ಆಧ್ಯಾತ್ಮ

ಹಿ೦ದೂ ಧರ್ಮದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು…ತಿಳಿಯಲು ಈ ಲೇಖನಿ ಓದಿ…

1814

ಹಿ೦ದೂ ಧರ್ಮವು ಜಗತ್ತಿನ ಅತ್ಯ೦ತ ಪುರಾತನವಾದ ಸನಾತನ ಧರ್ಮವಾಗಿದೆ. ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸ೦ಪ್ರದಾಯಗಳು, ಕಲ್ಪನೆಗಳು, ಇವೆಲ್ಲವುಗಳ ಸ೦ಯೋಜನೆಯಾಗಿರುವ ಹಿ೦ದೂ ಪದ್ಧತಿಯು ಎ೦ದೆ೦ದಿಗೂ ಅತ್ಯ೦ತ ರೋಮಾ೦ಚಕವಾಗಿರುವ ನ೦ಬಿಕೆಯಾಗಿದೆ.

ಹಿಂದೂ ಧರ್ಮ ನಮಗೆ ಸಾಟಿಯಿಲ್ಲದ ಪರಿಣತಿಯೊಂದಿಗೆ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ  ಉದಾಹರಣೆಗೆ: ಪುರಾತನ ರಾಜ್ಯಗಳ ದೇವಾಲಯಗಳು, ಅರಮನೆಗಳು, ಇತ್ಯಾದಿ – ಈ ಕೊಡುಗೆಗಳು ಕೇವಲ ವಿಶ್ವಾಸಾರ್ಹ ದೃಢೀಕರಣಗಳಾಗಿವೆ. ಬನ್ನಿ ಹಿಂದೂಧರ್ಮದ ಬಗ್ಗೆ ಇರುವ ಕುತೂಹಲಕಾರಿ ಸಂಗತಿಗಳ ಬಗ್ಗೆ ಮುಂದೆ ತಿಳಿಯೋಣ…

ಸಾಧು ಸಂತರು 

ಭಾರತದೇಶವು ಸಾಧುಸ೦ತರುಗಳ ನೆಲೆವೀಡಾಗಿದ್ದು, ಇವರ ಪೈಕಿ ಅತ್ಯ೦ತ ಭಯವನ್ನು ಹುಟ್ಟಿಸುವ ಆದರೆ ಅಷ್ಟೇ ಗೌರವಾದರಗಳಿಗೂ ಪಾತ್ರರಾಗಿರುವ ಒ೦ದು ಸಾಧುವರ್ಗವೆ೦ದರೆ ಅದು ಅಘೋರಿ ಸಾಧುಗಳ ಪ೦ಗಡವಾಗಿದೆ.

ತಮ್ಮ ಧಾರ್ಮಿಕ ಜೀವನದ ಒ೦ದು ಭಾಗವಾಗಿ ಈ ಅಘೋರಿ ಸಾಧುಗಳು ಕೈಗೊಳ್ಳುವ ವಿಕ್ಷಿಪ್ತ ಹಾಗೂ ಭಯಾನಕ ವಿಧಿವಿಧಾನಗಳು ಕುಖ್ಯಾತವಾಗಿದ್ದು, ಇವು ಜನಸಾಮಾನ್ಯರಲ್ಲಿ ಕುತೂಹಲವನ್ನೂ ಹಾಗೂ ಪರಮಾಶ್ಚರ್ಯವನ್ನೂ ಉ೦ಟುಮಾಡುವ೦ತಹವುಗಳಾಗಿವೆ.

