News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಆರೋಗ್ಯ, ಉಪಯುಕ್ತ ಮಾಹಿತಿ

ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

2967

ಬೆಳಿಗ್ಗೆ ಎದ್ದಾಗ ನೀವ್ ಮಾಡೋ ಕೆಲಸ ನಿಮ್ಮ ದಿನ ಹೇಗಿರುತ್ತೆ ಅಂತ ನಿರ್ಧಾರ ಮಾಡುತ್ತೆ. ಆದ್ರಿಂದ ಒಳ್ಳೆ ಹವ್ಯಾಸಗಳ್ನ ಬೆಳಗ್ಗಿನ ಹೊತ್ತು ರೂಢಿಸಿಕೊಲ್ಲಿ ಹಾಗೂ ಬೇಗ ಎಚ್ಚರಗೊಳ್ಳಿ.  ನೀವು ಇಡೀ ದಿನ ಸಂತೋಷವಾಗಿರುತ್ತೀರಿ.

ಕೆಟ್ಟದಾಗಿ ದಿನ ಶುರುವಾದ್ರೆ ದಿನವಿಡೀ ಏನೋ ಸರಿ ಇಲ್ವಲ್ಲ ಅನ್ನೋಹಾಗೆ ಮಾಡುತ್ತೆ. ರಾತ್ರಿ ನಿದ್ದೆ ಸರಿಯಾಗ್ ಆದ್ರೆ ಬೆಳಿಗ್ಗೆ ಹರ್ಷವಾಗಿರ್ತೀವಿ. ನಿದ್ರೆ ತುಂಬ ಅಗತ್ಯ ನಮ್ಗೆ. ವಿಶ್ರಾಂತಿ ನಂತರ ಒಳ್ಳೆ ಅಭ್ಯಾಸ ರೂಢಿಸಿಕೊಂಡ್ರೆ ದಿನವೆಲ್ಲಾ ಹುಮ್ಮಸ್ಸಿಂದ ಇರ್ತೀವಿ. ಹುರುಪಿಂದ ಕೆಲಸ ಮಾಡ್ತೀವಿ. ಆದ್ರಿಂದ ಈ ಅಭ್ಯಾಸಗಳ್ನ ಶುರು ಹಚ್ಕೊಳಿ.

ಬೆಳಿಗ್ಗೆ ಎದ್ದ ತಕ್ಷಣ  ಮೊಬೈಲ್ ನೋಡೊದ್ನ ಬಿಟ್ಬಿಡಿ :-

ಮೊಬೈಲ್ನ ಮಲ್ಗೊವಾಗ ಪಕ್ಕದಲ್ಲೇ ಇಟ್ಕೊಂಡ್ರೆ ಬೆಳಿಗ್ಗೆ ಎದ್ದಾಗ ಬೇಡ ಅಂದ್ರೂ ನೋಡ್ಬೇಕು ಅನ್ಸತ್ತೆ ಅಲ್ವಾ. ಅದ್ಕೆ ಒಂದ್ ಸಣ್ಣ ಪುಸ್ತಕನೋ ಸಣ್ಣ ಚೀಟಿಯನ್ನೋ ಇಟ್ಕೊಳಿ. ಅದ್ರಲ್ಲಿ ನಿಮ್ ಗುರಿ, ನಾಳೆ ಮಾಡ್ಬೇಕಾದ ಕೆಲ್ಸಗಳ್ನ ಬರ್ದಿಟ್ಕೊಳಿ. ಇದನ್ನ ಎದ್ದ ತಕ್ಷಣ ನೋಡಿ.

ಬೆಳಿಗ್ಗೆ ಎದ್ದ ತಕ್ಷಣ ತುಂಬಾ ಕೆಲ್ಸ ಇದೆ ಆದ್ರೆ ಎನ್ ಮಾಡ್ಬೇಕು ಅಂತಾನೇ ಗೊತ್ತಾಗ್ತ ಇಲ್ಲ ಅನ್ನೋ ಗೊಂದಲಕ್ಕೆ ಬೀಳ್ದೇ ನೀವ್ ಮಾಡ್ಕೊಂಡಿರೋ ನೋಟ್ಸಗಳ್ನ ನೋಡಿ, ದಿನ ಹೇಗಿರ್ಬೇಕು ಅಂತ ಪ್ಲಾನ್ ಮಾಡ್ಕೊಂಡು ದಿನ ಆರಂಭಿಸಿ.

ಎದ್ದ ತಕ್ಷಣ  ಐದ್ ಹತ್ತು ನಿಮಿಷ ಧ್ಯಾನ ಮಾಡಿ :-

ಧ್ಯಾನ ಮಾಡೊದ್ರಿಂದ ನಮ್ ಮನಸ್ಸಿಗೆ ಖುಷಿ ಸಿಗತ್ತೆ. ರೀಸರ್ಚ್ ಪ್ರಕಾರ ಧ್ಯಾನ ಮಾಡೊದ್ರಿಂದ ಪಾಸಿಟಿವ್ ಆಗಿರ್ತೀವಿ, ನಮ್ಮಲ್ಲಿರೋ ಕ್ರಿಯೀಟಿವಿಟಿ ಹೊರಬರತ್ತೆ.

ಧ್ಯಾನ ಅಂದ ತಕ್ಷಣ ಅರ್ಧ ಗಂಟೆನೋ ಒಂದ್ ಗಂಟೆನೋ ಕಷ್ಟ ಪಟ್ಟು ಕೂತ್ಕೊಬೇಕಿಲ್ಲ. 5-10 ನಿಮಿಷ ಉಸಿರಾಟ ಗಮನಿಸಿ, ಮನ್ಸನ್ನ ಕೇಂದ್ರಿಕರಿಸಿ, ಸ್ವಲ್ಪ ಹೊತ್ತು ಕೂತಿರಿ ಸಾಕು. ನಿಧಾನವಾಗಿ ಅದು 5-10 ನಿಮಿಷದಿಂದ 15-30 ನಿಮಿಷ ಆಗುತ್ತೆ, ಒಂದ್ ಗಂಟೆನೂ ಆಗ್ಬೋದು.

ನಿಮ್ಮ ಇಡೀ  ದಿನ ಹೇಗಿರ್ಬೇಕು ಅಂತ ಮನ್ಸಲ್ಲೇ ಕಲ್ಪನೆ ಮಾಡ್ಕೊಳಿ :-

ಇದೊಂತರ ಧ್ಯಾನದ ತರಾನೇ. ತುಂಬಾನೇ ಪರಿಣಾಮಕಾರಿಯಾದ ವಿಧಾನ. ಆಗೋದಕ್ಕಿಂತ ಮುಂಚೆನೇ ಹೀಗೆ ಆಗ್ಬೇಕು ಇಲ್ಲ ಹೀಗೆ ಆಗ್ಬಿಟ್ರೆ ಅದಕ್ಕೆ ಹೇಗೆ ತಯಾರಿರ್ಬೇಕು ಅನ್ನೋದನ್ನ ಕಲ್ಪನೆ ಮಾಡ್ಕೊಳ್ಳೊದು. ನನ್ನ ದಿನ ಪೂರ್ತಿ ಈ ತರಾನೇ ಇರ್ಬೇಕು ಅನ್ನೋ ಕಲ್ಪನೆ ಮಾಡ್ಕೊಂಡ್ರೆ ಅದೇ ತರ ಇರೋ ಹಾಗೆ ನೀವ್ ಪ್ರಯತ್ನಿಸ್ತೀರ.

ಉದಾಹರ್ಣೆಗೆ ಮಾಡ್ಬೇಕಾಗಿರೋ ಕೆಲ್ಸಾನ ಕಲ್ಪಿಸಿಕೊಳ್ಳಿ, ಹೇಗೆ ನಿರ್ವಹಿಸ್ತೀರ ಅಂತ ಮುಂಚೆನೇ ನಿರ್ಧರಿಸಿ. ಇದು ನಿಮಗೆ ಕೆಲಸದ ಬಗ್ಗೆ ಜವಾಬ್ದಾರಿ ಮೂಡ್ಸತ್ತೆ. ತೊಂದ್ರೆ ಇಲ್ದೇ ಕೆಲ್ಸ ಮಾಡಿ ಮುಗಿಸೋಹಾಗಾಗತ್ತೆ.

