ಆರೋಗ್ಯ, ಉಪಯುಕ್ತ ಮಾಹಿತಿ

ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

2963

ಬೆಳಿಗ್ಗೆ ಎದ್ದಾಗ ನೀವ್ ಮಾಡೋ ಕೆಲಸ ನಿಮ್ಮ ದಿನ ಹೇಗಿರುತ್ತೆ ಅಂತ ನಿರ್ಧಾರ ಮಾಡುತ್ತೆ. ಆದ್ರಿಂದ ಒಳ್ಳೆ ಹವ್ಯಾಸಗಳ್ನ ಬೆಳಗ್ಗಿನ ಹೊತ್ತು ರೂಢಿಸಿಕೊಲ್ಲಿ ಹಾಗೂ ಬೇಗ ಎಚ್ಚರಗೊಳ್ಳಿ.  ನೀವು ಇಡೀ ದಿನ ಸಂತೋಷವಾಗಿರುತ್ತೀರಿ.

ಕೆಟ್ಟದಾಗಿ ದಿನ ಶುರುವಾದ್ರೆ ದಿನವಿಡೀ ಏನೋ ಸರಿ ಇಲ್ವಲ್ಲ ಅನ್ನೋಹಾಗೆ ಮಾಡುತ್ತೆ. ರಾತ್ರಿ ನಿದ್ದೆ ಸರಿಯಾಗ್ ಆದ್ರೆ ಬೆಳಿಗ್ಗೆ ಹರ್ಷವಾಗಿರ್ತೀವಿ. ನಿದ್ರೆ ತುಂಬ ಅಗತ್ಯ ನಮ್ಗೆ. ವಿಶ್ರಾಂತಿ ನಂತರ ಒಳ್ಳೆ ಅಭ್ಯಾಸ ರೂಢಿಸಿಕೊಂಡ್ರೆ ದಿನವೆಲ್ಲಾ ಹುಮ್ಮಸ್ಸಿಂದ ಇರ್ತೀವಿ. ಹುರುಪಿಂದ ಕೆಲಸ ಮಾಡ್ತೀವಿ. ಆದ್ರಿಂದ ಈ ಅಭ್ಯಾಸಗಳ್ನ ಶುರು ಹಚ್ಕೊಳಿ.

ಬೆಳಿಗ್ಗೆ ಎದ್ದ ತಕ್ಷಣ  ಮೊಬೈಲ್ ನೋಡೊದ್ನ ಬಿಟ್ಬಿಡಿ :-

ಮೊಬೈಲ್ನ ಮಲ್ಗೊವಾಗ ಪಕ್ಕದಲ್ಲೇ ಇಟ್ಕೊಂಡ್ರೆ ಬೆಳಿಗ್ಗೆ ಎದ್ದಾಗ ಬೇಡ ಅಂದ್ರೂ ನೋಡ್ಬೇಕು ಅನ್ಸತ್ತೆ ಅಲ್ವಾ. ಅದ್ಕೆ ಒಂದ್ ಸಣ್ಣ ಪುಸ್ತಕನೋ ಸಣ್ಣ ಚೀಟಿಯನ್ನೋ ಇಟ್ಕೊಳಿ. ಅದ್ರಲ್ಲಿ ನಿಮ್ ಗುರಿ, ನಾಳೆ ಮಾಡ್ಬೇಕಾದ ಕೆಲ್ಸಗಳ್ನ ಬರ್ದಿಟ್ಕೊಳಿ. ಇದನ್ನ ಎದ್ದ ತಕ್ಷಣ ನೋಡಿ.

ಬೆಳಿಗ್ಗೆ ಎದ್ದ ತಕ್ಷಣ ತುಂಬಾ ಕೆಲ್ಸ ಇದೆ ಆದ್ರೆ ಎನ್ ಮಾಡ್ಬೇಕು ಅಂತಾನೇ ಗೊತ್ತಾಗ್ತ ಇಲ್ಲ ಅನ್ನೋ ಗೊಂದಲಕ್ಕೆ ಬೀಳ್ದೇ ನೀವ್ ಮಾಡ್ಕೊಂಡಿರೋ ನೋಟ್ಸಗಳ್ನ ನೋಡಿ, ದಿನ ಹೇಗಿರ್ಬೇಕು ಅಂತ ಪ್ಲಾನ್ ಮಾಡ್ಕೊಂಡು ದಿನ ಆರಂಭಿಸಿ.

