News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಉಪಯುಕ್ತ ಮಾಹಿತಿ

ಇದು ದಕ್ಷಿಣ ಭಾರತದ ವಾಟರ್ ಬಾಂಬ್.!ಈ ಆಣೆಕಟ್ಟು ಒಡೆದ್ರೆ, ಈ ಭಾಗದ ನಗರಗಳು ಗ್ಯಾರಂಟಿ ಜಲಸಮಾಧಿ.!

973

ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್  ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್  ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ…

ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ ದಕ್ಷಿಣ ಭಾರತದಲ್ಲೇ ಇದೆ ಈ ಅಪಾಯಕಾರಿ ಡ್ಯಾಮ್. ಅದು ಯಾವಾಗ ಬೇಕಿದ್ದರೂ ಒಡೆದು ಹೋಗಬಹುದು.

ಈ ಡ್ಯಾಮ್ ಇರುವುದೆಲ್ಲಿ.?

ಹೀಗೆ ಮನುಕುಲದ ವಿನಾಶಕ್ಕೆ ಕಾದುಕುಳಿತ ಆಧುನಿಕ ಯಮಧರ್ಮರಾಯ ನಂತಿರುವ ಈ ಡ್ಯಾಮ್ ನಮ್ಮ ಪಕ್ಕದಲ್ಲೇ ಇರುವ ಕೇರಳ ರಾಜ್ಯದಲ್ಲಿದೆ. ಇದು  ಒಡೆದು ಹೋದರೆ ಸಂಪೂರ್ಣವಾಗಿ ಜಲಸಮಾಧಿ ಆಗುವುದು ಗ್ಯಾರಂಟಿ. ಜಲ ರಾಕ್ಷಸನಂಟಿರುವ ಈ ಡ್ಯಾಮ್ ಹೆಸರೇ ಮುಲ್ಲಪೆರಿಯಾರ್.

ಒಂದು ವೇಳೆ ಹಾಗೆ ಏನು ಹಾಗೇನಾದ್ರೂ ಆದ್ರೆ ಸುಮಾರು ನಾಲ್ಕು ಜಿಲ್ಲೆಗಳಲ್ಲಿ ಜಲಪ್ರಳಯವೇ ನಡೆದು ಹೋಗುತ್ತೆ. ಇದು ಗೊತ್ತಿದ್ದರೂ ಸರ್ಕಾರಗಳು ಕೈಕಟ್ಟಿ ಕುಳಿತಿವೆ. ಜನರು ಮಾತ್ರ ಈ ಅಪಾಯದ ನಡುವೆ ಜೀವನ ಸಾಗಿಸುತ್ತಿದ್ದಾರೆ.

ಲಕ್ಷಾಂತರ ಜನಗಳ ಜೀವನವನ್ನು, ಬಲಿ ತೆಗೆದುಕೊಳ್ಳುವುದಕ್ಕೆ ಕೂತಿರುವ ಡ್ಯಾಮ್ ನ ಅಸಲಿ ಕಥೆ..!

ಈ ಅಣೆಕಟ್ಟು ನೂರಾರು ವರ್ಷಗಳಿಂದ ನಿರ್ಮಾಣವಾಗಿದೆ. ಇದು ಕೇರಳ ರಾಜ್ಯದಲ್ಲಿದ್ದರೂ ಈ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಮಾತರ ತಮಿಳುನಾಡಿನ ಜನ. ಈ ವಿಷಯದಲ್ಲಿ ನಿಮಗೆ ಒಂದು ಕನ್ಫ್ಯೂಸ್ ಆಗುತ್ತಿರುವುದು ಗ್ಯಾರೆಂಟಿ. ಏಕೆಂದರೆ ಮುಲ್ಲಪೆರಿಯಾರ್ ಡ್ಯಾಮ್ ಇರುವುದು ಕೇರಳದಲ್ಲಿ ಇದರ ನೀರನ್ನು ಬಳಸುತ್ತಿರುವುದು ತಮಿಳುನಾಡಿನ ಜನ. ಇದು ಹೇಗೆಂದು ನಿಮಗೆ ಕನ್ಫ್ಯೂಸ್ ಆಗದೆ ಇರಲ್ಲ. ಇದಕ್ಕೆ  ಮೂಲ ಕಾರಣ ಈ ಪೆರಿಯಾರ್ ನದಿ ಕೇರಳದ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಹುಟ್ಟುತ್ತದೆ. ಈ ನದಿಗೆ ಅಡ್ಡವಾಗಿ ಇಡುಕ್ಕಿ ಜಿಲ್ಲೆಯ ತೇಕಡಿ ಬಳಿ ಒಂದು ಡ್ಯಾಮನ್ನು ಕಟ್ಟಿದ್ದಾರೆ.

ತಮಿಳುನಾಡಿನಲ್ಲಿರುವುದು ಕೇವಲ 114 ಚದುರ ಕಿಲೋಮೀಟರ್!

ಹೀಗಾಗಿ ಇದಕ್ಕೆ ಮುಲ್ಲಪೆರಿಯಾರ್ ಅಣೆಕಟ್ಟು ಎಂದು ಹೆಸರಿಡಲಾಗಿದೆ. ಕೇರಳ ರಾಜ್ಯದಲ್ಲಿ ಅತಿ ಉದ್ದವಾದ ನದಿಯಾಗಿರುವ ಪೆರಿಯಾರ್, ತನ್ನ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೂ ಸುಮಾರು 244 ಕಿಲೋಮೀಟರ್ ಗಳ ವರೆಗೂ ಹರಿಯುತ್ತದೆ. ಒಟ್ಟು  5398 ಚದುರ ಕಿಲೋಮೀಟರ್ ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಪೈಕಿ 5284 ಚದುರ ಕಿಲೋಮೀಟರ್ ಕೇರಳದಲ್ಲಿದ್ದರೆ, ಉಳಿದ 114 ಚದುರ ಕಿಲೋಮೀಟರ್ ಗಳಷ್ಟು ಜಲಾನಯನ ಪ್ರದೇಶ ತಮಿಳುನಾಡಿನಲ್ಲಿದೆ. ಇದು ಬರೀ 114 ಚದುರ ಕಿಲೋಮೀಟರ್ ಅಂತ ನಿಮಗೆ ಅನ್ನಿಸಬಹುದು. ಆದ್ರೆ ನಾವು ಹೇಳಿದ್ದು  ಇದು ಜಲಾನಯನ ಪ್ರದೇಶ.

ಆದರೆ ಈ ಡ್ಯಾಮ್ ನ ಸಂಪೂರ್ಣ ಲಾಭವನ್ನು ತಮಿಳುನಾಡಿನ ಜನ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬ್ರಿಟಿಷರು. ಈಗಿನ ಕೇರಳ ರಾಜ್ಯ ಬ್ರಿಟಿಷರ ಕಾಲದಲ್ಲಿ ತಿರುವನಂತಪುರ ರಾಜನ ಆಳ್ವಿಕೆಯಲ್ಲಿತ್ತು. ಆಗ ಇಡೀ ತಮಿಳುನಾಡನ್ನು ಮದ್ರಾಸ್ ರಾಜ್ಯ ಎಂಬ ಹೆಸರಲ್ಲಿ ಬ್ರಿಟಿಷರು ಆಳುತ್ತಾ ಇದ್ದರು. ಇದೇ ಮದ್ರಾಸ್ ಪ್ರಾಂತ್ಯಕ್ಕೆ ನಮ್ಮ ಕರ್ನಾಟಕದ ಕೆಲವು ಭಾಗಗಳು ಕೂಡ ಸೇರಿದ್ದವು. ಹೀಗಾಗಿ ತಮಿಳುನಾಡಿನ ಜನಕ್ಕೆ ನೀರು ಕೊಡಲೆಂದು ಬ್ರಿಟಿಷರು ಈ ಮುಲ್ಲಪೆರಿಯಾರ್ ಅಣೆಕಟ್ಟನ್ನು ಆಗ ಕಟ್ಟಿದ್ದರು.

ಇವತ್ತು ಅದು ಕೇರಳಿಗರ ಪಾಲಿಗೆ ಮರಣ ಮೃದಂಗ ವಾಗಿದೆ. ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಅಂತ ಅಂದರೆ, ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ವಿವಾದದ ಮೂಲ ಕಾರಣ ಬ್ರಿಟಿಷರು. ಅಂದಿನ ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಪ್ರಾಂತ್ಯದ ನಡುವೆ ಸಾವಿರ 1924ರಲ್ಲಿ ಆದ ಒಪ್ಪಂದವೇ ಮೂಲ ಕಾರಣ.

