ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿನಿತ್ಯ ಎದುರಿಸುವ ಆಧುನಿಕ ಬದುಕಿನ ಗೋಜಲು ಗದ್ದಲಗಳಿಗೂ ಹುಟ್ಟಿದ ಜನ್ಮರಾಶಿಗಳಿಗೂ ಒಂದು ನಿಕಟ ಸಂಬಂಧ ಇದೆ ಎಂಬುದು ಲಕ್ಷಾಂತರ ಜನರ ನಂಬಿಕೆ. ಪ್ರಪಂಚದಾದ್ಯಂತ ನಿತ್ಯ ರಾಶಿಗಳ ಆಧಾರದ ಮೇಲೆ ದಿನವನ್ನು ಎದುರುಗೊಳ್ಳುವ ಸಂಪ್ರದಾಯವಿದೆ. ಬದುಕಿನ ಭವಿಷ್ಯವನ್ನು ಒಟ್ಟು 12 ರಾಶಿಗಳ ಆಧಾರದ ಮೇಲೆ ಹೇಳಿಕೊಂಡು ಬರಲಾಗುತ್ತಿದೆ….
ಈ ಹಿನ್ನೆಲೆಯಲ್ಲಿ ಇದು ನಿತ್ಯ ಭವಿಷ್ಯ. ನಿಮ್ಮ ನಿಮ್ಮ ರಾಶಿಯ ಫಲಾಫಲವನ್ನು ವಯೋಮಾನಕ್ಕೆ ಅನುಗುಣವಾಗಿಯೂ ಇಲ್ಲಿ ನೀಡಲಾಗಿದೆ. ದಿನ ಆರಂಭಕ್ಕೆ ಉತ್ತಮ ಮಾರ್ಗದರ್ಶಿ ಇದು.

ಮೇಷ…
ಯುವಜನರಿಗೆ: ಗೆಳತಿಯೊಬ್ಬಳ ಸಹವಾಸದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಸದ್ಯದಲ್ಲಿರುವ ಕೆಲಸವನ್ನು ಬಿಡುವುದು ಸೂಕ್ತವಲ್ಲ.
ವಯಸ್ಕರಿಗೆ: ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ಪಾಪ ಪ್ರಜ್ಙೆ ಕಾಡಿಸುತ್ತಿದೆ, ಮನಸ್ಸು ಬದಲಾಯಿಸಿಕೊಳ್ಳುವುದರಿಂದ ಲಾಭವಿದೆ.
ಹಿರಿಯರಿಗೆ: ಸದಾ ಸಾವಿನ ಬಗ್ಗೆ ಯೋಚನೆ ಮಾಡುವುದನ್ನು ಬಿಡಿ, ನಿಮ್ಮಲ್ಲಿರುವ ಶಕ್ತಿಗೆ ಅನುಗುಣವಾದದನ್ನು ನಿತ್ಯವೂ ಮಾಡಿ….
ವೃಷಭ…
ಯುವಜನರಿಗೆ: ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುತ್ತೀರಿ. ಹೊಸ ವಿಷಯಗಳತ್ತ ಹುಸಿ ಹುರುಪು ಬೇಡ.
ವಯಸ್ಕರಿಗೆ: ದಾಂಪತ್ಯದಲ್ಲಿನ ವಿರಸ ಮಾನಸಿಕ ಆರೋಗ್ಯ ಕೆಡಿಸುತ್ತದೆ. ನ್ಯಾಯಾಲಯಲ್ಲಿ ಗೆಲವು.
ಹಿರಿಯರಿಗೆ: ಹಣದ ಬಗ್ಗೆ ಎಚ್ಚರದಿಂದ ಇರಿ. ಆರೋಗ್ಯದ ತಪಾಸಣೆಯಿಂದ ಒಳ್ಳೆಯದಾಗುತ್ತದೆ. ಭಯ ನಿವಾರಣೆ ಸಾಧ್ಯ.
