ಉಪಯುಕ್ತ ಮಾಹಿತಿ

ಬಯಲುಸೀಮೆ ಕೋಲಾರದ ಈಗಿನ ಬರಗಾಲದ ಪರಿಸ್ಥಿತಿಗೆ ಇದು ಮುಖ್ಯ ಕಾರಣ ಇರಬಹುದಾ? ನೀವೇನಂತೀರಾ?

1216

ಇದು ಬಯಲುಸೀಮೆಯ ಗಡಿನಾಡು ಕೋಲಾರ ಜಿಲ್ಲೆಯ ಸ್ಥಿತಿ. ಒಂದು ಕಾಲದಲ್ಲಿ ಅತಿ ಹೆಚ್ಚು ಕೆರೆಗಳ ನಾಡು ಎಂದು ಪ್ರಸಿದ್ಧಿ ಪಡೆದು ಸದಾ ಹಸಿರಿನಿಂದ ಕೂಡಿದ್ದ ಜಿಲ್ಲೆಯಾಗಿತ್ತು ಕೋಲಾರ. ಕಾಲಾಂತರ ಮಳೆರಾಯನ ಮುನಿಸು ಜಿಲ್ಲೆಯ ಮೇಲೆ ಬಂದಿದ್ರಿಂದ ಇಲ್ಲಿನ ರೈತರು ಪರ್ಯಾಯ ಹಾಗೂ ಆಧುನಿಕ ಕೃಷಿಯತ್ತ ಮುಂದಾದ್ರು. ಇದ್ರಿಂದ ಹೆಚ್ಚು ಲಾಭ ಹಾಗೂ ಕಡಿಮೆ ಶ್ರಮವುಳ್ಳ ನೀಲಗಿರಿ ಸಸಿಗಳನ್ನು ನೆಡಲು ರೈತ್ರು ಮುಂದಾದ್ರು. ಇದ್ರಿಂದ ಭೂಮಿಯಲ್ಲಿ ಇರುವ ನೀರಿನ ಪ್ರಮಾಣವನ್ನು ಈ ಮರಗಳು ತೆಗೆದುಕೊಂಡು ನೆಲವನ್ನು ಬರಡುಗೊಳಿಸಿತು. ಇದರಿಂದ ಅಂತರ್ಜಲಮಟ್ಟ ತೀವ್ರ ಕುಸಿದಿದೆ.

ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಹಿನ್ನೆಲೆ ಶೇಕಡವಾರು ರೈತರು ನೀಲಗಿರಿಯನ್ನೇ ಅವಲಂಬಿಸಿದ್ದಾರೆ.    1000 ಹಾಗೂ 1500 ಅಡಿ ಬೋರ್‌ವೆಲ್ ಕೊರೆಸಿದ್ರು ನೀರು ದೊರೆಯದಂತಾಗಿದೆ. ದೊರೆತ ಅಂತರ್ಜಲದಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದೆ. ಹೀಗಾಗಿ ಸರ್ಕಾರ ಈಗಾಗಲೇ ನೀಲಗಿರಿ ಬೆಲಯುವುದನ್ನು ನಿಷೇದಿಸಿದೆ.

ಹಾಗಾದ್ರೆ ಈ ನೀಲಗಿರಿ ಮರಗಳು ನಮ್ಮ ಭಾರತಕ್ಕೆ ಬಂದಿದ್ದು ಎಲ್ಲಿಂದ ಗೊತ್ತಾ?

 

ನೀಲಗಿರಿಯು  ಮಿರ್ಟ್‌ಲ್‌‌ ಕುಟುಂಬವಾದ ಮಿರ್ಟೇಸಿಯಲ್ಲಿನ ಹೂಬಿಡುವ ಮರಗಳ (ಮತ್ತು ಕೆಲವೊಂದು ಪೊದೆಸಸ್ಯಗಳ) ಒಂದು ಬಹುವಿಧದ ಕುಲವಾಗಿದೆ. ಈ ಕುಲದ ಸದಸ್ಯ ಮರಗಳನ್ನು ಆಸ್ಟ್ರೇಲಿಯಾದ ಮರದ ಸಸ್ಯಸಂಪತ್ತು ವ್ಯಾಪಿಸಿದೆ. ಬಹುತೇಕವಾಗಿ ಆಸ್ಟ್ರೇಲಿಯಾದ ಸ್ಥಳೀಯ ಸಸ್ಯವಾಗಿರುವ ನೀಲಗಿರಿ ಯ ೭೦೦ಕ್ಕೂ ಹೆಚ್ಚು ಜಾತಿಗಳು ಅಸ್ತಿತ್ವದಲ್ಲಿವೆ, ಮತ್ತು ಅತ್ಯಂತ ಚಿಕ್ಕ ಸಂಖ್ಯೆಯಲ್ಲಿ ಇವು ನ್ಯೂಗಿನಿಯಾ ಮತ್ತು ಇಂಡೋನೇಷ್ಯಾದ ಮಗ್ಗುಲಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಫಿಲಿಪ್ಪೀನ್‌ ದ್ವೀಪಸಮೂಹದಷ್ಟು ದೂರದ ಉತ್ತರ ಭಾಗದಲ್ಲಿ ಒಂದು ಜಾತಿಯು ಕಾಣಿಸಿಕೊಳ್ಳುತ್ತದೆ. ಕೇವಲ ೧೫ ಜಾತಿಗಳು ಆಸ್ಟ್ರೇಲಿಯಾದಿಂದ ಆಚೆಗೆ ಕಾಣಿಸಿಕೊಳ್ಳುತ್ತವೆ, ಮತ್ತು ಕೇವಲ ೯ ಜಾತಿಗಳು ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಮೆರಿಕಾ ಖಂಡಗಳು, ಯುರೋಪ್‌, ಆಫ್ರಿಕಾ, ಮೆಡಿಟರೇನಿಯನ್‌ ನೆಲಸುತ್ತು ರೇವು, ಮಧ್ಯಪ್ರಾಚ್ಯ, ಚೀನಾ ಹಾಗೂ ಭಾರತದ ಉಪಖಂಡವನ್ನುಒಳಗೊಂಡಂತೆ ಉಷ್ಣವಲಯ ಹಾಗೂ ಉಪೋಷ್ಣವಲಯದಾದ್ಯಂತ ನೀಲಗಿರಿ ಯ ಜಾತಿಗಳನ್ನು ಬೆಳೆಸಲಾಗುತ್ತದೆ.

ನೀಲಗಿರಿ ಮರಗಳು” ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಮೂರು ಒಂದೇ ರೀತಿಯ ಕುಲಗಳಲ್ಲಿ ನೀಲಗಿರಿ ಯು ಒಂದಾಗಿದ್ದು, ಕೊರಿಂಬಿಯಾ ಹಾಗೂ ಆಂಗೊಫೋರಾ ಗಳು ಉಳಿದ ಎರಡು ಕುಲಗಳಾಗಿವೆ. ಅನೇಕ ಜಾತಿಗಳು, ಇತರವುಗಳಿಗಿಂತ ಭಿನ್ನವಾಗಿ, ಅಂಟು ಮರಗಳು ಎಂದು ಚಿರಪರಿಚಿತವಾಗಿವೆ. ಏಕೆಂದರೆ, ಅನೇಕ ಜಾತಿಗಳು ತೊಗಟೆಯಲ್ಲಿನ ಯಾವುದೇ ಮುರಿತದಿಂದ ಹೇರಳವಾದ ಸಸ್ಯರಸವನ್ನು ಹೊರಸೂಸುತ್ತವೆ (ಉದಾಹರಣೆಗೆ ಗೀಚಿದಂಥ ಅಂಟು). ಈ ಕುಲದ ‘ಯೂಕಲಿಪ್ಟಸ್‌’ ಎಂಬ ಸಾರ್ವತ್ರಿಕ ನಾಮವನ್ನು ಗ್ರೀಕ್‌ ಪದಗಳಿಂದ ಪಡೆಯಲಾಗಿದೆ. ಗ್ರೀಕ್‌ ಭಾಷೆಯಲ್ಲಿ ευ (ಯೂ ) ಎಂದರೆ “ಚೆನ್ನಾಗಿ” ಎಂಬ ಅರ್ಥ ಹಾಗೂ καλυπτος (ಕಲಿಪ್ಟಸ್‌ ) ಎಂದರೆ ಚೆನ್ನಾಗಿ “ಆವರಿಸಲ್ಪಟ್ಟಿರುವ” ಎಂಬ ಅರ್ಥವಿದ್ದು, ಇದು ಹೂವನ್ನುಆರಂಭದಲ್ಲಿ ಅವಿಸಿಟ್ಟುಕೊಂಡಿರುವ ಪುಷ್ಪಪಾತ್ರೆಯ ಮೇಲಿನ ಬೀಜಕಣಕೋಶದ ಮುಚ್ಚಳಕ್ಕೆ ಉಲ್ಲೇಖಿಸಲ್ಪಡುತ್ತದೆ.

ನೀಲಗಿರಿ ಯು ಜಾಗತಿಕ ಅಭಿವೃದ್ಧಿಯ ಸಂಶೋಧಕರು ಹಾಗೂ ಪರಿಸರವಾದಿಗಳ ಗಮನವನ್ನು ಸೆಳೆದಿದೆ. ಇದೊಂದು ವೇಗವಾಗಿ-ಬೆಳೆಯುವ ಕಾಡಿನ ಮೂಲವಾಗಿದ್ದು, ಇದರ ತೈಲವನ್ನುಶುದ್ಧೀಕರಣಕ್ಕಾಗಿ ಬಳಸಬಹುದಾಗಿದೆ ಹಾಗೂ ಇದು ಒಂದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಹೆಚ್ಚು ನೀರನ್ನು ಹೀರುವ ಗುಣವನ್ನು ಕೆಲವೊಮ್ಮೆ ಜೌಗುನೆಲಗಳನ್ನುಒಣಗಿಸಲು, ತನ್ಮೂಲಕ ಮಲೇರಿಯಾದ ಅಪಾಯವನ್ನು ತಗ್ಗಿಸಲು ಬಳಸಲಾಗುತ್ತದೆ. ಅವುಗಳ ಸ್ವಾಭಾವಿಕ ವ್ಯಾಪ್ತಿಯಿಂದ ಆಚೆಗೆ ನೀಲಗಿರಿಯ ಮರಗಳನ್ನು, ಬಡಜನತೆಯ ಮೇಲೆ ಅವು ಬೀರುವ ಪ್ರಯೋಜನಕಾರಿ ಪ್ರಭಾವಕ್ಕಾಗಿ ಶ್ಲಾಘಿಸುವುದೂ ಉಂಟು ಮತ್ತು ಆಕ್ರಮಣಶೀಲ ನೀರು-ಚೂಷಕಗಳಾಗಿರುವ ಕಾರಣಕ್ಕಾಗಿ ಅವುಗಳನ್ನು ತಿರಸ್ಕಾರದಿಂದ ಕಾಣುವುದೂ ಉಂಟು. ಇದು ಅವುಗಳ ಒಟ್ಟಾರೆ ಪ್ರಭಾವದ ಕುರಿತಾದ ವಿವಾದಕ್ಕೆ ಕಾರಣವಾಗಿದೆ.

ಗಾತ್ರ ಮತ್ತು ಆವಾಸಸ್ಥಾನ

ಬಲಿತಿರುವ ಒಂದು ನೀಲಗಿರಿ ಯು ಒಂದು ಕೆಳಮಟ್ಟದ ಪೊದೆಸಸ್ಯದ ಅಥವಾ ಒಂದು ಅತ್ಯಂತ ದೊಡ್ಡ ಮರದ ಸ್ವರೂಪವನ್ನು ತಾಳಬಹುದು. ಜಾತಿಗಳನ್ನು ವಿಭಜಿಸಲು ಅನುವಾಗುವಂಥ ಮುಖ್ಯವಾದ ಮೂರು ಬೆಳೆಯುವ ಸ್ವಭಾವ ರೀತಿಗಳು ಹಾಗೂ ನಾಲ್ಕು ಗಾತ್ರದ ವರ್ಗಗಳು ಕಂಡುಬರುತ್ತವೆ.

ಒಂದು ಸಾಮಾನ್ಯೀಕರಣವಾಗಿ “ಕಾಡು ಮರಗಳು” ಏಕ-ಕಾಂಡದವಾಗಿರುತ್ತವೆ ಮತ್ತು ಒಂದು ಕಿರೀಟವನ್ನು ಹೊಂದುವ ಮೂಲಕ ಸಂಪೂರ್ಣ ಮರದ ಎತ್ತರದ ಒಂದು ಕಿರುಭಾಗವನ್ನು ರೂಪಿಸುತ್ತವೆ. “ಕಾಡುಪ್ರದೇಶದ ಮರಗಳು” ಏಕ-ಕಾಂಡದವಾಗಿದ್ದರೂ ಸಹ ನೆಲದ ಮಟ್ಟದಿಂದ ಒಂದು ಕಿರು ಅಂತರದಷ್ಟು ಮೇಲಕ್ಕೆ ಅವು ಕವಲೊಡೆಯಬಹುದು.

“ಮ್ಯಾಲಿಗಳು” ನೆಲದ ಮಟ್ಟದಿಂದಲೇ ಬಹು-ಕಾಂಡದವಾಗಿರುವ ವಿಶಿಷ್ಟತೆಯನ್ನು ಹೊಂದಿದ್ದು, ಸಾಮಾನ್ಯವಾಗಿ …10 m (33 ft)ಗಿಂತ ಕಡಿಮೆಯ ಎತ್ತರವನ್ನು ಹೊಂದಿರುತ್ತವೆ. ಹಲವು ವೇಳೆ ಅವು ಸಣ್ಣರೆಂಬೆಗಳ ತುದಿಗಳಲ್ಲಿ ಉಳಿದವಕ್ಕಿಂತ ಅಧಿಕವಾಗಿ ಕಿರೀಟವನ್ನು ಹೊಂದಿರುತ್ತವೆ ಮತ್ತು ಬಿಡಿಯಾದ ಅಥವಾ ಪ್ರತ್ಯೇಕವಾದ ಸಸ್ಯಗಳು ಸೇರಿಕೊಂಡು ಒಂದು ತೆರೆದಿರುವ ಇಲ್ಲವೇ ಮುಚ್ಚಲ್ಪಟ್ಟಿರುವ ರಚನೆಯನ್ನು ಸೃಷ್ಟಿಸಬಹುದು. ಅನೇಕ ಮ್ಯಾಲಿ ಮರಗಳು ತುಂಬಾ ಕೆಳಮಟ್ಟದಲ್ಲಿ-ಬೆಳೆಯುವ ಸ್ವಭಾವವನ್ನು ಹೊಂದಿರಲು ಸಾಧ್ಯವಿದ್ದು, ಅಂಥವುಗಳನ್ನು ಒಂದು ಪೊದೆಸಸ್ಯವಾಗಿಪರಿಗಣಿಸಲಾಗುತ್ತದೆ.

ಮರದ ಇತರ ಎರಡು ಸ್ವರೂಪಗಳು ಪಶ್ಚಿಮದ ಆಸ್ಟ್ರೇಲಿಯಾದಲ್ಲಿ ಗಮನಾರ್ಹವಾಗಿದ್ದು, “ಮ್ಯಾಲೆಟ್‌” ಹಾಗೂ “ಮಾರ್ಲಾಕ್‌” ಎಂಬ ಸ್ಥಳೀಯ ಹೆಸರುಗಳನ್ನು ಬಳಸಿಕೊಂಡು ಅವುಗಳನ್ನು ವಿವರಿಸಲಾಗುತ್ತದೆ. “ಮ್ಯಾಲೆಟ್‌” ಸ್ವರೂಪವು ಚಿಕ್ಕದರಿಂದ ಮಧ್ಯಮ-ಗಾತ್ರದವರೆಗಿನ ಒಂದು ಮರವಾಗಿದ್ದು, ಅದು ಲಿಗ್ನೋಟ್ಯೂಬರ್‌‌ ಎಂದು ಕರೆಯಲ್ಪಡುವ ಗಡ್ಡೆಗಳನ್ನು ಬಿಡುವುದಿಲ್ಲ ಮತ್ತು ಒಂದು ಸಾಕಷ್ಟು ಉದ್ದವಾದ ಕಾಂಡವನ್ನು ಹೊಂದಿರುತ್ತದೆ. ಲಂಬಾಕಾರವಾಗಿ ಕವಲೊಡೆಯುವ ಲಕ್ಷಣ ಮತ್ತು ಅನೇಕವೇಳೆ ಎದ್ದುಕಾಣುವಂತಿರುವ ಒಂದು ದಟ್ಟವಾದ ತುದಿಯ ಕಿರೀಟದವಿಶಿಷ್ಟತೆಯನ್ನು ಇದು ಹೊಂದಿರುತ್ತದೆ. ಇದು  , E. ಕ್ಲಿವಿಕೋಲಾ ಮತ್ತು E. ಓರ್ನಾಟಾ ಮೊದಲಾದವುಗಳ ಬಲಿತ ಆರೋಗ್ಯಕರ ಮಾದರಿಗಳ ಸಾಮಾನ್ಯ ಬೆಳೆಯುವ ಸ್ವಭಾವವಾಗಿರುತ್ತದೆ. ಮ್ಯಾಲೆಟ್‌ಗಳ ನಯವಾದ ತೊಗಟೆಯು ಅನೇಕ ಬಾರಿ ಒಂದು ಸ್ಯಾಟಿನ್ನಿನಂಥ ನವಿರು ಮತ್ತು ಹೊಳಪನ್ನು ಹೊಂದಿರುತ್ತದೆ ಹಾಗೂ ಅದು ಬಿಳಿ, ಕೆನೆ, ಬೂದು, ಹಸಿರು ಅಥವಾ ತಾಮ್ರದ ಬಣ್ಣದಲ್ಲಿರಲು ಸಾಧ್ಯವಿದೆ.

ನೀಲಗಿರಿ ಎಲೆಗಳನ್ನು ತಿನ್ನುತ್ತಿರುವ ಫ್ಯಾಸ್ಕೋಲಾರ್ಕ್ಟಸ್‌ ಸಿನೆರಿಯಸ್‌ ಕೋಲಾ ಕರಡಿ

 

ಸಾಮಾನ್ಯವಾಗಿ ನೀಲಗಿರಿ ಮರದ ಗಾತ್ರಗಳು ಈ ಕೆಳಗಿನಂತೆ ಇರುತ್ತವೆ:-

  • ಸಣ್ಣದು — ..10 m (33 ft)ರವರೆಗಿನ ಎತ್ತರವನ್ನು ಹೊಂದಿರುವುದು
  • ಮಧ್ಯಮ-ಗಾತ್ರದ್ದು — …10–30 m (33–98 ft)ನಷ್ಟಿರುವುದು
  • ಎತ್ತರದ್ದು — …30–60 m (98–197 ft)ನಷ್ಟಿರುವುದು
  • ಅತ್ಯಂತ ಎತ್ತರದ್ದು — …60 m (200 ft)ಗಿಂತ ಮೀರಿದ್ದು

ನೆಡುತೋಪು ಮತ್ತು ಪರಿಸರ ವಿಜ್ಞಾನದ ಸಮಸ್ಯೆಗಳು:-

ಸರ್‌ ಜೋಸೆಫ್‌ ಬ್ಯಾಂಕ್ಸ್‌‌ ಎಂಬ ಸಸ್ಯವಿಜ್ಞಾನಿಯೊಬ್ಬ 1770ರಲ್ಲಿ ಕೈಗೊಂಡ ಕುಕ್‌ ವಿಶೇಷ ಕಾರ್ಯಯಾತ್ರೆಯ ಸಂದರ್ಭದಲ್ಲಿ ನೀಲಗಿರಿ ಯನ್ನು ಆಸ್ಟ್ರೇಲಿಯಾದಿಂದ ವಿಶ್ವದ ಇತರ ಭಾಗಗಳಿಗೆ ಮೊದಲು ಪರಿಚಯಿಸಿದ. ತರುವಾಯ ಇದು ವಿಶ್ವದ ಅನೇಕ ಭಾಗಗಳಿಗೆ ಪರಿಚಯಿಸಲ್ಪಟ್ಟಿತು. ಅವುಗಳಲ್ಲಿ ಗಮನಾರ್ಹವಾದ ಪ್ರದೇಶಗಳೆಂದರೆ: ಕ್ಯಾಲಿಫೋರ್ನಿಯಾ, ಬ್ರೆಝಿಲ್‌, ಈಕ್ವೆಡಾರ್‌, ಕೊಲಂಬಿಯಾ, ಎಥಿಯೋಪಿಯಾ, ಮೊರೊಕೋ, ಪೋರ್ಚುಗಲ್‌, ದಕ್ಷಿಣ ಆಫ್ರಿಕಾ, ಉಗಾಂಡಾ, ಇಸ್ರೇಲ್‌, ಗ್ಯಾಲೀಷಿಯಾ ಮತ್ತು ಚಿಲಿ. ಸ್ಪೇನ್‌ ದೇಶದಲ್ಲಿ, ನೀಲಗಿರಿ ಮರಗಳು ತಿರುಳುಮರದ ನೆಡುತೋಪುಗಳಲ್ಲಿ ನೆಡಲ್ಪಟ್ಟಿವೆ. ಗರಗಸದ ಕಾರ್ಖಾನೆಯ ಕೆಲಸಗಾರಿಕೆ, ತಿರುಳು, ಇದ್ದಿಲು ಸಂಬಂಧಿ ಕೆಲಸಗಳು ಮತ್ತು ಇತರ ಕೆಲಸಗಳಂಥ ಹಲವಾರು ಉದ್ಯಮಗಳಿಗೆ ನೀಲಗಿರಿ ಗಳು ಆಧಾರವಾಗಿವೆ. ಹಲವಾರು ಜಾತಿಗಳು ಆಕ್ರಮಣಶೀಲವಾಗಿ ಮಾರ್ಪಟ್ಟಿವೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ವನ್ಯಜೀವಿಕುಲದ ಮುಚ್ಚುದಾರಿಗಳು ಹಾಗೂ ಬೆಳೆಗಳ ಸರದಿಯ ನಿರ್ವಹಣೆಯ ಗೈರುಹಾಜರಿಯು ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದೇ ರೀತಿಯ ಅನುಕೂಲಕರ ವಾತಾವರಣದ ಸ್ಥಿತಿಗತಿಗಳಿಂದಾಗಿ, ನೀಲಗಿರಿ ನೆಡುತೋಪುಗಳು ಅನೇಕ ವೇಳೆ ಓಕ್‌ ಕಾಡುಪ್ರದೇಶಗಳನ್ನು ಸ್ಥಾನಪಲ್ಲಟಗೊಳಿಸಿವೆ. ಕ್ಯಾಲಿಫೋರ್ನಿಯಾ ಮತ್ತು ಪೋರ್ಚುಗಲ್‌ಗಳಲ್ಲಿ ಕಂಡುಬಂದಿರುವ ಸ್ಥಿತಿ ಇದಕ್ಕೊಂದು ನಿದರ್ಶನವಾಗಿದೆ. ಇದರ ಫಲವಾಗಿ ಹೊರಹೊಮ್ಮಿದ ಏಕಫಸಲಿನ ಕೃಷಿಗಳಿಂದಾಗಿ ಸಸ್ತನಿಗಳು ಹಾಗೂ ಪಕ್ಷಿಗಳು ಆಹಾರಕ್ಕಾಗಿ ಅವಲಂಬಿಸಿರುವ ಓಕ್‌ ಮರದ ಹಣ್ಣುಗಳು ಇಲ್ಲದಂತಾಗಿರುವುದರಿಂದ, ಜೀವ ವೈವಿಧ್ಯತೆಯ ನಷ್ಟವಾಗಿದ್ದು ಅದು ಕಳವಳಗಳನ್ನು ಸೃಷ್ಟಿಸಿದೆ. ಓಕ್‌ ಮರಗಳಲ್ಲಿನ ಪೊಟರೆಗಳು ಪಕ್ಷಿಗಳಿಗೆ ಹಾಗೂ ಸಣ್ಣ-ಪುಟ್ಟ ಸಸ್ತನಿಗಳಿಗೆ ಮತ್ತು ಜೇನು ಸಮುದಾಯಗಳಿಗೆ ಆಶ್ರಯ ಮತ್ತು ಗೂಡುಕಟ್ಟುವ ತಾಣಗಳನ್ನು ಒದಗಿಸುತ್ತಿದ್ದು, ಏಕಫಸಲಿನ ಕೃಷಿಯ ಕಾರಣದಿಂದಾಗಿ ಅದೂ ಇಲ್ಲದಂತಾಗಿದ್ದು ಜೀವವೈವಿಧ್ಯತೆಯ ನಷ್ಟಕ್ಕೆ ಕಾರಣವಾಗಿ ಕಳವಳಗಳನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲ, ನಿರ್ವಹಿಸಲ್ಪಟ್ಟ ನೆಡುತೋಪುಗಳಲ್ಲಿ ಕಡಿದು ಉರುಳಿಸಲಾದ ಮರಗಳು ಇಲ್ಲದಿರುವುದೂ ಸಹ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ.

ಆಯಾ ಋತುವಿಗೆ ತಕ್ಕಂತಿರುವ ಶುಷ್ಕ ಹವಾಮಾನಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ತೆರೆದ ಹುಲ್ಲುಗಾವಲುಗಳಲ್ಲಿ, ಅಲ್ಲೊಂದು-ಇಲ್ಲೊಂದು ಎಂಬಂತೆ ವಿರಳವಾಗಿರುವ ಮರಗಳಿಗೆ ಬೆಂಕಿಯನ್ನು ಹಚ್ಚಲು ಹುಲ್ಲಿನ ಬೆಂಕಿಯೊಂದು ಸಾಕಾಗುವುದಿಲ್ಲವಾದ್ದರಿಂದ, ಓಕ್‌ ಮರಗಳು ಹಲವು ವೇಳೆ ಬೆಂಕಿ-ನಿರೋಧಕವಾಗಿರುತ್ತವೆ. ಇದಕ್ಕೆ ಪ್ರತಿಯಾಗಿ ಒಂದು ನೀಲಗಿರಿಯ ಕಾಡು ಬೆಂಕಿಯನ್ನು ಉತ್ತೇಜಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಏಕೆಂದರೆ ಅದರ ಎಲೆಗಳು ತಯಾರಿಸುವ ತೈಲಗಳು ಬಾಷ್ಪಶೀಲವಷ್ಟೇ ಅಲ್ಲದೇ ಅಧಿಕವಾಗಿ ದಹನಶೀಲ ಸ್ವಭಾವವನ್ನು ಹೊಂದಿರುತ್ತವೆ. ಮೇಲಾಗಿ, ದೊಡ್ಡ ಪ್ರಮಾಣಗಳಲ್ಲಿ ಉತ್ಪಾದನೆಯಾಗುವ ಕಸದಲ್ಲಿ ಫೀನಾಲಿಕ್‌ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವು ಶಿಲೀಂಧ್ರಗಳಿಂದತಮ್ಮ ವಿಘಟನೆಯಾಗದಂತೆ ತಡೆಯುವುದರಿಂದ, ಬೃಹತ್‌ ಪ್ರಮಾಣಗಳಲ್ಲಿನ ಶುಷ್ಕ, ದಹನಶೀಲ ಇಂಧನವಾಗಿ ಕಸವು ಸಂಚಯನಗೊಳ್ಳುತ್ತದೆ. ಇದರ ಪರಿಣಾಮವಾಗಿ, ನೀಲಗಿರಿ ಮರಗಳ ದಟ್ಟವಾದ ನೆಡುವಿಕೆಗಳು ಮಹಾಕ್ಷೋಭೆಯ ಬೆಂಕಿಯ ಬಿರುಗಾಳಿಗಳಿಗೆ ಈಡಾಗಬಹುದು. ನೀಲಗಿರಿ ಮರಗಳು ದೀರ್ಘಾವಧಿಯವರೆಗೆ ಬೆಂಕಿಯಿಂದ ತಪ್ಪಿಸಿಕೊಂಡು ಬದುಕುಳಿಯುವ ತಮ್ಮ ಸಾಮರ್ಥ್ಯವನ್ನು, ಕುರುಚಲು ಎಳೆಕೊಂಬೆಗಳು ಮತ್ತು ಲಿಗ್ನೋಟ್ಯೂಬರ್‌ಗಳಿಂದ ಮತ್ತೆಹುಟ್ಟುವ ತಮ್ಮ ಸಾಮರ್ಥ್ಯದಿಂದ ಅಥವಾ ಸೆರೋಟಿನ್‌ಯುಕ್ತ ಹಣ್ಣುಗಳನ್ನು ಉತ್ಪಾದಿಸುವುದರಿಂದ ಪಡೆದುಕೊಳ್ಳುತ್ತವೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ತಿಮ್ಮಪ್ಪನನ್ನು ಕೃಪೆಯಿಂದ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(13 ಮಾರ್ಚ್, 2019) ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ಅದು ನಿಮ್ಮ ಕೈಯಿಂದ…

  • ಸ್ಪೂರ್ತಿ

    ಓದಿದ್ದು ಪಿಯುಸಿ, ಆದ್ರೆ ಇವರ ಈಗಿನ ಸಂಪಾದನೆ ಕೇಳಿದ್ರೆ ಶಾಕ್ ಆಗ್ತೀರಾ.!ಇದೆಲ್ಲಾ ಹೇಗಾಯ್ತು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ..

    ಸಾದಿಸುವವನಿಗೆ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸುತ್ತಾರೆ ಅನ್ನೋದಕ್ಕೆ ಈ ನಂದಿನಿಯವರೇ ಸಾಕ್ಷಿ. ಇವರು ಓದಿದ್ದು ಕೇವಲ ಪಿಯುಸಿ. ಬಡತನದ ಕಾರಣದಿಂದ ಮುಂದಿನ ವಿದ್ಯಾಭ್ಯಾಸವನ್ನು ಮಾಡಲು ಆಗಲಿಲ್ಲ. ಆದ್ರೆ ಬರಿ ಪಿಯುಸಿ ಓದಿ ತಿಂಗಳಿಗೆ ಲಕ್ಷ ಸಂಪಾದನೆ. ಹೆಸರು ನಂದಿನಿ, ಬೆಂಗಳೂರು ಗ್ರಾಮಾಂತರ ಪ್ರದೇಶದವರು. ತಂದೆ ದೇವಸ್ಥಾನದ ಪೂಜಾರಿ, ತಾನು ಡಾಕ್ಟರ್ ಆಗಬೇಕು ಎಂಬ ಸುಂದರ ಕನಸನ್ನು ಹೊತ್ತಿದ್ದರು, ಆದ್ರೆ ಬಡತನ ಆ ಕನಸನ್ನ ಕನಸಾಗಿಗೆ ಉಳಿಸಿತು. ಪಿ ಯು ಸಿ ಆದಮೇಲೆ ನಂದಿನಿಗೆ ಮದುವೆ ಮಾಡಿದರು. ನಂದಿನಿಯ…

  • ಸರ್ಕಾರದ ಯೋಜನೆಗಳು

    ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಸರಕಾರದಿಂದ ವಸತಿ ಭಾಗ್ಯ..!ಈ ಸೌಲಭ್ಯವನ್ನು ಪಡೆಯುವುದು ಹೇಗೆ ಗೊತ್ತಾ..?

    ಬಡವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಆನ್ಲೈಸನ್ ಮೂಲಕ 1 ಲಕ್ಷ ಮನೆ ಹಂಚುವ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.

  • ಆರೋಗ್ಯ, ಉಪಯುಕ್ತ ಮಾಹಿತಿ

    ಮೆಂತ್ಯ ತಿನ್ನೋದ್ರಿಂದ ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಅದ್ಭುತ ಪ್ರಯೋಜನಗಳಾಗುತ್ತೆ ಗೊತ್ತಾ..!

    ಹಲವಾರು ರೋಗಗಳಿಗೆ ಮನೆಯಲ್ಲೇ ಮದ್ದಿದೆ ಎಂಬುದು ಎಷ್ಟೋ ಜನಕ್ಕೆ ಗೊತ್ತಿದ್ದರೂ ಅದನ್ನು ಉಪಯೋಗ ಮಾಡಿಕೊಳ್ಳದಿರುವವರೇ ಹೆಚ್ಚು. ಇದಕ್ಕೆ ಕಾರಣವೂ ಇದೆ. ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳೊಂದಿಗೆ ಸಾಗುತ್ತಿರುವ ನಾವು ನಮ್ಮಲ್ಲೇ ಇರುವ ನೈಸರ್ಗಿಕವಾದ ಔಷಧಿಗಳನ್ನು ಅರಿಯದೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. *ನೆನೆ ಹಾಕಿದ ಮೆಂತ್ಯವನ್ನು ನುಣ್ಣಗೆ ರುಬ್ಬಿ ಕುದಿಯುವ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವಾಗ ಹಚ್ಚಿ, ಬೆಳಿಗ್ಗೆ ಎದ್ದೊಡನೆ ಮುಖ ತೊಳೆದುಕೊಳ್ಳಬೇಕು. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. *ಇದನ್ನು ಸೇವಿಸಿದರೆ ತಾಯಂದಿರಲ್ಲಿ ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುತ್ತದೆ. *ಬೆಳಿಗ್ಗೆ…

  • ಸುದ್ದಿ

    ಮೊದಲ ವಾರವೇ ಗಳಿಕೆಯಲ್ಲಿ ದಾಖಲೆ ಮುರಿದ ಶ್ರೀಮುರಳಿ ಅಭಿನಯದ ಭರಾಟೆ..!

    ಶ್ರೀಮುರಳಿ ಅಭಿನಯದ ಭರಾಟೆ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟಕ್ಕೂ ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಬಿಡುಗಡೆ ಪೂರ್ವದಲ್ಲಿ ಯಾವ ಖದರಿನೊಂದಿಗೆ ಸಾಗಿ ಬಂದಿತ್ತೋ ಅದನ್ನೇ ಮೀರಿಸುವಂತೆ ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗುತ್ತಿದೆ. ಈ ಮೂಲಕ ನಾಯಕ ಶ್ರೀಮುರಳಿ ಮತ್ತು ಶ್ರೀಲೀಲಾ ಜೋಡಿ ದೊಡ್ಡ ಮಟ್ಟದಲ್ಲಿಯೇ ಕಮಾಲ್ ಮಾಡಿದೆ. ಓರ್ವ ನಿರ್ದೇಶಕನಾಗಿ ಚೇತನ್ ಕುಮಾರ್ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ನಿರ್ಮಾಪಕ ಸುಪ್ರೀತ್ ಅವರ ಕಣ್ಣುಗಳಲ್ಲಿಯೂ ಮಹಾ ಗೆಲುವಿನ ಖುಷಿ ಸ್ಪಷ್ಟವಾಗಿಯೇ ಫಳ ಫಳಿಸುತ್ತಿದೆ.ಇದು…

  • ಸುದ್ದಿ

    ಮನೆ ಬಾಗಿಲಿಗೆ ʼಈರುಳ್ಳಿʼಯನ್ನು ಅತಿ ಕಡಿಮೆ ದರದಲ್ಲಿ ತಲುಪಿಸಲು ಮುಂದಾದ ಸರ್ಕಾರ….!

    ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ. ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ…