News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಉಪಯುಕ್ತ ಮಾಹಿತಿ

ಬಯಲುಸೀಮೆ ಕೋಲಾರದ ಈಗಿನ ಬರಗಾಲದ ಪರಿಸ್ಥಿತಿಗೆ ಇದು ಮುಖ್ಯ ಕಾರಣ ಇರಬಹುದಾ? ನೀವೇನಂತೀರಾ?

1223

ಇದು ಬಯಲುಸೀಮೆಯ ಗಡಿನಾಡು ಕೋಲಾರ ಜಿಲ್ಲೆಯ ಸ್ಥಿತಿ. ಒಂದು ಕಾಲದಲ್ಲಿ ಅತಿ ಹೆಚ್ಚು ಕೆರೆಗಳ ನಾಡು ಎಂದು ಪ್ರಸಿದ್ಧಿ ಪಡೆದು ಸದಾ ಹಸಿರಿನಿಂದ ಕೂಡಿದ್ದ ಜಿಲ್ಲೆಯಾಗಿತ್ತು ಕೋಲಾರ. ಕಾಲಾಂತರ ಮಳೆರಾಯನ ಮುನಿಸು ಜಿಲ್ಲೆಯ ಮೇಲೆ ಬಂದಿದ್ರಿಂದ ಇಲ್ಲಿನ ರೈತರು ಪರ್ಯಾಯ ಹಾಗೂ ಆಧುನಿಕ ಕೃಷಿಯತ್ತ ಮುಂದಾದ್ರು. ಇದ್ರಿಂದ ಹೆಚ್ಚು ಲಾಭ ಹಾಗೂ ಕಡಿಮೆ ಶ್ರಮವುಳ್ಳ ನೀಲಗಿರಿ ಸಸಿಗಳನ್ನು ನೆಡಲು ರೈತ್ರು ಮುಂದಾದ್ರು. ಇದ್ರಿಂದ ಭೂಮಿಯಲ್ಲಿ ಇರುವ ನೀರಿನ ಪ್ರಮಾಣವನ್ನು ಈ ಮರಗಳು ತೆಗೆದುಕೊಂಡು ನೆಲವನ್ನು ಬರಡುಗೊಳಿಸಿತು. ಇದರಿಂದ ಅಂತರ್ಜಲಮಟ್ಟ ತೀವ್ರ ಕುಸಿದಿದೆ.

ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಹಿನ್ನೆಲೆ ಶೇಕಡವಾರು ರೈತರು ನೀಲಗಿರಿಯನ್ನೇ ಅವಲಂಬಿಸಿದ್ದಾರೆ.    1000 ಹಾಗೂ 1500 ಅಡಿ ಬೋರ್‌ವೆಲ್ ಕೊರೆಸಿದ್ರು ನೀರು ದೊರೆಯದಂತಾಗಿದೆ. ದೊರೆತ ಅಂತರ್ಜಲದಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದೆ. ಹೀಗಾಗಿ ಸರ್ಕಾರ ಈಗಾಗಲೇ ನೀಲಗಿರಿ ಬೆಲಯುವುದನ್ನು ನಿಷೇದಿಸಿದೆ.

ಹಾಗಾದ್ರೆ ಈ ನೀಲಗಿರಿ ಮರಗಳು ನಮ್ಮ ಭಾರತಕ್ಕೆ ಬಂದಿದ್ದು ಎಲ್ಲಿಂದ ಗೊತ್ತಾ?

 

