ ನೀವು ಆಕೆಯ ಮುಖವನ್ನು ನೋಡಬಹುದು”ಇದಕ್ಕೊಪ್ಪಿದ ಖಿಲ್ಜಿ “ಆಯ್ತು ಸರಿ” ಅಂತಾನೆ.

ರಾಜ ರಾವಲ್ ರತನ ಸಿಂಗ್ ನ ಬುದ್ದಿವಂತಿಕೆ…

ಸರಿ ರಾಣಿ ಪದ್ಮಿನಿ ತನ್ನ ಮಹಲಿನ ಸರೋವರದ ಹತ್ತಿರ ಬಂದು ನಿಲ್ತಾಳೆ, ಅವಳ ಪ್ರತಿಬಿಂಬ ಆ ರೂಮಿನ ಕನ್ನಡಿಯ ಮೇಲೆ ಕಂಡ ಖಿಲ್ಜಿಗೆ ಆಕೆಯ ಸೌಂದರ್ಯ ದಂಗುಬಡಿಸಿತ್ತು, ಹೇಗಾದರೂ ಮಾಡಿ ಈಕೆಯನ್ನ ತನ್ನ ಪಟ್ಟದರಸಿ ಮಾಡಿಕೊಳ್ಳೇಬೇಕು ಅಂತ ಖಿಲ್ಜಿ ತೀರ್ಮಾನಿಸಿ ಒಮ್ಮಿಂದೊಮ್ಮೆಲೇ ರಾಜನ ಮೇಲೆ ದಾಳಿ ನಡೆಸಿ ರಾವಲ್ ಸಿಂಗನನನ್ನ ಯುದ್ಧ ಕೈದಿಯಾಗಿ ದೆಹಲಿಗೆ ಕರೆದುಕೊಂಡು ಹೋಗ್ತಾನೆ ಆದರೆ ರಾಣಿ ಪದ್ಮಿನಿ ಆತನ ಕೈಗೆ ಸಿಗಲ್ಲ.

ರಜಪೂತ ಇತಿಹಾಸಕಾರರು ಹೇಳುವುದೇನು?

(ಆದರೆ ರಜಪೂತ ಇತಿಹಾಸಕಾರರ ಪ್ರಕಾರ ಅಲ್ಲಿ ಬಂದು ಖಿಲ್ಜಿಗೆ ಮುಖ ತೋರಿಸಿದ್ದು ರಾಣಿ ಪದ್ಮಿನಿಯದ್ದಲ್ಲ, ಬದಲಾಗಿ ರಾಣಿಯ ಸಖಿ ಅಲ್ಲಿ ಬಂದು ನಿಂತದ್ದು, ಆದರೆ ಖಿಲ್ಜಿ ಒಂದು ಬಾರಿಯೂ ರಾಣಿ ಪದ್ಮಿನಿಯ ಮುಖ ನೋಡಿರದ ಕಾರಣ ರಾಣಿಯ ಸಖಿಯನ್ನೇ ಪದ್ಮಿನಿ ಅಂದುಕೊಳ್ತಾನಂತೆ)ನಿಜವಾಗಿಯೂ ಆತನಿಗೆ ಪದ್ಮಿನಿಯ ಸೌಂದರ್ಯ ಕಂಡು ಆಕೆಯನ್ನ ಮದುವೆ ಆಗೋ ಚಪಲವಿತ್ತೇ ಹೊರತು ಆಕೆಯನ್ನ ಆತ ತಂಗಿ ಅಂತ ಬಾಯಿಮಾತಿಗಷ್ಟೇ ತನ್ನ ಮಾಯಾಜಾಲ ಬೀಸಲು ಸುಳ್ಳು ಹೇಳಿದ್ದು.

ಅಲ್ಲಾವುದ್ದಿನ್ ಖಿಲ್ಜಿ ರಾಣಿ ಪದ್ಮಿನಿಗೆ ಬರೆದ ಪತ್ರದಲ್ಲಿದ್ದ ಆದೇಶ ಏನು..?

