ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ಪಗಳ ತಾಯಿ ಯಾರೂ? ಅವಳು ತನ್ನ ಮಕ್ಕಳಿಗೆ ಶಾಪ ಕೊಡಲು ಕಾರಣವೇನು ? ಇವೆಲ್ಲದರ ಬಗ್ಗೆ ತಿಳಿಯುವ ಕುತೂಹಲ ಇದೆಯಲ್ಲವೇ! ಹಾಗಾದ್ರೆ ಮುಂದೆ ಓದಿ….
ಪ್ರಜಾಪತಿ ಬ್ರಹ್ಮನಿಗೆ ಕದ್ರು, ವಿನತೆ ಇತ್ಯಾದಿ ಅನೇಕ ಹಣ್ಣು ಮಕ್ಕಳಿದ್ದರು. ಇವರು ವಯಸ್ಸಿಗೆ ಬಂದ ಮೇಲೆ ಪ್ರಜಾವತಿ ಇವರಲ್ಲಿ ಕೆಲವರನ್ನು ಕಶ್ಯಪರೆಂಬ ತಪಸ್ವಿಗಳಿಗೆ ಕೊಟ್ಟು ಮದುವೆ ಮಾಡಿದನು. ಕಾಲಕ್ರಮದಲ್ಲಿ ಕದ್ರುವಿಗೆ ಅನೇಕ ಮಕ್ಕಳಾದುವು. ಇವುಗಳೆ ಸರ್ಪಗಳು. ಇವುಗಳಲ್ಲಿ ಮೊದಲನೆಯವನಾದ ಅದಿಶೇಷನೇ ಭೂಮಿಯನ್ನು ಹೊತ್ತಿರುವವನು. ವಿನತೆಗೆ ಅರುಣ ಮತ್ತು ಗರುಡ ಎಂಬ ಮಕ್ಕಳಾದವು. ಅರುಣನು ಸೂರ್ಯನ ಸಾರಥಿಯದನು. ಗರುಡನು ಮಹಾಶಕ್ತಿಶಾಲಿಯಾಗಿ ಬೆಳೆದನು. ವಿನತೆಯ ಮಗನಾದ್ದರಿಂದ ಗರುಡನಿಗೆ ವೈನತೆಯ ಎಂದೂ ಹೆಸರಿದೆ.
ಹೀಗಿರುವಾಗ ದೇವತೆಗಳು ರಾಕ್ಷಸರು ಅಮೃತಕ್ಕಾಗಿ ಕ್ಷೀರಸಾಗರವನ್ನು ಕಡೆದರು . ಆಗ ಕ್ಷೀರಸಾಗರದಿಂದ ಉದ್ಬವವಾದ ಅನೇಕ ವಸ್ತುಗಳಲ್ಲಿ ಉಚ್ಚೈಶ್ರವನ್ನು ಎಂಬ ಕುದುರೆಯೂ ಒಂದು. ಆ ಕುದುರೆಯೂ ಹಾಲಿನಂತೆ ಬೆಳ್ಳಗಿತ್ತು. ಅತ್ಯಾಕರ್ಷವಾಗಿತ್ತು. ಅದನ್ನು ನೋಡುವ ಸಲುವಾಗಿ ಮೂರು ಲೋಕದಿಂದಲೂ ಜೀವಿಗಳು ಬರುತ್ತಿದ್ದರು.