ಮಿಥುನ…
ಯುವಜನರಿಗೆ: ವೃತ್ತಿ ಶಿಕ್ಷಣದ ಕೊನೆಯ ಹಂತದಲ್ಲಿದ್ದೀರಿ. ಇದುವರೆವಿಗೂ ಎದುರಾಗುತ್ತಿದ್ದ ನೆನಪಿನ ಸಮಸ್ಯೆಗಳು ಬದಲಾಗುವ ಸೂಚನೆಗಳಿವೆ.
ವಯಸ್ಕರಿಗೆ: ನಿವೃತ್ತಿಯ ಅಂಚಿನಲ್ಲಿದ್ದೀರಿ. ಮುಂದಿನ ದಿನಗಳ ಬಗ್ಗೆ ಕೊಂಚ ಕಾಳಜಿಯಿಂದ ಯೋಚಿಸಿ. ಕುಡಿತದಿಂದ ಅಪಾಯ.
ಹಿರಿಯರಿಗೆ: ಮನೆಮಂದಿಯೊಂದಿಗೆ ಮುನಿಸಿಕೊಂಡರೆ ನಿಮಗೆ ತೊಂದರೆ. ಗತಿಸಿದ ಬಾಳ ಸಂಗಾತಿಯ ಬಗ್ಗೆ ತುಂಬಾ ಯೋಚನೆ ಬೇಡ.

ಕರ್ಕಾಟಕ…
ಯುವಜನರಿಗೆ: ಸೋಲು ಸತತವಾಗಿ ಬರುತ್ತಿರುವುದರಿಂದ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಎದ್ದಿವೆ. ಯಶಸ್ಸಿಗೆ ಬಹಳ ಹತ್ತಿರದಲ್ಲಿದ್ದೀರಿ ಎನ್ನುವುದನ್ನು ನಂಬಿ ಮುನ್ನುಗ್ಗಿ.
ವಯಸ್ಕರಿಗೆ: ನಿಮ್ಮಂತೆಯೇ ನಿಮ್ಮ ಮಕ್ಕಳು ಬೆಳೆಯಬೇಕೆಂಬ ಹಠ ಬೇಡ. ನೀವು ನಿಮ್ಮ ಯಶಸ್ಸಿನ ಕಡೆ ಗಮನ ಹರಿಸಿ. ನಿಮ್ಮ
ಚಟವೊಂದು ಕುಟುಂಬದ ಶಾಂತಿಯನ್ನು ಕೆದಡಲಿದೆ.
ಹಿರಿಯರಿಗೆ: ಭೂತದ ಆರಾಧಕರಿಂದ ದೂರವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ.
ಸಿಂಹ…
ಯುವಜನರಿಗೆ: ಸದಾ ಒಂದಲ್ಲಾ ಒಂದು ತೊಂದರೆಗೆ ಸಿಕ್ಕಿಕೊಳ್ಳುವುದಕ್ಕೆ ನಿಮ್ಮ ಮೊಂಡುತನ ಕಾರಣ. ಇಂದು ಇದರ ಸಲುವಾಗಿಯೇ ಹಿಂಸೆಗೆ ಒಳಗಾಗುತ್ತೀರಿ.
ವಯಸ್ಕರಿಗೆ: ಕುಟುಂಬದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳದಿರುವುದರಿಂದಾಗಿಯೇ ಜಗಳ-ಕದನ. ಸಾಲಗಾರರಿಂದ ಹಿಂಸೆ ಹೆಚ್ಚಾಗಲಿದೆ.
ಹಿರಿಯರಿಗೆ: ನೀವು ನೆನೆಪಿನ ಶಕ್ತಿ ಹೀನತೆಯ ಬಗ್ಗೆ ಗಮನ ಹರಿಸದಿರುವುದರಿಂದಾಗಿ ತಪ್ಪು ಅಭಿಪ್ರಾಯಗಳು ಹೆಚ್ಚಾಗುತ್ತಿವೆ ತಜ್ಙ ವೈದ್ಯರ ಸಲಹೆ ಉಪಯುಕ್ತ.
