ಉಪಯುಕ್ತ ಮಾಹಿತಿ

ಇದು ದಕ್ಷಿಣ ಭಾರತದ ವಾಟರ್ ಬಾಂಬ್.!ಈ ಆಣೆಕಟ್ಟು ಒಡೆದ್ರೆ, ಈ ಭಾಗದ ನಗರಗಳು ಗ್ಯಾರಂಟಿ ಜಲಸಮಾಧಿ.!

971

ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್  ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್  ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ…

ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ ದಕ್ಷಿಣ ಭಾರತದಲ್ಲೇ ಇದೆ ಈ ಅಪಾಯಕಾರಿ ಡ್ಯಾಮ್. ಅದು ಯಾವಾಗ ಬೇಕಿದ್ದರೂ ಒಡೆದು ಹೋಗಬಹುದು.

ಈ ಡ್ಯಾಮ್ ಇರುವುದೆಲ್ಲಿ.?

ಹೀಗೆ ಮನುಕುಲದ ವಿನಾಶಕ್ಕೆ ಕಾದುಕುಳಿತ ಆಧುನಿಕ ಯಮಧರ್ಮರಾಯ ನಂತಿರುವ ಈ ಡ್ಯಾಮ್ ನಮ್ಮ ಪಕ್ಕದಲ್ಲೇ ಇರುವ ಕೇರಳ ರಾಜ್ಯದಲ್ಲಿದೆ. ಇದು  ಒಡೆದು ಹೋದರೆ ಸಂಪೂರ್ಣವಾಗಿ ಜಲಸಮಾಧಿ ಆಗುವುದು ಗ್ಯಾರಂಟಿ. ಜಲ ರಾಕ್ಷಸನಂಟಿರುವ ಈ ಡ್ಯಾಮ್ ಹೆಸರೇ ಮುಲ್ಲಪೆರಿಯಾರ್.

ಒಂದು ವೇಳೆ ಹಾಗೆ ಏನು ಹಾಗೇನಾದ್ರೂ ಆದ್ರೆ ಸುಮಾರು ನಾಲ್ಕು ಜಿಲ್ಲೆಗಳಲ್ಲಿ ಜಲಪ್ರಳಯವೇ ನಡೆದು ಹೋಗುತ್ತೆ. ಇದು ಗೊತ್ತಿದ್ದರೂ ಸರ್ಕಾರಗಳು ಕೈಕಟ್ಟಿ ಕುಳಿತಿವೆ. ಜನರು ಮಾತ್ರ ಈ ಅಪಾಯದ ನಡುವೆ ಜೀವನ ಸಾಗಿಸುತ್ತಿದ್ದಾರೆ.

ಲಕ್ಷಾಂತರ ಜನಗಳ ಜೀವನವನ್ನು, ಬಲಿ ತೆಗೆದುಕೊಳ್ಳುವುದಕ್ಕೆ ಕೂತಿರುವ ಡ್ಯಾಮ್ ನ ಅಸಲಿ ಕಥೆ..!

ಈ ಅಣೆಕಟ್ಟು ನೂರಾರು ವರ್ಷಗಳಿಂದ ನಿರ್ಮಾಣವಾಗಿದೆ. ಇದು ಕೇರಳ ರಾಜ್ಯದಲ್ಲಿದ್ದರೂ ಈ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಮಾತರ ತಮಿಳುನಾಡಿನ ಜನ. ಈ ವಿಷಯದಲ್ಲಿ ನಿಮಗೆ ಒಂದು ಕನ್ಫ್ಯೂಸ್ ಆಗುತ್ತಿರುವುದು ಗ್ಯಾರೆಂಟಿ. ಏಕೆಂದರೆ ಮುಲ್ಲಪೆರಿಯಾರ್ ಡ್ಯಾಮ್ ಇರುವುದು ಕೇರಳದಲ್ಲಿ ಇದರ ನೀರನ್ನು ಬಳಸುತ್ತಿರುವುದು ತಮಿಳುನಾಡಿನ ಜನ. ಇದು ಹೇಗೆಂದು ನಿಮಗೆ ಕನ್ಫ್ಯೂಸ್ ಆಗದೆ ಇರಲ್ಲ. ಇದಕ್ಕೆ  ಮೂಲ ಕಾರಣ ಈ ಪೆರಿಯಾರ್ ನದಿ ಕೇರಳದ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಹುಟ್ಟುತ್ತದೆ. ಈ ನದಿಗೆ ಅಡ್ಡವಾಗಿ ಇಡುಕ್ಕಿ ಜಿಲ್ಲೆಯ ತೇಕಡಿ ಬಳಿ ಒಂದು ಡ್ಯಾಮನ್ನು ಕಟ್ಟಿದ್ದಾರೆ.