ಕದ್ರು ಮತ್ತು ವಿನಯತೆಯರಿಗೂ ಆ ಕುದರೆಯನ್ನು ಕಾಣುವ ತವಕ ಉಂಟಾಯಿತು. ಆ ಕುದುರೆ ಹೇಗಿದೆಯೂ ಎಂದು ಅವರಿಬ್ಬರೇ ಚರ್ಚಿಸಿದರು. ವಿನತೆಯು ‘’ಕುದುರೆ ಪೂರ್ತಿ ಬೆಳ್ಳಗಿದೆಯಂತೆ. ಒಂದೇ ಒಂದು ಕಪ್ಪು ಚುಕ್ಕೆಯು ಇಲ್ಲವಂತೆ’’ – ಎಂದಳು. ಕದ್ರುವು, ‘’ ಅದು ಹೇಗೆ ಸಾಧ್ಯ ? ಇನ್ನೇನು ಇಲ್ಲದಿದ್ದರೂ ಅದರ ಬಾಲವಾದರು ಕಪ್ಪಗಿರಬೇಕಲ್ಲವೇ ?’’ – ಎಂದಳು. ವಿನತೆ ‘’ಇಲ್ಲ ಬಾಲವೂ ಬೆಳ್ಳಗಿದೆಯಂತೆ’’ ಎಂದಳು. ಕದ್ರು ‘’ಸಾಧ್ಯವೇ ಇಲ್ಲ, ಬೇಕಾದರೆ ಪಂದ್ಯ ಕಟ್ಟೋಣ’’ – ಎಂದಳು. ‘’ಏನು ಪಂದ್ಯ ?’’ – ಎಂದಾಗ ‘’ಕುದುರೆಯೂ ಪೂರ್ತಿ ಬೆಳ್ಳಗಿದ್ದರೆ, ಜೀವನಪೂರ್ತಿಯಾಗಿ ನಾನು ನಿನ್ನ ಸೇವಕಿಯಗಿರುತ್ತೇನೆ. ಕುದುರೆಯೂ ಬಾಲ ಕಪ್ಪಾಗಿದ್ದರೆ ನೀನು ನನ್ನ ಸೇವಕಿಯಗಿರಬೇಕು ‘’ ಎಂದಳು. ವಿನತೆ ಇದಕ್ಕೆ ಒಪ್ಪಿದಳು. ಇಬ್ಬರೂ ಕುದುರೆಯನ್ನು ನೋಡಿ ಬರುವುದೆಂದು ನಿಶ್ಚಯಿಸಿದರು.
ವಿನೋದವಾಗಿ ಶುರುವಾದ ಮಾತು ತುಂಬ ದೊಡ್ಡದಾಗಿ ಹೋಯಿತು ಕದ್ರುವಿಗೂ ಕುದುರೆಯೂ ಬಾಲ ಕಪ್ಪಾಗಿದೆ ಎಂದು ನಂಬಿಕೆಯಿಲ್ಲ. ಎಲ್ಲರೂ ಕುದುರೆಯೂ ಪೂರ್ಣ ಬೆಳ್ಳಗಿದೆ ಎನ್ನುತ್ತಿದ್ದಾರೆ. ಆದರೆ ಯಾವುದೋ ಭಂಡ ಧೈರ್ಯದಿಂದ ಪಂದ್ಯ ಕಟ್ಟಿದ್ದಳು ಈಗ ಹೇಗಾದರೂ ಮಾಡಿ ಫಂದ್ಯದಲ್ಲಿ ಬೇಕೆಂದು ಯೋಚಿಸಿದಳು. ತನ್ನ ಮಕ್ಕಳಾದ ಸರ್ಪಗಳನ್ನು ಕರೆದಳು ಶೇಷ, ವಾಸುಕಿ, ತಕ್ಷಕ, ಕಾರ್ಕೋಟಕ ಮೊದಲಾದ ಸರ್ಪಗಳು ತಾಯಿಯ ಬಳಿಗೆ ಬಂದವು. ಕದ್ರುವು ತನಗೂ ವಿನತೆಗೂ ನಡೆದ ಮಾತುಕತೆಗಳನ್ನು ವಿವರಿಸಿದಳು ‘’ನೀವೆಲ್ಲರೂ ಹೋಗಿ ಆ ಕುದುರೆಯ ಬಾಲವನ್ನು ನಿಮ್ಮ ಶರೀರದಿಂದ ಮುಚ್ಚಿಬಿಡಿ. ಅದು ಕಪ್ಪಾಗಿ ಕಾಣುತ್ತದೆ. ನಾನು ಪಂದ್ಯದಲ್ಲಿ ಗೆದ್ದಂತಾಗುತ್ತದೆ’’ – ಎಂದಳು.