ಕನ್ಯಾ…
ಯುವಜನರಿಗೆ: ನೀವು ಇರುವ ಸಧ್ಯದ ಪರಿಸ್ಥಿತಿಯಲ್ಲಿ ಹೊಸ ದಾರಿಗಳನ್ನು ಆರಿಸುವ ಮನಸ್ಸು ಪ್ರಬಲ. ನಿಮಗಿರುವ ಚಂಚಲ ಮನಸ್ಸುನನ್ನು ಬದಲಾಯಿಸಿಕೊಳ್ಳಿ.
ವಯಸ್ಕರಿಗೆ: ಹೀಗೆ ಬಾಳ ಸಂಗಾತಿಯ ಆಯ್ಕೆಯನ್ನು ಒಂದಲ್ಲಾ ಒಂದು ಕಾರಣದಿಂದ ಮುಂದು ಹಾಕುವುದ ಸರಿಯಲ್ಲ ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಹಿರಿಯರಿಗೆ: ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.
ತುಲಾ…
ಯುವಜನರಿಗೆ: ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯತ್ತ ಒಗೆಯುವ ಸ್ವಭಾವ ನಿಮ್ಮದು. ಇಂದದು ಅಪಾಯದ ಮಟ್ಟ ಮುಟ್ಟಲಿದೆ.
ವಯಸ್ಕರಿಗೆ: ಒಂಟಿ ತಾಯಿ ಆಗಿ ಮಕ್ಕಳನ್ನು ಬೆಳೆಸುತ್ತಿರುವುದು ಕಷ್ಟದ ಕೆಲಸ. ಆದರೂ ದೃಢ ಮನಸ್ಸಿನಿಂದ ಮುಂದುವರೆಯರಿ.
ಹಿರಿಯರಿಗೆ: ಒಡ ಹುಟ್ಟಿದವರ ಬಗ್ಗೆ ಇನ್ನೆಷ್ಟು ದಿನ ಈರ್ಷ್ಯೆ ವ್ಯಕ್ತಪಡಿಸುವಿರಿ. ಇದು ನಿಮ್ಮ ಮನೋಬಲವನ್ನು ಹಿಂಡುತ್ತದೆ. ಇಂದು ಎಚ್ಚರದಿಂದ ಅತ್ತ ಗಮನಿಸಿ.

ವೃಶ್ಚಿಕ…
ಯುವಜನರಿಗೆ: ನಿಮ್ಮ ಕ್ರೀಡಾಪಟುತ್ವ ಇಂದು ಮುಖ್ಯ ಪರೀಕ್ಷೆಯನ್ನು ಎದುರಿಸಲಿದೆ. ಗುರಿಯತ್ತ ಮಾತ್ರವಷ್ಟೇ ಗಮನವಿರಲಿ.
ವಯಸ್ಕರಿಗೆ: ಇಷ್ಟ ಪಟ್ಟವರನ್ನು ಮದುವೆಯಾಗುವ ನಿಮ್ಮ ಮಗಳ ಬಗ್ಗೆ ನಿಶ್ಚಿಂತೆ ಇಂದ ಇರುವುದೇ ಸರಿ. ಹಲವಾರು ವರ್ಷಗಳ ಹಿಂದೆ ನೀವೂ ಕೂಡ ಅದನ್ನೇ ಮಾಡಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ.
ಹಿರಿಯರಿಗೆ: ಇಳಿ ವಯಸ್ಸಿನಲ್ಲಿ ನಂಬಿಕೆಗಳನ್ನು ಬದಲಾಯಿಸಿಕೊಳ್ಳುವುದು ಸಾಹಸ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.
ಧನಸ್ಸು…
ಯುವಜನರಿಗೆ: ನಿಮ್ಮ ಪೋಷಕರ ಸಂಬಂಧಗಳ ಬಗ್ಗೆ ಹೆಚ್ಚು ಆಲೋಚಿಸುವುದರಿಂದ ನಿಮ್ಮ ನಕಾರಾತ್ಮಕ ಭಾವನೆಗಳು ಕಡಿಮೆಯಾಗುವುದಿಲ್ಲ.
