ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ.
ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ.

ನಾಲ್ಕನೆಯ ಶವ ಸಂಸ್ಕಾರ ಮಾಡುವ ರೀತಿ ಕೇಳಿದ್ರೆ ನಿಮ್ಮ ಮೈ ಮನ ಜುಮ್ ಎನ್ನಿಸದೇ ಇರಲ್ಲ. ಈ ಭಯಂಕರ ಪದ್ಧತಿ ಏನು ಗೊತ್ತಾ?
ಈ ಪದ್ದತಿಯ ಪ್ರಕಾರ ಸತ್ತ ಹೆಣದ ದೇಹವನ್ನು ರಣಹದ್ದುಗಳಿಗೆ ಆಹಾರವಾಗಿ ಹಾಕುತ್ತಾರೆ. ಮನುಷ್ಯನಿಗೆ ದೇವರು ನೀಡಿದ ದೇಹ ಸತ್ತ ಮೇಲೂ ಪ್ರಾಣಿ ಪಕ್ಷಿಗಳ ಆಹಾರವಾದರೆ ಜನ್ಮ ಸಾರ್ಥಕವಾಗುತ್ತದೆಂದು ಇವರ ನಂಬಿಕೆ.

ಹೀಗೇಕೆ ಮಾಡುತ್ತಾರೆ ಗೊತ್ತಾ..? ಶಾಕ್ಯನೆಂಬ ಬೌದ್ಧ ಮುನಿ ಈ ವಿಧಾನವನ್ನು ಆರಂಭಿಸಿದನಂತೆ. ಆತ ತನ್ನ ದೇಹದ ಮಾಂಸವನ್ನು ಪಾರಿವಾಳಗಳಿಗೆ ಆಹಾರವಾಗಿ ನೀಡಿದನೆಂಬ ಕಥೆಯೇ ಇದಕ್ಕೆ ಪ್ರೇರಣೆಯಾಗಿದೆ.
ಈ ಶವ ಸಂಸ್ಕಾರದಲ್ಲೂ ಇದೆ ಹಲವು ನಿಯಮಗಳು!
ಇಂತಹ ಸಂಸ್ಕಾರವನ್ನು ಗರ್ಭಿಣಿಯರು, ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನವರು, ವ್ಯಾಧಿ ಮತ್ತು ಅಪಘಾತದಿಂದ ಸತ್ತವರ ದೇಹಗಳಿಗೆ ಮಾಡುವುದಿಲ್ಲ. ಇಂತಹ ಶವ ಸಂಸ್ಕಾರಕ್ಕೆ ಯಾವುದೇ ಬಲವಂತವಿರುವುದಿಲ್ಲ. ಸಾಯುವುದಕ್ಕೂ ಮೊದಲು ಆ ವ್ಯಕ್ತಿ ಯಾವ ರೀತಿ ಶವ ಸಂಸ್ಕಾರ ಬೇಕು ಎಂದು ಹೇಳಿರುತ್ತಾನೋ ಅದೇ ರೀತಿ ಶವ ಸಂಸ್ಕಾರ ಮಾಡಲಾಗುತ್ತದೆ.
ಇಲ್ಲಿನ ಪದ್ಧತಿ ಪ್ರಕಾರ ಯಾವುದೇ ವ್ಯಕ್ತಿ ಸತ್ತಾಗ ಮೃತ ದೇಹವನ್ನು ಮೂರೂ ದಿನಗಳವರೆಗೆ ಹಾಗೆಯೇ ಇಡುತ್ತಾರೆ. ಕಾರಣ ಆತ್ಮವು ಮತ್ತೆ ಅವನ ದೇಹ ಪ್ರವೇಶಿಸಿ ಅವನು ಬದುಕಬಹುದೆಂಬ ನಂಬಿಕೆ ಅವರಲ್ಲಿದೆ. ನಂತರ ನಾಲ್ಕನೆಯ ದಿನ ಶವ ಸಂಸ್ಕಾರದ ವಿಧಿ ವಿಧಾನಗಳು ನೆರವೇರಿದ ಬಳಿಕ, ಶವದ ಮಂಡಿಗಳನ್ನು ಮತ್ತು ಕೈಗಳನ್ನು ಹಿಂಭಾಗಕ್ಕೆ ಜೋಡಿಸಿ ಕಟ್ಟಿ ಬಿಳಿ ಬಣ್ಣದ ಬಟ್ಟೆಯಲ್ಲಿ ಬಿಗಿದು ಹೆಗಲಿನಲ್ಲಿ ಹೊತ್ತು, ಮೃತನ ಮಕ್ಕಳು ಅಥವಾ ಬಂಧುಗಳು ಬೆಟ್ಟದಲ್ಲಿರುವ ಕಲ್ಲುಬಂಡೆಯ ಮೇಲೆ ಅದನ್ನು ಕೆಳಗಿಳಿಸಿದ ಬಳಿಕ ಹಿಂತಿರುಗಿ ನೋಡದೆ ಮರಳುತ್ತಾರೆ.

