ಉಪಯುಕ್ತ ಮಾಹಿತಿ, ಸುದ್ದಿ

2 ಎಕರೆ ಜಾಗದಲ್ಲಿ 22 ಲಕ್ಷ ಗಳಿಸುತ್ತಿರುವ ರೈತ, ಈ ರೈತನ ಸಕತ್ ಉಪಾಯ ನೋಡಿ .

1015

ನಾನು ಒಬ್ಬ ರೈತ ಎಂದು ಹೇಳಿಕೊಳ್ಳಲು ತುಂಬಾ ಜನ ಹಿಂದೆ ಮುಂದೆ ನೋಡುತ್ತಾರೆ ಮತ್ತು ಇದಕ್ಕೆ ಕಾರಣ ನಮ್ಮ ಸಮಾಜ ಎಂದು ಹೇಳಬಹುದು, ರೈತ ಅಂದರೆ ಆತನ ಬಳಿ ಹಣ ಇರುವುದಿಲ್ಲ ಅನ್ನುವ ಭಾವನೆ ಎಲ್ಲರ ಮನದಲ್ಲಿ ಇದೆ ಮತ್ತು ಇಷ್ಟೇ ಅಲ್ಲದೆ ನಾನು ರೈತ ಅಂದರೆ ಹೆಣ್ಣು ಮಗಳನ್ನ ಕೊಟ್ಟು ಮದುವೆ ಮಾಡಿಕೊಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ ಜನರು. ಇನ್ನು ನಮ್ಮ ಸಮಾಜಕ್ಕೆ ತಿಳಿಯದ ಇನ್ನೊಂದು ವಿಚಾರ ಏನು ಅಂದರೆ ಪ್ರತಿಯೊಬ್ಬ ರೈತ ಕೂಡ ಒಬ್ಬ ವಿಜ್ಞಾನಿ ಆಗಿರುತ್ತಾನೆ ಅನ್ನುವುದು ಆಗಿದೆ. ಪ್ರಾರಂಭದಲ್ಲಿ ಎಷ್ಟೇ ನಷ್ಟ ಮತ್ತು ಸೋಲನ್ನ ಅನುಭವಿಸದರು ಅದರಿಂದ ಪಾಠವನ್ನ ಕಲಿತು ಇಂದು ಮಾದರಿಯ ರೈತನಿಗೆ ಹೊರಹೊಮ್ಮಿದ್ದಾರೆ ಈ ರೈತ.

ಹಾಗಾದರೆ ಈ ರೈತ ಯಾರು ಮತ್ತು ಈ ಮಾಡಿದ ಸಾಧನೆ ಏನು ಅನ್ನುವುದರ ಬಗ್ಗೆ ತಿಳಿಯೋಣ. ನಾವು ಹೇಳುವ ಈ ರೈತನ ಸದಾನಂದ ಮತ್ತು ಇವರು ದೊಡ್ಡಬಳ್ಳಾಪುರದವರು ಆಗಿದ್ದಾರೆ, ಇನ್ನು ಇವರು ಕೂಡ ಪ್ರಾರಂಭದಲ್ಲಿ ಎಲ್ಲಾ ರೈತರು ಮಾಡುವಂತೆ ಇವರು ಎರಡು ತಪ್ಪುಗಳನ್ನ ಮಾಡಿದರು. ಹೌದು ಅಕ್ಕಪಕ್ಕದರು ಈರುಳ್ಳಿ ಅಥವಾ ಟೊಮೆಟೊ ಹಾಕಿದರೆ ಎಲ್ಲಾ ರೈತರು ಕೂಡ ಅದನ್ನೇ ಹಾಕುವುದು ಮತ್ತು ಒಂದು ಎಕರೆ ಜಮೀನು ಇದ್ದರೆ ಆ ಜಮೀನಿನ ಪೂರ್ತಿ ಒಂದೇ ಬೆಳೆಯನ್ನ ಬೆಳೆಯುವುದು, ರೈತರು ಅನುಸರಿಸುವ ಈ ಎರಡು ಮಾರ್ಗಗಳು ಕೂಡ ತುಂಬಾ ಅಪಾಯವಾದವು ಆಗಿದೆ.