ವಯಸ್ಕರಿಗೆ: ನಿಮ್ಮ ಸ್ವಭಾವ ಎಲ್ಲರನ್ನು ನಂಬುವಂತಹದ್ದು. ಅದನ್ನು ಬದಲಾಯಿಸುವ ಪ್ರಸಂಗ ಎದುರಾಗಲಿದೆ.
ಹಿರಿಯರಿಗೆ: ವಯೋಮಾನಕ್ಕೆ ಅನುಗುಣವಾದ ನಡೆ ನುಡಿ ನಿಮ್ಮಲ್ಲಿ ಇಲ್ಲವೆನ್ನುವುದನ್ನು ನೆನಪಿಗೆ ತರುವ ದಿನಗಳು ಮುಂದೆ ಬರಲಿವೆ.
ಮಕರ…
ಯುವಜನರಿಗೆ: ಹೆಣ್ಣು ಎನ್ನುವ ಕಾರಣದಿಂದ ಎಲ್ಲದರ ಬಗ್ಗೆ ಮುಜುಗರ ಬೇಡ. ನಿಮಗೆ ಇಷ್ಟವಾದದನ್ನು ಪಡೆಯುವುದರತ್ತ ಹೆಚ್ಚು ಗಮನ ಇರಲಿ.
ವಯಸ್ಕರಿಗೆ: ನೀವು ವೃತ್ತಿಯಲ್ಲಿದ್ದುಕೊಂಡೇ ಉನ್ನತ ಪದವಿಯ ಶಿಕ್ಷಣ ಮುಂದುವರೆಸಿ. ಯಶಸ್ಸು, ಕೀರ್ತಿ ಅದರ ಹಿಂದೆ ತಾನಾಗಿಯೇ ಬರುವುದು.
ಹಿರಿಯರಿಗೆ: ಸಾವಿನ ಬಗ್ಗೆ ಅಷ್ಟೊಂದು ಆಲೋಚಿಸಿ ಪ್ರಯೋಜನವಿಲ್ಲ. ಮುಂದಾಗುವುದರ ಮುನ್ಸೂಚನೆ ಇದ್ದರೂ ಆ ಬಗ್ಗೆ ಆತಂಕ, ಅಂಜಿಕೆ ಬೇಡ.

ಕುಂಭ…
ಯುವಜನರಿಗೆ: ನಿಮ್ಮ ಒಳಮುಖದ ಸ್ವಭಾವದಿಂದ ಅನಗತ್ಯವಾಗಿ ಕಿರಿಕಿರಿ ಎದುರಿಸುತ್ತೀರಿ. ಇದರಿಂದಾಗಿಯೇ ನಿಕಟವಾಗಲಿದ್ದ ಸಂಬಂಧವೊಂದಕ್ಕೆ ಹಿನ್ನಡೆ. ಕೋಪ-ತಾಪದಿಂದ ಹಾನಿಯಾಗುವುದು.
ವಯಸ್ಕರಿಗೆ: ಮಕ್ಕಳಿಂದ ತುಂಬಾ ನಿರೀಕ್ಷಿಸುತ್ತೀರಿ. ಇದು ಸಂಯಮ ಕೆಡಿಸುತ್ತದೆ. ವೃತ್ತಿಯಲ್ಲಿ ಕಿರಿಕಿರಿ; ಮೆಚ್ಚುಗೆಯ ಮಾತುಗಳನ್ನು ಆಡುವುದರಿಂದ ಬಿಟ್ಟು ಹೋಗಿದ್ದ ಸಂಬಂಧವೊಂದು ಗಟ್ಟಿಯಾಗುತ್ತದೆ.