ಇಷ್ಟೇ ಸಾಕು ದಿನ ಪೂರ್ತಿ ಪಾಸಿಟಿವ್ ಆಗಿರಕ್ಕೆ. ಇದೇನು ಕಷ್ಟದ ಕೆಲ್ಸ ಅಲ್ಲ, ತುಂಬಾನೇ ಪ್ರಯೋಜವಕಾರಿ ವಿಧಾನ.

ಏನಾದ್ರೂ ಬಿಸಿ ಬಿಸಿಯಾಗಿರೋದ್ನ ಕುಡಿಯೋ ಅಭ್ಯಾಸ ಇಟ್ಕೊಳಿ :-

ಈ ಹವ್ಯಾಸ ನಿಮ್ ಮನ್ಸಿಗೂ ನಿಮ್ ದೇಹಕ್ಕೂ ಶಕ್ತಿ ಕೊಡೊವಂತದ್ದು. ಬಿಸಿ ಬಿಸಿಯಾದದ್ದು ಕುಡೀರಿ ಅಂದಾಕ್ಷಣ ಕಾಫಿ ಟೀ ಓಕೆ ನಾ ಅಂತೀರಿ ಅಲ್ವಾ? ಯಾವ್ದಾದ್ರೂ ಆಯ್ತು ಪರವಾಗಿಲ್ಲ ಬಿಸಿ ಬಿಸಿ ಇದ್ರೆ ಸಾಕು.  ಪ್ರತಿ ಗುಟುಕು ಕುಡಿಯೋವಾಗ ಅದ್ನ ಆನಂದಿಸಿ. ಬಿಸಿ ಬಿಸಿಯಾಗಿರೋದ್ರಿಂದ ಅದು ಹೊಟ್ಟೆಗೆ ಹೋಗೋದನ್ನ ಗಮನಿಸ್ಬೋದು, ಈ ಅನುಭವನ ಆಸ್ವಾದಿಸಿ.

ಹಾಸಿಗೆ ಇಂದ ಎಳೋವಾಗ ಬಲಗಡೆ ಮೊಗ್ಗಲಲ್ಲಿ ಎದ್ದು ನೆಟ್ಟಗಿ ನಿಲ್ಲಿ :-

ಬೆಳಗ್ಗೆ ಹಾಸಿಗೆ ಬಿಟ್ಟು ಬರಕ್ಕೆ ಯಾರ್ಗೂ ಮನಸ್ಸಿರಲ್ಲ. ತುಂಬ ಬೇಜಾರ್ ಮಾಡ್ಕೊಂಡು ಯಾರ್ದೋ ಕಷ್ಟಕ್ಕೆ ಏಳ್ತೀವಿ. ಒಂಚೂರ್ ಮನಸ್ಸು ಮಾಡಿ… ಬಲ್ಗಡೆಗೆ ಹೊರ್ಳಿ ಎದ್ದು ಕೂತ್ಕಳಿ. ನಿಧಾನವಾಗಿ ಎರಡೂ ಕಾಲನ್ನ ನೆಲದ ಮೇಲೆ ಇಟ್ಟು ನೇರವಾಗಿ ನಿಂತ್ಕೊಳ್ಳಿ. ಇದ್ರಿಂದ ನಿಮ್ಮ ಹೃದಯ ಮತ್ತೆ ಬೆನ್ನಿಗೆ ಒಳ್ಳೇದು.

ಬೆಳಿಗ್ಗಿನ ತಿಂಡಿ ತಿನ್ನುವದನ್ನು ಮರೆಯಬೇಡಿ :-

ಬೆಳಿಗ್ಗಿನ ತಿಂಡಿ ಅನ್ನೋದು ನಿಮ್ ದಿನದ ಅತೀ ಮುಖ್ಯವಾದ ಆಹಾರ. ವಿಪರ್ಯಾಸ ಅಂದ್ರೆ ತುಂಬಾ ಜನ್ರು ಕಾಲೇಜು ಆಫಿಸಿಗೆ ಹೋಗೋ ಆತ್ರದಲ್ಲಿ ತಿಂಡಿನ ತಿನ್ನದೇ ಇಲ್ಲ. ಟಿಂಡಿ ದಿನ ಪೂರ್ತಿ ಕೆಲ್ಸ ಮಾಡಕ್ಕೆ ಶಕ್ತಿ ಕೊಡುತ್ತೆ, ಚೈತನ್ಯದಿಂದ ಇರ್ಲಿಕ್ಕೆ ಸಹಾಯ ಮಾಡತ್ತೆ. ಅದಿಕ್ಕೆ ಇನ್ಮೇಲೆ ತಿಂಡಿ ತಿನ್ನದ್ ಮಿಸ್ ಮಾಡ್ಬೇಡಿ.

ಇನ್ಮೇಲೆ ಆದರೂ ಎದ್ದಾಗ ಈ ತರದ ಅಭ್ಯಾಸಗಳನ್ನು  ಶುರು ಹಚ್ಕೊಳ್ಳಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಕೆಕೆಆರ್ ವಿರುದ್ದ ಗೆದ್ದ RCB – ಉಲ್ಟಾಪಲ್ಟಾ ಆದ ಲೆಕ್ಕಾಚಾರ

    ಕೆಕೆಆರ್ ವಿರುದ್ದ ಗೆದ್ದ RCB – ಉಲ್ಟಾಪಲ್ಟಾ ಆದ ಲೆಕ್ಕಾಚಾರ 8 ತಂಡಗಳ ಪ್ಲೇ-ಆಫ್ ಚಿತ್ರಣ ಏನು, ಎತ್ತ? ಐಪಿಎಲ್ 2026ರ ಮಹತ್ವದ ಪಂದ್ಯದಲ್ಲಿ Royal Challengers Bengaluru ತಂಡವು Kolkata Knight Riders ವಿರುದ್ಧ ಭರ್ಜರಿ 6 ವಿಕೆಟ್ ಗೆಲುವು ಸಾಧಿಸಿದ್ದು, ಪ್ಲೇ-ಆಫ್ ಲೆಕ್ಕಾಚಾರವನ್ನು ಸಂಪೂರ್ಣ ಉಲ್ಟಾಪಲ್ಟಾ ಮಾಡಿದೆ. ವಿರಾಟ್ ಕೊಹ್ಲಿಯ ಅಜೇಯ ಶತಕದ ನೆರವಿನಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಕೆಕೆಆರ್ ಪ್ಲೇ-ಆಫ್ ಕನಸು ಬಹುತೇಕ ಮಸುಕಾಗಿದೆ. RCB ಗೆಲುವಿನಿಂದ ಏನಾಯ್ತು? ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ…

  • ಉದ್ಯೋಗ

    ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿಗಳ ವರೆಗೆ ಸಂಪಾದಿಸಬಹುದು..! ತಿಳಿಯಲು ಈ ಲೇಖನ ಓದಿ …

    ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು.

  • ಜೀವನಶೈಲಿ

    ಮನೆಗಳಲ್ಲಿ ಮೂಲೆಗುಂಪಾಗಿರುವ ಈ ಹರಳೆಣ್ಣೆಯ ಮಹತ್ವ ಗೊತ್ತಾದ್ರೆ, ಈಗ್ಲೇ ಬಳಸೋದಕ್ಕೆ ಶುರು ಮಾಡ್ತೀರಾ…

    ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.

  • ಸುದ್ದಿ

    ನನಗೆ ವಯಸ್ಸಾಗಿದೆ ಗನ್ ಹಿಡಿಯಲು ಸಾಧ್ಯವಿಲ್ಲ!ಅಣ್ಣಾ ಅಜಾರೆಯವರು ಈ ಮಾತನ್ನು ಹೇಳಿದ್ದೇಕೆ ಗೊತ್ತಾ?

    ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ೪೫ ಜನ ಸೈನಿಕರು ಹುತಾತ್ಮರಾಗಿದ್ದು, ಈ ರಕ್ಕಸರ ಕೃತ್ಯಕ್ಕೆ ಪ್ರತೀಕಾರ ಕೈಗೊಳ್ಳಲೇಬೇಕು ಎಂದು ಪ್ರಧಾನಿ ಮೋದಿಯನ್ನು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸಾಮಾಜಿಕ ಹೋರಾಟಗಾರ ಅಣ್ಣಾ ಅಜಾರೆ ಅವರು ಹೇಳಿರುವ ಮಾತು ಎಂತಹವರಲ್ಲೂ ರಕ್ತ ಕುದಿಯುವಂತೆ ಮಾಡಿದೆ.ನಮ್ಮ ಯೋಧರಿಗೆ ಸಹಾಯ ಮಾಡಲು ಸೇನಾ ವಾಹನದ ಡ್ರೈವರ್ ಆಗಿ ಕೆಲಸ ಮಾಡಲು ಶಕ್ತಿ ನನಗೆ ಇದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಉಪವಾಸ…

  • ಸಿನಿಮಾ

    ಆ್ಯಕ್ಷನ್ ಪ್ರಿನ್ಸ್ ವಾಸ್ತು ದೋಷಕ್ಕೆ ಹೆದರಿ ಮನೆ ಶಿಫ್ಟ್ ಮಾಡುತ್ತಿರುವುದೇಕೆ ಗೊತ್ತಾ?ಆ ಬಂಗಲೆಯ ಬಾಡಿಗೆ ಎಷ್ಟು ಗೊತ್ತಾ!

    ಇನ್ನೇನು ಸ್ವಲ್ಪ ದಿನಗಳಲ್ಲೇ ತನ್ನ ಬಹುಕಾಲದ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಆ್ಯಕ್ಷನ್ ಪ್ರಿನ್ಸ್, ಸಿನಿಮಾದಲ್ಲಿ ವಿಲನ್ ಗಳ ಎದುರು ಖಡಕ್ ಆಗಿಯೇ ಡೈಲಾಗ್ ಹೇಳುವ ನಟ ಈಗ ವಾಸ್ತು ದೋಷಕ್ಕೆ ಹೆದರಿ ಮನೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತ್ತಿದೆ. ಡಿಸೆಂಬರ್ 9ರ ನಿಶ್ಚಿತಾರ್ಥದ ನಂತರ ಧ್ರುವ ತಮ್ಮ ಮನೆ ಶಿಫ್ಟ್ ಮಾಡಲಿದ್ದಾರೆ ಎನ್ನಲಾಗಿದ್ದು, ಈಗ ನಟ ಧ್ರುವ ಸರ್ಜಾ ಬನಶಂಕರಿಯ ಕೆ.ಆರ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ವಾಸ್ತು ದೋಷದಿಂದ ಬನಶಂಕರಿಯ…

  • ಸುದ್ದಿ

    ದೇವೇಗೌಡರಿಗೆ 87ನೇ ಹುಟ್ಟುಹಬ್ಬದ ಶುಭಾಶಯವನ್ನುತಿಳಿಸಿದ ಪ್ರಧಾನಿ ನರೇಂದ್ರ ಮೋದಿ…,

    ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ 87ನೇ ಹುಟ್ಟುಹಬ್ಬವನ್ನು ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಿಕೊಳ್ಳಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ದಂಪತಿ ಸೇರಿ ಇಡೀ ಕುಟುಂಬ ಶುಕ್ರವಾರ ಸಂಜೆಯೇ 2 ವಿಶೇಷ ವಿಮಾನಗಳಲ್ಲಿ ತಿರುಪತಿಗೆ ತೆರಳಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರಿಗೆ 87ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಮತ್ತು ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ನರೇಂದ್ರ ಮೋದಿ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ. ರಾಜಕೀಯ ಕಚ್ಚಾಟಗಳ…