ಇನ್ನು ಎಲ್ಲರು ಟೊಮೆಟೊ ಬೆಳೆಯನ್ನ ಬೆಳೆಯುತ್ತಾರೆ ಎಂದು ನಾವು ಕೂಡ ಅದನ್ನೇ ಬೆಳೆದರೆ ಉತ್ಪಾದನೆ ಜಾಸ್ತಿ ಆಗಿ ಬೆಲೆ ಕಡಿಮೆ ಆಗುತ್ತದೆ ಮತ್ತು ಇರುವ ಜಮೀನಿಗೆಲ್ಲ ಒಂದೇ ಬೆಳೆಯನ್ನ ಹಾಕಿದರೆ ಅವು ಒಂದು ಭಾರಿ ನಮ್ಮ ಕೈ ಹಿಡಿಯುತ್ತದೆ ಮತ್ತು ಕೆಲವು ಭಾರಿ ನಮ್ಮ ಕೈ ಸುಡುತ್ತದೆ ಮತ್ತು ನಷ್ಟವಾದರೆ ವ್ಯವಸಾಯದ ಮೇಲೆ ನಂಬಿಕೆ ಕಳೆದು ಹೋಗುತ್ತದೆ. ಪ್ರಾರಂಭದಲ್ಲಿ ಹೀಗೆ ಮಾಡಿದ ಸದಾನಂದ ಅವರು ಕೆಲವು ಭಾರಿ ತಮ್ಮ ಕೈ ಸುಟ್ಟುಕೊಂಡರು ಮತ್ತು ಹೀಗೆ ಮಾಡಿದರೆ ಮುಂದೆ ಕಷ್ಟ ತುಂಬಾ ಕಷ್ಟ ಆಗುತ್ತದೆ ಎಂದು ಅರಿತ ಸದಾನಂದ ಅವರು ಒಂದು ಉಪಾಯ ಮಾಡಿದರು.

ಸದಾನಂದ ಅವರು ತಮಗಿರುವ ಎರಡು ಎಕರೆ ಜಮೀನನ್ನ ವ್ಯವಸ್ಥಿತವಾಗಿ ವಿಂಗಡಿಸಿ ಮೊದಲು ಒಂದಷ್ಟು ಅಡಿಕೆ ಮತ್ತು ತೆಂಗಿನ ಮರಗಳನ್ನ ನೆಟ್ಟರು ಹಾಗೆ ಇನ್ನೊಂದು ಜಾಗದಲ್ಲಿ ಒಂದು ತಿಂಗಳು ಶುಂಠಿ, ಇನ್ನೊಂದು ತಿಂಗಳು ಸಪೋಟ ಮತ್ತು ಒಂದಷ್ಟು ಜಮೀನಿಗೆ ಟೊಮೆಟೊ ಮತ್ತು ಕ್ಯಾಪ್ಸಿಕಮ್ ಮತ್ತು ಹೀಗೆ ಕಾಲದ ಮಿತಿಯನ್ನ ಕೊಟ್ಟು ಸುಮಾರು 30 ಬೆಳೆಗಳನ್ನ ಹಾಕಿದರು. ಇನ್ನು ಸದಾನಂದ ಅವರ ಉಪಾಯ ಹೇಗಿತ್ತು ಅಂದರೆ ಒಂದು ತಿಂಗಳು ಸಪೋಟದಲ್ಲಿ ಒಳ್ಳೆಯ ಲಾಭ ಬಂದರೆ ಇನ್ನೊಂದು ತಿಂಗಳು ಶುಂಠಿಯಲ್ಲಿ ಒಳ್ಳೆಯ ಲಾಭ ಬರುತ್ತಿತ್ತು, ಹೀಗೆ ಪ್ರತಿ ತಿಂಗಳು ಕೈಗೆ ಹಣ ಬರುವಂತೆ ಮಾಡಿಕೊಂಡರು ಸದಾನಂದ ಅವರು.

ಇನ್ನು ಸದಾನಂದ ಅವರ ಉಪಾಯದಲ್ಲಿ ಇರುವ ಇನ್ನೊಂದು ಪ್ರಯೋಜನ ಏನು ಅಂದರೆ ಟೊಮೆಟೊದಲ್ಲಿ ನಷ್ಟವಾದರೆ ಇನ್ನೊಂದರಲ್ಲಿ ಒಳ್ಳೆಯ ಲಾಭ ಸಿಗುತ್ತದೆ, ಹೀಗೆ ತನ್ನ ಉಪಾಯದ ಮೂಲಕ ವರ್ಷಕ್ಕೆ ಸುಮಾರು 22 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಸದಾನಂದ ಅವರು. ವ್ಯವಸಾಯ ಅನ್ನುವುದು ಸಂಶೋಧನೆ ಮತ್ತು ಆವಿಷ್ಕಾರ ಇದ್ದಹಾಗೆ ಮತ್ತು ಅದಕ್ಕೆ ಸೀಮಿತ ಮಿತಿ ಅನ್ನುವುದು ಇಲ್ಲ ಹಾಗೆ ಹೊಸ ಹೊಸ ಪ್ರಯೋಗಗಳನ್ನ ಮಾಡುವುದರಿಂದ ಹೊಸ ವಿಧಾನ ಕಂಡುಹಿಡಿಯಬಹುದಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಗಿದಪ್ಪಿದ ಸ್ಥಿತಿಯಲ್ಲಿ ತಾಯಿ-ಮಗು ಶವ ಪತ್ತೆ..! ಕರುಳು ಹಿಂಡಿದ ದೃಶ್ಯ..!

    ಭಾರೀ ಮಳೆ ಪ್ರವಾಹ ಮತ್ತು ಭೂ ಕುಸಿತಗಳಿಂದ ನಲುಗಿರುವ ಕೇರಳಾದಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿದ್ದು, ಜನರು ಮಮ್ಮಲ ಮರಗುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ ಕೊಟ್ಟುಕುಣ್ನು ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗುವಿನ ಶವ ಬಿಗಿದಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹೃದಯವಿದ್ರಾವಕ ದೃಶ್ಯ ಕಂಡು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಕಣ್ಣುಗಳು ಒದ್ದೆಯಾದವು. ಗೀತು(21) ಮತ್ತು ಆಕೆಯ ಒಂದೂವರೆ ವರ್ಷದ ಮಗು (ದೃವ)ವಿನ ಶವ ಭೂ…

  • ಸುದ್ದಿ

    ಗೂಗಲ್ ಕಂಪನಿ 200 ಮೇಕೆಗಳನ್ನು ನೇಮಿಸಿಕೊಂಡು,ಸಂಬಳ ಸಮೇತ ಹೊಟ್ಟೆ ತುಂಬಾ ಆಹಾರ ಕೊಡ್ತಾ ಇದೆ..!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

    ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿದೆ.ಈಗ ಗಾದೆ ಏತಕ್ಕೆ ಬಂತು ಅಂತೀರಾ…ವಿಷಯ ಇದೆ.ಅದೆಂದರೆ ನಮಗೆಲ್ಲಾ ಗೊತ್ತಿರುವ ಹಾಗೆ , ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸಿಗದೇ ಇರೋ ವಿಷಯವೇ ಇಲ್ಲ.

  • ವಿಸ್ಮಯ ಜಗತ್ತು

    ಪುರುಷ ಪುಂಗವರಿಲ್ಲದ ಜಗತ್ತಿನ ಏಕೈಕ ಗ್ರಾಮ ಇದು.!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಪುರಷರು ಇಲ್ಲದೆ ಇರಲು ಸಾಧ್ಯನಾ ಹೌದು ಇದು ನಿಜಕ್ಕೂ ನಮ್ಮನೂ ನಿಬ್ಬೆರಗೊಳಿಸುವ ಸ್ಟೋರಿ. ಯಾವುದೇ ಒಂದು ಕುಟುಂಬ ಅಥವಾ ಒಂದು ಊರು ಅಂದ್ಮೇಲೆ ಅಲ್ಲಿ ಪುರುಷ ಇರಲೇಬೇಕು. ಆದರೆ ಈ ಗ್ರಾಮದಲ್ಲಿ ಪುರುಷ ಅನ್ನೋ ಒಬ್ಬ ಮಾನವನು ನಿಮಗೆ ಕಾಣಸಿಗಲ್ಲ.ಕೀನ್ಯಾದ ಅಮೋಜಾ ಗ್ರಾಮ, ಇದು ಮಹಿಳೆಯರ ಒಂದು ಅದ್ಬುತ ಗ್ರಾಮ ಯಾಕೆ ಅಂದ್ರೆ ಇಲ್ಲಿ ಮಹಿಳೆಯರೇ ಇರೋದು ಇಲ್ಲಿ ಒಬ್ಬ ಪುರುಷನು ಇಲ್ಲ. ಮಹಿಳೆಯರು ಹಾಗೂ ಹುಡುಗಿಯರಿಗೆ ಸ್ವರ್ಗ….

  • ಜ್ಯೋತಿಷ್ಯ

    ಗುರುವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ..?ಶುಭವೋ ಅಶುಭವೋ ನೋಡಿ ತಿಳಿಯಿರಿ…

    ಗುರುವಾರ, 22/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ. ಭೂಮಿ ಖರೀದಿ, ಮನೆ ನಿರ್ಮಾಣ ಕಾರ್ಯಗಳಿಗೆ ಒಳ್ಳೆಯ ಕಾಲ. ವಿನಾಕಾರಣ ಮನಸ್ತಾಪ ಬೇಡ. ದೂರ ಪ್ರಯಾಣದ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ನೀವು ಉತ್ತಮ. ವೃಷಭ:- ತೊಂದರೆಗಳು ಹಂತಹಂತವಾಗಿ ಪರಿಹಾರವಾಗಲಿವೆ.ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯಭಾಗ್ಯ ಉತ್ತಮವಾಗಿದೆ. ಮಕ್ಕಳು ಹೆಚ್ಚು ಶ್ರಮವಹಿಸಬೇಕು. ವಿನಾಕಾರಣ ಮನೆಯಲ್ಲಿ ಮನಸ್ತಾಪ. ಮಿಥುನ:– ಉದ್ಯೋಗಿಗಳಿಗೆ ಭಡ್ತಿ.ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರದಿಂದ ಅಧಿಕ ಲಾಭ. ವಾದ-ವಿವಾದಗಳ ಬಗ್ಗೆ ಹೆಚ್ಚಿನ ಜಾಗ್ರತೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ…

  • ವಿಸ್ಮಯ ಜಗತ್ತು

    ಇವರು ನಮ್ಮ ಇಂಡಿಯನ್ ರಿಯಲ್ ಸ್ಪೈಡರ್ ಮ್ಯಾನ್!ಅಲಿಯಾಸ್ ಕೋತಿ ರಾಜ್.ಇವರ ಸಾಹಸದ ಬಗ್ಗೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ!

    ಭಾರತದ ಸ್ಪೈಡರ್ ಮ್ಯಾನ್ ಎಂದೇ ಹೆಸರುಗಳಿಸಿರುವ ಚಿತ್ರದುರ್ಗದ ಕೋತಿರಾಜು ಅಲಿಯಾಸ್ ಜೋತಿರಾಜು ಬಗ್ಗೆ ನಿಮಗೆ ಗೊತ್ತೇ? ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದ್ದರೆ ನೀವು ಇವರ ಸಾಹಸಮಯ ಆಟಗಳನ್ನು ನೋಡಿರಬಹುದು, ಇವರು ನೂರಾರು ಅಡಿ ಎತ್ತರದ ಗೋಡೆಗಳನ್ನು ಯಾವ ಸಹಾಯವಿಲ್ಲದೆಯೇ ಮೇಲೇರುತ್ತಾರೆ!

  • Sports

    ಬಂಗಾಳ ಕ್ರಿಕೆಟ್ ಆಟಗಾರರಿಗೆ ಸಹಾಯಕ ಸಿಬ್ಬಂದಿಗೆ ಕೋವಿಡ್-19

    ಬಂಗಾಳ ಕ್ರಿಕೆಟ್ ಆಟಗಾರರಿಗೆ ಕೋರೋನ  ಪಶ್ಚಿಮ ಬಂಗಾಳ ಕ್ರಿಕೆಟ್ 6 ಆಟಗಾರರಿಗೆ  ಒಬ್ಬ ಸಹಾಯಕ ಸಿಬ್ಬಂದಿಗೆ ಕೋವಿಡ್-19 ಪತ್ತೆಯಾಗಿದೆ. 6 ಬಂಗಾಳ ಕ್ರಿಕೆಟ್ ಆಟಗಾರರಿಗೆ ಮತ್ತು ಒಬ್ಬ ಸಹಾಯಕ ಸಿಬ್ಬಂದಿ ಕೋವಿಡ್-19 ಪತ್ತೆಯಾಗಿದೆ.ರಣಜಿ ಪಂದ್ಯಗಳ ತಯಾರಿಯಲ್ಲಿ ತೊಡಗಿದ್ದ ಬಂಗಾಳ ಆಟಗಾರರು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದು ತರಬೇತಿ ಯನ್ನು ರದ್ದುಗೊಳಿಸಲಾಯಿತು.ರಣಜಿ ಪಂದ್ಯಗಳನ್ನು ಆಡಲು ಬೆಂಗಳೂರು ಪ್ರವಾಸವನ್ನು ಜ.8 ಕೈಗೊಳ್ಳಬೇಕಾಗಿತ್ತು ಅದನ್ನು ಮುಂದೂಡಲಾಗಿದೆ. ಕೋವಿಡ್-19 ದೃಢಪಟ್ಟ ಆಟಗಾರರು ಸುದೀಪ್ ಚಟರ್ಜಿ ಅನುಸ್ಟಪ್ ಮಜುಂದಾರ್ ಕಾಜಿ ಜುನೈದ್ ಸೈಫಿ ಗೀತ್…

    Loading