ಹಿರಿಯರಿಗೆ: ಆರೋಗ್ಯದ ಬಗ್ಗೆ ತವಕ ಬೇಡ. ಇಷ್ಟ ದೇವತಾ ಸ್ಮರಣೆ ನಿಷ್ಠೆಯಿಂದ ಮಾಡಿ. ಮಕ್ಕಳ ಸೋಲಿನ ಬಗ್ಗೆ ಆತಂಕ ಪಡುವುದರಿಂದ ನಿದ್ದೆ ಕೆಡಿಸಿಕೊಳ್ಳುತ್ತೀರಿ.
ಮೀನ…
ಯುವಜನರಿಗೆ: ಸಾಮಾಜಿಕ ಜಾಲತಾಣವನ್ನು ನಂಬಿ ಸಮಸ್ಯೆಗೆ ಸಿಕ್ಕಿಕೊಳ್ಳುತ್ತೀರಿ. ಕೆಡಕು ಮಾಡುವ ಮನಸ್ಸು ಬಿಡಿ.
ವಯಸ್ಕರಿಗೆ: ಕರ್ತವ್ಯ ಮಾಡುವ ಮನಸ್ಸನ್ನು ಬೆಳಸಿಕೊಳ್ಳದಿದ್ದರೇ ಅವಕಾಶಗಳು ಕೈ ತಪ್ಪುತ್ತದೆ. ಸಂಗಾತಿಯ ಬಗ್ಗೆ ಸಂಶಯ ಬೇಡ.
ಹಿರಿಯರಿಗೆ: ಹಳೆಯದನ್ನು ಎಷ್ಟು ನೆನಪಿಸಿಕೊಂಡರೂ ಪ್ರಯೋಜನವಿಲ್ಲ. ತಪ್ಪದೇ ವ್ಯಾಯಮ ಮಾಡಿ. ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಆಯೋಜಿ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಹುಬ್ಬಳಿಯ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟರು. ಅವರು “ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು” ಹಾಡು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಕೊನೆಗೆ ಮಾತನಾಡಿದ ಅವರು, ಹುಬ್ಬಳ್ಳಿಗೆ ಬಂದೊಡನೆ ಸಿದ್ದಾರೂಢರ ಮಠಕ್ಕೆ ತೆರಳಿ ದರ್ಶನ ಪಡೆದೆ. ಈ ನಗರಕ್ಕೆ ಆಗಾಗ ಬರುತ್ತಲೇ ಇರುತ್ತೇನೆ. ದೊಡ್ಮನೆ ಹುಡುಗ ಚಿತ್ರದ ದೃಶ್ಯಗಳನ್ನು ನಾಲ್ಕು ದಿನಗಳಕಾಲ ಇಲ್ಲೇ ಮಾಡಲಾಗಿತ್ತು ಎಂದರು. ಹುಬ್ಬಳ್ಳಿ ಜನರ…
ಸಾಧಿಸುವವನಿಗೆ ಛಲ ಹಾಗು ಶ್ರಮ ಇದ್ರೆ ತಮ್ಮ ಗುರು ಮುಟ್ಟದೆ ಇರೋದಿಲ್ಲ ಅನ್ನೋದಕ್ಕೆ ಈ ಮಹಿಳೆ ಒಂದೊಳ್ಳೆ ಉದಾಹರಣೆಯಾಗಿದ್ದಾರೆ, ನಿಜಕ್ಕೂ ಇವರ ಈ ಸಾಧನೆಯ ಹಾದಿಯನ್ನು ತಿಳಿದರೆ ನಾವು ಜೀವನದಲ್ಲಿ ಯಾವುದೇ ಕಷ್ಟಗಳಿಗೆ ನೋವುಗಳಿಗೆ ಕುಗ್ಗದೆ ಏನನ್ನ ಬೇಕಾದರೂ ಸಾಧಿಸಬೇಕು ಅನ್ನೋ ಹಠ ನಿಮ್ಮಲ್ಲಿ ಬೆಳೆಯುತ್ತದೆ. ಅಷ್ಟಕ್ಕೂ ಈ ಮಹಿಳೆಯ ಸಾಧನೆಯ ಹಿಂದಿನ ದಾರಿ ಹೇಗಿತ್ತು ಇವರು ಐಎಎಸ್ ಅಧಿಕಾರಿಯಾಗಲು ಹೇಗೆಲ್ಲ ಶ್ರಮ ಪಟ್ಟಿದ್ದಾರೆ ಅನ್ನೋದ ಅನ್ನೋ ಸ್ಪೋರ್ತಿದಾಯಕ ಮಾತುಗಳಿಗಾಗಿ ಮುಂದೆ ನೋಡಿ. ಹೆಸರು ಕೋಮಲ್ ಗಣಾತ್ರ…
ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ. ಮುದ್ದಹನುಮೇಗೌಡರು ತುಮಕೂರು ಕ್ಷೇತ್ರದ ಹಾಲಿ ಸಂಸದರಾಗಿದ್ದರೂ ಸಹ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದಿದ್ದು, ಮುದ್ದಹನುಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಿಂದ ಮೈತ್ರಿ…
ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದೆ. ಭಾರೀ ಮಳೆಗೆ ರತ್ನಗಿರಿ ತಾವ್ರೆ ಆಣೆಕಟ್ಟು ಮುರಿದು ಬಿದ್ದಿದೆ. ಆಣೆಕಟ್ಟಿನ ಕೆಳಗಿರುವ 7 ಹಳ್ಳಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಈವರೆಗೆ 6 ಶವವನ್ನು ಹೊರ ತೆಗೆಯಲಾಗಿದೆ. 17 ಮಂದಿ ನಾಪತ್ತೆಯಾಗಿದ್ದಾರೆ. ಎನ್ಡಿಆರ್ಎಫ್ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಆಣೆಕಟ್ಟೆಯ ಪಕ್ಕದಲ್ಲಿಯೇ ಇದ್ದ 12 ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. 12 ಮನೆಗಳಲ್ಲಿ ಎಷ್ಟು ಮಂದಿ ವಾಸವಾಗಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗ್ತಿಲ್ಲ. ಘಟನೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಜಿಲ್ಲಾಡಳಿತ ರಕ್ಷಣಾ ಕಾರ್ಯ…
ಬೆಂಗಳೂರು ನಿಮ್ಹಾನ್ಸ್ನ ಜನ ಆರೋಗ್ಯ ಕೇಂದ್ರದ ಎಪಿಡೀಮಿಯಾಲಜಿ ವಿಭಾಗದ ವತಿಯಿಂದ ಅನುಷ್ಠಾನಗೊಂಡಿರುವ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ರಾಷ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ನಾನ ಸಂಸ್ದೆ (ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ…
ಅನ್ನಪೂರ್ಣೇಶ್ವರಿ ದೇವಿ ನಿತ್ಯಹರಿದ್ವರ್ಣ ಬೆಟ್ಟಗಳ ಮಧ್ಯೆ ನೆಲೆಸಿದ್ದಾಳೆ. ಕೈಲಾಸದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಈ ತಾಯಿ ವರ್ಷವಿಡೀ ಭಕ್ತರನ್ನು ಆಕರ್ಷಿಸುತ್ತಾಳೆ. ದೂರದಿಂದ ಬಂದವರಿಗೆ ರಾತ್ರಿ ನಿವಾಸದ ವಸತಿ ಮತ್ತು ಉಚಿತ ಆಹಾರವನ್ನು ಒದಗಿಸಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯ ಸನ್ನಿಧಿ ಹಿಂದೂಗಳಿಗೆ ಬಹಳ ಪವಿತ್ರವಾದ ಸ್ಥಳವಾಗಿದೆ. ದೇವಿಯ ಮುಖ್ಯ ದೇವತೆ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟಿದೆ. ತಾಯಿ ಅನ್ನಪೂರ್ಣೇಶ್ವರಿ ನೆಲೆಸಿರುವ ಈ ಹೊರನಾಡು 831 ಮೀ (2,726 ಅಡಿ) ಎತ್ತರದಲ್ಲಿದೆ.. ದೇವಾಲಯದಲ್ಲಿ ಯಾರ ಬಲ…