ಜ್ಯೋತಿಷ್ಯ

ಬುಧವಾರದ ನಿಮ್ಮ ರಾಶಿ ಭವಿಷ್ಯ ನೋಡಿ ತಿಳಿಯಿರಿ..

180

ಇಂದು ಬುಧವಾರ, 28/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಪಾಲುಗಾರಿಕೆ ವ್ಯವಹಾರ ಸಾಧ್ಯತೆ. ನೀವು ಕೆಲಸದಲ್ಲಿ ನಿಜವಾಗಿಯೂ ಕಷ್ಟಕರ ದಿನವನ್ನು ಹೊಂದಿರಬಹುದು. ದೈವಾನುಗ್ರಹದಿಂದ ದೈನಂದಿನ ಕೆಲಸಕಾರ್ಯಗಳಿಗೆ ಉತ್ಸಾಹ ತುಂಬಲಿದೆ. ಅನಿರೀಕ್ಷಿತ ಧನಾಗಮನ ಸಾಧ್ಯತೆ ಕಂಡುಬರುತ್ತಿದೆ. ಹೊಸ ಸದ್ಯದರಲ್ಲಿಯೇ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ.

ವೃಷಭ:-

ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ. ದಾಯಾದಿಗಳ ಬಗ್ಗೆ ಜಾಗ್ರತೆ ವಹಿಸಬೇಕು. ವಿದ್ಯಾರ್ಥಿಗಳಿಗೆ ಆತಂಕದ ಕ್ಷಣಗಳು. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ.ಸಂಚಾರದಲ್ಲಿ ಅಪಘಾತ ಭೀತಿ ತಂದೀತು.

ಮಿಥುನ:

ಉದ್ಯೋಗ ನಿಮಿತ್ತ ದೂರದ ಪ್ರಯಾಣ. ವೃತ್ತಿರಂಗದಲ್ಲಿ ಬದಲಾವಣೆಯ ಸಾಧ್ಯತೆ. ಧಾರ್ಮಿಕ ಸಮಾರಂಭಗಳಿಗಾಗಿ ಹಣ ವ್ಯಯ ಮಾಡಬೇಕಾದೀತು. ಉತ್ತಮ ಕಾರ್ಯಗಳನ್ನು ಶ್ರದ್ಧೆಯಿಂದ ನೆರವೇರಿಸಿ. ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ

ಕಟಕ :-

ಹಳೆಯ ವಾಹನಗಳ ಮಾರಾಟದಿಂದ ಹೆಚ್ಚಿನ ಲಾಭ. ಮಕ್ಕಳಿಂದ ಮನಸ್ಸಿಗೆ ಮುದ ನೀಡುವ ಸುದ್ದಿಯನ್ನು ಕೇಳುವ ಭಾಗ್ಯ ನಿಮ್ಮದಾಗಲಿದೆ. ಬಂಧುಗಳ ಆಗಮನ ಸಂತಸ ತರಲಿದೆ. ಆರ್ಥಿಕವಾಗಿ ಹಂತ ಹಂತವಾಗಿ ಉನ್ನತಿ ಸಿಗಲಿದೆ.

 ಸಿಂಹ:

ಸಮಸ್ಯೆಯನ್ನು ನಿಭಾಯಿ ಸುವಿರಿ. ಧನಾಗಮನದಿಂದ ತೃಪ್ತಿ ನಿಷ್ಠೂರ ಮಾತುಗಳಿಂದ ವಿರೋಧ ಎದುರಾದೀತು. ಆರೋಗ್ಯದ ಸುಧಾರಣೆ ಅಗತ್ಯ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ನ್ಯಾಯಾಲಯದ ಕೆಲಸಗಳಿಗೆ ಹಿನ್ನಡೆ.

ಕನ್ಯಾ :-

ಕೆಲಸ ಕಾರ್ಯಗಳಲ್ಲಿ ಆಲಸ್ಯ ತಲೆದೋರೀತು. ಬಂಧುಮಿತ್ರರ ಸಮಾಗಮದಿಂದ ಮನಸ್ಸಿಗೆ ಸಂತಸ. ಆರೋಗ್ಯದಲ್ಲಿ ತೊಂದರೆ. ವಿಲಾಸಿ ಜೀವನಕ್ಕಾಗಿ ಖರ್ಚುಮಾಡುವ ಸಾಧ್ಯತೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಕುಟುಂಬದ ವ್ಯವಹಾರಗಳಲ್ಲಿ ಸಂಯಮದಿಂದ ವರ್ತಿಸಿ.

ತುಲಾ:

ನಿಮ್ಮ ಬಹುದಿನಗಳ ಕನಸನ್ನು ಸಾಕಾರಗೊಳಿಸುವ ಮನಸ್ಸು ನಿಮಗೀಗ ಬಂದಿದೆ. ನಿಮ್ಮ ಹೆಂಡತಿಯ ಜೊತೆ ಪ್ರವಾಸಕ್ಕೆ ಹೋಗಲು ಒಳ್ಳೆಯ ದಿನ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ತರುತ್ತವೆ. ನೀವು ಅತುರದ ನಿರ್ಣಯಗಳನ್ನು ಕೈಗೊಂಡರೆ ಈ ದಿನ ನಿಮ್ಮನ್ನು ನಿರಾಸೆಗೊಳಿಸುತ್ತದೆ. ಹೆಚ್ಚುವರಿ ಆದಾಯದ ಬಗ್ಗೆ ಆಲೋಚನೆ.

ವೃಶ್ಚಿಕ :-

ತನಗೆ ಬಂದ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಧಾರ್ಮಿಕ ಕ್ಷೇತ್ರ ದರ್ಶನ ಸಾಧ್ಯತೆ. ಆರೋಗ್ಯದಲ್ಲಿ ಜಾಗ್ರತೆ ಇರಲಿ.ಗೃಹ ನಿರ್ಮಾಣ ಕಾರ್ಯಗಳಲ್ಲಿ ಚುರುಕುತನ ಕಂಡುಬರಲಿದೆ.ಹಿರಿಯರನ್ನು ಗೌರವಿಸಿ. ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಆಲೋಚಿಸಿ ಮುನ್ನೆಡೆಯಿರಿ.

ಧನಸ್ಸು:

ಹೆಣ್ಣುಮಕ್ಕಳ ಕಡೆಯಿಂದ ಸಂತೋಷದ ಸುದ್ದಿ,ಮನೋರಂಜನೆಯಾಗಿ ಹಣ ಖರ್ಚು. ವಿದ್ಯಾರ್ಥಿಗಳಿಗೆ, ಅವಿವಾಹಿತರಿಗೆ, ನಿರುದ್ಯೋಗಿಗಳಿಗೆ ಶುಭವಾರ್ತೆ. ನೇರವಾದ ಮಾರ್ಗ ಅನುಸರಿಸಿ.

ಮಕರ :-

ವ್ಯವಹಾರಗಳಲ್ಲಿ ಒಳ್ಳೆಯ ಬೆಳವಣಿಗೆ. ಪಾಲುದಾರರಿಂದ ವಿರೋಧ.ಸಂಚಾರದಲ್ಲಿ ಸಮಸ್ಯೆ.ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರಲಿದೆ. ಮನಸ್ಸಿನ ದುಗುಡಗಳು ಕಡಿಮೆ ಆಗುವುದು. ಮನರಂಜನೆ ಮೇಲೆ ಅತಿಯಾಗಿ ಖರ್ಚು ಮಾಡಬೇಡಿ.

ಕುಂಭ:-

ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಯಶಸ್ಸು ನಿಮ್ಮದಾಗುವುದು. ದೇಹಾರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ. ಜೀವನದಲ್ಲಿ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡು ನಿರ್ಣಾಯಕ ಘಟ್ಟ ತಲುಪುವ ಸಾಧ್ಯತೆ  ದೇವತಾಕಾರ್ಯಗಳಿಗೆ ಧನವ್ಯಯ. ಆರ್ಥಿಕ ಸಂಪನ್ಮೂಲಗಳಿಗಾಗಿ ಚಿಂತನೆ. ಸಾಂಸಾರಿಕವಾಗಿ ನೆಮ್ಮದಿ ಇರುತ್ತದೆ.

ಮೀನ:-

ಮನೆಯವರ ಸಹಕಾರದಿಂದಾಗಿ ಯಶಸ್ಸು. ಆರೋಗ್ಯವನ್ನು ಕಾಯ್ದುಕೊಳ್ಳಬೇಕು. ಮನೆಯ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ. ಸಣ್ಣ ಸಣ್ಣ ವಿಚಾರಗಳು ಕೂಡಾ ಗಂಭೀರವಾಗಲಿವೆ. ಹಣಕಾಸಿನ ಪರಿಸ್ಥಿತಿ ಸುಧಾರಣೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