ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಟಾಣಿ ತಿಂದ್ರೆ ವಾಯು ಬರತ್ತೆ ಅನ್ನೋರೆಲ್ಲಾ ಇಲ್ಕೇಳಿ. ಬಟಾಣಿ ಗಿಡ ನಮ್ ದೇಶದಲ್ಲಿ ಹುಟ್ಟಿದಲ್ಲ. ಇದು ವಿಚಿತ್ರವಾಗಿರೋ ಗಿಡಗಳ ಸಾಲ್ನಲ್ಲಿ ಸೇರತ್ತೆ. ಆದ್ರೂ ಕೂಡಾ ಇದ್ರ ಉಪಯೋಗ ಇದ್ಯಲ್ಲಾ ಅದು ಒಂದೆರಡಲ್ಲ. ಇದ್ರಲ್ಲಿರೋ ಪಿಷ್ಟ ಇದ್ನ ಸಿಹಿಯಾಗಿರೋವಾಗೆ ಮಾಡ್ಸತ್ತೆ. ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರನ್ನ ಗುಣಪಡ್ಸತ್ತೆ.

ಅಷ್ಟಲ್ಲದೇ ಉರಿಯೂತಕ್ಕೆ ಸಂಬಂಧಿಸಿದ ಯಾವ್ದೇ ತರದ ತೊಂದ್ರೆ ಇದ್ರೆ ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಕಮ್ಮಿ ಮಾಡ್ಸತ್ತೆ. ಪ್ರೋಟೀನ್ ಮತ್ತೆ ನಾರಿನ ಅಂಶ ಸಕ್ಕತ್ತಾಗಿ ಇರೋದ್ರಿಂದ ಮಧುಮೇಹ ಕಾಯಿಲೆಯನ್ನ ಕಮ್ಮಿ ಮಾಡ್ಸತ್ತೆ.
ಇದೇ ತರ ಇನ್ನೂ 09 ಉಪಯೋಗಗಳಿದೆ
1. ಇದ್ರಲ್ಲಿರೋ ಪೌಷ್ಟಿಕಾಂಶಗಳು ಮಂಡಿ ನೋವು ಕಮ್ಮಿಮಾಡತ್ತೆ:-
ಬಟಾಣಿಗಳಲ್ಲಿ ಬೇರೆ ಬೇರೆ ತರದ ಬಟಾಣಿಗಳಿವೆ. ಫ್ಲಾವನೊಯ್ಡ್ ಗುಂಪಿನ ಬಟಾಣಿಗಳಲ್ಲಿ ಕ್ಯಟಾಚಿನ್ ಮತ್ತೆ ಎಪಿಕ್ಯಟಾಚಿನ್ ಅನ್ನೋ ಆಂಟಿ ಆಕ್ಸಿಡೆಂಟ್ ಇದೆಯಂತೆ.

ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮಿನ್ರಲ್, ಜಿಂಕ್, ಒಮೆಗಾ 3 ಫ್ಯಾಟಿ ಆಸಿಡ್, ಇದೆಲ್ಲದ್ರ ಭಂಡಾರಾನೇ ಬಟಾಣಿಗಳಲ್ಲಿ ಅಡ್ಗಿದೆಯಂತೆ. ಇದೆಲ್ಲದ್ರ ಸಹಾಯದಿಂದ ಮಧುಮೇಹ , ಹೃದಯದ ತೊಂದ್ರೆ , ಮಂಡಿ ನೋವ್ಗಳನ್ನ ಕಮ್ಮಿ ಮಾಡ್ತದಂತೆ.
2. ರಕ್ತದಲ್ಲಿರೋ ಸಕ್ಕರೆ ಪ್ರಮಾಣ ಕಮ್ಮಿ ಮಾಡತ್ತೆ:-
ರಕ್ತದಲ್ಲಿರೋ ಸಕ್ಕರೆ ಪ್ರಮಾಣವನ್ನ ಕಮ್ಮಿ ಮಾಡ್ಸಕ್ಕೆ ಬಟಾಣಿ ಒಂದೊಳ್ಳೆ ಆಹಾರ ಅಂತ ಕೆಲ್ವು ಆಹಾರ ತಜ್ಞರು ಹೇಳಿದ್ದನ್ನ ಕೇಳಿದ್ ನೆನಪಿದೆ. ಆದ್ರೆ ಹೇಗ್ ಕಮ್ಮಿ ಮಾಡ್ಸತ್ತೆ ಅಂತ ಗೊತ್ತಿರ್ಲಿಲ್ಲ.

ಇವಾಗ ಗೊತ್ತಾಗಿದ್ ಹೊಸ್ ವಿಷ್ಯ ಎನಂದ್ರೆ ಇದ್ರಲ್ಲಿರೋ ಪ್ರೋಟೀನ್ ಮತ್ತೆ ನಾರಿನ ಅಂಶ ಪಿಷ್ಟವನ್ನ ತುಂಡ್ಮಾಡಿ ಕಾರ್ಬೋಹೈಡ್ರೇಟ್ಸಗಳನ್ನ ಜೀರ್ಣಾಂಗವ್ಯೂಹದ ಕಡೆಗೆ ತಳ್ಳತ್ತೆ. ಈ ಕಾರ್ಬೋಹೈಡ್ರೇಟ್ಸಗಳು ರಕ್ತದಲ್ಲಿರೋ ಸಕ್ಕರೆಯ ಪ್ರಮಾಣಾನ ಕಡ್ಮೆ ಮಾಡ್ಸತ್ತೆ.
3. ಇದ್ರಲ್ಲಿರೋ ವಿಟಮಿನ್ ಬಿ ಅಂಶ ಹೃದಯ ಚನ್ನಾಗಿ ಕೆಲಸ ಮಾಡೋ ಹಾಗೆ ನೋಡ್ಕೊಳತ್ತೆ:-
ಹಾಳು ಮೂಳನ್ನೆಲ್ಲಾ ತಿಂದು ಹೊಟ್ಟೆ ಬರ್ಸಕೊಂಡು ಆಮೇಲೆ ನಿಧಾನವಾಗಿ ಬೇಡ್ದೇ ಇರೋ ಕೊಬ್ಬನ್ನ ಹೆಚ್ಸಿಕೊಂಡ್ರೆ ಹೃದಯದ ಕಾಯ್ಲೆ ಸಾಮಾನ್ಯ. ಬಟಾಣಿಯಲ್ಲಿರೋ ನಿಯಾಸಿನ್ ಅನ್ನೋ ಅಂಶ ಈ ಕೆಟ್ಟ್ ಕೊಬ್ಬನ್ನ ಕರ್ಗಸತ್ತೆ. ಇದ್ರ ಜೊತೆಗೆ ನಾನು ಸಾಥ್ ಕೊಡ್ತೀನಿ ಅಂತ ಒಮೆಗಾ 3 ಫ್ಯಾಟಿ ಆಸಿಡ್ ಬೇರೆ ಇದೆ. ಕೆಟ್ಟ್ ಕೊಬ್ಬಿನ ಜೊತೆ ಹೋಮೋ ಸಿಸ್ಟಿನ್ ಅನ್ನೋದ್ಬೇರೆ ಕೂಡ್ಕಂಡು ತುಂಬಾನೇ ತೊಂದ್ರೆ ಕೊಡತ್ತೆ.
4. ಆಂಟಿ ಆಕ್ಸಿಡೆಂಟ್ಸ್ ಸಹಾಯದಿಂದ ಹೊಟ್ಟೆ ಕ್ಯಾನ್ಸರ್ ಬರೋದನ್ನ ತಡೆಗಟ್ಟತ್ತೆ:-
ಒತ್ತಡ ಮತ್ತು ತಲೆಬಿಸಿ ಜಾಸ್ತಿ ಮಾಡ್ಕೊಳೋದ್ರಿಂದ ಕ್ಯಾನ್ಸರ್ ಬೆಳೀಬೋದು. ನಿಮ್ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಕಮ್ಮಿ ಇದ್ರೆ ಈ ಸಮಸ್ಯೆನಾ ಪರಿಹರ್ಸಕ್ಕೆ ಆಗಲ್ಲ.

ಆಗ್ಲೇ ಹೇಳ್ದಾಗೆ ಬಟಾಣಿ ಆಂಟಿ ಆಕ್ಸಿಡೆಂಟ್ಗಳ ಭಂಡಾರಾವೇ ಆಗಿರೋದ್ರಿಂದ ಹೊಟ್ಟೆ ಕ್ಯಾನ್ಸರ್ ಇಂದ ನಮ್ಮನ್ನ ಕಾಪಾಡತ್ತೆ.
5. ಬಟಾಣೀಲಿ ಕ್ಯಾಲೋರಿ ಕಮ್ಮಿ ಇರೋದ್ರಿಂದ ತೂಕ ಇಳಿಸ್ಕೊಳಕ್ಕೆ ಸಹಾಯ ಮಾಡತ್ತೆ:-
ಒಳ್ಳೆ ಪೋಷಕಾಂಶ ಮತ್ತೆ ಕಮ್ಮಿ ಕ್ಯಾಲೋರಿಯನ್ನ ಹೊಂದಿರೋ ಬಟಾಣಿ ನಿಮ್ ತೂಕ ಇಳ್ಸೋದ್ರಲ್ಲಿ ಅನುಮಾನಾನೇ ಇಲ್ಲ. ಒಂದು ಕಪ್ ಬಟಾಣಿಯಲ್ಲಿ ಸುಮಾರು 118 ಕ್ಯಾಲೋರಿಗಳು ಮಾತ್ರ ಇರತ್ತೆ. ಹಾಗೇ ನೀವ್ ಬಟಾಣಿ ತಿಂದಾದ್ಮೇಲೆ ಇನ್ನೇನ್ ತಿನ್ನೋಕೂ ಮನ್ಸ್ ಬರಲ್ಲ. ಯಾಕಂದ್ರೆ ನಿಮ್ ಹೊಟ್ಟೆ ಅದಾಗ್ಲೇ ತುಂಬಿರತ್ತೆ. ಬಟಾಣಿಗೆ ಸ್ವಲ್ಪ ಮಟ್ಟಿಗೆ ಉಪ್ಪನ್ನ ಹಾಕ್ಬಿಟ್ಟು ತಿಂದ್ರೆ ಸಕ್ಕತ್ತಾಗ್ ಶಕ್ತಿನೂ ಸಿಗತ್ತೆ.

6. ಇದ್ರಲ್ಲಿರೋ ನಾರಿನಂಶ ಹೊಟ್ಟೆ ಕಟ್ಕೊಳ್ದೆ ಇರೋ ಹಾಗೆ ನೋಡ್ಕೊಳತ್ತೆ:-
ಮಲಬದ್ದತೆ ಇದ್ಯಲ್ಲಾ… ಅದು ಎಲ್ಲಾ ಕಾಯ್ಲೆಗೂ ಇಲ್ ಜಾಗ ಇದೆ ಬಾರಪ್ಪಾ ಅನ್ನತ್ತೆ. ಬಟಾಣಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರೋದ್ರಿಂದ ಎಷ್ಟೋ ದಿನ್ಗಳಿಂದ ಕೂಡ್ಕಂಡಿರೋ ತ್ಯಾಜ್ಯಗಳನ್ನ ಹೊರ್ಗಹಾಕ್ಲಿಕ್ಕೆ ಸಹಾಯ ಮಾಡತ್ತೆ. ಹಾಗೇ ಬಟಾಣಿ ಜೀರ್ಣಾಂಗ ವ್ಯವಸ್ಥೆಗೆ ತುಂಬಾನೇ ಸಾಥ್ ಕೊಡೋದೂ ಇದಕ್ಕೆ ಕಾರಣ ಇರ್ಬೋದು.
7. ಕೂದಲಿನ ಅಂದ ಕಾಪಾಡೋಕೆ ಇದ್ರಲ್ಲಿರೋ ವಿಟಮಿನ್ ಬಿ ಸಹಾಯ ಮಾಡತ್ತೆ:-
ಬಟಾಣಿಯಲ್ಲಿರೋ ವಿಟಮಿನ್ ಬಿ , ಫೋಲೆಟ್ , ವಿಟಮಿನ್ ಬಿ 6 ಕೂದಲು ಬೇರಿನಿಂದ ಗಟ್ಟಿಯಾಗೋ ಹಾಗೆ ನೋಡ್ಕೊಳತ್ತೆ. ವಿಟಮಿನ್ ಸಿ ಅನ್ನೋದು ಕೂದ್ಲು ಉದ್ರದೇ ಇರೋ ಹಾಗೆ ಕಾಪಾಡತ್ತೆ.

8.ಆಗಾಗ ಹುಷಾರ್ ತಪ್ಪಿ ಬೀಳದೆ ಇರೋ ಹಾಗೆ ನೋಡ್ಕೊಳತ್ತೆ:-
ನಮ್ ದೇಹದಲ್ಲಿರೋ ವ್ಯಾಧಿ ಕ್ಷಮತ್ವ ನಿರ್ಧಾರ ಆಗೋದೇ ವಿಟಮಿನ್ ಎ ಮೂಲಕ. ಒಂದು ತಟ್ಟೇ ಬಟಾಣಿಯಲ್ಲಿ ಸುಮಾರು 22 % ವಿಟಮಿನ್ ಎ ನಮ್ ದೇಹಕ್ಕೆ ಸಿಗತ್ತಂತೆ. ಅದ್ಕೊಸ್ಕರ ಇಮ್ಯುನಿಟಿ ಇಲ್ಲಾಂತ ಕೊರಗ್ಬೇಡಿ. ಬಟಾಣಿ ತಿನ್ನಿ. ಉಸಿರಾಟದ ತೊಂದ್ರೆ ಆಗ್ದೆ ಇರಕ್ಕೂ ವಿಟಮಿನ್ ಎ ಬೇಕಾಗತ್ತೆ.
9. ಚರ್ಮ ಹೊಳಿಯೋ ಹಾಗೆ ಮಾಡಿ ಚಿಕ್ಕೋರ ತರ ಕಾಣೋಹಾಗೆ ಮಾಡತ್ತೆ:-