ಮುಲ್ಲಪೆರಿಯಾರ್ ಡ್ಯಾಮ ನಿರ್ಮಾಣ

ಮುಲ್ಲಪೆರಿಯಾರ್ ಡ್ಯಾಮ ನಿರ್ಮಾಣ ವಾಗಿದ್ದು 1895. ಸಮುದ್ರ ಮಟ್ಟಕ್ಕಿಂತಲೂ ಸುಮಾರು 2890 ಅಡಿ ಎತ್ತರವಿದ್ದು, ಅರಬ್ಬಿ ಸಮುದ್ರದಿಂದ ಸುಮಾರು 130 ಕಿಲೋಮೀಟರ್ ಅಂತರದಲ್ಲಿದೆ. ಈ ಡ್ಯಾಮ್ ನಲ್ಲಿ ಸುಮಾರು 13ಟಿಎಂಸಿ ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ. ಸದ್ಯಕ್ಕೆ ಡ್ಯಾಮ್ನ ಹಿತದೃಷ್ಟಿಯಿಂದ ಸೆಂಟ್ರಲ್ ವಾಟರ್ ಕಮಿಷನ್ ಆದೇಶದಂತೆ ನೀರಿನ ಸಂಗ್ರಹಣೆಯ ಮಟ್ಟವನ್ನು 142 ಅಡಿಗಳಿಗೆ ನಿಯಂತ್ರಿಸಲಾಗಿದೆ.

ಕೇವಲ 50 ವರ್ಷ ಆಯಸ್ಸು!

ಈ ಡ್ಯಾಮ್ ಕಟ್ಟಿದಾಗ ಇದರ ಆಯಸ್ಸು ಐವತ್ತು ವರ್ಷಕ್ಕೆ ಎಂದು ಹೇಳಲಾಗಿತ್ತು. ಸುಣ್ಣ ಮತ್ತು ಗಾರೆಯನ್ನು ಬಳಸಿ ಕಟ್ಟಿರುವ ಈ ಡ್ಯಾಮ್ ನ ಭವಿಷ್ಯ ಹೆಚ್ಚು ಕಾಲ ಇರುವುದಿಲ್ಲ ಎಂದು, ಸ್ವತಹ ನಿರ್ಮಾಣ ಮಾಡಿದ ಬ್ರಿಟಿಷರಿಗೆ ನಂಬಿಕೆ ಇರಲಿಲ್ಲ. ಈ ಡ್ಯಾಮ್ ಪಕ್ಕದಲ್ಲೇ ಇನ್ನೊಂದು ಚಿಕ್ಕ ಡ್ಯಾಮ್ ಇದೆ. ಈ ಮುಲ್ಲಪೆರಿಯಾರ್ ಡ್ಯಾಮ್ ನಲ್ಲಿ ಸಂಗ್ರಹಿಸಿದ ನೀರನ್ನು ಈ ಚಿಕ್ಕ ಡ್ಯಾಮ್ ಮೂಲಕ ತಮಿಳುನಾಡಿಗೆ ಬಿಡಲಾಗುತ್ತದೆ.

ಕೇವಲ ಐವತ್ತು ವರ್ಷಗಳ ಕಾಲ ಅವದಿಗೆ ಅಂತ ಕಟ್ಟಿರುವ ಈ ಡ್ಯಾಮ್, ಈಗಾಗಲೇ ನೂರಿಪ್ಪತ್ತು ನಾಲ್ಕು ವರ್ಷಗಳನ್ನು ಕಳೆದಿದೆ. ಡ್ಯಾಮ್ ನಿರ್ಮಾಣಕ್ಕೆ ಬಳಸಿರುವ ಸುರುಕಿ ಕಳಚಿ ಬೀಳುತ್ತಿದ್ದು ಯಾವಾಗ ಬೇಕಾದರೂ ಮುಲ್ಲಪೆರಿಯಾರ್ ಒಡೆದು ಹೋಗಬಹುದೆಂಬ ಆತಂಕ ಎದುರಾಗಿದೆ. ನೀವು ಒಮ್ಮೆ ಯೋಚನೆ ಮಾಡಿ, ಒಂದು ವೇಳೆ 13 ಟಿಎಂಸಿ ನೀರು ಇರುವ ಈ ಆಣೆಕಟ್ಟು ಒಡೆದು ಹೋದರೆ, ಅದರ ಪಕ್ಕದಲ್ಲಿರುವ ಜನರ ಜೀವನದ ಕಥೆ ಏನಾಗುತ್ತೆ? ಯಾವ ಮಟ್ಟದಲ್ಲಿ ವಿನಾಶ ಸಂಭವಿಸಬಹುದು. ಅದು ಜಲಪ್ರಳಯಕ್ಕೆ ಸಮವಾದ ಅಂತೆ.

ಹೀಗಾಗಿ ಕೇರಳಿಗರು ಆತಂಕಕ್ಕೀಡಾಗಿದ್ದಾರೆ. ಒಂದು ವೇಳೆ ಈ ಡ್ಯಾಮ್  ಒಡೆದು ಹೋದರೆ ಕೇರಳದ ಕೊಚ್ಚಿನ್ ಸೇರಿದಂತೆ ಹಲವು ನಗರಗಳು ಕೊಚ್ಚಿ ಹೋಗುತ್ತವೆ. ಇದು ಕೇರಳದ ಹಲವಾರು ಜನಪರ ಸಂಘಟನೆಗಳ ಆತಂಕ ಮತ್ತು ಆಂದೋಲನಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕಿಂತ ಹೆಚ್ಚಾಗಿ ಡ್ಯಾಮಿನಿಂದ ಕೆಲವೇ ಅಂತರದಲ್ಲಿ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿ ಎರಡು ಭೂಕಂಪನ ಕೇಂದ್ರಗಳು ಪತ್ತೆಯಾಗಿರುವುದು ಜನರ ಆತಂಕಕ್ಕೆ ಮತ್ತಷ್ಟೂ ಕಾರಣವಾಗಿದೆ.

ನೀವು ಹೇಳಬಹುದು ಡ್ಯಾಮ್ ಹಳೆಯದಾಗಿದೆ, ತಾನೇ ಹೊಸದಾಗಿ ಕಟ್ಟಬಹುದು ಅಂತ. ಆದರೆ ಇಲ್ಲೇ ಇರುವುದು ಪ್ರಾಬ್ಲಮ್. ಯಾಕಂದ್ರೆ ಈ ಡ್ಯಾಮ್ ಕೇರಳ ರಾಜ್ಯದಲ್ಲಿ ಇದ್ದರೂ, ಇದರ ಸಂಪೂರ್ಣ ಲಾಭ ಪಡೆಯುತ್ತಿರುವುದು ಮಾತ್ರ ತಮಿಳುನಾಡು ಮತ್ತು ಸಂಪೂರ್ಣ ಅಧಿಕಾರ ಇರುವುದು ತಮಿಳುನಾಡಿನ ರಾಜ್ಯಕ್ಕೆ ಮಾತ್ರ. ಇದಕ್ಕೆ ಮೂಲ ಕಾರಣ ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋದ ನಂತರ ತಮಿಳುನಾಡು ಮತ್ತು ಕೇರಳದ ನಡುವೆ ಆದ ಒಪ್ಪಂದ.

ತಮ್ಮ ರಾಜ್ಯದಲ್ಲಿರುವ ಅಣೆಕಟ್ಟಿನ ನೀರನ್ನು ತಮಿಳುನಾಡು ಬಳಸುತ್ತಿರುವುದರ ಬಗ್ಗೆ ಕೇರಳಿಗರಿಗೆ ಆಕ್ರೋಶವಿಲ್ಲ. ಆದರೆ ಡ್ಯಾಮ್ ನ ನವೀಕರಣಕ್ಕೆ ತಮಿಳುನಾಡು ಸರ್ಕಾರ ಒಪ್ಪದೇ ಇರುವುದೇ ಕೇರಳಿಗರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲಿ ಒಂದು ಪ್ರಶ್ನೆ ಮೂಡಬಹುದು? ಹೊಸ ಆಣೆಕಟ್ಟು  ಕತ್ತೋದಕ್ಕೆ ತಮಿಳುನಾಡಿನ ಸರ್ಕಾರ ಏಕೆ ಅಡ್ಡಿ  ಮಾಡುತ್ತಿದೆ ಎಂದು. ಇಲ್ಲಿ ಒಂದು ಪ್ರಾಬ್ಲಮ್ ತಮಿಳುನಾಡಿನ ಸರ್ಕಾರಕ್ಕಿದೆ. ಅದು ಏನ್ ಎಂದರೆ ಒಂದು ವೇಳೆ ಮುಲ್ಲಾ ಪೇರಿಯಾರ ಡ್ಯಾಮನ್ನು ನವೀಕರಣ ಮಾಡೋದಕ್ಕೆ ಅವಕಾಶ ಕೊಟ್ಟರೆ, ತಮಿಳುನಾಡಿನ ಸರ್ಕಾರದ ಕೈಯಿಂದ ಆಣೆಕಟ್ಟು ಎಲ್ಲಿ ತಪ್ಪಿ ಹೋಗುತ್ತೋ ಎಂಬ ಭಯ ತಮಿಳುನಾಡಿ.ಹೀಗಾಗಿಯೇ ತಮಿಳುನಾಡಿನ ಸರ್ಕಾರ ಯಾರಿಗೆ ಏನಾದ್ರೂ, ನಮಗೆ ಏನು? ನಾವು ಚೆನ್ನಾಗಿದ್ದರೆ ಸಾಕು. ನೀರ್ ಬಂದ್ರ ಸಾಕು ಎಂಬ ಮನಸ್ಥಿತಿಯಲ್ಲಿ ಇದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಮನೆಯಲ್ಲಿರುವ ಇದನ್ನು ದಿನಕ್ಕೊಂದು ತಿಂದರೆ ಏನೆಲ್ಲಾ ಆಗುತ್ತೆ ಗೊತ್ತಾ!!!

    ಹಸಿ ತರಕಾರಿಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯ ಶಕ್ತಿ ದೊರೆಯುತ್ತದೆ ಎಂಬುದು ವೈದ್ಯಲೋಕ ತಿಳಿಸಿರುವ ಮಾಹಿತಿಯಾಗಿದೆ. ತರಕಾರಿಗಳನ್ನು ಬೇಯಿಸಿದಾಗ ಅದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದ್ದು ಆದಷ್ಟು ತರಕಾರಿಗಳನ್ನು ಹಸಿಹಸಿಯಾಗಿಯೇ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ಲಾಭ ನಿಮಗೇ ಉಂಟಾಗಲಿದೆ.

  • ಸುದ್ದಿ

    100 ಕೋಟಿ ಮೀರಿದ ಕುರುಕ್ಷೇತ್ರ ಸಂಭ್ರಮದಲ್ಲಿ ಕೇಕ್‌ ಕತ್ತರಿಸಿ ಆಚರಣೆ ಮಾಡಿದ ದರ್ಶನ್‌..!

    ದರ್ಶನ್‌ ಅಭಿಮಾನಿಗಳ ಬಳಗ ಇದನ್ನು ಅಧಿಕೃವಾಗಿ ಘೋಷಿಸಿಕೊಂಡಿದೆ. ‘ಕುರುಕ್ಷೇತ್ರ’ ಚಿತ್ರ ಬರೊಬ್ಬರಿ . 100 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದೆ. ಆ ಸಂಭ್ರಮಾಚರಣೆಯಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿ ದರ್ಶನ್‌ ಕೂಡ ಭಾಗಿಯಾಗಿದ್ದಾರೆ. ಇದೊಂದು ಖುಷಿ ವಿಚಾರ. ಅಧಿಕೃತವಾಗಿ ಇದರ ಗಳಿಕೆ ಎಷ್ಟು, ಏನು ಎನ್ನುವುದು ಗೊತ್ತಿಲ್ಲ. ಆದರೆ ಆರಂಭದಿಂದಲೇ ದಾಖಲೆ ಕಲೆಕ್ಷನ್‌ ಆಗುತ್ತಿರುವ ಬಗ್ಗೆ ಮಾಹಿತಿ ಇತ್ತು. ಆಗಾಗ ನಿರ್ಮಾಪಕರು ಸಿಕ್ಕಾಗಲೂ ಹೇಳುತ್ತಿದ್ದರು. ಈಗ ನಮ್ಮ ಚಿತ್ರ 100 ಕೋಟಿ ರೂ….