ರಾಜಾ ರಾವಲ್ ರತನ್ ಸಿಂಗ್ ಬಂಧಿಯಾಗಿ ದೆಹಲಿಯಲ್ಲಿದ್ದಾಗ ಅಲ್ಲಾವುದ್ದಿನ್ ಖಿಲ್ಜಿ ಚಿತ್ತೋಡಗಢಕ್ಕೆ ಪತ್ರ ಬರೆದು ಪದ್ಮಿನಿಗೆ ಹೀಗೆ ಹೇಳ್ತಾನೆ “ನಿನ್ನ ಗಂಡನನ್ನ ನೀನು ಜೀವಸಹಿತವಾಗಿ ನೋಡಬೇಕೆಂದರೆ ನೀನು ನನ್ನವಳಾಗಬೇಕು, ನೀ ನನ್ನ ಮದುವೆಯಾಗಿ ನನ್ನ ಜನಾನಾಗೆ ಬರಬೇಕು ಆಗ ಮಾತ್ರ ನಾ ನಿನ್ನ ಗಂಡನನ್ನ ಬಿಡುಗಡೆ ಮಾಡ್ತೀನಿ”

ಇದನ್ನೋದಿದ ರಾಣಿ ಪದ್ಮಿನಿಯ ರಕ್ತ ಕೊತ ಕೊತ ಕುದಿಯುತ್ತ ಆಕೆ ಖಿಲ್ಜಿಗೆ ಉತ್ತರ ಕೊಡ್ತಾ ಹೀಗೆ ಹೇಳ್ತಾಳೆ. “ನನಗೆ ನನ್ನ ಗಂಡನ ಕ್ಷೇಮ ಮುಖ್ಯ, ನಾನು ನಿನ್ನ ಷರತ್ತಿಗೆ ಒಪ್ಪುತ್ತೇನೆ, ಆದರೆ ನೀವು ಚಿತ್ತೋಡಗಢಕ್ಕೆ ಬರೋದು ಬೇಡ, ನಾನೇ ನಮ್ಮ ರಜಪೂತ ಪರಂಪರೆಯ ಪ್ರಕಾರ 100 ಪಲ್ಲಕ್ಕಿಗಳ ಜೊತೆಗೆ ನನ್ನ ಸಖಿಯರೊಂದಿಗೆ ನಿಮ್ಮ ಆಸ್ಥಾನಕ್ಕೆ ಬಂದು ನಿಮಗೆ ಶರಣಾಗ್ತೀನಿ”. ಇದನ್ನೋದಿದ ಖಿಲ್ಜಿಗೆ ಮತ್ತೂ ಖುಷಿಯಾಗಿ ಒಬ್ಬ ಸುರಸುಂದರಾಂಗಿ ಪದ್ಮಿನಿ ಸಿಗ್ತಾಳೆ ಅನ್ಕೊಂಡಿದ್ದೆ ಆದರೆ ಆಕೆ ಜೊತೆಗೆ ಇನ್ನೂ ನೂರು ಜನ ಸುಂದರ ಸಖಿಯರಿರ್ತಾರೆ ಅಂತ ಮನದಲ್ಲೇ ತನ್ನ ಕಾಮಾಗ್ನಿಯ ಬಯಕೆಯನ್ನು ಇಮ್ಮಡಿಗೊಳಿಸಿಕೊಳ್ತಾನೆ.

ರಾಣಿ ಪದ್ಮಿನಿಯು ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡಿಸಿದ್ದೇ ಒಂದು ರೋಚಕ್…