ಸರ್ಪಗಳು ‘’ಅಮ್ಮಾ ! ನಾವು ಈ ರೀತಿ ಮೋಸ ಮಾಡುವುದು ತಪ್ಪಲ್ಲವೇ ?’’ ಎಂದೂ ಕೇಳಿದವು. ಕದ್ರುವು ಕೂಪಗೊಂಡವು ‘’ನನ್ನ ಮಾತಿಗೆ ಎದುರುತ್ತರ ನೀಡುವಿರಾ ? ನನ್ನ ಮಾತಿಗೆ ಎದುರುತ್ತದೆ ನೀಡುವಿರಾ ? ನನ್ನ ಮಾತು ಮೀರಿದರೂ ಅಗ್ನಿಕುಂಡದಲ್ಲಿ ಬಿದ್ದು ಸಾಯುವಂತಾಗಲಿ’’ – ಎಂದು ಶಾಪ ಕೊಟ್ಟಳು. ಸರ್ಪಗಳು ದುಃಖ – ಭಯಗಳಿಂದ ತಾಯಿಯು ಹೇಳಿದಂತೆ ಉಚ್ಚೈಶ್ರವಸ್ಸಿನ ಬಾಲವನ್ನು ಹಿಡಿದುಕೊಂಡವು. ಅನಂತರ ಕದ್ರು ಮತ್ತು ವಿನತೆಯರು ಬಂದು ನೋಡಿದಾಗ ಆ ಕುದುರೆಯ ಬಾಲವೂ ಮಾತ್ರ ಕಪ್ಪಾಗಿತ್ತು ವಿನತೆಯರು ಬಂದು ನೋಡಿದಾಗ ಆ ಕುದುರೆಯೂ ಬಾಲವೂ ಮಾತ್ರ ಕಪ್ಪಾಗಿತ್ತು. ವಿನತೆಯು ತನ್ನ ಸೋಲನೋಪ್ಪಿಕೊಂಡು ಕದ್ರುವಿನ ಸೇವಕಿಯಾದಳು. ಇಲ್ಲಿ ಓದಿ:-ಆ ದಿನ ಈ ಯಾಗವೇನಾದರೂ ನಡೆದಿದ್ದರೆ, ಸರ್ಪಗಳ ವಂಶವೇ ಇರುತ್ತಿರಲಿಲ್ಲ..!
ಹೀಗೆ ವಿನತೆಯು ಕದ್ರುವಿನ ಸೇವಕಿಯದ್ದರಿಂದ ವಿನತೆಯು ಮಗನಾದ ಗರುಡನು ಸಹ ಕದ್ರು ಮತ್ತು ಅವಳ ಮಕ್ಕಳು ಹೇಳಿದಂತೆ ಮದುತ್ತಿರಬೇಕಾಯಿತು. ಸರ್ಪಗಳ ಗರುಡನನ್ನು ತಮ್ಮ ಸೇವಕನಂತೆ ಹಿನಾಯವಾಗಿ ನಡೆಸಿಕೊಳ್ಳಲಾರಂಬಿಸಿದವು. ಇದರಿಂದ ಗರುಡನ ಮನಸ್ಸಿಗೆ ಬಹಳ ದುಃಖವಾಯಿತು. ಹೇಗಾದರೂ ಮಾಡಿ ತನ್ನ ಮತ್ತು ತನ್ನ ತಾಯಿಯ ದಾಸ್ಯವನ್ನು ಹೋಗಲಾಡಿಸಬೇಕು ಎಂದು ಅವನು ಯೋಚಿಸಿದನು.
ಗರುಡನು ಸರ್ಪಗಳ ಬಳಿಗೆ ಹೋಗಿ ‘’ಅಯ್ಯಾ ! ನಾನು ನಿಮಗೆ ಏನ್ ಏನು ಕೆಲಸವನ್ನು ಮಾಡಿಕೊಟ್ಟರೆ ನಮ್ಮ ತಾಯಿಯ ದಾಸ್ಯವು ಹೋಗುತ್ತದೆ ತಿಳಿಸಿ’’ ಎಂದು ಕೇಳಿದನು. ಅದಕ್ಕೆ ಸರ್ಪಗಳ ತಮ್ಮ ತಾಯಿಯಿಂದ ತಮಗೆ ಬಂದ ಶಾಪವನ್ನು ನೆನೆಪಿಸಿಕೊಂಡು ‘’ ದೇವಲೋಕದಿಂದ ಅಮೃತವನ್ನು ತಂದದುಕೊಟ್ಟರೆ ನಿಮ್ಮ ಭಂಧವಿಮೊಚನೆಯಾಗುವುದು’’ – ಎಂದು ತಿಳಿಸಿದವು.