ಕಷ್ಟ ಕಾರ್ಪಣ್ಯಗಳಿಗೆ ಗಾಯತ್ರಿ ಮಂತ್ರದ ಪಠಣ

ಗಾಯತ್ರಿ ಮ೦ತ್ರ ಪಠಣಕ್ಕಾಗಿ ಎರಡನೆಯ ಸೂಕ್ತ ಸಮಯವೆ೦ದರೆ ಅದು ಮಧ್ಯಾಹ್ನದ ಅವಧಿಯಾಗಿದೆ. ಮೂರನೆಯ ಬಾರಿ ಗಾಯತ್ರಿ ಮ೦ತ್ರವನ್ನು ಪಠಿಸಲು ಸೂಕ್ತ ಸಮಯವೆ೦ದರೆ ಸೂರ್ಯಾಸ್ತಮಾನಕ್ಕಿ೦ತ ಮೊದಲು ಆರ೦ಭಗೊ೦ಡು ಸ೦ಪೂರ್ಣ ಸೂರ್ಯಾಸ್ತದವರೆಗೂ ಮು೦ದುವರಿಸಬೇಕು. ಈ ಮೂರು ಸಮಯಗಳನ್ನು ಹೊರತುಪಡಿಸಿ, ಬೇರೆ ಅವಧಿಯಲ್ಲಿ ಮ೦ತ್ರವನ್ನು ಪಠಿಸಲು ಬಯಸುವಿರಾದರೆ, ಪಠಿಸುವವರು ಮನಸ್ಸಿನಲ್ಲಿಯೇ ಮೌನವಾಗಿ ಪಠಿಸಿದರೆ ಸಂಪೂರ್ಣ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುವಿರಿ ಎನ್ನುವ ನಂಬಿಕೆ ಇದೆ. ಇಲ್ಲಿ ಓದಿ:-ಹಿಂದೂ ಧರ್ಮದಲ್ಲಿ ಯಾರಾದ್ರೂ ಸತ್ತರೆ, ಕೇಶ ಮುಂಡನ ಮಾಡಿಸುತ್ತಾರೆ…ಏಕೆ ಗೊತ್ತಾ???

ರುದ್ರಾಕ್ಷ

ಭಗವಾನ್ ಶಿವನ ಸ೦ಕೇತವಾಗಿರುವ ರುದ್ರಾಕ್ಷವನ್ನು ಕೇವಲ ತಮ್ಮ ಬಳಿ ಇರಿಸಿಕೊಳ್ಳುವುದರಿ೦ದ ಅಥವಾ ಧರಿಸಿಕೊಳ್ಳುವುದರಿ೦ದ ಜನರ ಬಹುತೇಕ ಕಷ್ಟಕೋಟಲೆಗಳ ನಿವಾರಣೆಯಾಗುತ್ತದೆ ಹಾಗೂ ಅವರ ಕೋರಿಕೆಗಳು ಈಡೇರುತ್ತವೆ.

ದೇವರ ಪ್ರತಿಮೆ

ಪ್ರತಿಮೆಯು ಯಾವುದೇ ದೃಷ್ಟಿಕೋನದಿ೦ದಲೂ ದೇವರಲ್ಲ. ಪ್ರತಿಮೆಯು ಅಮೂರ್ತವಾಗಿರುವ ದೈವಸ್ವರೂಪದ ಮೂರ್ತರೂಪವಾಗಿದೆ. ದೇವರ ವ್ಯಕ್ತ ಅಥವಾ ಮೂರ್ತಿರೂಪದ ಈ ಪ್ರತಿಮೆಯು ಮಾನವರಿಗೆ ದೇವರ ಕುರಿತ ರೂಪ ಧ್ಯಾನವನ್ನು ಕೈಗೊಳ್ಳಲು ನೆರವಾಗುತ್ತದೆ ಹಾಗೂ ಭಗವತ್ ಸಾಕ್ಷಾತ್ಕಾರದ ಮು೦ದಿನ ಹೆಜ್ಜೆಗೆ ಸಹಾಯವಾಗುತ್ತದೆ.

 ಹಿಂದೂ ಧರ್ಮದಲ್ಲಿ ಆತ್ಮಗಳ ಪರಿಕಲ್ಪನೆ

ಆತ್ಮಗಳು ಹಿಂದೂ ಧರ್ಮದಲ್ಲಿ ಆತ್ಮಗಳ ಪರಿಕಲ್ಪನೆಯನ್ನು ಬಹಳವಾಗಿ ಚರ್ಚೆಮಾಡಲಾಗುತ್ತದೆ. ಹಿಂದೂಧರ್ಮದ ಪ್ರಕಾರ, ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳು ಆತ್ಮವನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಶಕ್ತಿಮಟ್ಟದಲ್ಲಿರುವ ದೇಹಗಳನ್ನು ಉತ್ತಮ ಸಾಮರ್ಥ್ಯವಿರುವ ಆತ್ಮಗಳನ್ನು ಹೊಂದಿರುತ್ತವೆ ಎಂದು ನಂಬಲಾಗಿದೆ.

ಓಂ ಮಹಾ ಮಂತ್ರ 

ಎನ್ನುವ ಮಂತ್ರ ಅತ್ಯಂತ ಪ್ರಬಲ ಮಂತ್ರ ಮತ್ತು ಅದನ್ನು ಪಠಿಸಿದಾಗ ಸರ್ವೋಚ್ಛ ಜ್ಞಾನ ಪ್ರಕಟವಾಗುತ್ತದೆ. ಓಂಕಾರದ ಪಠನೆಯಿಂದಾಗುವ ಪ್ರತಿಧ್ವನಿಗಳು ಹೆಚ್ಚು ನಿಗೂಢವಾಗಿರುತ್ತದೆ ಮತ್ತು ಪರಿಸರದ ಮೇಲೆ ತರಂಗಗಳ ಪರಿಣಾಮವುಂಟಾಗುತ್ತವೆ.

ಘ೦ಟೆಗಳ ನಿನಾದ

ದೇವಸ್ಥಾನಗಳ ಘ೦ಟೆಗಳು ಸಾಮಾನ್ಯವಾದ ಲೋಹಗಳಿ೦ದ ಮಾಡಲ್ಪಟ್ಟಿರುತ್ತವೆ. ದೇವಸ್ಥಾನದ ಘ೦ಟೆಗಳು ಕ್ಯಾಡ್ಮಿಯ೦, ಸತು, ಸೀಸ, ತಾಮ್ರ, ನಿಕ್ಕಲ್, ಕ್ರೋಮಿಯ೦, ಹಾಗೂ ಮ್ಯಾ೦ಗನೀಸ್ ನ೦ತಹ ವಿವಿಧ ಲೋಹಗಳ ಮಿಶ್ರಣದಿ೦ದ ಮಾಡಲ್ಪಟ್ಟಿರುತ್ತವೆ.

ದೇವಸ್ಥಾನದ ಇ೦ತಹ ಘ೦ಟೆಯನ್ನು ತಯಾರಿಸಲು ಬಳಸಲಾಗುವ ವಿವಿಧ ಲೋಹಗಳ ಅನುಪಾತದಲ್ಲಿ ವಿಜ್ಞಾನವು ಅಡಗಿದೆ. ಘ೦ಟೆಯ ತಯಾರಿಕೆಯಲ್ಲಿ ಬಳಸಲಾಗುವ ಪ್ರತಿಯೊ೦ದು ಘಟಕ ಲೋಹವನ್ನೂ ಸಹ ಯಾವ ತೆರನಾಗಿ, ಯಾವ ಪ್ರಮಾಣದಲ್ಲಿ ಮಿಶ್ರಗೊಳಿಸಿರುತ್ತಾರೆ೦ದರೆ, ಘ೦ಟೆಯ ಸದ್ದು ಮೊಳಗಿದಾಗ, ಘ೦ಟೆಯ ತಯಾರಿಕೆಯಲ್ಲಿ ಬಳಸಲಾದ ಪ್ರತಿಯೊ೦ದು ಲೋಹವೂ ಕೂಡ ವಿಶಿಷ್ಟವಾದ, ತನ್ನದೇ ಆದ ಧ್ವನಿಯನ್ನು ಹೊರಡಿಸುತ್ತದೆ ಹಾಗೂ ಈ ಧ್ವನಿಗಳ ಸ೦ಯೋಜನೆಯು ಎಡ ಹಾಗೂ ಬಲಭಾಗದ ಮೆದುಳುಗಳ ನಡುವೆ ಸಾಮರಸ್ಯವನ್ನು ಮೂಡಿಸುತ್ತದೆ.

ಆದ್ದರಿ೦ದ, ಘ೦ಟೆಯ ಸಪ್ಪಳವು೦ಟಾದ ಕೂಡಲೇ, ಘ೦ಟೆಯು ತೀಕ್ಷ್ಣವಾದ ಹಾಗೂ ದೀರ್ಘವಾದ ಧ್ವನಿಯನ್ನು ಹೊರಡಿಸುತ್ತದೆ ಹಾಗೂ ಈ ಧ್ವನಿಯು ಹಲವು ಸೆಕೆ೦ಡುಗಳ ಕಾಲ ಹಾಗೆಯೇ ಮು೦ದುವರಿಯುತ್ತದೆ..

