ಆರೋಗ್ಯ, ಜೀವನಶೈಲಿ

ಫುಡ್ ಪಾಯಿಸನ್’ಗೆ ಇಲ್ಲಿದೆ ಸುಲಭ ಪರಿಹಾರ..!ತಿಳಿಯಲು ಈ ಲೇಖನ ಓದಿ…

526

ತಿಂದ ಆಹಾರ ಸರಿಯಾಗ ಜೀರ್ಣವಾಗದೇ ವಿಷಮಯವಾಗುವುದನ್ನು ಫುಡ್ ಪಾಯಿಸನ್ ಎಂದು  ಕರೆಯಲಾಗುತ್ತದೆ.  ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು, ಕೀಟಾಣುಗಳು ಸೇರಿಕೊಂಡಿರುವ ಆಹಾರವನ್ನು ತಿಂದ್ರೆ ಅದು ಜೀರ್ಣವಾಗದೇ ಫುಡ್ ಪಾಯಿಸನ್ ಉಂಟಾಗುತ್ತದೆ.

 

ಫುಡ್ ಪಾಯಿಸನ್ ಉಂಟು ಮಾಡುವ ತೊಂದರೆಗಳು:-

ವಾಂತಿ, ಭೇದಿ, ಹೊಟ್ಟೆ ನೋವು ಉಂಟಾಗಿ, ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ.

ಕಾರಣಗಳು:-

  • ನಮ್ಮ ಜೀವನ ಶೈಲಿಯೇ, ನಮ್ಮ ಈ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ.
  • ಅನಿಯಮಿತವಾಗಿ ಆಹಾರ ಸೇವಿಸುವುದು.
  • ರಸ್ತೆ ಬದಿಯ ತಿಂಡಿಗಳನ್ನು ತಿನ್ನುವುದು.
  • ಕುರುಕಲು ಪದಾರ್ಥಗಳನ್ನು ಮಿತಿಮೀರಿ ಸೇವಿಸುವುದು.

ಫುಡ್ ಪಾಯಿಸನ್ ಆಗದಂತೆ ತಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ…

  • ಅಡುಗೆ ಮಾಡುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ.
  • ಮಾಂಸದ ಅಡುಗೆಯನ್ನು ಮಾಡುವಾಗ ಶುಚಿತ್ವದ ಕಡೆ ಗಮನ ಕೊಡಿ.
  • ಅಡುಗೆ ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳಿ. ಅಡುಗೆ ಮನೆಯಲ್ಲಿ ಕಿಟಾಣುಗಳು ಇರದಂತೆ ನೋಡಿಕೊಳ್ಳಿ.
  • ತರಕಾರಿ ಮತ್ತು ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಿ.
  • ಅಡುಗೆಗೆ ಬಳಸುವ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿರಿ.
  • ಭೇದಿ, ಹೊಟ್ಟೆ ನೋವಿನ ಸಮಸ್ಯೆ ಉಂಟಾದರೆ ಆಹಾರವನ್ನು ತಿನ್ನುವಾಗ ಸ್ಪೂನನ್ನು ಬಳಸಿ .
  • ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಗಳನ್ನು ಸೋಪು ಹಾಕಿ ತೊಳೆಯಿರಿ.
  •  ಆಹಾರವನ್ನು ಸಂಗ್ರಹಿಸಿಡುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ.
  • ಅಡುಗೆ ಉಳಿದಿದ್ದರೆ ಕೂಡಲೇ ಅದನ್ನು ಫ್ರಿಜ್‌ನಲ್ಲಿಡಿ, ಇಲ್ಲದಿದ್ದರೆ ಚೆನ್ನಾಗಿ ಬಿಸಿ ಮಾಡಿ.
  •  ಕಾಲಾವಧಿ ಮುಗಿದಿರುವ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳನ್ನು ಬಳಸಬೇಡಿ.
  • ಹಳಸಿದ ಆಹಾರವನ್ನು ತಿನ್ನಲೇಬೇಡಿ.

ಫುಡ್ ಪಾಯಿಸನ್’ಗೆ ಪರಿಹಾರಗಳು:-

  • ಅತಿ ಹೆಚ್ಚು ನೀರನ್ನು ಸೇವಿಸಿ.
  • ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
  • ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ, ಸ್ವಲ್ಪ ಉಪ್ಪನ್ನು ಹಾಕಿ ಕುಡಿಯಿರಿ.
  • ಘನ ಆಹಾರವನ್ನು ಸೇವಿಸಬೇಡಿ.
  • ಆದಷ್ಟೂ ಗಂಜಿ ಮತ್ತು ಹಣ್ಣಿನ ರಸವನ್ನು ಸೇವಿಸಿ.ಇದರಿಂದ ನಿಮ್ಮ ದೇಹದಲ್ಲಿ ನೀರಿನಾಂಶ  ಜಾಸ್ತಿಯಾಗುತ್ತದೆ.
  • ಬ್ಲಾಕ್ ಟೀ ಕುಡಿಯಿರಿ.
  • ಒಂದು ಚಮಚ ಮೆಂತೆ ಪುಡಿಯನ್ನು ಒಂದು ಲೋಟ ನೀರು ಅಥವಾ ಮೊಸರಲ್ಲಿ ಮಿಕ್ಸ್ ಮಾಡಿ ಕುಡಿಯಿರಿ.
  • ದಾಳಿಂಬೆ ಸಿಪ್ಪೆಯ ಕಷಾಯ ಕುಡಿಯಿರಿ.
  • ದೇಹಕ್ಕೆ ನಿಶ್ಯಕ್ತಿ ಬರದಂತೆ ನೋಡಿಕೊಳ್ಳಿ. ಬೇಗನೆ ಕಡಿಮೆಯಾಗದಿದ್ದರೆ, ಡಾಕ್ಟರ್ ಅನ್ನು ಕಾಣವುದೇ ಉತ್ತಮ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