ನಂತರ ಲಾಮಾ ಗುರುಗಳು ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತ ಕೈಯಲ್ಲಿರುವ ಕಂಚಿನ ಗಂಟೆಯನ್ನು ಬಡಿಯಲಾರಂಭಿಸುತ್ತಾರೆ. ರಣಹದ್ದುಎಷ್ಟೇ ದೂರದಲ್ಲಿದ್ದರೂ ಈ ಗಂಟೆಯ ನಾದ ಕೇಳಿದ ಕೂಡಲೇ ಅಲ್ಲಿಗೆ ಧಾವಿಸಿ, ಶವದ ಸುತ್ತಲೂ ಹಾರಾಡಿ ಮೃತ ದೇಹವನ್ನು ತಿನ್ನುತ್ತವೆ.ಇವರ ಪ್ರಕಾರ ರಣ ಹದ್ದುಗಳು ತಿಂದ ವ್ಯಕ್ತಿಯ ಆತ್ಮ ನೇರವಾಗಿ ಸ್ವರ್ಗಕ್ಕೆ ಹೋಗುತ್ತದಂತೆ.ಅವರಿಗೆ ಮರು ಜನ್ಮವಿರುದಿಲ್ಲವಂತೆ.

ಕೆಲವೇ ನಿಮಿಷಗಳಲ್ಲಿ ಸಣ್ಣ ಸಣ್ಣ ಮೂಳೆಯ ಚೂರುಗಳು, ಕೂದಲು, ಚರ್ಮದ ಚಿಕ್ಕತುಂಡುಗಳ ಹೊರತು ಉಳಿದುದೆಲ್ಲವನ್ನೂ ಹದ್ದುಗಳು ತಿಂದು ಮುಗಿಸುತ್ತವೆ. ಬಳಿಕ ಅಸ್ಥಿಪಂಜರವನ್ನು ಸುತ್ತಿಗೆಯಿಂದ ಗುದ್ದಿ ಹುಡಿ ಮಾಡಿ ಹುರಿದ ಬಾರ್ಲಿಯ ಹಿಟ್ಟು, ಯಾಕ್ ಬೆಣ್ಣೆ, ಹಾಲು ಈ ಯಾವುದಾದರೊಂದನ್ನು ಬೆರೆಸಿ ಹದ್ದುಗಳಿಗೆಸೆದಾಗ ಅದನ್ನೂ ಖಾಲಿ ಮಾಡುತ್ತವೆ.
ಮಾಂಸ ಭಕ್ಷಣೆಯಿಂದ ಪವಿತ್ರ ಹದ್ದುಗಳಿಗೆ ಯಾವ ವ್ಯಾಧಿಯೂ ಬರದಿರಲಿ ಎಂದು ಇಂಥ ಮಿಶ್ರಣ ಮಾಡುವರಂತೆ. ಹದ್ದುಗಳು ಶವ ಭಕ್ಷಿಸದಿದ್ದರೆ ಅಪಶಕುನವೆಂದು ನಂಬುತ್ತಾರೆ. ಈ ಹದ್ದುಗಳು ಮಾನವ ಶವದ ಹೊರತು ಬೇರೆ ಯಾವ ಆಹಾರವನ್ನೂ ತಿನ್ನುವುದಿಲ್ಲವಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಜೆಪಿ ಆಡಳಿತ ಸರ್ಕಾರವಿರುವ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ರೈತರ ಸಾಲಮನ್ನಾ, ಹಾಗೂ ಕಾಂಗ್ರೆಸ್ ಆಡಳಿತದ ಪಂಜಾಬ್ ನಲ್ಲಿಯೂ ರೈತರ ಸಾಲ ಮನ್ನಾ ಘೋಷಣೆಯಾದ ನಂತರ ಕರ್ನಾಟಕದಲ್ಲಿಯೂ ರೈತರ ಸಾಲ ಮನ್ನಾ ಮಾಡಬೇಕೆಂದು ಪ್ರತಿಪಕ್ಷಗಳು ತೀವ್ರವಾಗಿ ಆಗ್ರಹಿಸಿದ್ದವು.
ನೀವು 2 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಸುತ್ತಿದ್ದೀರಾ. ಹಾಗಾದರೆ ಇಲ್ಲಿ ನೋಡಿ.
ಕಾಲವೊಂದಿತ್ತು, ಆಗ ಯಾವುದೇ ಉತ್ತಮ ಆಸ್ಪತ್ರೆಗಳು ಇರಲಿಲ್ಲ.ಹುಟ್ಟುವ ಮಕ್ಕಳಿಗೆ ಆಗ ಯಾವುದೇ ಲಸಿಕೆಗಳನ್ನು ಹಾಕುತ್ತಿರಲಿಲ್ಲ.ಯಾಕಂದ್ರೆ ಆಗಿನ ಆಹಾರ ಪದ್ಧತಿ ಆಗಿತ್ತು.ಯಾವುದೇ ಲಸಿಕೆಗಳು ಆಗ ಅಗತ್ಯವಿರಲಿಲ್ಲ. ಆದ್ರೆ ಈಗ ಆಗಿಲ್ಲ, ಹುಟ್ಟುತ್ತಲೇ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಅಗತ್ಯವಾದ ಲಸಿಕೆಗಳನ್ನು ಹಾಕಿಸಬೇಕಾಗುತ್ತೆ.ಇಲ್ಲವಾದ್ರೆ ನಾನಾ ಖಾಯಿಲೆಗಳು ಬರುವುದು ಗ್ಯಾರಂಟಿ. ಹಾಗಾಗಿ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಲಸಿಕೆ ಹಾಕಿಸುವುದು ಬಹು ಮುಖ್ಯ. ಹಾಗಾದ್ರೆ ಯಾವ ಯಾವ ಲಸಿಕೆಗಳನ್ನು ಯಾವ ಸಮಯಕ್ಕೆ ಹಾಕಿಸಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. ಮಗು ಹುಟ್ಟಿದ ತಕ್ಷಣ ಯಾವ…
ಮಧ್ಯಪ್ರದೇಶ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ,ವಿಧವೆಯರ ಬಾಳು ಬಂಗಾರಗೊಳಿಸುವ ಕಾರಣಕ್ಕಾಗಿ ಹೊಸ ಯೋಜನೆ ರೂಪಿಸಿದೆ.ಈ ಯೋಜನೆಯ ಪ್ರಕಾರ ವಿಧವೆಯನ್ನು ಪುನರ್ ವಿವಾಹವಾಗುವ ವ್ಯಕ್ತಿಗೆ, ಪ್ರೋತ್ಸಾಹ ಧನ ನೀಡಲಾಗುತ್ತದೆ.
ಬೊಜ್ಜು ಕರಗಲು ಸರಳ ಯೋಗಾಸನವಾದ ಊರ್ಧ್ವ ಪ್ರಸಾರಿತ ಪಾದಾಸನದ ಅಭ್ಯಾಸ ಮಾಡಬಹುದು. ಊರ್ಧ್ವ ಎಂದರೆ ಮೇಲ್ಮುಖ, ಪ್ರಸಾರಿತ ಎಂದರೆ ವಿಸ್ತ್ರತ. ಪಾದ ಎಂದು ಕಾಲು ಮತ್ತು ಆಸನ ಎಂದರೆ ಯೋಗಭಂಗಿ. ಸಾಮಾನ್ಯ ಎಲ್ಲ ವಯಸ್ಸಿನವರು ಅಭ್ಯಾಸ ಮಾಡಬಹುದು. ಆರಂಭದಲ್ಲಿ ಹೊಸಬರು ಗೋಡೆಯ ಸಹಾಯ ತೆಗೆದುಕೊಳ್ಳಬಹುದು. ವಿಧಾನ: ನೆಲದ ಮೇಲೆ ಆರಾಮವಾಗಿ ವಿಶ್ರಾಂತಿ ಮಾಡಿ. ಆಮೇಲೆ ಕಾಲುಗಳು ಜೋಡಣೆ, ಕೈಗಳನ್ನು ತೊಡೆಯ ಪಕ್ಕದಲ್ಲಿ ಇರಿಸಿ. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿದ್ದು, ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಎರಡೂ ಕಾಲುಗಳನ್ನು 30ರಿಂದ…
ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಹಲವು ರೋಗಾಣುಗಳ ಚಟುವಟಿಕೆ ಹೆಚ್ಚು. ಇದರೊಂದಿಗೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯೂ ಕಡಿಮೆಯಾಗಿ ರೋಗಗಳಿಗೆ, ವೈರಾಣು ಜ್ವರಗಳಿಗೆ ಕಾರಣವಾಗುತ್ತದೆ.