ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಟ್ರೂ ಕಾಲರ್ ಬಳಕೆ ಮಾಡುತ್ತಿದ್ದೀರಾ ಹಾಗಾದರೆ ನಿಮಗೊಂದು ಆಚ್ಚರಿಯ ಸಂಗತಿ ಏನೆಂದು ತಿಳಿಯೋಣ ಬನ್ನಿ. ನಿವೇನಾದ್ರು ಟ್ರೂ ಕಾಲರ್ ಬಳಕೆ ಮಾಡ್ತಿದ್ರೆ ಅದನ್ನು ಈಗಲೇ ಡಿಲಿಟ್ ಮಾಡುವುದು ಒಳ್ಳೆಯದು. ಯಾಕೆಂದರೆ ಟ್ರೂ ಕಾಲರ್ ನಿಜಕ್ಕೂ ಅಷ್ಟು ಸೇಫ್ಟಿ ಇಲ್ಲ. ನಮ್ಮ ಭಾರತದಲ್ಲಿ 99% ರಷ್ಟು ಜನ ಅಂದರೆ 100 ರಲ್ಲಿ 99 ರಷ್ಟು ಜನ ಟ್ರೂ ಕಾಲರ್ ತಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಆದರೆ ಈ ಒಂದು ಟ್ರೂ ಕಾಲರ್ ಎಷ್ಟರಮಟ್ಟಿಗೆ ಸುರಕ್ಷಿತ ಅಂತಾ ನಿಮಗೆ ಗೊತ್ತಿಲ್ಲ.
ಈ ಒಂದು ಟ್ರೂ ಕಾಲರ್ ಸಾಕಷ್ಟು ಸಮಸ್ಯೆ ಮಾಡುತ್ತದೆ. ಆದರೆ ನೀವು ಹೇಳಬಹುದು ಟ್ರೂ ಕಾಲರ್ ನಿಂದ ನಮಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ ಎಂದು, ಆದರೆ ಟ್ರೂ ಕಾಲರ್ ನಿಜಕ್ಕೂ ಭಯಂಕರ ಏಕೆ ಅಂತ ಒಂದೆರಡು ಉದಾಹರಣೆ ಕೊಡುತ್ತೇನೆ.
ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲಾ ಸಂಪರ್ಕಗಳನ್ನ ಈ ಟ್ರೂ ಕಾಲರ್ ತನ್ನ ಸರ್ವರ್ ಗೆ ಕಾಪಿ ಮಾಡಿಕೊಳ್ಳುತ್ತದೆ. ಹಾಗೆ ಈ ಒಂದು ಕಾಪಿ ಮಾಡಿಕೊಂಡಿರುವ ಕಾಂಟ್ಯಾಕ್ಟ್ಸ್ ದೊಡ್ಡ ದೊಡ್ಡ ಕಂಪೆನಿಗಳಿಗೆ 10 ರಿಂದ15 ರೂಪಾಯಿಗೆ ಅಂದರೆ ಒಂದೊಂದು ನಂಬರಗಳನ್ನು 10 ರಿಂದ15 ರೂಪಾಯಿಗೆ ಇವರು ಸೇಲ್ ಮಾಡುತ್ತಾರೆ. ಹೀಗೆ ನಂಬರ್ ಪಡೆದುಕೊಂಡು ಏನು ಮಾಡ್ತಾರೆ ಮತ್ತು ಇವರಿಗೆ ಏನೂ ಸಿಗುತ್ತೆ ಅಂತ ನೀವು ಅಂದುಕೊಳ್ಳಬಹುದು, ಹೀಗೆ ನಂಬರ್ ಖರೀದಿ ಮಾಡಿ ಅವರು ಹಲವಾರು ರೀತಿಯ ಇನ್ಸುರೆನ್ಸ್ ಮತ್ತು ಪ್ರಾಡೆಕ್ಟ್ಸ್ ಹಲವು ರೀತಿಯ ಆಫರ್ ಗಳನ್ನು ಸಹ ಕಂಪನಿಯವರು ನಿಮಗೆ ಕಳಿಸುತ್ತಿರುತ್ತಾರೆ ಇದೆಲ್ಲವೂ ಸಹ ಒಂದು ಜಾಹಿರಾತಿನ ರೀತಿಯಲ್ಲಿ ಕೆಲಸ ಮಾಡುತ್ತೆ. ಇದು ಒಂದು ರೀತಿ ಆಯ್ತು.ಇದನ್ನು ಹೇಗೋ ಒಪ್ಪಿಕೊಳ್ಳೋಣ ಬಿಡಿ.