ನೀಲಗಿರಿಯು  ಮಿರ್ಟ್‌ಲ್‌‌ ಕುಟುಂಬವಾದ ಮಿರ್ಟೇಸಿಯಲ್ಲಿನ ಹೂಬಿಡುವ ಮರಗಳ (ಮತ್ತು ಕೆಲವೊಂದು ಪೊದೆಸಸ್ಯಗಳ) ಒಂದು ಬಹುವಿಧದ ಕುಲವಾಗಿದೆ. ಈ ಕುಲದ ಸದಸ್ಯ ಮರಗಳನ್ನು ಆಸ್ಟ್ರೇಲಿಯಾದ ಮರದ ಸಸ್ಯಸಂಪತ್ತು ವ್ಯಾಪಿಸಿದೆ. ಬಹುತೇಕವಾಗಿ ಆಸ್ಟ್ರೇಲಿಯಾದ ಸ್ಥಳೀಯ ಸಸ್ಯವಾಗಿರುವ ನೀಲಗಿರಿ ಯ ೭೦೦ಕ್ಕೂ ಹೆಚ್ಚು ಜಾತಿಗಳು ಅಸ್ತಿತ್ವದಲ್ಲಿವೆ, ಮತ್ತು ಅತ್ಯಂತ ಚಿಕ್ಕ ಸಂಖ್ಯೆಯಲ್ಲಿ ಇವು ನ್ಯೂಗಿನಿಯಾ ಮತ್ತು ಇಂಡೋನೇಷ್ಯಾದ ಮಗ್ಗುಲಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಫಿಲಿಪ್ಪೀನ್‌ ದ್ವೀಪಸಮೂಹದಷ್ಟು ದೂರದ ಉತ್ತರ ಭಾಗದಲ್ಲಿ ಒಂದು ಜಾತಿಯು ಕಾಣಿಸಿಕೊಳ್ಳುತ್ತದೆ. ಕೇವಲ ೧೫ ಜಾತಿಗಳು ಆಸ್ಟ್ರೇಲಿಯಾದಿಂದ ಆಚೆಗೆ ಕಾಣಿಸಿಕೊಳ್ಳುತ್ತವೆ, ಮತ್ತು ಕೇವಲ ೯ ಜಾತಿಗಳು ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಮೆರಿಕಾ ಖಂಡಗಳು, ಯುರೋಪ್‌, ಆಫ್ರಿಕಾ, ಮೆಡಿಟರೇನಿಯನ್‌ ನೆಲಸುತ್ತು ರೇವು, ಮಧ್ಯಪ್ರಾಚ್ಯ, ಚೀನಾ ಹಾಗೂ ಭಾರತದ ಉಪಖಂಡವನ್ನುಒಳಗೊಂಡಂತೆ ಉಷ್ಣವಲಯ ಹಾಗೂ ಉಪೋಷ್ಣವಲಯದಾದ್ಯಂತ ನೀಲಗಿರಿ ಯ ಜಾತಿಗಳನ್ನು ಬೆಳೆಸಲಾಗುತ್ತದೆ.

ನೀಲಗಿರಿ ಮರಗಳು” ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಮೂರು ಒಂದೇ ರೀತಿಯ ಕುಲಗಳಲ್ಲಿ ನೀಲಗಿರಿ ಯು ಒಂದಾಗಿದ್ದು, ಕೊರಿಂಬಿಯಾ ಹಾಗೂ ಆಂಗೊಫೋರಾ ಗಳು ಉಳಿದ ಎರಡು ಕುಲಗಳಾಗಿವೆ. ಅನೇಕ ಜಾತಿಗಳು, ಇತರವುಗಳಿಗಿಂತ ಭಿನ್ನವಾಗಿ, ಅಂಟು ಮರಗಳು ಎಂದು ಚಿರಪರಿಚಿತವಾಗಿವೆ. ಏಕೆಂದರೆ, ಅನೇಕ ಜಾತಿಗಳು ತೊಗಟೆಯಲ್ಲಿನ ಯಾವುದೇ ಮುರಿತದಿಂದ ಹೇರಳವಾದ ಸಸ್ಯರಸವನ್ನು ಹೊರಸೂಸುತ್ತವೆ (ಉದಾಹರಣೆಗೆ ಗೀಚಿದಂಥ ಅಂಟು). ಈ ಕುಲದ ‘ಯೂಕಲಿಪ್ಟಸ್‌’ ಎಂಬ ಸಾರ್ವತ್ರಿಕ ನಾಮವನ್ನು ಗ್ರೀಕ್‌ ಪದಗಳಿಂದ ಪಡೆಯಲಾಗಿದೆ. ಗ್ರೀಕ್‌ ಭಾಷೆಯಲ್ಲಿ ευ (ಯೂ ) ಎಂದರೆ “ಚೆನ್ನಾಗಿ” ಎಂಬ ಅರ್ಥ ಹಾಗೂ καλυπτος (ಕಲಿಪ್ಟಸ್‌ ) ಎಂದರೆ ಚೆನ್ನಾಗಿ “ಆವರಿಸಲ್ಪಟ್ಟಿರುವ” ಎಂಬ ಅರ್ಥವಿದ್ದು, ಇದು ಹೂವನ್ನುಆರಂಭದಲ್ಲಿ ಅವಿಸಿಟ್ಟುಕೊಂಡಿರುವ ಪುಷ್ಪಪಾತ್ರೆಯ ಮೇಲಿನ ಬೀಜಕಣಕೋಶದ ಮುಚ್ಚಳಕ್ಕೆ ಉಲ್ಲೇಖಿಸಲ್ಪಡುತ್ತದೆ.