ತಮಿಳುನಾಡಿನಲ್ಲಿರುವುದು ಕೇವಲ 114 ಚದುರ ಕಿಲೋಮೀಟರ್!

ಹೀಗಾಗಿ ಇದಕ್ಕೆ ಮುಲ್ಲಪೆರಿಯಾರ್ ಅಣೆಕಟ್ಟು ಎಂದು ಹೆಸರಿಡಲಾಗಿದೆ. ಕೇರಳ ರಾಜ್ಯದಲ್ಲಿ ಅತಿ ಉದ್ದವಾದ ನದಿಯಾಗಿರುವ ಪೆರಿಯಾರ್, ತನ್ನ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೂ ಸುಮಾರು 244 ಕಿಲೋಮೀಟರ್ ಗಳ ವರೆಗೂ ಹರಿಯುತ್ತದೆ. ಒಟ್ಟು  5398 ಚದುರ ಕಿಲೋಮೀಟರ್ ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಪೈಕಿ 5284 ಚದುರ ಕಿಲೋಮೀಟರ್ ಕೇರಳದಲ್ಲಿದ್ದರೆ, ಉಳಿದ 114 ಚದುರ ಕಿಲೋಮೀಟರ್ ಗಳಷ್ಟು ಜಲಾನಯನ ಪ್ರದೇಶ ತಮಿಳುನಾಡಿನಲ್ಲಿದೆ. ಇದು ಬರೀ 114 ಚದುರ ಕಿಲೋಮೀಟರ್ ಅಂತ ನಿಮಗೆ ಅನ್ನಿಸಬಹುದು. ಆದ್ರೆ ನಾವು ಹೇಳಿದ್ದು  ಇದು ಜಲಾನಯನ ಪ್ರದೇಶ.

ಆದರೆ ಈ ಡ್ಯಾಮ್ ನ ಸಂಪೂರ್ಣ ಲಾಭವನ್ನು ತಮಿಳುನಾಡಿನ ಜನ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬ್ರಿಟಿಷರು. ಈಗಿನ ಕೇರಳ ರಾಜ್ಯ ಬ್ರಿಟಿಷರ ಕಾಲದಲ್ಲಿ ತಿರುವನಂತಪುರ ರಾಜನ ಆಳ್ವಿಕೆಯಲ್ಲಿತ್ತು. ಆಗ ಇಡೀ ತಮಿಳುನಾಡನ್ನು ಮದ್ರಾಸ್ ರಾಜ್ಯ ಎಂಬ ಹೆಸರಲ್ಲಿ ಬ್ರಿಟಿಷರು ಆಳುತ್ತಾ ಇದ್ದರು. ಇದೇ ಮದ್ರಾಸ್ ಪ್ರಾಂತ್ಯಕ್ಕೆ ನಮ್ಮ ಕರ್ನಾಟಕದ ಕೆಲವು ಭಾಗಗಳು ಕೂಡ ಸೇರಿದ್ದವು. ಹೀಗಾಗಿ ತಮಿಳುನಾಡಿನ ಜನಕ್ಕೆ ನೀರು ಕೊಡಲೆಂದು ಬ್ರಿಟಿಷರು ಈ ಮುಲ್ಲಪೆರಿಯಾರ್ ಅಣೆಕಟ್ಟನ್ನು ಆಗ ಕಟ್ಟಿದ್ದರು.

ಇವತ್ತು ಅದು ಕೇರಳಿಗರ ಪಾಲಿಗೆ ಮರಣ ಮೃದಂಗ ವಾಗಿದೆ. ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಅಂತ ಅಂದರೆ, ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ವಿವಾದದ ಮೂಲ ಕಾರಣ ಬ್ರಿಟಿಷರು. ಅಂದಿನ ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಪ್ರಾಂತ್ಯದ ನಡುವೆ ಸಾವಿರ 1924ರಲ್ಲಿ ಆದ ಒಪ್ಪಂದವೇ ಮೂಲ ಕಾರಣ.

