ಗ್ಯಾಜೆಟ್

ನಿಮ್ಗೆ ವಾಟ್ಸ್ಯಾಪ್ ಇಲ್ಲದೆ ನಿದ್ದೆ ಬರೋದಿಲ್ಲ ಅಂತ ಗೊತ್ತು..!ಆದ್ರೆ ಇದ್ರಿಂದ ನಿಮ್ಗೆ ಏನೆಲ್ಲಾ ಬಾರಿ ನಷ್ಟ ಆಗುತ್ತಿದೆ ಗೊತ್ತಾ..?

472

ಇಲ್ಲ, ನಾನು ವಾಟ್ಸ್ಯಾಪ್ ಯೂಸ್‌ಮಾಡ್ತಿಲ್ಲ… ಹಾಗಂತ  ಯಾರಾದರು ಹೇಳಿದರೆ , ಇವನ್ಯಾರೋ ಗುಗ್ಗು  ಅಂತ ನೋಡೋ ಕಾಲ ಇದು.ಯಾಕಂದ್ರೆ, ಹಳ್ಳಿ ಯಿಂದ ದಿಲ್ಲಿಯವರಿಗೆ, ಹೈದನಿಂದ ವೃದ್ಧರವರೆಗೆ ಎಲ್ಲರೂ ವಾಟ್ಸ್ಯಾಪ್ ಬಳಸುವವರೇ. ಆದರೆ, ಜನರನ್ನು ಬೆಸೆಯುವ ವಾಟ್ಸ್ಯಾಪ್‌ಈಗ ಹಳಿ ತಪ್ಪಿದ ರೈಲಿನಂತಾಗಿರುವುದು ಸುಳ್ಳಲ್ಲ. ವಾಟ್ಸ್ಯಾಪ್‌ಅನ್ನೋದು ಗೀಳು ರೋಗವಾಗಿ ಬದುಕನ್ನು ಆವರಿಸುತ್ತಿರೋದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.

ಒಂದೆರಡು ಗಂಟೆ ಇಂಟರ್ನೆಟ್‌ಆಫ್ ಮಾಡಿ ಸುಮ್ಮನೆ ಕುಳಿತುಕೊಳ್ಳಿ. ವಾಟ್ಸ್ಯಾಪ್ ಕಡೆಗೆ ನಿಮ್ಮ ಗಮನ ಎಳೆಯದಿದ್ದರೆ, ನೀವು ಈ ಗೀಳಿನಿಂದ ಸೇಫ್ ಅಂತ ಅರ್ಥ. ಹಾಗಾದ್ರೆ, ಅತಿಯಾದ ವಾಟ್ಸ್ಯಾಪ್‌ಬಳಕೆಯಿಂದ ನಿಮಗೆ ಏನೇನು ನಷ್ಟ ಆಗ್ತಿದೆ ಗೊತ್ತಾ? ನಿಮ್ಮನ್ನು ವೇಸ್ಟ್‌ಆಗಿಸ್ತಿದೆ ವಾಟ್ಸ್ ಆಪ್!

1. ಸಮಯ ಹಾಳು:-

ನೋಡೋಣ, ಯಾರಾದ್ರೂ ಆನ್‌ಲೈನ್‌ಇದ್ದಾರ ಅಂತ ಚೆಕ್ ಮಾಡುವುದರಲ್ಲೆ  30 ನಿಮಿಷ ವ್ಯರ್ಥವಾಗುತ್ತದೆ. ದಿನಕ್ಕೆ ಅರ್ಧ ಗಂಟೆ ಅಂತಾದ್ರೆ  ತಿಂಗಳಿಗೆ ಎಷ್ಟಾಗುತ್ತೆ ಲೆಕ್ಕ ಹಾಕಿ? ಪ್ರತಿ ಸಲ ಆನ್ ಲೈನ್‌ಗೆ ಬಂದಾಗ , ಯಾರಾದ್ರೂ ಚಾಟ್‌ಗೆ ಸಿಗ್ತಾರಾ ಅಂತ ಹುಡುಕೋದು ಕೂಡ ಕೆಲವರಿಗೆ ಚಟವಾಗಿಬಿಟ್ಟಿದೆ. ಹೀಗೆ ಮಾಡೂ ದಿಂದ  ಆಗೂ ಪ್ರಯೋಜನವಾದ್ರೂ ಏನು? ಅಂತಿಮವಾಗಿ ನಿಮಗೆ ಸಿಕ್ಕಿದ್ದಾದರೂ ಏನು? ಸೊನ್ನೆ! 00000000000000000000000000000000000000000

2. ಡಿಪಿ: ಪೋಟೂ ಅಷ್ಟೇ ಅಲ್ಲ!

ವಾಟ್ಸ್ವಾಪ್‌ ಡಿಪಿ ಅಥವಾ ಡಿಸ್‌ಪ್ಲೇ ಪಿಕ್ಚರ್‌ಈಗ ಕೇವಲ ಪೋಟೂ ಮಾತ್ರ ಆಗಿ ಉಳಿದಿಲ್ಲ. ನಿಮ್ಮ ಬದುಕನ್ನು ಎಲ್ಲರೆದುರು ಬಿಂಬಿಸುವ ಸಾಧನವಾಗಿ ಬದಲಾಗಿದೆ. ಎಲ್ಲರೂ ಮೆಚ್ಚುವಂಥ ಫೋಟೊವನ್ನು ಸೆಲೆಕ್ಟ್ ಮಾಡುವುದೇ ದೊಡ್ಡ ಸವಾಲು. ಈಗಂತೂ ನಿಮ್ಮ ಡಿಪಿಯನ್ನು ಯಾರ್ಯಾರು ನೋಡಿದ್ದಾರೆ, ನೋಡಿಲ್ಲ ಅಂತಲೂ ಗೊತ್ತಾಗುತ್ತೆ. ಅಯ್ಯೋ ಅವನು/ ಅವಳು ನನ್ನ ಡಿಪಿ ಚೆಕ್‌ಮಾಡಿಲ್ಲ. ಇನ್ನೂ ಚೆಂದದ ಪೋಟೂ ಹಾಕ್ತೀನಿ ಅಂತ ಅರ್ಧ ಗಂಟೆಗೊಮ್ಮೆ ಡಿಪಿ ಬದಲಿಸುತ್ತಾರೆ. ಜಗ ಮೆಚ್ಚುವ ಡಿಪಿಗಾಗಿ  ಹಂಬಲಿಸುತ್ತಾ, ಅದಕ್ಕಾಗಿಯೇ ಫೋಟೊ ಕ್ಲಿಕ್ಕಿಸಿಕೊಳ್ಳುವವರೂ ಇದ್ದಾರೆ. ಇದರಿಂದ ನಿಮ್ಮೊಳಗೆ ಆತ್ಮರತಿ ಬೆಳೆಯುತ್ತಿದೆ. ಹೊರಜಗತ್ತಿಗೆ ನಿಮ್ಮ ಮೇಲಿನ ಗಂಭೀರತೆ ಹೊರಟುಹೋಗುತ್ತಿದೆ.

3. ಪೋನೆ ಇಲ್ಲ, ಮೆಸೇಜೆ ಎಲ್ಲಾ…

ವಾಟ್ಸ್ಯಾಪ್‌ಬರುವುದಕ್ಕಿಂತಲೂವು  ಮುಂಚೆ, ಪ್ರೀತಿ ಪಾತ್ರರಿಗೆ  ಆಗೂಮ್ಮೆ , ಈಗೊಮ್ಮೆಯಾದರೂ ಫೋನ್ ಮಾಡುತ್ತಿದ್ದೆವು. ಆದರೆ, ಈಗ ವಾಟ್ಸ್ಯಾಪ್‌ನಲ್ಲಿ ಮೆಸೇಜ್‌ಕಳಿಸಿದರೆ ಮುಗಿಯಿತು. ಇನ್ನೂ ದುರಂತವೆಂದರೆ, ಮದುವೆ ಕರೆಯೋಲೆಗಳೂ ವಾಟ್ಸ್ಯಾಪ್‌ನಲ್ಲೇ ತಲುಪುತ್ತಿವೆ,  ಸಂಭಂದಗಳು ಗಟ್ಟಿಯಾಗಿಸಬೇಕಿದ್ದ ವಾಟ್ಸ್ಯಾಪ್‌ನಿಂದಲೇ ಮನುಷ್ಯ- ಮನುಷ್ಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ವ್ಯಕ್ತಿ ತನಗೆ ಗೊತ್ತಿಲ್ಲದಂತೆ, ಆತ್ಮೀಯನೊಂದಿಗೆ ದೂರವಾಗುತ್ತಿದ್ದಾನೆ.

4. ಟಿಕ್‌ಟಿಕ್‌ಬ್ಲೂ ಟಿಕ್….

ನಾನು ಮೆಸೇಜ್‌ಕಳಿಸಿ ಆಗಲೇ ಅರ್ಧ ಗಂಟೆಯಾಯ್ತು. ಇನ್ನೂ ಸಿಂಗಲ್‌ಟಿಕ್‌ಇದೆ, ಬ್ಲೂ ಟಿಕ್ ಬಂದಿದೆ, ಆದ್ರೂ ರಿಪ್ಲೆ ಮಾಡಿಲ್ಲ, ಆನ್‌ಲೈನ್‌ಇದ್ದಾನೆ, ಆದ್ರೂ ನನ್ನ ಮೆಸೇಜ್‌ನೋಡದೆ ನಿರ್ಲಕ್ಷಿಸುತ್ತಿದ್ದಾನೆ, ಸಿಂಗಲ್‌ಟಿಕ್‌ಅಷ್ಟೇ ಇದೆ ಅವಳೇನಾದ್ರೂ ನನ್ನನ್ನ ಬ್ಲಾಕ್ ಮಾಡಿದ್ಲಾ..? ಮೆಸೇಜ್‌ಮಾಡಿದಾಗ ಮೂಡುವ ಟಿಕ್‌ಗಳು ಇಂಥವೆಲ್ಲಾ ಟೆನನ್‌ಗಳನ್ನು ಸೃಷ್ಟಿಸುತ್ತಿವೆ. ನಿಮ್ಮನ್ನು ಅನುಮಾನದ ಗೂಡಾಗಿಸುತ್ತಿದೆ.

5. ನಿಮ್ಮ ಫೋನು, ಕಸದ ಬುಟ್ಟಿ..!

ಪ್ರೈಮರಿ ದೂಸ್ತಾಗಳು , ಕ್ರೇಝಿ ಕ್ಲಾಸ್‌ಮೇಟ್ಸ್, ಓಲ್ಡ್‌ಫ್ರೆಂಡ್ಸ್ ಅಸೋಸಿಯೇ?ನ್… ಎಂಬ ಇತ್ಯಾದಿ ವಾಟ್ಸ್ಯಾಪ್‌ಗ್ರೂಪಿಗೆ ನೀವು ಸದಸ್ಯರಾಗಿರುತ್ತೀರಿ. ಅಲ್ಲಿ ಬೆಳಗ್ಗೆ, ರಾತ್ರಿ ಬರುವ ಗುಡ್‌ಮಾರ್ನಿಂಗ್, ಗುಡ್ನೈಟ್‌ಮೆಸೇಜ್‌ಗಳು, ಮೀಮ್ಸ್, ಹಳಸಲು ಜೋಕ್‌ಗಳಿಂದಲೇ ಪೋನ್‌ ಮೆಮೋರಿ ತುಂಬಿ ಮೋಬೈಲ್ ದಿನಕ್ಕೊಮ್ಮೆ ಹ್ಯಾಂಗ್‌ಆಗುತ್ತದೆ. ಎಷ್ಟೇ ಬೇಡ ಬೇಡ ಅಂದರೂ, ಇಂಥ ಗ್ರೂಪ್‌ಗ್ಳಿಂದ ದೂರ ಉಳಿಯುವುದು ಕಷ್ಟದ ವಿಷಯ. ವಾಟ್ಸ್ಯಾಪ್‌ಕಾರಣದಿಂದಲೇ ನಿಮ್ಮ ಪೋನು ಕಸದ ಬುಟ್ಟಿ ಆಗಿರುತ್ತೆ.

ನಿಮ್ಮ ಫೋನ್ ಚಾರ್ಜ್ ಮಾಡಬೇಕಾದ್ರೆ, ಈ 5 ತಪ್ಪುಗಳನ್ನು ಮಾಡಲೇಬೇಡಿ..!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಟ ಕಮಲ್ ಹಾಸನ್ ಅವರ ಮೇಲೆ ಚಪ್ಪಲಿ ತೂರಾಟ….ಧೂರು ದಾಕಲು….!

    ಮಕ್ಕಳ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರ ಮೇಲೆ ಅಪರಿಚಿತರು ಚಪ್ಪಲಿ ಎಸೆದ ಘಟನೆ ಬುಧವಾರ ನಡೆದಿದೆ. ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾಗಿದ್ದು, ಅದು ಅವರಿಗೆ ತಾಕದೆ, ಜನರ ಗುಂಪಿನ ನಡುವೆ ಬಂದು ಬಿದ್ದಿದೆ.ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಹನುಮಾನ್ ಸೇನೆಯ ಒಟ್ಟು ಹನ್ನೊಂದು ಜನರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19…

  • ಉಪಯುಕ್ತ ಮಾಹಿತಿ

    ಮಕರ ಸಂಕ್ರಾಂತಿ ಹಬ್ಬಕ್ಕೆ ಸರಿಯಾದ ಕ್ರಮದಲ್ಲಿ ಎಳ್ಳು ಬೆಲ್ಲ ಮಾಡುವ ವಿಧಾನ.

    ಎಳ್ಳು ಬೆಲ್ಲ ತಿಂದು, ಒಳ್ಳೆಯ ಮಾತನಾಡಿ’ ಎಂಬ ಗಾದೆ ಇದೆ. ಅದರಂತೆಯೇ ಸಂಕ್ರಾಂತಿ ಹಬ್ಬದಂದು ಎಲ್ಲರೂ ಎಳ್ಳು ಬೆಲ್ಲ ತಿಂದು ಹೊಸ ವರ್ಷದ ಮೊದಲ ಹಬ್ಬವನ್ನು ಸಿಹಿಯಾಗಿ ಬರಮಾಡಿಕೊಳ್ಳುತ್ತಾರೆ. ಆದ್ದರಿಂದ ಹಬ್ಬಕ್ಕಾಗಿ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಿ. ನಿಮಗಾಗಿ ಎಳ್ಳು-ಬೆಲ್ಲ ತಯಾರು ಮಾಡುವ ವಿಧಾನ ಇಲ್ಲಿದೆ. ಮಾಡುವ ವಿಧಾನಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ.ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿ.ಕೊಬ್ಬರಿ ಕಪ್ಪು ಭಾಗವನ್ನು…

  • karnataka

    ಇಂದು SSLC ಫಲಿತಾಂಶ: ರಿಸಲ್ಟ್ ಲಭ್ಯವಾಗೋ ವೆಬ್‍ಸೈಟ್ ಇಲ್ಲಿದೆ

    ಗುರುವಾರದಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇವತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಲಿದೆ.

    ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಲ್ಲಿರುವ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಇಲಾಖೆಯ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ನಾಳೆ ಎಲ್ಲಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಾರ್ಚ್ 30 ರಿಂದ ಏಪ್ರಿಲ್ 12ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು.

  • ಸಿನಿಮಾ

    ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಮೊದಲೇ ಸಾವಿನ ಮುನ್ಸೂಚನೆ ಸಿಕ್ಕಿತ್ತಾ?ಇದಕ್ಕಿದೆ ಈ ಎರಡು ಕಾರಣ!

    ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶರಾಗಿ ಇಂದಿಗೆ ಐದು ದಿನಗಳಾಗಿವೆ. ಸೋಮವಾರದಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಇಂದು ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಬಳಿಕ ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣಕ್ಕೆ ತೆರಳಿದ್ದಾರೆ. ಈ ನಡುವೆ ಅಂಬರೀಶ್ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ತಮ್ಮ ಪುತ್ರ ಅಭಿಷೇಕ್ ಅಭಿನಯದ ಚಿತ್ರ ಇನ್ನೂ ಪೂರ್ಣವಾಗದಿದ್ದರೂ ಹಠ ಹಿಡಿದು ಮೊದಲರ್ಧವನ್ನು ವೀಕ್ಷಿಸಿದ್ದರಂತೆ. ಅಷ್ಟೇ ಅಲ್ಲ ಕಳೆದ…

  • ಮನರಂಜನೆ

    ಮ್ಯೂಸಿಕ್ ಮಾಂತ್ರಿಕ ಎರ್.ಆರ್ ರೆಹಮಾನ್ ರವರನ್ನು ಭೇಟಿ ಮಾಡಿದ ಹಳ್ಳಿ ಪ್ರತಿಭೆ ಗಂಗಮ್ಮ..!

    ಈಗಾಗಲೇ ಕನ್ನಡದ ಜೀ ವಾಹಿನಿಯ ಸರಿಗಮಪ ಶೋನಲ್ಲಿ ಹಾಡುತ್ತಿರುವ ಕೊಪ್ಪಳದ ಗಂಗಮ್ಮ ಕರ್ನಾಟಕದ ಮನೆ ಮಾತಾಗಿದ್ದಾರೆ.ಈಗ ಇವರು ಮ್ಯೂಸಿಕ್ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ್ ಎರ್.ಆರ್ ರೆಹಮಾನ್ ಅವರನ್ನು ಗಂಗಮ್ಮ ಭೇಟಿ ಮಾಡಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ಗಂಗಮ್ಮ ಹಾಡಿ ಎಲ್ಲರನ್ನು ಗಮನ ಸೆಳೆದಿರುವುದರ ಬಗ್ಗೆ ಎ.ಆರ್ ರೆಹಮಾನ್ ತಿಳಿದುಕೊಂಡಿದ್ದು, 500 ರೂಪಾಯಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಗಾಯಕಿ ಈಗ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಷಯ ಕೇಳಿ ಎ.ಆರ್ ರೆಹಮಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಗಂಗಮ್ಮರನ್ನು ಎ.ಆರ್ ರೆಹಮಾನ್ ಭೇಟಿ ಮಾಡಿ…

  • ಸುದ್ದಿ

    ಸ್ನಾಕ್ಸ್ ಗೆ ಮನೆಯಲ್ಲೇ ಸ್ಪೈಸಿ ಸ್ಪೈಸಿ ಸೋಯಾ ಮಂಚೂರಿ ಮಾಡುವ ವಿಧಾನ,.!

    ಭಾನುವಾರ ರಜೆ ದಿನ. ಪ್ರತಿನಿತ್ಯ ಕೆಲಸ, ಶಾಲೆ ಎಂದು ಬ್ಯುಸಿಯಾಗಿರೋ ಕುಟುಂಬಸ್ಥರು ಮನೆಯಲ್ಲಿ ರೆಸ್ಟ್ ಮಾಡುತ್ತಾ ಇರುತ್ತಾರೆ. ಮಕ್ಕಳು ಸಹ ಇಂದು ಮನೆಯಲ್ಲಿಯೇ ಇರುತ್ತಾರೆ. ಎಲ್ಲರೂ ಒಟ್ಟಿಗೆ ಕುಳಿತು ರುಚಿ ರುಚಿಯಾದ ಮಸಲಾ ಚಾಟ್ಸ್ ತಿನ್ನೋ ಬಯಕೆ ಎಲ್ಲರಲ್ಲಿ ಮನೆ ಮಾಡಿರುತ್ತದೆ. ಹೊರಗಡೆ ತಂದ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲಿ ಏನು ಮಾಡಬೇಕೆಂದು ಚಿಂತೆಯಲ್ಲಿದ್ದೀರಾ. ಒಮ್ಮೆ ಸ್ಪೈಸಿ ಸೋಯಾ ಮಂಚೂರಿ ಮಾಡಿ ತಿನ್ನಿ. ಸ್ಪೈಸಿ ಸೋಯಾ ಮಂಚೂರಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವಸಾಮಾಗ್ರಿಗಳು* ಸೋಯಾ –…