ಕೂಡಲೇ ಗರುಡನು ಆಕಾಶಕ್ಕೆ ಚಿಮ್ಮ್ಕಿದನು. ತನ್ನ ವಿಶಾಲವಾದ ರೆಕ್ಕೆಗಳನ್ನು ಪಟಪಟನೆ ಬಡಿಯುತ್ತ ವಯುವೆಗದಿಂದ ದೇವಲೋಕದ ಕಡೆ ಹಾರಿದನು. ಅವನು ಹಾರಿದ ರಭಸಕ್ಕೆ ದೊಡ್ಡ ದೊಡ್ಡ ವೃಕ್ಷಗಳು ಬಿದ್ದುಹೊದವು. ಪರ್ವತಗಳು ಅಲ್ಲಾಡಿ ಹೋದವು. ಅಂತಹ ವೇಗದಿಂದ ಗರುಡನು ದೇವಲೋಕಕ್ಕೆ ಬಂದನು.
ಗರುಡನು ಅಮೃತವನ್ನು ಕೊಂಡೊಯ್ಯಲು ಬರುತ್ತಿರುವನೆಂದು ತಿಳಿದ ದೇವೆಂದ್ರನು ಸೈನ್ಯವು ಗರುಡನ ಮೇಲೆ ಎರಗಿತು. ಆದರೆ ಗರುಡನು ಒಂದೇ ಕ್ಷಣದಲ್ಲಿ ಆ ಸೈನ್ಯದ ಧಾಳಿಯನ್ನು ನಿವರಿಸಿಕೊಂಡನು. ದೇವಲೋಕದ ಅಮೃತದ ಕುಂಭವನ್ನು ತೆಗೆದುಕೊಂಡು ಹೋಗಿ ಸರ್ಪಗಳ ಮುಂದಿಟ್ಟನು. ಹೀಗೆ ಸರ್ಪಗಳ ಕೋರಿಕೆಯನ್ನು ಈಡೇರಿಸಿ ಅವನು ತನ್ನ ತಾಯಿ ವಿನತೆಯ ದಾಸ್ಯವನ್ನು ಹೋಗಲಾಡಿಸಿದನು.
ಅಮೃತಕುಂಭವನ್ನು ತರುವ ಸಮಯದಲ್ಲಿ ಗರುಡನು ಪ್ರದರ್ಶಿಸಿದ ವಾಯುವೆಗವನ್ನು ಕಂಡು ಮಹಾವಿಷ್ಣುವಿಗೆ ಬಹಳ ಆನಂದವಾಯಿತು. ಅವನು ಗರುಡನನ್ನು ಕುರಿತು ‘’ಅಯ್ಯಾ ! ನೀನು ನನ್ನ ವಾಹನವಾಗಿರು’’ ಎಂದು ಕೇಳಿಕೊಂಡನು. ಗರುಡನು ಅದಕ್ಕೆ ಸಂತೋಷದಿಂದ ಒಪ್ಪಿಕೊಂಡನು. ಹೀಗೆ ಗರುಡನು ವಿಷ್ಣುವಾಹನನಾದನು.
ಸರ್ಪಗಳೆನೋ ಕದ್ರುವು ಹೇಳಿದಂತೆ ಕುದುರೆಯ ಬಾಲವನ್ನು ಹಿಡಿದು ಪಂದ್ಯದಲ್ಲಿ ಅವಳನ್ನು ಗೆಲ್ಲಿಸಿದುವು. ಆದರೆ ಅವಳು ಆ ಮುಂಚೆ ಅವರಿಗೆ ಕೊಟ್ಟಿದ್ದ ಶಾಪ ಮಾತ್ರ ಹಾಗೆಯೇ ಇತ್ತಲ್ಲ. ಆ ಶಪದಿಂದಾಗುವ ದುಷ್ಪರಿಣಾಮವನ್ನು ತಪ್ಪಿಸಿಕೊಳ್ಳುವುದು ಹೇಗೆಂದು ಅವರೆಲ್ಲ ಯೋಚಿಸಿದರು. ಗರುಡನೇನೋ ಅವರಿಗೆ ಅಮೃತವನ್ನು ತಂದುಕೊಟ್ಟಿದ್ದನು. ಆದರೆ ಇಂದ್ರನು ಅಪಹರಿಸಿಕೊಂಡು ಹೋದುದರಿಂದ ಅವರಿಗೆ ಅದು ದಕ್ಕಿರಲಿಲ್ಲ.
ಆಗ ಏಳಪತ್ರನೆಂಬ ಸರ್ಪವು ‘’ನಾವು ಈಗಲೇ ಸೂಕ್ತವಾದ ಸಂಬಂಧವನ್ನು ಹುಡುಕಿ, ನಮ್ಮ ತಂಗಿ ಜರತ್ಕ್ರಾರುವಿನ ಮದುವೆಯನ್ನು ಮಾಡಿಬಿಡೊಣ. ಅವಳ ಹೊಟ್ಟೆಯಲ್ಲಿ ಹುಟ್ಟುವ ಮಗನು ಬೇರೆ ವಂಶಕ್ಕೆ ಸೇರುವುದರಿಂದ, ಅವನಿಗೆ ನಮ್ಮ ತಾಯಿಯ ಶಾಪದ ಭೀತಿ ಇರುವುದಿಲ್ಲ. ಅವನು ಯಾವುದಾದರೂ ಯೋಜನೆಯಿಂದ ನಮಗೊದಗಿರುವ ದುರವಸ್ತೆಯನ್ನು ತಪ್ಪಿಸಲು ಯತ್ನಿಸಬಹುದು’’- ಎಂದನು ಸರ್ಪಗಳ ಜರತ್ಕಾರವನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಿದರು. ಮುಂದೆ ಜರತ್ಕಾರು ಅಸ್ತೀಕ ಎಂಬ ಮಗನಿಗೆ ಜನ್ಮ ಕೊಟ್ಟಳು. ಆಸ್ತಿಕನು ಸಕಲ ವಿದ್ಯಾಪಾರಂಗತನಾಗಿ ಬೆಳೆದನು’’
ಉಗ್ರಶ್ರವ ಸೌತಿಗಳು ಇಷ್ಟು ಕಥೆಯನ್ನು ಹೇಳಿ ಮತ್ತೆ ಜನಮೇಜಯ ಸರ್ಪಯಾಗದ ಬಗ್ಗೆ ಹೇಳಲಾರಂಭಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಜೀವನ ಸಂಗಾತಿ ಬಗ್ಗೆ ಎಲ್ಲರೂ ತಮ್ಮದೇ ಆದಂತ ಕನಸು ಕಟ್ಟಿರುತ್ತಾರೆ.ಆದ್ರೆ ಈಗಂತೂ ಜೀವನ ಸಂಗಾತಿ ಹುಡುಕುವುದು ಅಷ್ಟೋಂದು ಸುಲಭವಲ್ಲ. ಜೀವನ ಸಂಗಾತಿಯ ಆಯ್ಕೆಗೆ ತಲೆಕೆಡಿಸಿಕೊಳ್ಳುವವರು ಎಷ್ಟು ಜನರಿಲ್ಲ? ಸುಂದರವಾಗಿದ್ದರೆಅನುಕೂಲವಿಲ್ಲ, ಅನುಕೂಲತೆಯಿದ್ದರೆ ಹುಡುಗ ಚೆನ್ನಾಗಿಲ್ಲ, ಎರಡೂ ಇದ್ದರೂ ಕುಟುಂಬದ ಹಿನ್ನೆಲೆಸರಿಯಿಲ್ಲ, ಎಲ್ಲವೂ ಸರಿ ಇದ್ದರೆ ಜಾತಕ ಆಗಿ ಬರೋಲ್ಲ… ಮದುವೆ ಮಾಡೋದಂದ್ರೆ ಸುಲಭಾನಾ? ಎಲ್ಲವೂ ಸರಿ ಇರಬೇಕಂದ್ರೆ ಮದುವೆನೇ ಆಗಲ್ಲ, ರಾಜಿ ಆಗ್ಲೇ ಬೇಕು ಎಂದುಕೊಂಡೇ ಯಾರೋ ಒಬ್ಬರನ್ನು ಒಪ್ಪಿಕೊಳ್ಳುವುದುನಂತರದ ಮಾತು. ಆದರೆ ಹೀಗೆ ವರಾನ್ವೇಷಣೆಯ ಪ್ರಕ್ರಿಯೆಯಲ್ಲಿ ಹುಡುಗಿಯರು ಹಾಕುವ ಷರತ್ತುಳು, ವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ಹುಡುಗನನ್ನು ಹುಡುಕುವ ಪಾಲಕರ ಗೋಳನ್ನು ನೋಡಿದರೆ ಅಯ್ಯೋ ಎನ್ನಿಸಬಹುದು! ಆದರೆ ಸಾಕಷ್ಟು ಷರತ್ತು, ಬೇಡಿಕೆಗಳೆಲ್ಲ ಇದ್ದಾಗ್ಯೂ ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಥವಾ ಅವನ್ನು ತಿರಸ್ಕರಿಸು ವುದಕ್ಕೆತೆಗೆದುಕೊಳ್ಳುವ ಸಮಯ ಕೇವಲ ಹದಿನೈದು ನಿಮಿಷವಂತೆ! ಭವಿಷ್ಯ ಪೂರಾ ಜೊತೆಯಾಗಿರಬೇಕಾದ ವ್ಯಕ್ತಿಯ ಬಗ್ಗೆ ಹದಿನೈದು ನಿಮಿಷ ಮಾತ್ರವೇ ಯೋಚಿಸ್ತಾರಾ? ಹೌದು ಎನ್ನುತ್ತದೆ ವಾಷಿಂಗ್ಟನ್ನಿನ ಮನಃಶಾಸ್ತ್ರಜ್ಞರ ತಂಡ. ಮನಸ್ಸಿನಲ್ಲಿತನ್ನನ್ನು ವರಿಸುವ ಹುಡುಗನ ಬಗ್ಗೆ ಎಷ್ಟೇ ಕನಸುಗಳಿದ್ದರೂ, ಗಂಭೀರವಾಗಿ ಜೀವನ ಸಂಗಾತಿಯ ಆಯ್ಕೆಯ ಬಗ್ಗೆ ಯೋಚಿಸುವಾಗ ಮಾತ್ರ ಮಹಿಳೆ ಹೆಚ್ಚುಯೋಚಿಸುವುದಿಲ್ಲವಂತೆ. ತನ್ನೆಲ್ಲ ನಿರೀಕ್ಷೆಯೊಂದಿಗೆ ಕ್ರಮೇಣ ಕೊಂಚ ರಾಜಿಯಾಗುತ್ತ, ತನ್ನಿಂದಲೂ ತನ್ನ ಸಂಗಾತಿ ಇಂಥವನ್ನೆಲ್ಲ ನಿರೀಕ್ಷಿಸು ತ್ತಾನಲ್ಲ ಎಂಬ ಸತ್ಯವನ್ನು ಅರಿಯುತ್ತಾಳಂತೆ.ಕೊರತೆಗಳನ್ನು ಸರಿಪಡಿಸಿಕೊಂಡು, ಪರಸ್ಪರರ ಅಭಿರುಚಿಗಳನ್ನು ಗೌರವಿಸಿಕೊಂಡು ಬದುಕಿದರೆ ಇಬ್ಬರ ನಿರೀಕ್ಷೆಯೂ ನಿಜವಾಗುತ್ತೆ ಎಂಬುದು ಕ್ರಮೇಣಅರ್ಥವಾಗುತ್ತದೆಯಂತೆ. ಆದರೆ ಈ ಎಲ್ಲ ಜ್ಞಾನೋದಯಕ್ಕೂ ಮುನ್ನ ಆಕೆ ಭವಿಷ್ಯದ ಬಗ್ಗೆ ಯೋಚಿಸಲು ತೆಗೆದುಕೊಳ್ಳುವ ಸಮಯ ಮಾತ್ರ ತೀರಾ ಕಡಿಮೆ ಎನ್ನಿಸುತ್ತದಲ್ಲವೇ!?
ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್ನಲ್ಲಿ ನಡೆದಿದೆ.ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿ ಈ ಕಟ್ಟಡ ಇದ್ದು, ಭಾರೀ ಮಳೆಯಿಂದಾಗಿ ಕುಸಿದಿದೆ…
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ಸಂತೋಷದ ಸುದ್ದಿ…
ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಹಾಗೂ ಮಕ್ಕಳು ಭೇಟಿ ನೀಡಿದರು. ಈ ವೇಳೆ ಪ್ರತಾಪ್ ಅವರ ಪತ್ನಿ ಸರಿತಾ ಸ್ಪರ್ಧಿ ಪ್ರಿಯಾಂಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸೋಮವಾರ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಸರಿತಾ ಆಗಮಿಸಿದ್ದರು. ಈ ವೇಳೆ ಸರಿತಾ ಅವರು ಮನೆ ಮಂದಿ ಜೊತೆ ಆತ್ಮೀಯವಾಗಿ ಮಾತನಾಡಿಸಿ ತಾವು ತಂದಿದ್ದ ತಿಂಡಿಯನ್ನು ಪ್ರತಾಪ್ ಅವರಿಗೆ ನೀಡದೇ ವಾಸುಕಿ ಅವರಿಗೆ ಕೊಟ್ಟಿದ್ದಾರೆ. ಸರಿತಾ, ಪ್ರತಾಪ್ ಜೊತೆ ಮಾತನಾಡಿದ ಬಳಿಕ…
ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರಕ್ಕೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ, ಒಬ್ಬ ವ್ಯಕ್ತಿ ಗರಿಷ್ಠ ಎಷ್ಟುಆಹಾರ ಸೇವಿಸಬಲ್ಲ ಎಂಬುದನ್ನು ಹೋಟೆಲ್ನವರೇ ತಿಳಿಸಬೇಕು ಹೇಳಿದೆ.
7 ವರ್ಷದ ಬಾಲಕಿಯಬ್ಬಳು 14 ವಾಹನಗಳನ್ನು ಚಾಲನೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಮೈಸೂರಿನ 2ನೇ ತರಗತಿ ವಿದ್ಯಾರ್ಥಿ ಈ ಸಾಹಸ ಮಾಡಿದ್ದಾಳೆ. 2ನೇ ತರಗತಿ ಓದುತ್ತಿರುವ ರಿಫಾ ತಸ್ಕೀನ್ ದಾಖಲೆ ನಿರ್ಮಿಸಿರುವ ಪುಟ್ಟ ಬಾಲಕಿಯಾಗಿದ್ದಾಳೆ. ದ್ವಿಚಕ್ರ ವಾಹನದಿಂದ ಬಹುಚತ್ರದ ಲಾರಿಯ ಸ್ವೀ ರಿಂಗ್ ಹಿಡಿದು ಕು ಳಿತ ಬಾಲಕಿ ದೂಳೆಬ್ಬಿಸುವ ವೇಗದಲ್ಲಿ ಮೈಸೂರಿನ ಈದ್ಗಾ ಮೈದಾನದಲ್ಲಿ ಹಲವು ಸುತ್ತುಗಳನ್ನು ಹಾಕುವ ಮೂಲಕ ನೆರೆದಿದ್ದ ಜನರಲ್ಲಿ ಅಚ್ಚರಿಯನ್ನುಂಟು ಮಾಡಿದಳು. ಬಳಿಕ ಬನ್ನಿಮಂಟಪದ ಸಂತ ಸೋಸೆಫ್…