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಮನೆಯ ಅಂಗಳದಲ್ಲಿ ಹಾವುಗಳು ಕಂಡು ಬರುತ್ತದೆಯೇ .?ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಕೆಲವು ಗಿಡಗಳಿರುವಲ್ಲಿ ಹಾವುಗಳು ಬರುವುದಿಲ್ಲ. ಗೊಂಡೆಹೂವು, ಮಾಚಿಪತ್ರೆ, ಪಶ್ಚಿಮ ಭಾರತದ ಮಜ್ಜಿಗೆಹುಲ್ಲು, ಸರ್ಪಗಂಧ ಹಾಗೂ ಬೆಳ್ಳುಳ್ಳಿಯ ಗಿಡ ಬೆಳೆಯುವಲ್ಲಿ ಹಾವುಗಳು ಸುಳಿಯದಿರುವುದನ್ನು ಕೃಷಿಕರು ಗಮನಿಸಿದ್ದಾರೆ. ಇವುಗಳ ರುಚಿ ಹಾಗೂ ಪರಿಮಳದಲ್ಲಿ ಸರ್ಪಗಳನ್ನು ವಿಕರ್ಷಿಸುವ ಗುಣವಿದೆ.

  • ಆರೋಗ್ಯ

    ಕೊತ್ತಂಬರಿ ಸೊಪ್ಪು ಸೇವನೆ ಮಾಡುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ.!

    ಹಸಿ ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಎ.ಬಿ1, ಬಿ2, ಸಿ ಜೀವಸತ್ವಗಳು ಮತ್ತು ಕಬ್ಬಿಣ ಇವುಗಳ ಅಭಾವದಿಂದ ತಲೆದೋರುವ ವ್ಯಾಧಿಗಳ ಭಯವಿರುವುದಿಲ್ಲ. ಒಂದು ಟೀ ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪ ದೊಂದಿಗೆ ಮಿಶ್ರಮಾಡಿ ಪ್ರತಿದಿನ ರಾತ್ರಿ ಸೇವಿಸುತ್ತ್ತಿದ್ದರೆ ಮೆದುಳಿನ ಕ್ರಿಯಾಶಕ್ತಿ ಹೆಚ್ಚುವುದು. ಕಣ್ಣು, ಕಿವಿ, ಹೃದಯ, ಶ್ವಾಸಕೋಶ ಕ್ರಿಯೆ ಚುರುಕಿನಿಂದ ನಡೆಯುವುದು. ಕ್ಷಯ ಮತ್ತು ಉಬ್ಬಸ ರೋಗಗಳ ಬಾಧೆ ಇರುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗಿಯುವುದರಿಂದ ದಂತಕ್ಷಯ ನಿವಾರಣೆಯಾಗುವುದು. ಬಾಯಿಯಿಂದ ದುರ್ಗಂಧ…

  • ಸುದ್ದಿ

    ದಯವಿಟ್ಟು ನಮ್ಮನ್ನು ಮರೆಯಬೇಡಿ. ಬಿರಾದರ್ ಅವರ ನೋವಿನ ಮಾತು!

    ತೆರೆಯ ಮೇಲೆ ತಮ್ಮ ನಟನೆಯಿಂದ ಸಿನಿ ಪ್ರೇಕ್ಷಕರನ್ನು ನಗೆಗಡಲಿಗೆ ತೇಲಿಸಿದ ಜೀವವದು. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಲನಚಿತ್ರೋದ್ಯಮಕ್ಕೆ ಹೆಮ್ಮೆ ತಂದು ಕೊಟ್ಟ ಹಾಸ್ಯದಿಗ್ಗಜ ಇವರು. ತೆರೆಯ ಮೇಲೆ ಬಣ್ಣ ಹಚ್ಚಿದ್ದರೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲಿಲ್ಲದ ನಗು ಖುಷಿ ತಂದುಕೊಟ್ಟವರು. ಅವರ ನಟನೆಗೆ ಅವರೇ ಸರಿಸಾಟಿ. ಅವರು ಬೇರೆಯಾರು ಅಲ್ಲ. ನಮ್ಮ ನಿಮ್ಮೆಲ್ಲ ನೆಚ್ಚಿನ ಹಾಸ್ಯ ದಿಗ್ಗಜ ಬಿರಾದರ್ ಅವೆು. ಬಿರಾದಾರ್ ಅವರು ಸಿನಿಮಾಗಳಲಿ ಕೇವಲ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು, ಅವರ…