ಆ ದಿನ ಬಂದೇ ಬಿಟ್ಟಿತು, ರಾಣಿ ಪದ್ಮಿನಿ ನೂರು ಪಲ್ಲಕ್ಕಿಗಳ ಮೂಲಕ ಖಿಲ್ಜಿಯ ಆಸ್ಥಾನಕ್ಕೆ ಬಂದೇ ಬಿಟ್ಟಳು, ಆಗಲೂ ಆತ ಆಕೆಯ ನಿಜವಾದ ಮುಖ ಇನ್ನೂ ನೋಡಿರಲಿಲ್ಲ, ಯಾವಾಗ ಆತ ಪಲ್ಲಕ್ಕಿಯ ಹತ್ತಿರ ಹೊರಟು ಪದ್ಮಿನಿಯನ್ನ ನೋಡಲು ಬರುತ್ತಾನೋ ಆಗ ಪಲ್ಲಕ್ಕಿಗಳಿಂದ ಹರಹರಮಹಾದೇವ ಘೋಷಣೆಗಳನ್ನ ಕೂಗುತ್ತ ನೂರು ಜನ ರಜಪೂತ ಸೈನಿಕರು ಒಮ್ಮೆಲೆ ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡ್ತಾರೆ. ಇದು ರಾಣಿ ಪದ್ಮಿನಿಯೇ ಖಿಲ್ಜಿಯ ಸೊಕ್ಕು ಮುರಿಯೋದಕ್ಕೆ ರಚಿಸಿದ್ದ ಪದ್ಮವ್ಯೂಹವಾಗಿತ್ತು, ನೂರು ಪಲ್ಲಕ್ಕಿಗಳಲ್ಲಿ ತನ್ನ ಸಖಿಯರಿರ್ತಾರೆ ಅಂತ ಹೇಳಿದ್ದ ಪದ್ಮಿನಿ ಅವುಗಳಲ್ಲಿ ತನ್ನ 100 ಬಲಾಢ್ಯ ರಜಪೂತ ಸೈನಿಕರನ್ನ ಕರೆತಂದಿರ್ತಾಳೆ. ಖಿಲ್ಜಿಗೆ ತನ್ನ ಆಸ್ಥಾನದಲ್ಲಿ ಏನ್ ನಡೀತಿದೆ ಅಂತ ಅರ್ಥವಾಗೋಕೂ ಮುಂಚೆಯೇ ರಾಣಿ ಪದ್ಮಿನಿ ಖಿಲ್ಜಿಯ ಹೆಡೆಮುರಿಕಟ್ಟಿ ಸೋಲಿಸಿ ತನ್ನ ಗಂಡ ರಾವಲ್ ರತನ್ ಸಿಂಗನನ್ನ ಬಿಡಿಸಿಕೊಂಡು ಚಿತ್ತೋಡಗಢಕ್ಕೆ ವಾಪಸ್ಸಾಗ್ತಾಳೆ.

ಅವಮಾನಿತನಾದ ಅಲ್ಲಾವುದ್ದೀನ್ ಖಿಲ್ಜಿಯಿಂದ ಚಿತ್ತೋಡಗಢದ ಮೇಲೆ ದಾಳಿ…

ಈ ಘಟನೆಯಿಂದ ಅದೂ ಒಂದು ಹೆಣ್ಣಿನ ಕೈಯಿಂದ ನಾನು ಸೋಲೋದಾ ಅಂತ ಪಿತ್ತ ನಿತ್ತಗೇರಿದ ಅಲ್ಲಾವುದ್ದೀನ್ ಖಿಲ್ಜಿ, ಈ ಬಾರಿ ಮತ್ತೆ ಚಿತ್ತೋಡಗಢದ ಮೇಲೆ ದಾಳಿ ಮಾಡ್ತಾನೆ, ಕೆಲ ದಿನಗಳ ಕಾಲ ರಜಪೂತರು ಖಿಲ್ಜಿಗೆ ಪ್ರತಿರೋಧ ತೋರುತ್ತಾರೆ ಆದರೆ ಖಿಲ್ಜಿಯ ಬೃಹತ್ ಸೈನ್ಯದೆದುರು ರಜಪೂತರು ಸೋಲುತ್ತಾರೆ. ಕೋಟೆಗಿದ್ದ ಒಂದೇ ಒಂದು ದ್ವಾರವನ್ನು ತನ್ನ ಸೈನಿಕರಿಂದ ಮುಚ್ಚಿಸಿ ರಜಪೂತ ಸೈನಿಕರಿಗೆ ಹೊರಗಿನಿಂದ ಯಾವ ಸಾಮಗ್ರಿಗಳು ಸಿಗದ ಹಾಗೆ ಮಾಡಿ ಚಿತ್ತೋಡವನ್ನ ಖಿಲ್ಜಿ ವಶಪಡಿಸಿಕೊಂಡು ರಾವಲ್ ರತನ್ ಸಿಂಹನ ತಲೆ ಕಡಿದು ಹಾಕ್ತಾನೆ.

ರಾಣಿ ಪದ್ಮಾವತಿ ತನ್ನ 16,000 ಸಖಿಯರೊಂದಿಗೆ ಬೆಂಕಿಗೆ ಹಾರಿದ್ದು..!

ಈಗ ಮುಂದೇನು? ಅಲ್ಲಾವುದ್ದೀನ್ ಎಂಬ ಕಾಮುಕ ಚಿತ್ತೋಡದಲ್ಲಿರೊ ಎಲ್ಲ ರಜಪೂತ ಮಹಿಳೆಯರನ್ನೂ ಸೆಕ್ಸ್ ಸ್ಲೇವ್ಸ್ಗಳಾಗಿ ಕರೆದುಕೊಂಡು ಹೋಗೋಕೆ ಕೋಟೆ ಒಳ ಬರಿಕೈಲಿ ಮುಂಚೆಯೇ ಈ ವಿಷಯ ಅರಿತ ರಾಣಿ ಪದ್ಮಿನಿ, ನಾವು ರಜಪೂತರು ಯಾವತ್ತೂ ನಮ್ಮ ಶೀಲವನ್ನ ಕಳೆದುಕೊಂಡವರಲ್ಲ, ಅಂಥದ್ರಲ್ಲಿ ಈ ಮುಸಲ್ಮಾನ ದೊರೆಗೆ ನಮ್ಮ ಶೀಲ ಅರ್ಪಿತವಾಗೋದೇ? ಛೀ ಹಾಗೇ ಮಾಡೋದಕ್ಕಿಂತ ವೀರಸ್ವರ್ಗ ಪ್ರಾಪ್ತಿ ಮಾಡಿಕೊಳ್ಳೋದೇ ಎಷ್ಟೋ ವಾಸಿ ಅಂತ ತಕ್ಷಣ ಆಕೆ ಚಿತ್ತೋಡದಲ್ಲಿದ್ದ ತನ್ನ 16,000 ರಜಪೂತನಿಯರೊಂದಿಗೆ ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡು ಬಿಡ್ತಾಳೆ.

ನಂತರ ಕೋಟೆಯ ಒಳಗೆ ಖಿಲ್ಜಿ ಬಂದು ನೋಡಿದಾಗ ಆತನಿಗೆ ಯಾವೊಬ್ಬ ಹೆಂಗಸೂ ಚಿತ್ತೋಡದಲ್ಲಿ ಸಿಗದೆ ಹೆಣಗಳನ್ನ ಹದ್ದು ಕುಕ್ಕುತ್ತ ಕೂತಿರೊ ದೃಶ್ಯಗಳೇ ಕಂಡು ಆತ ದೆಹಲಿಗೆ ವಾಪಸ್ ಆಗ್ತಾನೆ. ನೋಡಿ ತನ್ನ ಆತ್ಮ & ಶೀಲರಕ್ಷಣೆಗಾಗಿ ತನ್ನನ್ನ ತಾನು ಬೆಂಕಿಗಾಹುತಿ ಮಾಡಿಕಂಡ & ತಾನು ಸಾಯೋವರೆಗೂ ಖಿಲ್ಜಿಯ ವಿರುದ್ಧ ಹೊರಾಡಿದ್ದ ರಜಪೂತರಷ್ಟೇ ಯಾಕೆ ಇಡೀ ಭಾರತದ ಮಹಿಳೆಯರಿಗೆ ಆದರ್ಶಪ್ರಾಯವಾಗಿರೋ ವೀರವನಿತೆ ಪದ್ಮಿನಿ ರಾಣಿ ಬಗ್ಗೆ ಕೆಲವರು ಒಂದು ಚಿತ್ರದ ಮುಖಾಂತರ ಕೆಟ್ಟ ರೀತಿಯಲ್ಲಿ ತೋರಿಸಲು ಹೊರಟಿದ್ದಾರೆ.

ಮೂಲ:

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಹಾರ ರೈತರ ನಿದ್ದೆಗೆಡಿಸಿದ ಬಾನುಗಲ್ಲು….! ಕಾರಣ ಏನು?

    ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಆಕಾಶದಿಂದ ಫುಟ್‌ಬಾಲ್ ಗಾತ್ರದ ಬಾನುಗಲ್ಲು ಬಿದ್ದ ಅಪರೂಪದ ಘಟನೆ ವರದಿಯಾಗಿದೆ.ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. “ರೈತರು…

  • ಆಧ್ಯಾತ್ಮ

    ದರ್ಭೆಯ ಬಗ್ಗೆ ಮಾಹಿತಿ.!

    ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772 ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ? ಬನ್ನಿ ತಿಳಿಯೋಣ. ಗರುಡ ರಾಜನು ತನ್ನ ಪರಿವಾರವನ್ನು…

  • ಸುದ್ದಿ

    ನಿಶ್ಚಿತಾರ್ಥದಲ್ಲಿ ನಿಖಿಲ್​ ಮೊದಲ ಬಾರಿಗೆ ರೇವತಿಯ ಬಗ್ಗೆ ಹೇಳಿದ್ದೇನು?

    ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್​ ಎಂಡ್​ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ನಿಖಿಲ್ ಮತ್ತು ರೇವತಿ ಕಂಗೊಳಿಸಿದರು. ಪಿಂಕ್ ಕಲರ್ ಸೀರೆಯಲ್ಲಿ ರೇವತಿ ಕಂಗೊಳಿಸಿದರೆ, ಕ್ರೀಮ್ ಕಲರ್ ಕುರ್ತಾದಲ್ಲಿ ನಿಖಿಲ್ ಮಿಂಚುತ್ತಿದ್ದರು. ನಿಖಿಲ್ ಕುಮಾರ್ ಅವರ ಫೇಸ್​ಬುಕ್ ಪೇಜ್​ನಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮದ ಲೈವ್ ಪ್ರಸಾರ ಮಾಡಲಾಗುತ್ತಿದೆ. ಮಾಜಿ ಪ್ರಧಾನಿ ಮತ್ತು ಅಜ್ಜ ದೇವೇಗೌಡರ ದಂಪತಿ ಸಮಕ್ಷಮದಲ್ಲಿ ವಜ್ರದುಂಗುರ ಬದಲಾಯಿಸಿಕೊಂಡರು. ದೇವೇಗೌಡರ ಅಳಿಯ ಡಾ. ಮಂಜುನಾಥ್ ಸೇರಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ನಿಖಿಲ್​ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥಕ್ಕೆ ಪವರ್…

  • ಸಂಬಂಧ

    ನಾಗಿಣಿ ಡ್ಯಾನ್ಸ್ ಮಾಡಿದ್ರಿಂದ, ಆಗಬೇಕಿದ್ದ ಮದುವೇನೇ ನಿಂತುಹೋಯಿತು!ಶಾಕ್ ಆಗ್ಬೇಡಿ,ಈ ಲೇಖನಿ ಓದಿ..

    ಈಗಿನ ಮದುವೆಗಳ ಟ್ರೆಂಡೇ ಬದಲಾಗಿದೆ.ಮದುವೆ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ,ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ.ಆದ್ರೆ ಇಲ್ಲೊಂದು ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದರಿಂದ, ವಧು ಮದುವೆಯನ್ನೇ ತಿರಸ್ಕರಿಸಿದ ಘಟನೆ ನಡೆದಿದೆ.

  • ಸುದ್ದಿ

    ಈ ವಿಲನ್ ತನ್ನ ಹೆಂಡತಿಯನ್ನು ಹೇಗೆ ಕಳೆದುಕೊಂಡರು ಗೊತ್ತಾ, ಕಣ್ಣಲ್ಲಿ ನೀರು ಬರುತ್ತೆ.

    ಟಾಪ್ ವಿಲನ್ ಗಳಲ್ಲಿ ಇವರು ಒಬ್ಬರು. ತೆಲುಗು, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ ಈ ನಟ. ತೆಲುಗಿನ ಪೌರ್ಣಮಿ, ತುಳಸಿ, ಮುನ್ನ, ಅರುಂಧತಿ ಕನ್ನಡದ ಶ್ರೀ, ಯೋಧ ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಆದರೆ ಈತನ ಸುಂದರ ಸಂಸಾರ 10 ವರ್ಷಗಳ ಹಿಂದೆ ಛಿದ್ರ ಛಿದ್ರವಾಯಿತು. ಅದಕ್ಕೆ ಕಾರಣ ಏನು? ಆನಂತರ ಏನಾಯಿತು? ಗೊತ್ತಾ?? 1998 ರಲ್ಲಿ ರೀನಾ ಎನ್ನುವವರನ್ನು ಮದುವೆಯಾದ ರಾಹುಲ್ ಗೆ ಒಂದು ಮುದ್ದಾದ ಮಗು ಹುಟ್ಟಿತು….

  • ಆಧ್ಯಾತ್ಮ

    ಈ 5 ವಸ್ತುಗಳಿಂದ ಭಗವಾನ್ ಶಿವ ಲಿಂಗವನ್ನು ಎಂದಿಗೂ ಪೂಜಿಸಬಾರದು..!

    ಭಗವಾನ್ ಶಿವ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು, ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ. ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.