ಆದರೆ ಇನ್ನೊಂದು ಭಯಂಕರ ಸಂಗತಿ ಏನೆಂದರೆ, ನಿಮ್ಮ ಖಾತೆಗೆ ಖನ್ನ ಹಾಕುವ ಕೆಲಸವನ್ನು ಸಹ ಟ್ರೂ ಕಾಲರ್ ನಿಮಗೆ ತಿಳಿಸದ ಹಾಗೆ ಮಾಡುತ್ತದೆ. ಇತ್ತೀಚಿನ ಒಂದೆರಡು ವರದಿ ಪ್ರಕಾರ ಹೇಳುವುದಾದರೆ. ಇತ್ತೀಚೆಗೆ ನಡೆದ ಒಂದು ಸಮೀಕ್ಷೆ ಪ್ರಕಾರ ನಿಮ್ಮ ಟ್ರೂ ಕಾಲರ್ ಅಂದರೆ ಯು ಪಿ ಐ ಪಿನ್ ಏನಿದೆ ಅದನ್ನ ನಿಮಗೆ ಕೇಳದೆ ಆಕ್ಟಿವೇಟ್ ಮಾಡಿದೆ.
ನೀವೇನಾದರೂ ಅಪ್ಪಿತಪ್ಪಿಯೂ ಯು ಪಿ ಐ ಪಿನ್ನನ್ನು ಅಂದರೆ ನಿಮ್ಮ ಭೀಮ್ ಆಪ್ ಏನಿದೆ ನಿಮ್ಮ ಒಂದು ಯು ಪಿ ಐ ಪಿನ್ನನ್ನು ನಿಮ್ಮ ಟ್ರೂ ಕಾಲರ್ ಜೊತೆ ಉಪಯೋಗ ಮಾಡಿಕೊಂಡರೆ ಖಂಡಿತ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವು ಸಹ ಖಾಲಿಯಾಗುವುದು ಗ್ಯಾರಂಟಿ. ಆದ್ರೆ ಈ ಸೇವೆಯನ್ನ ಟ್ರೂ ಕಾಲರ್ ನಿಮಗೆ ಕೇಳದೆ ನಿಮ್ಮ ಅನುಮತಿ ಪಡೆಯದೇ ನಿಮ್ಮ ಮೊಬೈಲ್ ನಲ್ಲಿ ಆಕ್ಟಿವ್ ಮಾಡ್ತಿದೆ.
ಟ್ರೂ ಕಾಲರ್ ಅಷ್ಟೊಂದು ಸೇಫ್ಟಿ ಅಲ್ಲ. ಈಗಾಗಲೇ ಟ್ರೂ ಕಾಲರ್ ತನ್ನ ಎಲ್ಲಾ ದತ್ತಾಂಶವನ್ನು ಬೇರೆ ವಿವಿಧ ಕಂಪನಿಗಳಿಗೆ ಮಾರಾಟ ಮಾಡಿರುವುದು ಈಗಾಗಲೇ ಬಯಲಾಗಿದೆ. ಟ್ರೂ ಕಾಲರ್ ಏನಾದರೂ ಯು ಪಿ ಐ ಪಿನ್ ಜೊತೆ ಆಕ್ಟಿವೇಟ್ ಮಾಡಿಕೊಂಡರೆ ನೀವು ಅದರಲ್ಲಿ ಹಣ ವರ್ಗಾವಣೆ ಮಾಡಲು ಏನಾದರೂ ನೀವು ಪ್ರಯತ್ನ ಪಟ್ಟರೆ ಖಂಡಿತ ನಿಮ್ಮ ಖಾತೆಯಲ್ಲಿರುವ ಸಾಕಷ್ಟು ಮೊತ್ತ ಪರರ ಪಾಲಾಗುವುದಂತೂ ಸತ್ಯ. ನಿಮಗೆ ತಿಳಿಯದೆ ಏನಾದ್ರು ಯು ಪಿ ಐ ಪಿನ್ ಏನಾದ್ರು ಆಕ್ಟಿವೇಟ್ ಆಗಿದ್ರೆ ನಿಮ್ಮ ಒಂದು ಟ್ರೂ ಕಾಲರ್ ನಲ್ಲಿ ಚೆಕ್ ಮಾಡಿಕೊಳ್ಳಿ .
ಏಕೆಂದರೆ ಎಷ್ಟೋ ಜನ ಗೂಗಲ್ ಪ್ಲೇಸ್ಟೋರಲ್ಲಿ ಅಪಡೆಟ್ ಮಾಡಿದ ಮೇಲೆ ಸಾಕಷ್ಟು ಜನಕ್ಕೆ ಈತರ ಸಮಸ್ಯೆ ಉಂಟಾಗಿದೆ. ನಿಮಗೂ ಏನಾದರೂ ಈ ಸಮಸ್ಯೆ ಉಂಟಾಗಿದ್ರೆ ಕೂಡಲೆ ಆ ಸೆಟ್ಟಿಂಗ್ಸಗೆ ಹೋಗಿ ಅದೆಲ್ಲವನ್ನು ಸಹ ಪರಿಶೀಲನೆ ಮಾಡಿಕೊಳ್ಳಿ. ನನ್ನ ಪ್ರಕಾರ ಹೇಳುವುದಾದರೆ ಈ ಟ್ರೂ ಕಾಲರ್ ಎನ್ನುವುದು ನಿಜಕ್ಕೂ ಉತ್ತಮ ಆ್ಯಪ್ ಅಲ್ಲವೇ ಅಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು: ನಮ್ಮ ಆರೋಗ್ಯ ಉತ್ತಮ ವಾಗಿರಲು ಇವು ಮುಖ್ಯ 1. ಬಿಪಿ: 120/80 2. ನಾಡಿ: 70 – 100 3. ತಾಪಮಾನ: 36.8 – 37 4. ಉಸಿರು: 12-16 5. ಹಿಮೋಗ್ಲೋಬಿನ್: ಪುರುಷ -13.50-18 ಹೆಣ್ಣು – 11.50 – 16 6. ಕೊಲೆಸ್ಟ್ರಾಲ್: 130 – 200 7. ಪೊಟ್ಯಾಸಿಯಮ್: 3.50 – 5 8. ಸೋಡಿಯಂ: 135 – 145 9. ಟ್ರೈಗ್ಲಿಸರೈಡ್ಗಳು: 220 10. ದೇಹದಲ್ಲಿನ ರಕ್ತದ…
ಎದೆಯುರಿಯು ಸಾಮಾನ್ಯ ಜೀರ್ಣ ಸಮಸ್ಯೆಯಾಗಿದೆ. ಅದನ್ನು ಆಮ್ಲ ಹಿಮ್ಮುಖ ಹರಿವು ಎಂದೂ ಕರೆಯಲಾಗುತ್ತದೆ ಮತ್ತು ಜಠರಾಮ್ಲವು ಅನ್ನನಾಳದಲ್ಲಿ ದೂಡಲ್ಪಟ್ಟಾಗ ಈ ಸಮಸ್ಯೆಯು ಉದ್ಭವವಾಗುತ್ತದೆ. ನಿದ್ರೆಯ ಕೊರತೆ,ಸೂಕ್ತವಲ್ಲದ ಆಹಾರ,ಧೂಮ್ರಪಾನ,ಸೋಂಕು ಇತ್ಯಾದಿಗಳು ಎದೆಯುರಿಯನ್ನುಂಟು ಮಾಡುತ್ತವೆ. ಇದರಿಂದ ಪಾರಾಗಲು ಕೆಲವು ಸರಳ ಉಪಾಯಗಳಿಲ್ಲಿವೆ. ►ಆಗಾಗ್ಗೆ ಸಣ್ಣ ಊಟಗಳನ್ನು ಮಾಡಿ ಸಣ್ಣ ಊಟಗಳನ್ನು ಆಗಾಗ್ಗೆ ಮಾಡುವುದು ಎದೆಯುರಿಯಿಂದ ಪಾರಾಗಲು ಅತ್ಯಂತ ಸರಳ ಉಪಾಯವಾಗಿದೆ. ಏಕೆಂದರೆ ನಾವು ಒಂದೇ ಬಾರಿಗೆ ಅತಿಯಾಗಿ ಆಹಾರ ಸೇವಿಸುವುದರಿಂದ ಕೆಳ ಅನ್ನನಾಳದ ಭಾಗದಲ್ಲಿರುವ ಕವಾಟದಂತಹ ಸ್ನಾಯು ‘ಸ್ಫಿಂಕ್ಟರ್ (ಎಲ್ಇಎಸ್)…
ಶನಿವಾರ ಆರಂಭವಾದ ರಾಜೀನಾಮೆ ಪರ್ವ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದರೂ ಸೋಮವಾರ ಮತ್ತೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಅಮೆರಿಕ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಆಗಮಿಸಿದ್ದು ಡ್ಯಾಮೇಜ್ ಕಂಟ್ರೋಲ್ ಗೆ ಇರುವ ತಂತ್ರಗಳನ್ನು ಮೊದಲು ಹುಡುಕುತ್ತಿದ್ದಾರೆ. ಕುಮಾರಸ್ವಾಮಿ ವಿಮಾನ ನಿಲ್ದಾಣದಿಂದ ಬಂದವರೆ ತಕ್ಷಣ ಸಭೆ ಮೇಲೆ ಸಭೆ ಆರಂಭಿಸಿದರು. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಪರಮೇಶ್ವರ ಸೇರಿದಂತೆ ಎಲ್ಲ ಪ್ರಮುಖರು ಅತೃಪ್ತರ ಸವಾಲು ಮೆಟ್ಟಿ ನಿಲ್ಲಲು ಏನು ಮಾಡಬೇಕು ಎಂದು ಚರ್ಚೆ ನಡೆಸಿದರು. ಆದರೆ…
ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.
ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಇಬ್ಬರೂ ಕನಸುಗಳನ್ನು ಕಾಣುತ್ತಾರೆ. ಆದರೆ…ತಮ್ಮ ಇಚ್ಚೆಗೆ ವಿರುದ್ಧವಾಗಿ ಮದುವೆಯಾದಲ್ಲಿ ಜೀವನ ಪರ್ಯಂತ ಚಿಂತಿಸುತ್ತಾರೆ.