  • ಸಿನಿಮಾ

    ದರ್ಶನ್ ಯಶ್ ಸಹ ನನ್ನ ಎರಡು ಮಕ್ಕಳು ಆದ್ರೂ ನಾನು ಅವರನ್ನು ಕರೆಸಿಕೊಳ್ಳುವುದಿಲ್ಲ ಅಂತ ಸುಮಲತಾ ಹೇಳಿದ್ದೇಕೆ ಗೊತ್ತಾ..?

    ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನು ಏನು ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅವರು, “ದರ್ಶನ್ ಹಾಗೂ ಯಶ್ ನನ್ನ ಮನೆ ಮಕ್ಕಳು. ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನೇನೇ ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ. ಅಭಿಷೇಕ್ ನಿಂದ ನಿರೀಕ್ಷೆ ಮಾಡುವ ಎರಡರಷ್ಟು ನನ್ನಿಂದ ನಿರೀಕ್ಷೆ ಮಾಡಿ ಎಂದು ದರ್ಶನ್ ಹೇಳುತ್ತಾರೆ….

  • inspirational

    “ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು”

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸೇರಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಮತ್ತೆ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.ಇದೀಗ ಅವರು ಪದಯಾತ್ರೆ + ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ. ಪ್ರತಿಭಟನೆ ಹೇಗೆ ನಡೆಯುತ್ತಿದೆ? ಏಪ್ರಿಲ್ 8ರಿಂದ ಚಿತ್ತದುರ್ಗದಿಂದ ಬೆಂಗಳೂರಿಗೆ ಪದಯಾತ್ರೆ ಆರಂಭ ಏಪ್ರಿಲ್ 21ಕ್ಕೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ ನಂತರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಯೋಜನೆ ನೌಕರರ ಪ್ರಮುಖ ಬೇಡಿಕೆಗಳು ಸಾರಿಗೆ ನೌಕರರು ಸರ್ಕಾರದ ಮುಂದೆ ಇಟ್ಟಿರುವ ಪ್ರಮುಖ ಬೇಡಿಕೆಗಳು: 38 ತಿಂಗಳ…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ

    ಕೋಲಾರ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯ, ಹೊಳೂರು ಹೋಬಳಿ, ನಾಯಕರಹಳ್ಳಿ ಗ್ರಾಮದ ಮುಬಾರಕ್ ಪಾಷ ಬಿನ್ ಅಜೀಜ್‌ಸಾಬಿ ಎಂಬಾತನು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಕೋಲಾರ ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಬೈರರವರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಸ್ಪೇಷಲ್ ಸಿ. (ಪೋಕ್ಸೋ) ಪ್ರಕರಣದ ಸಂಖ್ಯೆ: 70/2022ರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಶ್ರೀ…

  • ಸುದ್ದಿ

    ಅಪ್ಪಟ ರಾಪ್ಟ್ರೀಯವಾದಿ,ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇನ್ನಿಲ್ಲ….!

    ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮೋದಿ ಸಂಪುಟದಿಂದಲೂ ಹೊರಗೆ ಉಳಿದಿದ್ದರು.ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆ ಕಾರಣಕ್ಕೆ ಮೋದಿ ಸಂಪುಟದಿಂದಲೂ ಸ್ವರಾಜ್  ಹೊರಗೆ ಉಳಿದಿದ್ದರು. 1952 ರ ಫೆಬ್ರವರಿ 14 ರಂದು ಜನಿಸಿದ್ದ ಅವರಿಗೆ  67 ವರ್ಷ ವಯಸ್ಸಾಗಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದಾಗ ಕ್ಯಾಬಿನೆಟ್ ನಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಕರ್ನಾಟಕದೊಂದಿಗೂ ನಿಕಟ ಸಂಪರ್ಕ ಹೊಂದಿದ್ದ ಸುಷ್ಮಾ…