ನೀಲಗಿರಿ ಯು ಜಾಗತಿಕ ಅಭಿವೃದ್ಧಿಯ ಸಂಶೋಧಕರು ಹಾಗೂ ಪರಿಸರವಾದಿಗಳ ಗಮನವನ್ನು ಸೆಳೆದಿದೆ. ಇದೊಂದು ವೇಗವಾಗಿ-ಬೆಳೆಯುವ ಕಾಡಿನ ಮೂಲವಾಗಿದ್ದು, ಇದರ ತೈಲವನ್ನುಶುದ್ಧೀಕರಣಕ್ಕಾಗಿ ಬಳಸಬಹುದಾಗಿದೆ ಹಾಗೂ ಇದು ಒಂದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಹೆಚ್ಚು ನೀರನ್ನು ಹೀರುವ ಗುಣವನ್ನು ಕೆಲವೊಮ್ಮೆ ಜೌಗುನೆಲಗಳನ್ನುಒಣಗಿಸಲು, ತನ್ಮೂಲಕ ಮಲೇರಿಯಾದ ಅಪಾಯವನ್ನು ತಗ್ಗಿಸಲು ಬಳಸಲಾಗುತ್ತದೆ. ಅವುಗಳ ಸ್ವಾಭಾವಿಕ ವ್ಯಾಪ್ತಿಯಿಂದ ಆಚೆಗೆ ನೀಲಗಿರಿಯ ಮರಗಳನ್ನು, ಬಡಜನತೆಯ ಮೇಲೆ ಅವು ಬೀರುವ ಪ್ರಯೋಜನಕಾರಿ ಪ್ರಭಾವಕ್ಕಾಗಿ ಶ್ಲಾಘಿಸುವುದೂ ಉಂಟು ಮತ್ತು ಆಕ್ರಮಣಶೀಲ ನೀರು-ಚೂಷಕಗಳಾಗಿರುವ ಕಾರಣಕ್ಕಾಗಿ ಅವುಗಳನ್ನು ತಿರಸ್ಕಾರದಿಂದ ಕಾಣುವುದೂ ಉಂಟು. ಇದು ಅವುಗಳ ಒಟ್ಟಾರೆ ಪ್ರಭಾವದ ಕುರಿತಾದ ವಿವಾದಕ್ಕೆ ಕಾರಣವಾಗಿದೆ.

ಗಾತ್ರ ಮತ್ತು ಆವಾಸಸ್ಥಾನ

ಬಲಿತಿರುವ ಒಂದು ನೀಲಗಿರಿ ಯು ಒಂದು ಕೆಳಮಟ್ಟದ ಪೊದೆಸಸ್ಯದ ಅಥವಾ ಒಂದು ಅತ್ಯಂತ ದೊಡ್ಡ ಮರದ ಸ್ವರೂಪವನ್ನು ತಾಳಬಹುದು. ಜಾತಿಗಳನ್ನು ವಿಭಜಿಸಲು ಅನುವಾಗುವಂಥ ಮುಖ್ಯವಾದ ಮೂರು ಬೆಳೆಯುವ ಸ್ವಭಾವ ರೀತಿಗಳು ಹಾಗೂ ನಾಲ್ಕು ಗಾತ್ರದ ವರ್ಗಗಳು ಕಂಡುಬರುತ್ತವೆ.

ಒಂದು ಸಾಮಾನ್ಯೀಕರಣವಾಗಿ “ಕಾಡು ಮರಗಳು” ಏಕ-ಕಾಂಡದವಾಗಿರುತ್ತವೆ ಮತ್ತು ಒಂದು ಕಿರೀಟವನ್ನು ಹೊಂದುವ ಮೂಲಕ ಸಂಪೂರ್ಣ ಮರದ ಎತ್ತರದ ಒಂದು ಕಿರುಭಾಗವನ್ನು ರೂಪಿಸುತ್ತವೆ. “ಕಾಡುಪ್ರದೇಶದ ಮರಗಳು” ಏಕ-ಕಾಂಡದವಾಗಿದ್ದರೂ ಸಹ ನೆಲದ ಮಟ್ಟದಿಂದ ಒಂದು ಕಿರು ಅಂತರದಷ್ಟು ಮೇಲಕ್ಕೆ ಅವು ಕವಲೊಡೆಯಬಹುದು.

