ಉದ್ಯೋಗ

ಕೆಲಸದ ಜೊತೆಗೆ ಇವುಗಳನ್ನು ಮಾಡಿದ್ರೆ, ನಿಮ್ಗೆ ಕೆಲಸದಲ್ಲಿ ಪ್ರಮೋಷನ್ ಸಿಗುತ್ತೆ!

811

ಸರಕಾರಿ ಮತ್ತು ಖಾಸಗಿ ಕಂಪನಿ ಎಲ್ಲಿ ಕೆಲಸ ಮಾಡಿದರೂ ,ಯಾವುದೇ  ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಉದ್ದ್ಯೋಗಿಗಳು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದರು ಪ್ರಮೋಷನ್, ಸಂಬಳ ಹೆಚ್ಚಳದ ಬಗ್ಗೆ ಎದರು ನೋಡುತ್ತಿರುತ್ತಾರೆ.ಇದರಲ್ಲಿ ಕೆಲವರು ಸಕ್ಸಸ್ ಆಗುತ್ತಾರೆ.ಕೆಲವರಿಗೆ ಸಕ್ಸಸ್ ಸಿಗುವುದಿಲ್ಲ.

ಅದಕ್ಕೆ ಅನೇಕ ಕಾರಣಗಳಿರುತ್ತವೆ. ಕೆಲಸದಲ್ಲಿ ಅತ್ಯುತ್ತಮ ಪ್ರದರ್ಶನ ಇಲ್ಲದಿದ್ದರೆ ಅಧಿಕಾರಿಗಳ ಬಳಿ ಬೈಗುಳಗಳನ್ನು ಕೇಳಬೇಕಾಗುತ್ತದೆ.

ಹೀಗೆ ಅನೇಕ ಅಂಶಗಳು ಯಾವುದೇ ಉದ್ಯೋಗಿಯ ಪ್ರಮೋಷನ್, ಸಂಬಳ ಹೆಚ್ಚಳದೊಂದಿಗೆ ಬೆಸೆದುಕೊಂಡಿರುತ್ತವೆ. ಪ್ರಮೋಷನ್ ಬರಬೇಕೆಂದರೆ ಕೆಳಗೆ ತಿಳಿಸಿದ ವಿಧದಲ್ಲಿ ಮಾಡಿದರೆ ಶೀಘ್ರದಲ್ಲೇ ಅದು ಸಾಧ್ಯವಾಗುತ್ತದೆ. ಇದರ ಜತೆಗೆ  ಸಂಬಳವೂ ಹೆಚ್ಚಾಗುತ್ತದೆ.  ಏನು ಮಾಡಬೇಕೆಂದು ಮುಂದೆ ಓದಿ..

ಏನಪ್ಪಾ ಇದು ಈ ಕೆಲಸಗಳನ್ನು ಮಾಡಿದರೆ ನಮಗೆ ಪ್ರಮೋಷನ್ ಸಿಗುವುದೇ? ಎಂದು ಅನಿಸಬಹುದು ಆದ್ರೆ, ನಾವು ಕೆಳಗೆ ತಿಳಿಸಿದ ಸಂಗತಿಗಳು ಹಿಂದೂ ಪುರಾಣಗಳಲ್ಲಿವೆ. ಅವುಗಳನ್ನು ಅಷ್ಟು ಸುಲಭವಾಗಿ ತೆಗೆದುಹಾಕುವಂತಿಲ್ಲ. ಇವನ್ನು ಪಾಲಿಸಿ ನೋಡಿದರೆ ನಿಮಗೇ ಗೊತ್ತಾಗುತ್ತದೆ.

ಈ ಕೆಲಸವನ್ನು ಭಾನುವಾರದಿಂದ ಆರಂಭಿಸಬೇಕು. ಯಾವುದೇ ಭಾನುವಾರವಾದರೂ ಪರವಾಗಿಲ್ಲ.ಆ ದಿನ ಬೆಳಗ್ಗೆಯೇ ಎದ್ದು ತಲೆಸ್ನಾನ ಮಾಡಿ ಒಂದು ರಾಗಿ ಚೆಂಬು ಅಥವಾ ಪಾತ್ರೆಯಾವುದರಲ್ಲಾದರೂ ನೀರನ್ನು ತುಂಬಿಸಬೇಕು.

 

ಆ ಬಳಿಕ ಅದರಲ್ಲಿ ಎರಡು ಮೆಣಸಿನಕಾಯಿ ಬೀಜ ಹಾಕಬೇಕು. ಆ ಬಳಿಕ ಆ ನೀರನ್ನು ಸೂರ್ಯನಿಗೆ ಸಮರ್ಪಿಸಬೇಕು. ಸೂರ್ಯನಿಗೆಎದುರಾಗಿ ನಿಂತು ಆ ಪಾತ್ರೆಯನ್ನು ಸೂರ್ಯನ   ಕಡೆ ತೋರಿಸುತ್ತಾ ಅದನ್ನು ಮೇಲೆತ್ತಿ ನೀರನ್ನು ಕೆಳಕ್ಕೆ ಹಾಕಬೇಕು. ಈ ರೀತಿ ಬೆಳಗ್ಗೆ 8 ಗಂಟೆ ಒಳಗೆ ಮಾಡಬೇಕು. ಇದನ್ನು ವಾರಕಾಲ ತಪ್ಪದೆ ಮಾಡಿದರೆ ಪ್ರಮೋಷನ್ ಬರುತ್ತದೆ.

ಭಾನುವಾರ ಬೆಳಗ್ಗೆಯೇ ಎದ್ದು ತಲೆಸ್ನಾನ ಮಾಡಿ ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ  ಅದರಲ್ಲಿ ಸ್ವಲ್ಪ ಬೆಲ್ಲ ಹಾಕಿ, ಆ ನೀರಿನಲ್ಲಿ ಹಳದಿ ಬಣ್ಣದ ಹೂಗಳನ್ನು ಹಾಕಬೇಕು.

ಆ ಬಳಿಕನೀರನ್ನು ಮೇಲೆ ಹೇಳಿದ ವಿಧದಲ್ಲಿ ಹಾಕಬೇಕು. ಹೀಗೆ ಬೆಳಗ್ಗೆ 8 ಗಂಟೆಯ ಒಳಗೆ ಮಾಡಬೇಕು. ಇದನ್ನು 11 ದಿನಗಳ ಕಾಲ ಪಾಲಿಸಬೇಕು. ಹೀಗೆ ಮಾಡಿದರೆ ಪ್ರಮೋಷನ್  ಕೂಡಲೇ ಬರುತ್ತದೆ.

 

 

ಅಂಗವೈಕಲ್ಯ ಇರುವ ವ್ಯಕ್ತಿಗಳಿಗೆ ಆರ್ಥಿಕ ಸಹಾಯ ಅಥವ ಅನ್ನದಾನ ಮಾಡಿದರೂ ದೋಷ ನಿವಾರಣೆಯಾಗುತ್ತದೆ. ಇದರಿಂದ ಜಾಬ್ ಪ್ರಮೋಷನ್ ಲಭಿಸುವ ಸಾಧ್ಯತೆಗಳು ಅಧಿಕ. ಈರೀತಿಯಾಗಿ ಕನಿಷ್ಠ 2 ತಿಂಗಳಿಗೊಮ್ಮೆಯಾದರೂ ಮಾಡಬೇಕಂತೆ.

ಪ್ರತಿನಿತ್ಯ ಬೆಳಗ್ಗೆ ಸೂರ್ಯ ಉದಯಿಸುವ ಸಮಯದಲ್ಲಿ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂದು ಸೂರ್ಯನಿಗೆ ಎದುರಾಗಿ ನಿಂತು ಸಮರ್ಪಿಸಿದರೆ ಅದರಿಂದ ಸೂರ್ಯನ ಅನುಗ್ರಹಸಿಗುತ್ತದೆ. ಇದರಿಂದ ಉದ್ಯೋಗದಲ್ಲಿ ಪ್ರಮೋಷನ್ ಲಭಿಸುವುದಷ್ಟೇ ಅಲ್ಲ, ಸಂಬಳ ಸಹ ವೃದ್ಧಿಯಾಗುತ್ತದೆ.

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