Animals

ಆನೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳು

130

ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ  ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ  ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು ಪ್ರಸಿದ್ಧ. ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು. ಅಲ್ಲದೆ ನೆಲದ ಮೇಲಿನ ಪ್ರಾಣಿಗಳಲ್ಲಿ ಆನೆಯ ಗರ್ಭಾವಸ್ಥೆಯ ಕಾಲ (೨೨ ತಿಂಗಳುಗಳು) ಎಲ್ಲಕ್ಕಿಂತ ದೀರ್ಘ. ಹುಟ್ಟಿದಾಗ ಆನೆಯ ಮರಿಯು ೧೨೦ ಕಿ.ಗ್ರಾಂ.ವರೆಗೆ ತೂಗುವುದಿದೆ. ಸುಮಾರು ೭೦ ವರ್ಷಗಳ ಕಾಲ ಆನೆಯು ಜೀವಿಸಬಲ್ಲುದು

ಆಫ್ರಿಕನ್ ಆನೆ

ಅನಾದಿಕಾಲದಿಂದಲೂ ಮಾನವನಿಗೆ ಆನೆಯು ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಅಂದಿನ ಭಾರತದ ಅರಸರ ಪಟ್ಟದಾನೆಯು ಸಮಾಜದಲ್ಲಿ ಅತಿ ಗೌರವಾನ್ವಿತ ಸ್ಥಾನವನ್ನು ಹೊಂದಿತ್ತು. ಸೈನ್ಯದ ಶಕ್ತಿಯು ಗಜಬಲವನ್ನು ಹೆಚ್ಚಾಗಿ ಅವಲಂಬಿಸಿತ್ತು. ಉಳಿದಂತೆ ಆನೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಬಳಸುವ ವಾಡಿಕೆ ಇಂದಿಗೂ ಇದೆ. ದಕ್ಷಿಣ ಭಾರತದ ಬಹಳಷ್ಟು ದೇವಸ್ಥಾನಗಳು  ತಮ್ಮದೇ ಆನೆಯನ್ನು ಸಾಕಿಕೊಂಡಿವೆ. ಕೇರಳದ ತ್ರಿಸ್ಸೂರಿನ  ಪೂರಮ್ ಉತ್ಸವ ಆನೆಗಳೇ ಕೇಂದ್ರವಾಗುಳ್ಳ ಒಂದು ಅತ್ಯಾಕರ್ಷಕವಾದ ಉತ್ಸವ

ಗಜ ಗರ್ಭ ನಾಲ್ಕರಿಂದ ಐದು ವರ್ಷಗಳಿಗೆ ಒಮ್ಮೆ ಆನೆ ಮರಿ ಹಾಕುತ್ತದೆ. ಗಜ ಗರ್ಭ ಎಂದು ಕೇಳಿರ್ತೀರಿ. ಆನೆಯ ಗರ್ಭಾವಸ್ಥೆ ಅವಧಿ 22 ತಿಂಗಳು. ಅವುಗಳ ಬೆಳವಣಿಗೆ ಪೂರ್ಣ ಪ್ರಮಾಣದಲ್ಲಿ ಅಗಲು 17 ವರ್ಷವಾಗುತ್ತದೆ. ಅಂದಹಾಗೆ ಗಂಡಾನೆಗಳಿಗೆ ಮಾತ್ರ ದಂತವಿರುತ್ತದೆ

ಹೆಣ್ಣಾನೆಯೇ ಚೀಫ್ ಹೆಣ್ಣಾನೆಗಳು ಗುಂಪಿನಲ್ಲಿದ್ದರೆ, ಗಂಡಾನೆಗಳು ಒಂಟಿಯಾಗಿರುತ್ತವೆ. ಹಿರಿಯ ಹೆಣ್ಣಾನೆಯೊಂದು ಗುಂಪಿನ ಮುಖಂಡತ್ವ ವಹಿಸಿರುತ್ತದೆ. ಆ ಗುಂಪಿನ ಹಿರಿಯ ಆನೆಗಳು ಹಿಂದೆ ತೋರಿಸಿದ ದಾರಿಯಲ್ಲೇ ಅವು ಮೇವು-ನೀರಿಗಾಗಿ ಹುಡುಕುತ್ತಾ ಸಾಗುತ್ತವೆ. ಅಂತಹ ದಾರಿಯನ್ನೇ ಆನೆ ಪಥ ಅಥವಾ ಎಲಿಫೆಂಟ್ ಕಾರಿಡಾರ್ ಅನ್ನೋದು.

ಏಷ್ಯಾದ  ಆನೆ


ಸೊಂಡಿಲ ವಿಶೇಷ ಆನೆಯ ವಿಶೇಷವೇ ಅದರ ಸೊಂಡಿಲು. ಹೆಚ್ಚಿನ ಚಟುವಟಿಕೆಗಳು ಸೊಂಡಿಲ ಮೂಲಕವೇ ಮಾಡುತ್ತವೆ. ಚಿಕ್ಕದೊಂದು ಗರಿಯನ್ನು ನಾಜೂಕಾಗಿ ಕೀಳುವುದಿರಲಿ, ದೊಡ್ಡದೊಂದು ಮರವನ್ನು ನೆಲಕ್ಕೆ ಉರುಳಿಸುವುದಿರಲಿ ಅದನ್ನು ಸೊಂಡಿಲ ಮೂಲಕವೇ ಮಾಡುತ್ತವೆ.
ನೆನಪು, ವಾಸನಾ ಗ್ರಹಣ ಶಕ್ತಿ ಅದ್ಭುತ ಇನ್ನು ಆನೆಗಳ ವಾಸನಾ ಗ್ರಹಣ ಶಕ್ತಿ ಅದ್ಭುತ. ಹನ್ನೆರಡು ಮೈಲು ದೂರವಿರುವ ನೀರಿನ ಪ್ರದೇಶವಾದರೂ ವಾಸನೆ ಮೂಲಕವೇ ಗ್ರಹಿಸುತ್ತವೆ. ಅದೇ ರೀತಿ ಅವುಗಳ ಸ್ಮರಣ ಶಕ್ತಿಯೂ ಅಮೋಘ. ಆ ಕಾರಣಕ್ಕೆ ಇಂಗ್ಲಿಷ್ ನಲ್ಲಿ ಎಲೆಫೆಂಟ್ ಮೆಮೊರಿ ಎಂಬ ಮಾತೇ ರೂಢಿಯಲ್ಲಿದೆ.

ಶಬ್ದ ಹೊರಡಿಸುವುದರಲ್ಲೂ ಸೂಕ್ಷ್ಮ ಗಾಳಿಯ ಮೂಲಕ ಶಬ್ದ ಹೊರಡಿಸುವುದರಲ್ಲೂ ಅಂಥ ಶಬ್ದವನ್ನು ಗ್ರಹಿಸುವುದರಲ್ಲೂ ಆನೆ ಬಹಳ ವಿಶಿಷ್ಟ ಪ್ರಾಣಿ. ಎಷ್ಟೋ ದೂರದಲ್ಲಿನ ಶಬ್ದವನ್ನೂ ಚೆನ್ನಾಗಿ ಗ್ರಹಿಸಿ, ಉತ್ತರ ಕೂಡ ನೀಡುತ್ತದೆ.

ದಿನಕ್ಕೆ 100- 150 ಕೆ.ಜಿ. ಆಹಾರ ಪಳಗಿದ ಆನೆ ಎಷ್ಟು ಸೌಮ್ಯವೋ ಕಾಡಾನೆ ಅಷ್ಟೇ ಅಪಾಯಕಾರಿ. ದೊಡ್ಡ ಆನೆಯೊಂದು ದಿನಕ್ಕೆ 100- 150 ಕೆ.ಜಿ. ಆಹಾರ ಸೇವಿಸುತ್ತದೆ. ದಿನದಲ್ಲಿ ಒಮ್ಮೆಯಾದರೂ ನೀರು ಕುಡಿಯುತ್ತದೆ. ಹಾಗಾಗಿ ನೀರಿರುವ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತವೆ


About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹಳಿಗಳಲ್ಲಿ ಇನ್ಮುಂದೆ ಕಂಪನಿ ರೈಲು ಸಂಚಾರ…!

    ನವದೆಹಲಿ: ರೈಲ್ವೆ ಸೇವೆಯನ್ನು ಇನ್ನಷ್ಟು ದಕ್ಷ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಖಾಸಗಿ ಕಂಪನಿಗಳಿಗೆ ರೈಲು ನಿರ್ವಹಣೆ ಜವಾಬ್ದಾರಿಯನ್ನು ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಿದೆ. ಯೋಜನೆಯ ಪ್ರಕಾರ, ಈ ಬಗ್ಗೆ ಮುಂದಿನ 100 ದಿನಗಳಲ್ಲಿ ಟೆಂಡರ್‌ ಆಹ್ವಾನಿಸಲು ನಿರ್ಧರಿಸಲಾಗಿದೆ. ಕಡಿಮೆ ದಟ್ಟಣೆ ಇರುವ ಮತ್ತು ಪ್ರವಾಸಿ ಸ್ಥಳಗಳಿಗೆ ಸಾಗುವ ರೈಲುಗಳನ್ನು ಮಾತ್ರ ಆರಂಭದಲ್ಲಿ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಐಆರ್‌ಸಿಟಿಸಿ ಜೊತೆಗೆ ಪ್ರಯೋಗ: ರೈಲುಗಳನ್ನು ಖಾಸಗಿಗೆ ನಿರ್ವಹಣೆಗಾಗಿ ನೀಡುವುದ‌ಕ್ಕೂ ಮುನ್ನ…

  • ಸುದ್ದಿ

    ಗಾಂಧೀಜಿ ಫೋಟೋವನ್ನು ಬಿಯರ್ ಬಾಟಲುಗಳ ಮೇಲೆ ಹಾಕಿದ ತಪ್ಪಿಗೆ ಶಿಕ್ಷೆಯಾಗಿ ಕ್ಷಮೆ ಕೇಳಿದ ಇಸ್ರೇಲ್ ಕಂಪನಿ…!

    ಇಸ್ರೇಲ್ ಮೂಲದ ಬಿಯರ್ ತಯಾರಿಕೆ ಕಂಪನಿಯೊಂದು ತನ್ನ ಬಾಟಲಿಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹಾಕಿ ವಿವಾದಕ್ಕೆ ಸಿಲುಕಿತ್ತು. ಆದರೆ ಈಗ ತನ್ನ ತಪ್ಪಿಗೆ ಭಾರತೀಯರಲ್ಲಿ ಕಂಪನಿ ಕ್ಷಮೆಯಾಚಿಸಿದೆ. ಇಸ್ರೇಲ್‍ನ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೇ 8 ಹಾಗೂ 9ರಂದು ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಗಾಗಿ ವಿಶೇಷ ಚಿತ್ರಗಳಿರುವ ಸ್ಟಿಕ್ಕರ್ ತಯಾರಿಸಿ ಬಿಯರ್ ಬಾಟಲಿ ಮೇಲೆ ಅಂಟಿಸಲಾಗಿತ್ತು. ಇಸ್ರೇಲ್‍ನ ಮಾಲ್ಕಾ ಬಿಯರ್ ಕಂಪನಿ ತಮ್ಮಲ್ಲಿ ತಯಾರಾದ ಬಿಯರ್ ಬಾಟಲಿಗಳ ಮೇಲೆ ವಿಧವಿಧವಾದ ಸ್ಟಿಕ್ಕರ್ ಅಂಟಿಸಿತ್ತು. ಅದರಲ್ಲಿ ಮಹಾತ್ಮ…

  • ಆರೋಗ್ಯ, ಉಪಯುಕ್ತ ಮಾಹಿತಿ

    ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಬೆಳಿಗ್ಗೆ ಎದ್ದಾಗ ನೀವ್ ಮಾಡೋ ಕೆಲಸ ನಿಮ್ಮ ದಿನ ಹೇಗಿರುತ್ತೆ ಅಂತ ನಿರ್ಧಾರ ಮಾಡುತ್ತೆ. ಆದ್ರಿಂದ ಒಳ್ಳೆ ಹವ್ಯಾಸಗಳ್ನ ಬೆಳಗ್ಗಿನ ಹೊತ್ತು ರೂಢಿಸಿಕೊಲ್ಲಿ ಹಾಗೂ ಬೇಗ ಎಚ್ಚರಗೊಳ್ಳಿ

  • ಸುದ್ದಿ

    ಸುಮಲತಾ ಅಂಬರೀಶ್ ವಿರುದ್ದ ಶಾಕಿಂಗ್ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ.!

    ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮಾತಿನ ಸಮರ ತಾರಕಕ್ಕೇರಿದೆ. ಸಿಎಂ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಏಟಿಗೆ – ಎದುರೇಟು ನೀಡತೊಡಗಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಸುಮಲತಾ ಅವರ ಕುರಿತಾಗಿ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಪಕ್ಷೇತರ ಅಭ್ಯರ್ಥಿಯ ಭಾಷಣದಲ್ಲಿ ಎಲ್ಲಿಯೂ ಮಂಡ್ಯ ಜಿಲ್ಲೆಯ ಜನರ ಸಮಸ್ಯೆ ಬಗ್ಗೆ ಪ್ರಸ್ತಾಪವಾಗಿಲ್ಲ. ಅವರಲ್ಲಿ ನೋವಿನ ಛಾಯೆಯೂ ಕಾಣುತ್ತಿಲ್ಲ. ನಾಟಕೀಯವಾಗಿ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಬಿಜೆಪಿ…

  • ಆಧ್ಯಾತ್ಮ, ದೇವರು-ಧರ್ಮ

    ಶನಿವಾರ ನಾವೇಕೆ ಆಂಜನೇಯನನ್ನು ಆರಾಧಿಸಬೇಕು.?ಹನುಮನಿಗೆ ಶನಿ ದೇವ ಕೊಟ್ಟ ಆ ವರಗಳೇನು.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸುಮಾರು ಜನ ಶನಿವಾರ ಬಂದರೆ, ಎಲ್ಲರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿಬರುತ್ತಾರೆ. ಈಗ ಎಲ್ಲಾ ಕಡೆ ಈ ರಾಮಭಂಟನ ದೇವಾಲಯಗಳು ಇವೆ. ಹಿಂದೆಯೂ ಸಹ ಊರ ಹೊರಗೆ ಒಂದು ಆಂಜನೇಯನ ದೇವಸ್ಥಾನವನ್ನು ನಮ್ಮ ಹಿರಿಯರು ನಿರ್ಮಿಸಿಟ್ಟಿರುತ್ತಿದ್ದರು. ಶನಿವಾರ ನಾವೇಕೆ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇವೆ ಗೊತ್ತಾ..? ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದ್ದ. ಆ ಕುತೂಹಲಕಾರಿ ಘಟನೆಗಳನ್ನು ಇಂದು ನಾವು ತಿಳಿದುಕೊಳ್ಳೊಣ… ತ್ರೇತಾಯುಗದಲ್ಲಿ ರಾವಣನು ಬ್ರಹ್ಮ…

  • ಸಿನಿಮಾ

    ಅಂಬರೀಶ್ ರವರ ಅಂತಿಮ ದರ್ಶನ ಪಡೆಯಲು ದರ್ಶನ್ ತುಂಬಾ ಲೇಟಾಗಿ ಬಂದಿದ್ದೇಕೆ ಗೊತ್ತಾ?ಏನೆಲ್ಲಾ ಕಷ್ಟಗಳನ್ನು ನಿವಾರಿಸಿಕೊಂಡು ಬಂದು ದರ್ಶನ ಪಡೆದಿದ್ದಾರೆ ಗೊತ್ತಾ ಚಾಲೆಂಜಿಂಗ್ ಸ್ಟಾರ್!

    ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಬಂದಿದ್ದಾರೆ. ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು. ಬಹುಶಃ ದರ್ಶನ್ ಅವರು ಭಯ ಪಡುವ…