ನಮ್ ದೇಹದಲ್ಲಿ ಫ್ರೀ ರಾಡಿಕಲ್ ಅನ್ನೋ ಅಂಶ ಇಲ್ದೇ ಹೋಗಿದ್ರೆ ಬಿಸ್ಲು , ಚಳಿ , ಮಳೆಯಂತ ನಮ್ ಚರ್ಮ ಬೇಗನೇ ಸುಕ್ಕು ಗಟ್ತಿತ್ತು. ಬಟಾಣಿಯಲ್ಲಿರೋ ಆಂಟಿ ಆಕ್ಸಿಡೆಂಟ್ ಈ ಫ್ರೀ ರಾಡಿಕಲ್ಗಳ ಆಯಸ್ಸು ಮತ್ತು ಅದ್ರ ಶಕ್ತಿಯನ್ನ ಜಾಸ್ತಿ ಮಾಡ್ಸತ್ತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಪ್ರಪಂಚದಲ್ಲಿ ಅದೆಷ್ಟೋ ನಿಗೂಢಗಳು ಇನ್ನು ಇದೆ ಮತ್ತು ಆ ನಿಗೂಢಗಳನ್ನ ಭೇದಿಸಲು ಮನುಷ್ಯನಿಂದ ಇನ್ನು ಕೂಡ ಸಾಧ್ಯವಾಗಿಲ್ಲ, ದೇವರ ಸೃಷ್ಟಿಯಾದ ಈ ಪ್ರಪಂಚದಲ್ಲಿ ಯಾವುದೇ ಜೀವಿ ಕೂಡ ಜೀವಿಸಬೇಕು ಅಂದರೆ ಆಹಾರ, ನೀರು ಮತ್ತು ಗಾಳಿಯನ್ನ ಸೇವನೆ ಮಾಡಲೇಬೇಕು, ಹೆಚ್ಚುಕಮ್ಮಿ ಒಂದೆರಡು ದಿನ ಊಟ ಇಲ್ಲದೆ ಜೀವನವನ್ನ ಮಾಡಬಹುದು ಆದರೆ ಜಾಸ್ತಿ ದಿನ ಊಟ ಮಾಡದೆ ಇರಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಮತ್ತು ಹೆಚ್ಚು ದಿನ ಆಹಾರವನ್ನ ಬಿಟ್ಟು ಇದ್ದರೆ ಆ ಜೀವಿಯ ಸಾವು ಕೂಡ…
ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಮಧ್ಯೆ, ಜನರು ಆರ್ಥಿಕ ದ್ವಿಚಕ್ರ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಒತ್ತು ನೀಡುತ್ತಿದೆ. ಜಪಾನ್ನ ದ್ವಿಚಕ್ರ ವಾಹನ ತಯಾರಕ ಒಕಿನಾವಾ ದ್ವಿಚಕ್ರ ವಾಹನಗಳು ಕೆಲವು ದಿನಗಳ ಹಿಂದೆ ಪ್ರೇಜ್ ಪ್ರೊ(Praise Pro) ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದವು. ಕಂಪನಿಯ ನವೀಕರಿಸಿದ ಪ್ರೇಜ್(Praise) ಆವೃತ್ತಿಯು ಈಗಾಗಲೇ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತಿದೆ. ‘ಪ್ರೇಜ್’ ನಲ್ಲಿದೆ 1000 ವ್ಯಾಟ್ ಸ್ಟ್ರಾಂಗ್ ಮೋಟರ್ : ‘ಪ್ರೇಜ್’ ಒಕಿನಾವಾ…
ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ (7)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900454448ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು 9900454448 ಶರೀರವನ್ನು ನೀರು ಮತ್ತು ಯೋಗದಿಂದ…
ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಾದ ಬ್ರಿಜೇಶ್ ಶ್ರೀವಾತ್ಸವ ಮತ್ತವರ ಪತ್ನಿ ಶಬೀಸ್ತಾ ಶ್ರೀವಾತ್ಸವ ತಾವು ಸಾಕಿರುವ ಮಂಗನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಂಗನ ವಾಸ್ತವ್ಯಕ್ಕೆ ಎಸಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.
ಹಾಲಿವುಡ್ ನಟಿ ಆ್ಯಂಜಲೀನಾ ಜೋಲಿಯಂತೆ ಕಾಣಲು ಇರಾನಿನ ಯುವತಿಯೊಬ್ಬಳು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಜನ ದಂಗಾಗಿದ್ದಾರೆ.