  • inspirational, ಸುದ್ದಿ

    ತಿನ್ನಲು ಊಟ ಸಿಗದಿದ್ದಾಗ, ಹಸಿವು ತಡೆಯಲಾರದೆ, ಮಣ್ಣು ತಿಂದು ಮೃತಪಟ್ಟ ಮಕ್ಕಳು…

    ಹಸಿವೆಯಿಂದ ಮಣ್ಣು ತಿಂದು ಮೃತಪಟ್ಟ ಏಳು ವರ್ಷದ ಮಗು ವೆನೆಲ್ಲಾಳ ಪೋಷಕರಾದ ಮಹೇಶ್ ಮತ್ತು ನಾಗಮಣಿಯ ವಿವರ ಪತ್ತೆ ಹಚ್ಚಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ. ಮಗುವಿನ ಹಿರಿಯರು ನೆರೆಯ ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದು ಅವರು ಹೇಳುವ ಪ್ರಕಾರ ಕುಟುಂಬದವರು ಕರ್ನಾಟಕ ಸರ್ಕಾರದ ಯಾವುದೇ ಸೌಲಭ್ಯ ಅಥವಾ ಇಲ್ಲಿನ ಮತದಾನ ಗುರುತು ಪತ್ರ ಹೊಂದಿಲ್ಲ ಎಂದು ತಮ್ಮ ತನಿಖೆ ವೇಳೆ ತಿಳಿದುಬಂದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಅನಿರುದ್ಧ ಶ್ರಾವಣ್ ತಿಳಿಸಿದ್ದಾರೆ. ಅಲ್ಲದೆ ಮಗುವಿನ ಪೋಷಕರು ಅಲ್ಲಿ…

  • ಸುದ್ದಿ

    ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಈತ 100 ಕಿ.ಮೀ. ದೂರದಿಂದ ಎದ್ದು ಬಂದಿದ್ದೇಗೆ ಗೊತ್ತಾ?

    ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್‌ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಬಕ್ಸಾ ಜಿಲ್ಲೆಯ…

  • ಸುದ್ದಿ

    ಪ್ರೇಯಸಿಯಾ ತಂದೆಗೆ ಗುಂಡು ಹಾರಿಸಿದ ಯೋಧ!

    ಪ್ರೀತಿಯ ವಿಚಾರವಾಗಿ ಯೋಧನೊಬ್ಬ ತನ್ನ ಪ್ರಿಯತಮೆಯ ತಂದೆ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಘಟ್ಟೆ ಗ್ರಾಮದಲ್ಲಿ ನಡೆದಿದೆ. ದೇವರಾಜ್ (27) ಗುಂಡು ಹಾರಿಸಿದ ಯೋಧ. ದೇವರಾಜ್ ಅದೇ ಗ್ರಾಮದ ಪ್ರಕಾಶ್ ಎಂಬವರ ಮಗಳನ್ನು ಪ್ರೀತಿಸುತ್ತಿದ್ದರು. ಯೋಧ ಕೆಲವು ದಿನಗಳ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಪ್ರೀತಿಯ ವಿಚಾರವಾಗಿ ಯುವತಿಯ ತಂದೆ ಪ್ರಕಾಶ್ ಹಾಗೂ ದೇವರಾಜ್ ನಡುವೆ ವಾಗ್ವಾದ ನಡೆದಿದೆ. ಜಗಳದಲ್ಲಿ ಕೋಪಗೊಂಡ ದೇವರಾಜ್, ಯುವತಿಯ ತಂದೆ ಪ್ರಕಾಶ್ ಮೇಲೆ…