ಎದ್ದ ತಕ್ಷಣ  ಐದ್ ಹತ್ತು ನಿಮಿಷ ಧ್ಯಾನ ಮಾಡಿ :-

ಧ್ಯಾನ ಮಾಡೊದ್ರಿಂದ ನಮ್ ಮನಸ್ಸಿಗೆ ಖುಷಿ ಸಿಗತ್ತೆ. ರೀಸರ್ಚ್ ಪ್ರಕಾರ ಧ್ಯಾನ ಮಾಡೊದ್ರಿಂದ ಪಾಸಿಟಿವ್ ಆಗಿರ್ತೀವಿ, ನಮ್ಮಲ್ಲಿರೋ ಕ್ರಿಯೀಟಿವಿಟಿ ಹೊರಬರತ್ತೆ.

ಧ್ಯಾನ ಅಂದ ತಕ್ಷಣ ಅರ್ಧ ಗಂಟೆನೋ ಒಂದ್ ಗಂಟೆನೋ ಕಷ್ಟ ಪಟ್ಟು ಕೂತ್ಕೊಬೇಕಿಲ್ಲ. 5-10 ನಿಮಿಷ ಉಸಿರಾಟ ಗಮನಿಸಿ, ಮನ್ಸನ್ನ ಕೇಂದ್ರಿಕರಿಸಿ, ಸ್ವಲ್ಪ ಹೊತ್ತು ಕೂತಿರಿ ಸಾಕು. ನಿಧಾನವಾಗಿ ಅದು 5-10 ನಿಮಿಷದಿಂದ 15-30 ನಿಮಿಷ ಆಗುತ್ತೆ, ಒಂದ್ ಗಂಟೆನೂ ಆಗ್ಬೋದು.

ನಿಮ್ಮ ಇಡೀ  ದಿನ ಹೇಗಿರ್ಬೇಕು ಅಂತ ಮನ್ಸಲ್ಲೇ ಕಲ್ಪನೆ ಮಾಡ್ಕೊಳಿ :-

ಇದೊಂತರ ಧ್ಯಾನದ ತರಾನೇ. ತುಂಬಾನೇ ಪರಿಣಾಮಕಾರಿಯಾದ ವಿಧಾನ. ಆಗೋದಕ್ಕಿಂತ ಮುಂಚೆನೇ ಹೀಗೆ ಆಗ್ಬೇಕು ಇಲ್ಲ ಹೀಗೆ ಆಗ್ಬಿಟ್ರೆ ಅದಕ್ಕೆ ಹೇಗೆ ತಯಾರಿರ್ಬೇಕು ಅನ್ನೋದನ್ನ ಕಲ್ಪನೆ ಮಾಡ್ಕೊಳ್ಳೊದು. ನನ್ನ ದಿನ ಪೂರ್ತಿ ಈ ತರಾನೇ ಇರ್ಬೇಕು ಅನ್ನೋ ಕಲ್ಪನೆ ಮಾಡ್ಕೊಂಡ್ರೆ ಅದೇ ತರ ಇರೋ ಹಾಗೆ ನೀವ್ ಪ್ರಯತ್ನಿಸ್ತೀರ.

ಉದಾಹರ್ಣೆಗೆ ಮಾಡ್ಬೇಕಾಗಿರೋ ಕೆಲ್ಸಾನ ಕಲ್ಪಿಸಿಕೊಳ್ಳಿ, ಹೇಗೆ ನಿರ್ವಹಿಸ್ತೀರ ಅಂತ ಮುಂಚೆನೇ ನಿರ್ಧರಿಸಿ. ಇದು ನಿಮಗೆ ಕೆಲಸದ ಬಗ್ಗೆ ಜವಾಬ್ದಾರಿ ಮೂಡ್ಸತ್ತೆ. ತೊಂದ್ರೆ ಇಲ್ದೇ ಕೆಲ್ಸ ಮಾಡಿ ಮುಗಿಸೋಹಾಗಾಗತ್ತೆ.

ಇಷ್ಟೇ ಸಾಕು ದಿನ ಪೂರ್ತಿ ಪಾಸಿಟಿವ್ ಆಗಿರಕ್ಕೆ. ಇದೇನು ಕಷ್ಟದ ಕೆಲ್ಸ ಅಲ್ಲ, ತುಂಬಾನೇ ಪ್ರಯೋಜವಕಾರಿ ವಿಧಾನ.

ಏನಾದ್ರೂ ಬಿಸಿ ಬಿಸಿಯಾಗಿರೋದ್ನ ಕುಡಿಯೋ ಅಭ್ಯಾಸ ಇಟ್ಕೊಳಿ :-

ಈ ಹವ್ಯಾಸ ನಿಮ್ ಮನ್ಸಿಗೂ ನಿಮ್ ದೇಹಕ್ಕೂ ಶಕ್ತಿ ಕೊಡೊವಂತದ್ದು. ಬಿಸಿ ಬಿಸಿಯಾದದ್ದು ಕುಡೀರಿ ಅಂದಾಕ್ಷಣ ಕಾಫಿ ಟೀ ಓಕೆ ನಾ ಅಂತೀರಿ ಅಲ್ವಾ? ಯಾವ್ದಾದ್ರೂ ಆಯ್ತು ಪರವಾಗಿಲ್ಲ ಬಿಸಿ ಬಿಸಿ ಇದ್ರೆ ಸಾಕು.  ಪ್ರತಿ ಗುಟುಕು ಕುಡಿಯೋವಾಗ ಅದ್ನ ಆನಂದಿಸಿ. ಬಿಸಿ ಬಿಸಿಯಾಗಿರೋದ್ರಿಂದ ಅದು ಹೊಟ್ಟೆಗೆ ಹೋಗೋದನ್ನ ಗಮನಿಸ್ಬೋದು, ಈ ಅನುಭವನ ಆಸ್ವಾದಿಸಿ.

ಹಾಸಿಗೆ ಇಂದ ಎಳೋವಾಗ ಬಲಗಡೆ ಮೊಗ್ಗಲಲ್ಲಿ ಎದ್ದು ನೆಟ್ಟಗಿ ನಿಲ್ಲಿ :-

ಬೆಳಗ್ಗೆ ಹಾಸಿಗೆ ಬಿಟ್ಟು ಬರಕ್ಕೆ ಯಾರ್ಗೂ ಮನಸ್ಸಿರಲ್ಲ. ತುಂಬ ಬೇಜಾರ್ ಮಾಡ್ಕೊಂಡು ಯಾರ್ದೋ ಕಷ್ಟಕ್ಕೆ ಏಳ್ತೀವಿ. ಒಂಚೂರ್ ಮನಸ್ಸು ಮಾಡಿ… ಬಲ್ಗಡೆಗೆ ಹೊರ್ಳಿ ಎದ್ದು ಕೂತ್ಕಳಿ. ನಿಧಾನವಾಗಿ ಎರಡೂ ಕಾಲನ್ನ ನೆಲದ ಮೇಲೆ ಇಟ್ಟು ನೇರವಾಗಿ ನಿಂತ್ಕೊಳ್ಳಿ. ಇದ್ರಿಂದ ನಿಮ್ಮ ಹೃದಯ ಮತ್ತೆ ಬೆನ್ನಿಗೆ ಒಳ್ಳೇದು.

ಬೆಳಿಗ್ಗಿನ ತಿಂಡಿ ತಿನ್ನುವದನ್ನು ಮರೆಯಬೇಡಿ :-

ಬೆಳಿಗ್ಗಿನ ತಿಂಡಿ ಅನ್ನೋದು ನಿಮ್ ದಿನದ ಅತೀ ಮುಖ್ಯವಾದ ಆಹಾರ. ವಿಪರ್ಯಾಸ ಅಂದ್ರೆ ತುಂಬಾ ಜನ್ರು ಕಾಲೇಜು ಆಫಿಸಿಗೆ ಹೋಗೋ ಆತ್ರದಲ್ಲಿ ತಿಂಡಿನ ತಿನ್ನದೇ ಇಲ್ಲ. ಟಿಂಡಿ ದಿನ ಪೂರ್ತಿ ಕೆಲ್ಸ ಮಾಡಕ್ಕೆ ಶಕ್ತಿ ಕೊಡುತ್ತೆ, ಚೈತನ್ಯದಿಂದ ಇರ್ಲಿಕ್ಕೆ ಸಹಾಯ ಮಾಡತ್ತೆ. ಅದಿಕ್ಕೆ ಇನ್ಮೇಲೆ ತಿಂಡಿ ತಿನ್ನದ್ ಮಿಸ್ ಮಾಡ್ಬೇಡಿ.

ಇನ್ಮೇಲೆ ಆದರೂ ಎದ್ದಾಗ ಈ ತರದ ಅಭ್ಯಾಸಗಳನ್ನು  ಶುರು ಹಚ್ಕೊಳ್ಳಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಲಕ್ಷ್ಮೀದೇವಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

      ಮೇಷ ರಾಶಿ ಭವಿಷ್ಯ (Friday, December 3, 2021) ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ ಮೇಲೆ ಮಿತಿ ಹೇರಿ. ನೀವು ಕೆಲಸದ ಜಾಗದಲ್ಲಿ ಅತಿಯಾಗಿ ಶ್ರಮಪಡುವುದರಿಂದ ಕೌಟುಂಬಿಕ ಅಗತ್ಯಗಳು ಮತ್ತು ಅವಶ್ಯಕತೆಗಳು ನಿರ್ಲಕ್ಷಿಸಲ್ಪಡುತ್ತವೆ ನೀವು ನಿಜವಾದ ಪ್ರೀತಿ ಕಾಣಲು ಸಾಧ್ಯವಾಗದಿರುವುದರಿಂದ ಪ್ರಣಯಕ್ಕೆ ಉತ್ತಮ ದಿನವಲ್ಲ. ನಿಮ್ಮ ಯೋಜನೆಗಳ ಬಗ್ಗೆ ತುಂಬಾ ಮುಕ್ತತೆ ಹೊಂದಿದ್ದಲ್ಲಿ ನೀವು…

  • ವಿಚಿತ್ರ ಆದರೂ ಸತ್ಯ

    ಇದು ಸಾಮಾನ್ಯದ ಸಾವಿನ ಕಥೆಯಲ್ಲ!ಗಂಡನಿಗೋಸ್ಕರ ಹೆಂಡತಿ!ಶಾಕ್ ಆಗ್ತೀರಾ…ಈ ಲೇಖನ ಓದಿ…

    ಪತಿ-ಪತ್ನಿ ಸಂಭಂದ ಬಿಡಿಸಲಾರದ ಅನುಭಂದ ಅಂತ ಹೇಳ್ತಾರೆ. ಅದರಲ್ಲೂ ನೀನು ಸತ್ತರೆ ನಾನು ಬದುಕಿರುವುದಿಲ್ಲ. ನಾನು ನಿಮ್ಮ ಜೊತೆ ಸಾಯುತ್ತೇನೆ ಎಂದು ಹಲವಾರು ಪತಿ ಪತ್ನಿಯರು ಹೇಳುತ್ತಾರೆ.ಆದರೆ ನಿಜವಾಗಲೂ ಅದನ್ನು ಎಷ್ಟು ಜನ ಪಾಲಿಸುತ್ತಾರೆ.

  • ಸುದ್ದಿ

    ರಾಯಲ್ ಆಗಿದೆ ‘Bigg Boss House’; ಇದನ್ನೊಮ್ಮೆ ನೋಡಿ,.!

    ನವದೆಹಲಿ: ಸಲ್ಮಾನ್ ಖಾನ್ ಅವರ ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋ ‘ಬಿಗ್ ಬಾಸ್ 13’ ಪ್ರಾರಂಭಿಸಲು ಕೇವಲ ಒಂದು ವಾರ ಬಾಕಿ ಇದೆ. ಈ ಬಾರಿ ಮೊದಲ ಬಾರಿಗೆ ಪ್ರದರ್ಶನವು ಮುಂಬೈಗೆ ಸ್ಥಳಾಂತರಗೊಂಡಿದೆ. ಆದರೆ ಈ ಬಾರಿ ಸೆಟ್ ಸಂಪೂರ್ಣವಾಗಿ ವಿಭಿನ್ನವಾಗಿದೆ ಮತ್ತು ಕಳೆದ 12 ಋತುಗಳಿಗಿಂತ ರಾಯಲ್ ಆಗಿದೆ. ಅಂದಹಾಗೆ, ‘ಬಿಗ್ ಬಾಸ್’ ತಯಾರಕರು ಪ್ರದರ್ಶನ ಪ್ರಾರಂಭವಾಗುವವರೆಗೂ ಪ್ರದರ್ಶನವನ್ನು ಅಚ್ಚರಿಗೊಳಿಸುವಂತೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ನೂತನ ಬಿಗ್ ಬಾಸ್ ನ ಕೆಲವು ಇನ್ಸೈಡ್ ಫೋಟೋಗಳನ್ನು ನಾವು…

  • National, News Paper, ಉಪಯುಕ್ತ ಮಾಹಿತಿ

    ಪಿಎಂ ಕಿಸಾನ್ ಸಮ್ಮನ್ ನಿಧಿಯೋಜನೆ

    ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 2,000 ರೂಪಾಯಿಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಮೋದಿ ಸರ್ಕಾರವು ಫೆಬ್ರವರಿ 24, 2019 ರಂದು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ 3 ಕಂತುಗಳಲ್ಲಿ 6000 ರುಪಾಯಿ ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಎರಡನೇ ಕಂತನ್ನು ನೇರವಾಗಿ ಏಪ್ರಿಲ್ 1 ರಿಂದ ಜುಲೈ…

  • ಕರ್ನಾಟಕದ ಸಾಧಕರು

    ನಾನು ಹಳ್ಳಿಯವಳೇ.ಆದರೆ ನೀವು ಮಾತ್ರ ಕ್ಲಾಸ್ ಮಹಿಳೆಯರಲ್ಲ…ಸುಧಾಮೂರ್ತಿ ಹೀಗೆ ಹೇಳಿದ್ದು ಯಾರಿಗೆ & ಏಕೆ ಗೊತ್ತಾ.?ಈ ಲೇಖನ ಓದಿ ಶೇರ್ ಮಾಡಿ…

    ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಬಗ್ಗೆ ಗೊತ್ತಲ್ಲವೇ. ಇನ್ಫೋಸಿಸ್ ಕೋ ಫೌಂಡರ್ ನಾರಾಯಣ ಮೂರ್ತಿ ಅವರ ಧರ್ಮಪತ್ನಿ. ಇವರು ಗೇಟ್ಸ್ ಫೌಂಡೇಷನ್ ಕಾರ್ಯಕ್ರಮಗಳಲ್ಲೂ ಪಾಲುದಾರರಾಗಿದ್ದಾರೆ. ಆದರೆ ಸುಧಾಮೂರ್ತಿ ಒಂದು ಪುಸ್ತಕ ಬರೆದಿದ್ದಾರೆ. ತನ್ನ ಜೀವನದಲ್ಲಿ ನಡೆದ ಹಲವು ಸಂಗತಿಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದಾರೆ. “ಥ್ರಿ ತೌಸಂಡ್ ಸ್ಟಿಚೆಸ್: ಆರ್ಡಿನರಿ ಪೀಪಲ್, ಎಕ್ಸ್‌ಟ್ರಾ ಆರ್ಡಿನರಿ ಲೈಫ್” ಎಂಬ ಪುಸ್ತಕವನ್ನು ಬರೆದ ಅವರು ತನ್ನ ವಿಷಯಗಳನ್ನು ಅದರಲ್ಲಿ ತಿಳಿಸಿದ್ದಾರೆ.

  • Cinema

    ಚಿರಂಜೀವಿ ಸರ್ಜಾ ಅಭಿಮಾನಿಗಳು ಕಂಡಿದ್ದ ಆ ಕನಸು ಕಡೆಗೂ ಕನಸಾಗಿಯೇ ಉಳಿಯಿತು!

    ಹಲವು ಪಾತ್ರಗಳ ಮೂಲಕ ಸಿನಿಪ್ರಿಯರನ್ನು ಚಿರಂಜೀವಿ ಸರ್ಜಾ ರಂಜಿಸಿದ್ದರು. ಹಾಗಿದ್ದರೂ ಅಭಿಮಾನಿಗಳಿಗೆ ಸಮಾಧಾನ ಆಗಿರಲಿಲ್ಲ. ಯಾಕೆಂದರೆ, ಫ್ಯಾನ್ಸ್‌ಗೆ ಇದ್ದ ಮಹತ್ವದ ಆಸೆಯೊಂದು ಇನ್ನೂ ಈಡೇರಿರಲಿಲ್ಲ. ಏನದು? ಸರ್ಜಾ ಕುಟುಂಬದ ಸ್ಟಾರ್‌ ಹೀರೋಗಳೆಲ್ಲ ಜೊತೆಯಾಗಿ ನಟಿಸಬೇಕು ಎಂದು ಅಭಿಮಾನಿಗಳು ಕನಸು ಕಂಡಿದ್ದರು. ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಜೊತೆ ಅವರ ಮಾವ ಅರ್ಜುನ್‌ ಸರ್ಜಾರನ್ನು ಒಟ್ಟಿಗೆ ತೆರೆಮೇಲೆ ನೋಡಬೇಕು ಎಂಬ ಆಸೆ ಅವರದ್ದಾಗಿತ್ತು. ಈ ವಿಚಾರದ ಬಗ್ಗೆ ಸರ್ಜಾ ಕುಟುಂಬದ ಹೀರೋಗಳಿಗೆ ಆಗಾಗ ಪ್ರಶ್ನೆ ಎದುರಾಗುತ್ತಲೇ ಇತ್ತು. ‘ನೀವು…