ಮುಲ್ಲಪೆರಿಯಾರ್ ಡ್ಯಾಮ ನಿರ್ಮಾಣ

ಮುಲ್ಲಪೆರಿಯಾರ್ ಡ್ಯಾಮ ನಿರ್ಮಾಣ ವಾಗಿದ್ದು 1895. ಸಮುದ್ರ ಮಟ್ಟಕ್ಕಿಂತಲೂ ಸುಮಾರು 2890 ಅಡಿ ಎತ್ತರವಿದ್ದು, ಅರಬ್ಬಿ ಸಮುದ್ರದಿಂದ ಸುಮಾರು 130 ಕಿಲೋಮೀಟರ್ ಅಂತರದಲ್ಲಿದೆ. ಈ ಡ್ಯಾಮ್ ನಲ್ಲಿ ಸುಮಾರು 13ಟಿಎಂಸಿ ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ. ಸದ್ಯಕ್ಕೆ ಡ್ಯಾಮ್ನ ಹಿತದೃಷ್ಟಿಯಿಂದ ಸೆಂಟ್ರಲ್ ವಾಟರ್ ಕಮಿಷನ್ ಆದೇಶದಂತೆ ನೀರಿನ ಸಂಗ್ರಹಣೆಯ ಮಟ್ಟವನ್ನು 142 ಅಡಿಗಳಿಗೆ ನಿಯಂತ್ರಿಸಲಾಗಿದೆ.

ಕೇವಲ 50 ವರ್ಷ ಆಯಸ್ಸು!

ಈ ಡ್ಯಾಮ್ ಕಟ್ಟಿದಾಗ ಇದರ ಆಯಸ್ಸು ಐವತ್ತು ವರ್ಷಕ್ಕೆ ಎಂದು ಹೇಳಲಾಗಿತ್ತು. ಸುಣ್ಣ ಮತ್ತು ಗಾರೆಯನ್ನು ಬಳಸಿ ಕಟ್ಟಿರುವ ಈ ಡ್ಯಾಮ್ ನ ಭವಿಷ್ಯ ಹೆಚ್ಚು ಕಾಲ ಇರುವುದಿಲ್ಲ ಎಂದು, ಸ್ವತಹ ನಿರ್ಮಾಣ ಮಾಡಿದ ಬ್ರಿಟಿಷರಿಗೆ ನಂಬಿಕೆ ಇರಲಿಲ್ಲ. ಈ ಡ್ಯಾಮ್ ಪಕ್ಕದಲ್ಲೇ ಇನ್ನೊಂದು ಚಿಕ್ಕ ಡ್ಯಾಮ್ ಇದೆ. ಈ ಮುಲ್ಲಪೆರಿಯಾರ್ ಡ್ಯಾಮ್ ನಲ್ಲಿ ಸಂಗ್ರಹಿಸಿದ ನೀರನ್ನು ಈ ಚಿಕ್ಕ ಡ್ಯಾಮ್ ಮೂಲಕ ತಮಿಳುನಾಡಿಗೆ ಬಿಡಲಾಗುತ್ತದೆ.

ಕೇವಲ ಐವತ್ತು ವರ್ಷಗಳ ಕಾಲ ಅವದಿಗೆ ಅಂತ ಕಟ್ಟಿರುವ ಈ ಡ್ಯಾಮ್, ಈಗಾಗಲೇ ನೂರಿಪ್ಪತ್ತು ನಾಲ್ಕು ವರ್ಷಗಳನ್ನು ಕಳೆದಿದೆ. ಡ್ಯಾಮ್ ನಿರ್ಮಾಣಕ್ಕೆ ಬಳಸಿರುವ ಸುರುಕಿ ಕಳಚಿ ಬೀಳುತ್ತಿದ್ದು ಯಾವಾಗ ಬೇಕಾದರೂ ಮುಲ್ಲಪೆರಿಯಾರ್ ಒಡೆದು ಹೋಗಬಹುದೆಂಬ ಆತಂಕ ಎದುರಾಗಿದೆ. ನೀವು ಒಮ್ಮೆ ಯೋಚನೆ ಮಾಡಿ, ಒಂದು ವೇಳೆ 13 ಟಿಎಂಸಿ ನೀರು ಇರುವ ಈ ಆಣೆಕಟ್ಟು ಒಡೆದು ಹೋದರೆ, ಅದರ ಪಕ್ಕದಲ್ಲಿರುವ ಜನರ ಜೀವನದ ಕಥೆ ಏನಾಗುತ್ತೆ? ಯಾವ ಮಟ್ಟದಲ್ಲಿ ವಿನಾಶ ಸಂಭವಿಸಬಹುದು. ಅದು ಜಲಪ್ರಳಯಕ್ಕೆ ಸಮವಾದ ಅಂತೆ.

ಹೀಗಾಗಿ ಕೇರಳಿಗರು ಆತಂಕಕ್ಕೀಡಾಗಿದ್ದಾರೆ. ಒಂದು ವೇಳೆ ಈ ಡ್ಯಾಮ್  ಒಡೆದು ಹೋದರೆ ಕೇರಳದ ಕೊಚ್ಚಿನ್ ಸೇರಿದಂತೆ ಹಲವು ನಗರಗಳು ಕೊಚ್ಚಿ ಹೋಗುತ್ತವೆ. ಇದು ಕೇರಳದ ಹಲವಾರು ಜನಪರ ಸಂಘಟನೆಗಳ ಆತಂಕ ಮತ್ತು ಆಂದೋಲನಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕಿಂತ ಹೆಚ್ಚಾಗಿ ಡ್ಯಾಮಿನಿಂದ ಕೆಲವೇ ಅಂತರದಲ್ಲಿ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿ ಎರಡು ಭೂಕಂಪನ ಕೇಂದ್ರಗಳು ಪತ್ತೆಯಾಗಿರುವುದು ಜನರ ಆತಂಕಕ್ಕೆ ಮತ್ತಷ್ಟೂ ಕಾರಣವಾಗಿದೆ.

ನೀವು ಹೇಳಬಹುದು ಡ್ಯಾಮ್ ಹಳೆಯದಾಗಿದೆ, ತಾನೇ ಹೊಸದಾಗಿ ಕಟ್ಟಬಹುದು ಅಂತ. ಆದರೆ ಇಲ್ಲೇ ಇರುವುದು ಪ್ರಾಬ್ಲಮ್. ಯಾಕಂದ್ರೆ ಈ ಡ್ಯಾಮ್ ಕೇರಳ ರಾಜ್ಯದಲ್ಲಿ ಇದ್ದರೂ, ಇದರ ಸಂಪೂರ್ಣ ಲಾಭ ಪಡೆಯುತ್ತಿರುವುದು ಮಾತ್ರ ತಮಿಳುನಾಡು ಮತ್ತು ಸಂಪೂರ್ಣ ಅಧಿಕಾರ ಇರುವುದು ತಮಿಳುನಾಡಿನ ರಾಜ್ಯಕ್ಕೆ ಮಾತ್ರ. ಇದಕ್ಕೆ ಮೂಲ ಕಾರಣ ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋದ ನಂತರ ತಮಿಳುನಾಡು ಮತ್ತು ಕೇರಳದ ನಡುವೆ ಆದ ಒಪ್ಪಂದ.

ತಮ್ಮ ರಾಜ್ಯದಲ್ಲಿರುವ ಅಣೆಕಟ್ಟಿನ ನೀರನ್ನು ತಮಿಳುನಾಡು ಬಳಸುತ್ತಿರುವುದರ ಬಗ್ಗೆ ಕೇರಳಿಗರಿಗೆ ಆಕ್ರೋಶವಿಲ್ಲ. ಆದರೆ ಡ್ಯಾಮ್ ನ ನವೀಕರಣಕ್ಕೆ ತಮಿಳುನಾಡು ಸರ್ಕಾರ ಒಪ್ಪದೇ ಇರುವುದೇ ಕೇರಳಿಗರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲಿ ಒಂದು ಪ್ರಶ್ನೆ ಮೂಡಬಹುದು? ಹೊಸ ಆಣೆಕಟ್ಟು  ಕತ್ತೋದಕ್ಕೆ ತಮಿಳುನಾಡಿನ ಸರ್ಕಾರ ಏಕೆ ಅಡ್ಡಿ  ಮಾಡುತ್ತಿದೆ ಎಂದು. ಇಲ್ಲಿ ಒಂದು ಪ್ರಾಬ್ಲಮ್ ತಮಿಳುನಾಡಿನ ಸರ್ಕಾರಕ್ಕಿದೆ. ಅದು ಏನ್ ಎಂದರೆ ಒಂದು ವೇಳೆ ಮುಲ್ಲಾ ಪೇರಿಯಾರ ಡ್ಯಾಮನ್ನು ನವೀಕರಣ ಮಾಡೋದಕ್ಕೆ ಅವಕಾಶ ಕೊಟ್ಟರೆ, ತಮಿಳುನಾಡಿನ ಸರ್ಕಾರದ ಕೈಯಿಂದ ಆಣೆಕಟ್ಟು ಎಲ್ಲಿ ತಪ್ಪಿ ಹೋಗುತ್ತೋ ಎಂಬ ಭಯ ತಮಿಳುನಾಡಿ.ಹೀಗಾಗಿಯೇ ತಮಿಳುನಾಡಿನ ಸರ್ಕಾರ ಯಾರಿಗೆ ಏನಾದ್ರೂ, ನಮಗೆ ಏನು? ನಾವು ಚೆನ್ನಾಗಿದ್ದರೆ ಸಾಕು. ನೀರ್ ಬಂದ್ರ ಸಾಕು ಎಂಬ ಮನಸ್ಥಿತಿಯಲ್ಲಿ ಇದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Health

    ಕಿತ್ತಳೆ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಕಿತ್ತಳೆ ಒಂದು ರೀತಿಯ ಕಡಿಮೆ ಕ್ಯಾಲೋರಿ, ಹೆಚ್ಚು ಪೌಷ್ಟಿಕ ಸಿಟ್ರಸ್ ಹಣ್ಣು. ಆರೋಗ್ಯಕರ ಮತ್ತು ವೈವಿಧ್ಯಮಯ ಆಹಾರದ ಭಾಗವಾಗಿ, ಕಿತ್ತಳೆ ಹಣ್ಣುಗಳು ಬಲವಾದ, ಸ್ಪಷ್ಟವಾದ ಚರ್ಮಕ್ಕೆ ಕೊಡುಗೆ ನೀಡುತ್ತವೆ ಮತ್ತು ವ್ಯಕ್ತಿಯ ಅನೇಕ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣುಗಳು ಅವುಗಳ ನೈಸರ್ಗಿಕ ಮಾಧುರ್ಯ, ಲಭ್ಯವಿರುವ ಹಲವು ವಿಧಗಳು ಮತ್ತು ಬಳಕೆಯ ವೈವಿಧ್ಯತೆಯಿಂದಾಗಿ ಜನಪ್ರಿಯವಾಗಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಅವುಗಳನ್ನು ರಸ ಮತ್ತು ಮಾರ್ಮಲೇಡ್‌ಗಳಲ್ಲಿ ಸೇವಿಸಬಹುದು, ಅವುಗಳನ್ನು ಸಂಪೂರ್ಣವಾಗಿ ತಿನ್ನಬಹುದು, ಅಥವಾ ಕೇಕ್…

  • ವಿಜ್ಞಾನ

    ಐಐಟಿ ಪ್ರಯೋಗ ಯಶಸ್ವಿಗೊಂಡಿದ್ದು, ಇನ್ಮುಂದೆ ಕೋಳಿಯ ಬದಲು ಗಿಡದಲ್ಲಿ ಮೊಟ್ಟೆಗಳು ಬೆಳೆಯಲಿವೆ ,.!

    ನವದೆಹಲಿ, ಇಷ್ಟು ದಿನ ಮೊಟ್ಟೆ ಮಾಂಸಾಹಾರಿಯೋ,ಸಸ್ಯಾಹಾರಿಯೋ ಎಂಬ ವಾದ, ಪ್ರತಿವಾದಗಳು ಯಥೇಚ್ಚವಾಗಿ ನಡೆಯುತ್ತಿದ್ದವು. ಕೆಲವರು ಕೋಳಿಯ ಭ್ರೂಣವಾಗಿರುವುದರಿಂದ ಇದು ಮಾಂಸಾಹಾರ ಎಂದು ಹೇಳಿದರೆ, ಅದುಪೂರ್ತಿ ಕೋಳಿಯ ರೂಪು ಪಡೆದುಕೊಳ್ಳದ ಕಾರಣ ಅದು ಸಸ್ಯಾಹಾರಿ ಎಂದು ವಾದಿಸುವವರು ಅಧಿಕ ಸಂಖ್ಯೆಯಲ್ಲಿದ್ದರು. ಆದರೆ ಈಗ ಈ ಎಲ್ಲ ವಾದ ಪ್ರತಿವಾದಗಳಿಗೆ ಬ್ರೇಕ್​ ಹಾಕುವ ಮೂಲಕ ಶುದ್ಧ ಸಸ್ಯ ಜನ್ಯ ಮೊಟ್ಟೆಯನ್ನು ಬೆಳೆಯಬಹುದಾಗಿದೆ! ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ಟೆಕ್ನಾಲಜಿಯ (ಐಐಟಿ) ಸಂಶೋಧಕರು ಗಿಡದಲ್ಲಿಮೊಟ್ಟೆಯನ್ನು ಬೆಳೆದಿದ್ದಾರೆ. ನಾನ್​ ಸಾಯ್​, ಗ್ಲುಟೆನ್​ಮುಕ್ತವಾಗಿರುವ ಈ ಮೊಟ್ಟೆಯನ್ನು…

  • ಸುದ್ದಿ

    ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ….

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಶ್ರೀಗಳನ್ನೂ ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ…

  • ಸಿನಿಮಾ

    ಕೆಜಿಎಫ್ ಸಿನಿಮಾ ಈಗ ಎರಡು ಭಾಗಗಳಾಗಿ ತೆರೆಮೇಲೆ ಕಾಣಲಿದೆ …! ತಿಳಿಯಲು ಇದನ್ನು ಓದಿ….

    ಕರ್ನಾಟಕದಿಂದ ತಯಾರಾಗುತ್ತಿರುವ ಬಹು ವೆಚ್ಚದಾಯಕ ಸಿನಿಮಾ ಕೆಜಿಎಫ್ ಸಿನಿಮಾಇತ್ತೀಚಿನ ಸುದ್ದಿ ಆಗಿದೆ.ಮಾಸ್ಟರ್ ಪೀಸ್ ಮತ್ತು ಮಿ. ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸ್ಯಾಂಡಲ್ ವುಡ್ ಹಾಟ್ ಫೇವರಿಟ್ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ 2 ಭಾಗವಾಗಿ ತೆರೆಕಾಣಲಿದೆ.

  • ಸುದ್ದಿ

    ತಾಯಂದಿರು ಪರೀಕ್ಷೆ ಬರೆಯಲು ಹೋದಾಗ ಪೇದೆಗಳು ಮಾಡಿದ ಕೆಲಸವೇನು ಗೊತ್ತಾ?

    ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು…

  • Health

    ಮಂಡಿ ಮತ್ತು ಕೀಲು ನೋವು ಕಡಿಮೆ ಮಾಡುವ 9 ಆಹಾರಗಳು ಯಾವುದು ಗೊತ್ತಾ ,..!

    ಮಂಡಿನೋವು ಬಂದರೆ ಚಿಕಿತ್ಸೆ ಜತೆಗೆ ಆಹಾರಕ್ರಮದ ಬಗ್ಗೆ ಗಮನ ಹರಿಸಿದರೆ ಬೇಗನೆ ಗುಣಮುಖರಾಗಬಹುದು. ಇಲ್ಲಿ ಮಂಡಿ ನೋವು ಕಡಿಮೆ ಮಾಡುವ 9 ಆಹಾರಗಳ ಬಗ್ಗೆ ಹೇಳಿದ್ದೇವೆ, ಇವುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ ಆರೋಗ್ಯ ಮರಳಿ ಪಡೆಯಿರಿ.ಮಧ್ಯ ವಯಸ್ಸು ದಾಟುತ್ತಿದ್ದಂತೆ ಮಂಡಿ ನೋವು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಡೆಂಗೆ, ಚಿಕನ್‌ಗುನ್ಯಾ ಈ ರೀತಿಯ ಕಾಯಿಲೆಗಳು ಬಂದಾಗ ಕೂಡ ಮಂಡಿ ನೋವಿನ ಸಮಸ್ಯೆ ಕಾಡುವುದು. ಮಂಡಿ ನೋವಿನ ಸಮಸ್ಯೆ ಬಂದಾಗ ಚಿಕಿತ್ಸೆ ಜತೆ ಡಯಟ್‌ ಕಡೆ ಗಮನ ನೀಡಿದರೆ…