“ಮ್ಯಾಲಿಗಳು” ನೆಲದ ಮಟ್ಟದಿಂದಲೇ ಬಹು-ಕಾಂಡದವಾಗಿರುವ ವಿಶಿಷ್ಟತೆಯನ್ನು ಹೊಂದಿದ್ದು, ಸಾಮಾನ್ಯವಾಗಿ …10 m (33 ft)ಗಿಂತ ಕಡಿಮೆಯ ಎತ್ತರವನ್ನು ಹೊಂದಿರುತ್ತವೆ. ಹಲವು ವೇಳೆ ಅವು ಸಣ್ಣರೆಂಬೆಗಳ ತುದಿಗಳಲ್ಲಿ ಉಳಿದವಕ್ಕಿಂತ ಅಧಿಕವಾಗಿ ಕಿರೀಟವನ್ನು ಹೊಂದಿರುತ್ತವೆ ಮತ್ತು ಬಿಡಿಯಾದ ಅಥವಾ ಪ್ರತ್ಯೇಕವಾದ ಸಸ್ಯಗಳು ಸೇರಿಕೊಂಡು ಒಂದು ತೆರೆದಿರುವ ಇಲ್ಲವೇ ಮುಚ್ಚಲ್ಪಟ್ಟಿರುವ ರಚನೆಯನ್ನು ಸೃಷ್ಟಿಸಬಹುದು. ಅನೇಕ ಮ್ಯಾಲಿ ಮರಗಳು ತುಂಬಾ ಕೆಳಮಟ್ಟದಲ್ಲಿ-ಬೆಳೆಯುವ ಸ್ವಭಾವವನ್ನು ಹೊಂದಿರಲು ಸಾಧ್ಯವಿದ್ದು, ಅಂಥವುಗಳನ್ನು ಒಂದು ಪೊದೆಸಸ್ಯವಾಗಿಪರಿಗಣಿಸಲಾಗುತ್ತದೆ.

ಮರದ ಇತರ ಎರಡು ಸ್ವರೂಪಗಳು ಪಶ್ಚಿಮದ ಆಸ್ಟ್ರೇಲಿಯಾದಲ್ಲಿ ಗಮನಾರ್ಹವಾಗಿದ್ದು, “ಮ್ಯಾಲೆಟ್‌” ಹಾಗೂ “ಮಾರ್ಲಾಕ್‌” ಎಂಬ ಸ್ಥಳೀಯ ಹೆಸರುಗಳನ್ನು ಬಳಸಿಕೊಂಡು ಅವುಗಳನ್ನು ವಿವರಿಸಲಾಗುತ್ತದೆ. “ಮ್ಯಾಲೆಟ್‌” ಸ್ವರೂಪವು ಚಿಕ್ಕದರಿಂದ ಮಧ್ಯಮ-ಗಾತ್ರದವರೆಗಿನ ಒಂದು ಮರವಾಗಿದ್ದು, ಅದು ಲಿಗ್ನೋಟ್ಯೂಬರ್‌‌ ಎಂದು ಕರೆಯಲ್ಪಡುವ ಗಡ್ಡೆಗಳನ್ನು ಬಿಡುವುದಿಲ್ಲ ಮತ್ತು ಒಂದು ಸಾಕಷ್ಟು ಉದ್ದವಾದ ಕಾಂಡವನ್ನು ಹೊಂದಿರುತ್ತದೆ. ಲಂಬಾಕಾರವಾಗಿ ಕವಲೊಡೆಯುವ ಲಕ್ಷಣ ಮತ್ತು ಅನೇಕವೇಳೆ ಎದ್ದುಕಾಣುವಂತಿರುವ ಒಂದು ದಟ್ಟವಾದ ತುದಿಯ ಕಿರೀಟದವಿಶಿಷ್ಟತೆಯನ್ನು ಇದು ಹೊಂದಿರುತ್ತದೆ. ಇದು  , E. ಕ್ಲಿವಿಕೋಲಾ ಮತ್ತು E. ಓರ್ನಾಟಾ ಮೊದಲಾದವುಗಳ ಬಲಿತ ಆರೋಗ್ಯಕರ ಮಾದರಿಗಳ ಸಾಮಾನ್ಯ ಬೆಳೆಯುವ ಸ್ವಭಾವವಾಗಿರುತ್ತದೆ. ಮ್ಯಾಲೆಟ್‌ಗಳ ನಯವಾದ ತೊಗಟೆಯು ಅನೇಕ ಬಾರಿ ಒಂದು ಸ್ಯಾಟಿನ್ನಿನಂಥ ನವಿರು ಮತ್ತು ಹೊಳಪನ್ನು ಹೊಂದಿರುತ್ತದೆ ಹಾಗೂ ಅದು ಬಿಳಿ, ಕೆನೆ, ಬೂದು, ಹಸಿರು ಅಥವಾ ತಾಮ್ರದ ಬಣ್ಣದಲ್ಲಿರಲು ಸಾಧ್ಯವಿದೆ.

ನೀಲಗಿರಿ ಎಲೆಗಳನ್ನು ತಿನ್ನುತ್ತಿರುವ ಫ್ಯಾಸ್ಕೋಲಾರ್ಕ್ಟಸ್‌ ಸಿನೆರಿಯಸ್‌ ಕೋಲಾ ಕರಡಿ

 

ಸಾಮಾನ್ಯವಾಗಿ ನೀಲಗಿರಿ ಮರದ ಗಾತ್ರಗಳು ಈ ಕೆಳಗಿನಂತೆ ಇರುತ್ತವೆ:-

  • ಸಣ್ಣದು — ..10 m (33 ft)ರವರೆಗಿನ ಎತ್ತರವನ್ನು ಹೊಂದಿರುವುದು
  • ಮಧ್ಯಮ-ಗಾತ್ರದ್ದು — …10–30 m (33–98 ft)ನಷ್ಟಿರುವುದು
  • ಎತ್ತರದ್ದು — …30–60 m (98–197 ft)ನಷ್ಟಿರುವುದು
  • ಅತ್ಯಂತ ಎತ್ತರದ್ದು — …60 m (200 ft)ಗಿಂತ ಮೀರಿದ್ದು

ನೆಡುತೋಪು ಮತ್ತು ಪರಿಸರ ವಿಜ್ಞಾನದ ಸಮಸ್ಯೆಗಳು:-

ಸರ್‌ ಜೋಸೆಫ್‌ ಬ್ಯಾಂಕ್ಸ್‌‌ ಎಂಬ ಸಸ್ಯವಿಜ್ಞಾನಿಯೊಬ್ಬ 1770ರಲ್ಲಿ ಕೈಗೊಂಡ ಕುಕ್‌ ವಿಶೇಷ ಕಾರ್ಯಯಾತ್ರೆಯ ಸಂದರ್ಭದಲ್ಲಿ ನೀಲಗಿರಿ ಯನ್ನು ಆಸ್ಟ್ರೇಲಿಯಾದಿಂದ ವಿಶ್ವದ ಇತರ ಭಾಗಗಳಿಗೆ ಮೊದಲು ಪರಿಚಯಿಸಿದ. ತರುವಾಯ ಇದು ವಿಶ್ವದ ಅನೇಕ ಭಾಗಗಳಿಗೆ ಪರಿಚಯಿಸಲ್ಪಟ್ಟಿತು. ಅವುಗಳಲ್ಲಿ ಗಮನಾರ್ಹವಾದ ಪ್ರದೇಶಗಳೆಂದರೆ: ಕ್ಯಾಲಿಫೋರ್ನಿಯಾ, ಬ್ರೆಝಿಲ್‌, ಈಕ್ವೆಡಾರ್‌, ಕೊಲಂಬಿಯಾ, ಎಥಿಯೋಪಿಯಾ, ಮೊರೊಕೋ, ಪೋರ್ಚುಗಲ್‌, ದಕ್ಷಿಣ ಆಫ್ರಿಕಾ, ಉಗಾಂಡಾ, ಇಸ್ರೇಲ್‌, ಗ್ಯಾಲೀಷಿಯಾ ಮತ್ತು ಚಿಲಿ. ಸ್ಪೇನ್‌ ದೇಶದಲ್ಲಿ, ನೀಲಗಿರಿ ಮರಗಳು ತಿರುಳುಮರದ ನೆಡುತೋಪುಗಳಲ್ಲಿ ನೆಡಲ್ಪಟ್ಟಿವೆ. ಗರಗಸದ ಕಾರ್ಖಾನೆಯ ಕೆಲಸಗಾರಿಕೆ, ತಿರುಳು, ಇದ್ದಿಲು ಸಂಬಂಧಿ ಕೆಲಸಗಳು ಮತ್ತು ಇತರ ಕೆಲಸಗಳಂಥ ಹಲವಾರು ಉದ್ಯಮಗಳಿಗೆ ನೀಲಗಿರಿ ಗಳು ಆಧಾರವಾಗಿವೆ. ಹಲವಾರು ಜಾತಿಗಳು ಆಕ್ರಮಣಶೀಲವಾಗಿ ಮಾರ್ಪಟ್ಟಿವೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ವನ್ಯಜೀವಿಕುಲದ ಮುಚ್ಚುದಾರಿಗಳು ಹಾಗೂ ಬೆಳೆಗಳ ಸರದಿಯ ನಿರ್ವಹಣೆಯ ಗೈರುಹಾಜರಿಯು ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದೇ ರೀತಿಯ ಅನುಕೂಲಕರ ವಾತಾವರಣದ ಸ್ಥಿತಿಗತಿಗಳಿಂದಾಗಿ, ನೀಲಗಿರಿ ನೆಡುತೋಪುಗಳು ಅನೇಕ ವೇಳೆ ಓಕ್‌ ಕಾಡುಪ್ರದೇಶಗಳನ್ನು ಸ್ಥಾನಪಲ್ಲಟಗೊಳಿಸಿವೆ. ಕ್ಯಾಲಿಫೋರ್ನಿಯಾ ಮತ್ತು ಪೋರ್ಚುಗಲ್‌ಗಳಲ್ಲಿ ಕಂಡುಬಂದಿರುವ ಸ್ಥಿತಿ ಇದಕ್ಕೊಂದು ನಿದರ್ಶನವಾಗಿದೆ. ಇದರ ಫಲವಾಗಿ ಹೊರಹೊಮ್ಮಿದ ಏಕಫಸಲಿನ ಕೃಷಿಗಳಿಂದಾಗಿ ಸಸ್ತನಿಗಳು ಹಾಗೂ ಪಕ್ಷಿಗಳು ಆಹಾರಕ್ಕಾಗಿ ಅವಲಂಬಿಸಿರುವ ಓಕ್‌ ಮರದ ಹಣ್ಣುಗಳು ಇಲ್ಲದಂತಾಗಿರುವುದರಿಂದ, ಜೀವ ವೈವಿಧ್ಯತೆಯ ನಷ್ಟವಾಗಿದ್ದು ಅದು ಕಳವಳಗಳನ್ನು ಸೃಷ್ಟಿಸಿದೆ. ಓಕ್‌ ಮರಗಳಲ್ಲಿನ ಪೊಟರೆಗಳು ಪಕ್ಷಿಗಳಿಗೆ ಹಾಗೂ ಸಣ್ಣ-ಪುಟ್ಟ ಸಸ್ತನಿಗಳಿಗೆ ಮತ್ತು ಜೇನು ಸಮುದಾಯಗಳಿಗೆ ಆಶ್ರಯ ಮತ್ತು ಗೂಡುಕಟ್ಟುವ ತಾಣಗಳನ್ನು ಒದಗಿಸುತ್ತಿದ್ದು, ಏಕಫಸಲಿನ ಕೃಷಿಯ ಕಾರಣದಿಂದಾಗಿ ಅದೂ ಇಲ್ಲದಂತಾಗಿದ್ದು ಜೀವವೈವಿಧ್ಯತೆಯ ನಷ್ಟಕ್ಕೆ ಕಾರಣವಾಗಿ ಕಳವಳಗಳನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲ, ನಿರ್ವಹಿಸಲ್ಪಟ್ಟ ನೆಡುತೋಪುಗಳಲ್ಲಿ ಕಡಿದು ಉರುಳಿಸಲಾದ ಮರಗಳು ಇಲ್ಲದಿರುವುದೂ ಸಹ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ.

ಆಯಾ ಋತುವಿಗೆ ತಕ್ಕಂತಿರುವ ಶುಷ್ಕ ಹವಾಮಾನಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ತೆರೆದ ಹುಲ್ಲುಗಾವಲುಗಳಲ್ಲಿ, ಅಲ್ಲೊಂದು-ಇಲ್ಲೊಂದು ಎಂಬಂತೆ ವಿರಳವಾಗಿರುವ ಮರಗಳಿಗೆ ಬೆಂಕಿಯನ್ನು ಹಚ್ಚಲು ಹುಲ್ಲಿನ ಬೆಂಕಿಯೊಂದು ಸಾಕಾಗುವುದಿಲ್ಲವಾದ್ದರಿಂದ, ಓಕ್‌ ಮರಗಳು ಹಲವು ವೇಳೆ ಬೆಂಕಿ-ನಿರೋಧಕವಾಗಿರುತ್ತವೆ. ಇದಕ್ಕೆ ಪ್ರತಿಯಾಗಿ ಒಂದು ನೀಲಗಿರಿಯ ಕಾಡು ಬೆಂಕಿಯನ್ನು ಉತ್ತೇಜಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಏಕೆಂದರೆ ಅದರ ಎಲೆಗಳು ತಯಾರಿಸುವ ತೈಲಗಳು ಬಾಷ್ಪಶೀಲವಷ್ಟೇ ಅಲ್ಲದೇ ಅಧಿಕವಾಗಿ ದಹನಶೀಲ ಸ್ವಭಾವವನ್ನು ಹೊಂದಿರುತ್ತವೆ. ಮೇಲಾಗಿ, ದೊಡ್ಡ ಪ್ರಮಾಣಗಳಲ್ಲಿ ಉತ್ಪಾದನೆಯಾಗುವ ಕಸದಲ್ಲಿ ಫೀನಾಲಿಕ್‌ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವು ಶಿಲೀಂಧ್ರಗಳಿಂದತಮ್ಮ ವಿಘಟನೆಯಾಗದಂತೆ ತಡೆಯುವುದರಿಂದ, ಬೃಹತ್‌ ಪ್ರಮಾಣಗಳಲ್ಲಿನ ಶುಷ್ಕ, ದಹನಶೀಲ ಇಂಧನವಾಗಿ ಕಸವು ಸಂಚಯನಗೊಳ್ಳುತ್ತದೆ. ಇದರ ಪರಿಣಾಮವಾಗಿ, ನೀಲಗಿರಿ ಮರಗಳ ದಟ್ಟವಾದ ನೆಡುವಿಕೆಗಳು ಮಹಾಕ್ಷೋಭೆಯ ಬೆಂಕಿಯ ಬಿರುಗಾಳಿಗಳಿಗೆ ಈಡಾಗಬಹುದು. ನೀಲಗಿರಿ ಮರಗಳು ದೀರ್ಘಾವಧಿಯವರೆಗೆ ಬೆಂಕಿಯಿಂದ ತಪ್ಪಿಸಿಕೊಂಡು ಬದುಕುಳಿಯುವ ತಮ್ಮ ಸಾಮರ್ಥ್ಯವನ್ನು, ಕುರುಚಲು ಎಳೆಕೊಂಬೆಗಳು ಮತ್ತು ಲಿಗ್ನೋಟ್ಯೂಬರ್‌ಗಳಿಂದ ಮತ್ತೆಹುಟ್ಟುವ ತಮ್ಮ ಸಾಮರ್ಥ್ಯದಿಂದ ಅಥವಾ ಸೆರೋಟಿನ್‌ಯುಕ್ತ ಹಣ್ಣುಗಳನ್ನು ಉತ್ಪಾದಿಸುವುದರಿಂದ ಪಡೆದುಕೊಳ್ಳುತ್ತವೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆಳಕೇ ಇಲ್ಲದೆ ಕತ್ತಲಲ್ಲಿದ್ದ ದೊಡ್ಡಿಗಳಿಗೆ ಬೆಳಕಿನ “ಸೌಭಾಗ್ಯ”ರೂಪಿಸಿದ ಮೋದಿ…..!

    ಎಂಟೆಕ್‌ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್‌ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ…

  • ಉಪಯುಕ್ತ ಮಾಹಿತಿ

    ಬೆಳೆ ದರ್ಶಕ್-2020ಆಪ್

    ಜಿಲ್ಲೆಯಲ್ಲಿ ಈಗಾಗಲೇ 2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಜಿ.ಪಿ.ಎಸ್. ಆಧಾರಿತ ಮೊಬೈಲ್ ಆ್ಯಪ್ ಬಳಸಿ ಬೆಳೆಗಳ ವಿವರಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಹೀಗೆ ಅಪ್ಲೋಡ್ ಮಾಡಿದ ಬೆಳೆ ಸಮೀಕ್ಷೆಯ ವಿವರ ರೈತರು ಪಡೆಯಲು ಕೃಷಿ ಇಲಾಖೆ ಬೆಳೆ ದರ್ಶಕ್-2020 ಆಪ್ ಬಿಡುಗಡೆ ಮಾಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ ಎಂ.ಶೇಖ್ ಅವರು ತಿಳಿಸಿದ್ದಾರೆ. ಬೆಳೆ ದರ್ಶಕ್-2020 ಹೆಸರಿನ ಈ ಆಪ್ ಮೂಲಕ ರೈತರು ಅಪ್ಲೋಡ್ ಆಗಿರುವ ತಮ್ಮ ಬೆಳೆಯ ವಿವರ ಮಾಹಿತಿ ಪಡೆಯಬಹುದು. ಅಲ್ಲದೇ…

  • ಸ್ಪೂರ್ತಿ

    ತನ್ನ ಮಗಳನ್ನು ಅಂಗನವಾಡಿಗೆ ಸೇರಿಸಿ ಎಲ್ಲರಿಗೂ ಆದರ್ಶವಾದ ಜಿಲ್ಲಾಧಿಕಾರಿ..!

    ಮಕ್ಕಳ ಶೈಕ್ಷಣಿಕ ಅಡಿಪಾಯ ಚೆನ್ನಾಗಿರಲಿ ಎಂಬ ಉದ್ದೇಶದಿಂದ ನಾವು ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ, ಆದರೆ ತಮಿಳುನಾಡಿನ ತಿರುವನೆಲ್ಲಿ ಜಿಲ್ಲಾಧಿಕಾರಿ ಕರ್ನಾಟಕ ಮೂಲದ ಶಿಲ್ಪಾ ಪ್ರಭಾಕರ್ ಸತೀಶ್ ವಿಭಿನ್ನವಾಗಿ ನಿಂತಿದ್ದಾರೆ, ತಮ್ಮ ಮಗಳನ್ನು ಪಲಾಯಕಮೊಟ್ಟಿಯಲ್ಲಿರುವ ಅಂಗನವಾಡಿಗೆ ಸೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂಗನವಾಡಿಗೆ ಸೇರಿಸಿದ ಮೇಲೆ ತಮ್ಮ ಮಗಳ ತಮಿಳು ಸುಧಾರಿಸಿದೆ, ಸಮಾಜದ ಎಲ್ಲಾ ರೀತಿಯ ಜನಗಳ ಜೊತೆ ನನ್ನ ಮಗಳು ಸೇರಬೇಕು, ಅವರ ಜೊತೆ ಸೇರಿ ಕಲಿಯಬೇಕು, ಹೀಗಾಗಿ ನರ್ಸರಿ ಶಾಲೆ ಬದಲು ಅಂಗನವಾಡಿಗೆ…

  • ಸುದ್ದಿ

    ದಯವಿಟ್ಟು ನಮ್ಮನ್ನು ಮರೆಯಬೇಡಿ. ಬಿರಾದರ್ ಅವರ ನೋವಿನ ಮಾತು!

    ತೆರೆಯ ಮೇಲೆ ತಮ್ಮ ನಟನೆಯಿಂದ ಸಿನಿ ಪ್ರೇಕ್ಷಕರನ್ನು ನಗೆಗಡಲಿಗೆ ತೇಲಿಸಿದ ಜೀವವದು. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಲನಚಿತ್ರೋದ್ಯಮಕ್ಕೆ ಹೆಮ್ಮೆ ತಂದು ಕೊಟ್ಟ ಹಾಸ್ಯದಿಗ್ಗಜ ಇವರು. ತೆರೆಯ ಮೇಲೆ ಬಣ್ಣ ಹಚ್ಚಿದ್ದರೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲಿಲ್ಲದ ನಗು ಖುಷಿ ತಂದುಕೊಟ್ಟವರು. ಅವರ ನಟನೆಗೆ ಅವರೇ ಸರಿಸಾಟಿ. ಅವರು ಬೇರೆಯಾರು ಅಲ್ಲ. ನಮ್ಮ ನಿಮ್ಮೆಲ್ಲ ನೆಚ್ಚಿನ ಹಾಸ್ಯ ದಿಗ್ಗಜ ಬಿರಾದರ್ ಅವೆು. ಬಿರಾದಾರ್ ಅವರು ಸಿನಿಮಾಗಳಲಿ ಕೇವಲ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು, ಅವರ…

  • ವಿಸ್ಮಯ ಜಗತ್ತು

    ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿದ್ದ ಈ ವೃದ್ದ ಮಹಿಳೆ,ಅದೇ ದೇವಸ್ಥಾನಕ್ಕೆ ಕೊಟ್ಟ ಹಣ ಎಷ್ಟು ಗೊತ್ತಾ?ಈ ಲೇಖನ ಓದಿ ಶಾಕ್ ಆಗ್ತೀರಾ…

    ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ದೇವಸ್ಥಾನದ ನವೀಕರಣಕ್ಕಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಮೈಸೂರು ಅರಮನೆಯ
    ಮುಂಭಾಗದಲ್ಲಿರುವ ಪ್ರಸಿದ್ದ ಪ್ರಸನ್ನ ಅಂಜನೇಯ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾ, ದೇವಸ್ಥಾನದ ನವೀಕರಣಕ್ಕೆ ದೇಣಿಗೆ ನೀಡಿದ ಮಹಾನ್ ಭಕ್ತೆ.

  • ಸುದ್ದಿ

    ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಭುವನೇಶ್ವರ, ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು…