ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತ್ತಿದ್ದಾಗ ಬೋಧಿ ಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ವಯಸ್ಸು ಸಾಗಿದಂತೆ ಸಕಲ ವಿದ್ಯೆಗಳಲ್ಲು ಪಾರಂಗತನಾದ. ಅನಂತರ ತಾರುಣ್ಯದಲ್ಲೇ ವೈರಾಗ್ಯವನ್ನು ತಾಳಿ ಹಿಮಾಲಯಕ್ಕೆ ಹೋದ ಅಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದ .
ಇತ್ತ ಕಾಶಿಯಲ್ಲಿ ಬ್ರಹ್ಮದತ್ತನಿಗೆ ಸಕಲರೂ ತನ್ನ ಸದ್ಗುಣಗಳನ್ನೇ ಹಾಡಿ ಹೋಗಳತ್ತಿರುವುದನ್ನು ಕೇಳಿ ಕೇಳಿ ಒಂದು ಸಂದೇಹ ಬಂತು. ‘’ಪ್ರತಿಯೊಬ್ಬರೂ ನನ್ನನ್ನೂ ಹೊಗಳುತ್ತಾರೆ, ಕೀರ್ತಿಸುತ್ತಾರೆ. ಅಂದರೆ ನಾನು ಸರ್ವಗುಣ ಸಂಪನನ್ನೇ?ನನ್ನಲ್ಲಿ ಯಾವ ದೋಷವು ಇಲ್ಲವೇ?ಇದ್ದರೂ, ಕಂಡರೂ, ಯಾರೂ ಅದನ್ನು ನನ್ನ ದಾಕ್ಷೀಣ್ಯದಿಂದ ಹೇಳುತ್ತಿಲ್ಲವೇ?’’ ಎಂದುಕೊಂಡ.
ಯಾರಾದರೊಬ್ಬರಿಗೆ ತನ್ನಲ್ಲಿರುವ ದೋಷ ಕಾಣಿಸಬಹುದು, ಯಾರಾದರೊಬ್ಬರಿಗೆ ತನ್ನ ಕೊರತೆಯನ್ನು ಧೈರ್ಯವಾಗಿ ಆಡಿ ತೋರಿಸಬಹುದು, ಎಂದು ಅವನು ಹುಡುಕತೊಡಗಿದ. ಮೊದಲು ಅವನು ತನ್ನ ಪರಿವಾರದಲ್ಲಿ ಹುಡುಕಿದ.
ಆದರೆ ಅವರಲ್ಲಿ ಯಾರೂ ರಾಜನಲ್ಲಿ ದೋಷವಿದೆಯೆಂದು ಹೇಳಲಿಲ್ಲ ಅರಮನೆಯ ಪರಿವಾರದವರು ದೋಷ ಕಂಡವರು ಯಾರೂ ಇರಲಿಲ್ಲ. ನಗರದ ಹೊರಗೆ ವೇಷ ಮರೆಸಿಕೊಂಡು ಸಂಚಾರ ಮಾಡಿದ ಅಲ್ಲೂ ಕೂಡ ಎಲ್ಲ ಅವನ ಗುಣಗಾನ ಮಾಡಿದರೇ ಹೊರತು, ಒಬ್ಬನಾದರೂ ರಾಜನ ನಡತೆಯಲ್ಲಿ ಈ ತಪ್ಪಿದೆ ಎಂದು ಹೇಳಲಿಲ್ಲ.
ಕಡೆಗೆ ಅವನು ಹಿಮಾಲಯಕ್ಕೆ ಹೋದ. ಆ ಗುಡ್ಡ ಗಾಡಿನ ತುಂಬಾ ಸಂಚರಿಸಿದ. ಕಡೆಗೆ ಬೋಧಿಸತ್ವನ ಪರ್ಣಕುಟೀರ ಕಣ್ಣಿಗೆ ಬಿತ್ತು. ರಾಜ ಅಲ್ಲಿಗೆ ಹೋಗಿ ಅವನಿಗೆ ನಮಸ್ಕರಿಸಿ ಕುಳಿತುಕೊಂಡ. ಬೋಧಿಸತ್ವ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಂಡ.
ಬೋಧಿಸತ್ವ ಆಗ ಕಾಡಿನಿಂದ ತಂದಿದ್ದ ಅರಳಿ ಹಣ್ಣುಗಳನ್ನು ತಿನ್ನುತ್ತಿದ್ದ. ಅವನ್ನೇ ರಾಜನಿಗೆ ನೀಡಿ, ‘’ಅಯ್ಯಾ, ಹಸಿದಿರುವಂತಿದೆ, ಈ ಅರಳಿ ಹಣ್ಣುಗಳನ್ನು ತಿಂದು ನೀರು ಕುಡಿ’’ ಎಂದ.
ರಾಜ ಹಾಗೇ ಮಾಡಿದ. ಆ ಅರಳಿ ಹಣ್ಣುಗಳು ಅಮೃತದಂತಿದ್ದವು. ‘’ಪೂಜ್ಯರೆ, ಈ ಹಣ್ಣುಗಳು ಇಷ್ಟೊಂದು ಮಧುರವಾಗಿರಲು ಕಾರಣವೇನು?’’ ಎಂದು ಕೇಳಿದ.
ಬೋಧಿಸತ್ವ ಹೇಳಿದ, ‘’ಈ ಪ್ರಾಂತ್ಯವನ್ನು ಆಳುತ್ತಿರುವ ರಾಜ ಧರ್ಮವನ್ನು ಮೀರದೆ, ನ್ಯಾಯದಿಂದ ನಡೆದುಕೊಳ್ಳುತ್ತಿದ್ದಾನೆ. ಅದಕ್ಕೇ ಈ ಹಣ್ಣುಗಳು ಇಷ್ಟು ಸಿಹಿಯಾಗಿವೆ.’’
‘’ಪೂಜ್ಯರೆ’’ ಬೋಧಿಸತ್ವ ಹೇಳಿದ, ‘’ಸಿಹಿ ಕೊಡುವ ಪದಾರ್ಥಗಳು ತಮ್ಮ ಸಿಹಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಇಡೀ ದೇಶವೇ ಸತ್ವವನ್ನು ಕಳೆದುಕೊಂಡು ನಾಶವಾಗುತ್ತದೆ.’’
ರಾಜ ತನ್ನ ಪರಿಚಯವನ್ನು ಹೇಳಿಕೊಳ್ಳದೆ ನಮಸ್ಕರಿಸಿ ಅಲ್ಲಿಂದ ಹೊರಟು ಬಂದ.
ಬೋಧಿಸತ್ವನ ಹೇಳಿದ ಮಾತುಗಳನ್ನು ಪರೀಕ್ಷಿಸುವ ಮನಸ್ಸಾಯಿತು. ರಾಜ ಅಂದಿನಿಂದ ಅಧರ್ಮದಿಂದ ರಾಜ್ಯಭಾರ ಮಾಡುತ್ತ ಅನ್ಯಾಯದಿಂದ ನಡೆದುಕೊಳ್ಳತೊಡಗಿದ.
ಕೆಲವು ಕಾಲದ ನಂತರ ಮತ್ತೆ ಅವನು ಬೋಧಿಸತ್ವನ ಬಳಿಗೆ ಬಂದು ನಮಸ್ಕರಿಸಿ ಕುಳಿತುಕೊಂಡ. ಆ ದಿನವೂ ಬೋಧಿಸತ್ವ ಅವನಿಗೆ ಅರಳಿ ಹಣ್ಣುಗಳನ್ನು ಕೊಟ್ಟ ಅದನ್ನು ಬಾಯಿಗಿಟ್ಟುಕೊಂಡ ಕೂಡಲೇ ಕಹಿಯಾಗಿ ರಾಜ ತಿನ್ನಲಾರದೆ ಉಗಿದುಬಿಟ್ಟ. ‘’ಪೂಜ್ಯರೇ, ಈ ಹಣ್ಣುಗಳನ್ನು ತಿನ್ನಲಾರದಷ್ಟು ಕಹಿಯಗಿವೆ’’ ಎಂದ.
ಬೋಧಿಸತ್ವ ಹೇಳಿದ, ‘’ಹಾಗಾದರೆ ರಾಜ ನಿಜವಾಗಲೂ ಅಧರ್ಮಿಯಗಿರಬೇಕು. ಅದರಿಂದಲೇ ಹಣ್ಣುಗಳನ್ನು ತಮ್ಮ ಸಿಹಿ ಕಳೆದುಕೊಂಡಿದೆ. ರಾಜ ಅಧಾರ್ಮಿಕನಾದರೆ ಇಡೀ ಪ್ರಜಸಮೂಹಂ ಅಧರ್ಮಚರಣೆ ಮಾಡುತ್ತ ದೇಶವೇ ದುಃಖಕ್ಕೆ ಒಳಗಾಗುತ್ತದೆ,’’
ರಾಜ ತನ್ನ ಪರಿಚಯವನ್ನು ಬಹಿರಂಗಪಡಿಸಿದ. ‘’ಪೂಜ್ಯರೇ, ನಾನೇ ಅರಳಿ ಹಣ್ಣನ್ನು ಸಿಹಿ ಮಾಡಿದೆ. ಅನಂತರ ನಾನೇ ಅದನ್ನು ಕಹಿ ಮಾಡಿದೆ. ಈಗ ಮತ್ತೆ ಸಿಹಿ ಮಾಡುತ್ತೇನೆ’’ ಎಂದು ನಮಸ್ಕರಿಸಿದ.
ಹಿಂದಿರುಗಿ ಕಾಶಿಗೆ ಹೋಗಿ ಧರ್ಮದಿಂದ ರಾಜ್ಯಭಾರ ಮಾಡಿದ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಜ್ಜನೇ ಉಪವಾಸದಿಂದ ನರಳುವಂತೆ ಮಾಡಿ ತನಗೆ ಹಿಂಸೆ ನೀಡಿದ್ದ ಬಗ್ಗೆ ಜಪಾನಿನ ಯುವತಿಯೊಬ್ಬಳು ಹೇಳಿಕೊಂಡಿದ್ದು ಈಗ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ.
ಸಾರ್ವಜನಿಕ ಸ್ಥಳದಲ್ಲಿ ಯುವಕ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ 19 ವರ್ಷದ ಅಂಕಿತ್ ಎನ್ನುವ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ದೆಹಲಿಯ ತಿಲಕ್ ನಗರದಲ್ಲಿ ಈ ಘಟನೆ ಶನಿವಾರ ನಡೆದಿದ್ದು, ಮೃತ ಅಂಕಿತ್ ರಿಪೇರಿಗೆ ನೀಡಿದ್ದ ಮೊಬೈಲ್ ತೆಗೆದುಕೊಂಡು ಬರುವಾಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಲ್ಲಿದ್ದ ರವಿ ಎನ್ನುವ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರವಿ ಹಾಗೂ…
ಶನಿವಾರ, 21/4/2018, ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಮೇಷ:– ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು ಸಾಧ್ಯತೆ. ಅಂಜಿಕೆ, ಅಧೈರ್ಯ ಬದಿಗಿಟ್ಟು? ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ….
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮ ವರ್ಚಸ್ಸನ್ನು ಹಾಳುಮಾಡುವ ಸಂಚು ನಡೆಯುವ ಸಾಧ್ಯತೆ ಅಧಿಕವಾಗಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ನೀವು ತಳೆಯುವ ನಿರ್ಧಾರದಿಂದ ಮಹತ್ವವಾದ ಅಧಿಕಾರ ಹೊಂದುವಿರಿ. ಮನೆ ಹಿರಿಯರ ಆಶೀರ್ವಾದ…
ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ಶೈಲಿ ಇದ್ದರೂ, ಸಿನಿಮಾ ನಿರ್ದೇಶಕರನ್ನು ಎರಡು ವರ್ಗವಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದ ನಿರ್ದೇಶಕರು ಸಿನಿರಸಿಕರನ್ನು ರಂಜಿಸಲೆಂದೇ ಸಿದ್ದಸೂತ್ರದ ಅಂಶಗಳನ್ನು ಇಟ್ಟುಕೊಂಡು, ಜನ ಬಯಸುವ ಅಂಶಗಳನ್ನೇ ಗ್ರಹಿಸಿ, ಅಳೆದು ತೂಗಿ ಅಂಥದ್ದೇ ಸಿನಿಮಾ ಮೂಲಕ ಜನರನ್ನು ರಂಜಿಸಬಯಸುವವರು. ಹೊಸ ಪ್ರಯೋಗಗಳಿಗೆ ಹಾತೊರೆಯುವ ಮನಸು ಮಾಡದವರು. ಎರಡನೆಯ ವರ್ಗದ ನಿರ್ದೇಶಕರು ತಮ್ಮೊಳಗಿನ ಕಥೆಯನ್ನು ಚೌಕಟ್ಟಿನ ಹಂಗಿಲ್ಲದೆ, ಸಿದ್ಧ ಸೂತ್ರಗಳಿಗೆ ಮೊರೆ ಹೋಗದೇ, ತಮ್ಮದೇ ರೀತಿಯಲ್ಲಿ, ರೂಪಿಸಿ, ನಿರೂಪಿಸಿ ತೆರೆಗೆ ತರುವವರು. ಸದಾ ಹೊಸ ಪ್ರಯೋಗಗಳಿಗೆ ಮಿಡಿಯುವವರು,…
ಪ್ರಕೃತಿಯಲ್ಲಿ ಅದ್ಭುತ ವಿಷಯಗಳು ನೀವು ಅಸ್ತಿತ್ವದಲ್ಲಿ ನಂಬುವುದಿಲ್ಲಪ್ರಕೃತಿ ಅನಿರೀಕ್ಷಿತವಾಗಿದೆ, ಅದು ಸುಂದರವಾಗಿರುತ್ತದೆ ಮತ್ತು ವಿಶ್ರಾಂತಿ ಪಡೆಯುಬಹುದು.ಈ ಜಗತ್ತು ಅದ್ಭುತಗಳಿಂದ ತುಂಬಿದೆ, ನಾವು ಎಲ್ಲೆಡೆಯೂ ಒಂದು ಮಂತ್ರವಿದ್ಯೆಯನ್ನು ನೋಡಬಹುದು. ಪ್ರಕೃತಿ ಅದ್ಭುತ ವಿಷಯಗಳಿಂದ ತುಂಬಿದೆ, ಅವುಗಳಲ್ಲಿ ಕೆಲವು ನಂಬಲಾಗದವು. 1.ಮಾಲ್ಡೋವ್ಸ್ನ ವಾಧೋವಿನ ಹೊಳೆಯುವ ಶೋರ್ಗಳು:- ಇದು ಒಂದು ಬೆಳಕಿನ ಪ್ರದರ್ಶನವೆಂದು ಕಂಡುಬರುತ್ತದೆ, ಅದು ನಂಬಲಾಗದದು. 2.ಕೈಲೂವಾ, ಹವಾಯಿನಲ್ಲಿ ಮಳೆಬಿಲ್ಲು ಗಮ್:- ಇದು ಸಾಮಾನ್ಯವಾಗಿ ರೇನ್ಬೋ ಯೂಕಲಿಪ್ಟಸ್ ಎಂದು ಕರೆಯಲ್ಪಡುವ ಒಂದು ಎತ್ತರದ ಮರವಾಗಿದೆ. 3.ದೆವ್ವದ ಮರಗಳು,ಪಾಕಿಸ್ತಾನ:- 2010 ರ ಪ್ರವಾಹದಿಂದಾಗಿ…