ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಂಗಮಯ… ಓಂ ಶಾಂತಿ, ಶಾಂತಿ ಶಾಂತಿಃ
ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.

ದೀಪಾವಳಿಯ ಕಥೆಗಳು ಹಲವಾರು. ಕೆಲವರು ಈ ದಿನದಂದು ರಾಮ ಸೀತೆ ಹಾಗೂ ಲಕ್ಷ್ಮಣರು 14 ವರ್ಷಗಳ ನಂತರ ಅಯೋಧ್ಯೆಗೆ ಮರಳಿದ ದಿನಗಳು ಎಂದರೆ. ಮತ್ತೆ ಕೆಲವರು ಇದು ಪಾಂಡವರು 12 ವರ್ಷ ವನವಾಸ ಮತ್ತು 1 ವರ್ಷ ಅಜ್ಞಾತವಾಸವನ್ನು ಮುಗಿಸಿ ಪುನಃ ಹಸ್ತಿನಾಪುರಕ್ಕೆ ಹಿಂದಿರುಗಿದ ದಿವಸಗಳು ಎನ್ನುತ್ತಾರೆ. ಇನ್ನು ವಿಷ್ಣುಪುರಾಣಗಳು ಈ ದಿನದಂದು ಲಕ್ಮೀ ಮಾತೆ ಹಾಲಿನ ಸರೋವರದಿಂದ ಜನಿಸಿದ್ದು. ತದನಂತರ ವಿಷ್ಣುವನ್ನು ಒಪ್ಪಿ ಮದುವೆಯಾದ ದಿನಗಳು ಆದ್ದರಿಂದಲೇ ಈ ದಿನದಂದು ಲಕ್ಷ್ಮೀ ಪೂಜೆಯನ್ನು ಮಾಡಿದರೆ ಮಾತೆ ಒಲಿಯುತ್ತಾಳೆ ಎಂಬ ಕಥಾನಕವನ್ನೂ ನೀಡುತ್ತದೆ.

ಇನ್ನೂ ಹಿಂದೆ ಹೋದರೆ ಕಥೋಪನಿಷದ್ ಈ ದಿನದಂದು ಯಮ ಮತ್ತು ನಚಿಕೇತರ ನಡುವಿನ ಕಥೆಯನ್ನು ತೆರೆದಿಡುತ್ತದೆ. ಮೊದಲದಿನವಾದ ನರಕ ಚರ್ತುದಶಿಯಂದು ನಚಿಕೇತನು ಧರ್ಮ -ಅಧರ್ಮ, ಸರಿ-ತಪ್ಪು, ಅಜ್ಞಾನ-ಜ್ಞಾನ ಗಳ ಬಗ್ಗೆ ಸಂಪೂರ್ಣ ಚಿತ್ರಣ ನೀಡಿದ ದಿನ ಎಂದು ತಿಳಿಸುತ್ತದೆ.

ಇನ್ನು ಇದರೊಂದಿಗೆ ಬಲಿ ಚಕ್ರವರ್ತಿಯ ಕಥೆಯೂ ಸೇರಿಕೊಂಡಿದೆ. ಸ್ವರ್ಗವನ್ನೇ ಗೆದ್ದು ಅಲ್ಲಿ ಭೂಮಿಯ ಹಾಗೆ ಏನು ಇಲ್ಲ ಎಂದು ಹಿಂದಿರುಗಿದ ಮಹಾ ಪರಾಕ್ರಮಿ ಬಲಿ ಚಕ್ರವರ್ತಿಯು ಇಂದ್ರ ಸ್ಥಾನವನ್ನು ಪಡೆಯಲು ಯಜ್ಞ ಮಾಡುತ್ತಿರುವಾಗ ದೇವತೆಗಳ ಬೇಡಿಕೆಯಂತೆ ವಾಮನ ಅವತಾರದಲ್ಲಿ ಪ್ರತ್ಯಕ್ಷನಾದ ವಿಷ್ಣುವು 3 ಪಾದ (ಅಡಿ) ಜಾಗವನ್ನು ಕೇಳಿದಾಗ ಯಾವುದೇ ಯೋಚನೆ ಮಾಡದೇ ದಾನದ ಅರ್ಗ್ಯ ನೀಡಿದ ಬಲಿಗೆ ತನ್ನ ಬಲವ ಪ್ರದರ್ಶಿಸಿ ಭೂ-ಮಂಡಲದಲ್ಲೊಂದು ಕಾಲು ಆಕಾಶದಲ್ಲೊಂದು ಪಾದವಿರಿಸಿ..
ಇನ್ನೊಂದು ಪಾದವೆಲ್ಲಿರಿಸಲಿ ಎಂದಾಗ ಸರ್ವತ್ಸ್ವವನ್ನೂ ಅರ್ಪಿಸುತ್ತ ತನ್ನ ಶಿರಸ್ಸಿನ ಮೇಲಿರಿಸಿ ಎಂದ. ಅದಕ್ಕನುಗುಣವಾಗಿ ವಾಮನನು ಅವನನ್ನು ಭೂಗರ್ಭಕ್ಕಿಳಿಸಿದ. ಆತನ ತ್ಯಾಗಕ್ಕೆ ಮೆಚ್ಚಿ ನಿನಗೇನು ಬೇಕು ಎಂದಾಗ ಮುಕ್ತಿ ಎಂದನಂತೆ.
ಇಂತಹ ತ್ಯಾಗಮನೋಭಾವದಿಂದ ಪ್ರಭಾವಿತನಾದ ವಿಷ್ಣುವು ಈ ದಿನವನ್ನು ಬಲಿಪಾಡ್ಯ ಎಂದೇ ವಿಶ್ವದಾದ್ಯಂತ ಆಚರಿಸುತ್ತಾರೆ ಎಂಬ ವರನಿತ್ತ ಎಂಬ ಪ್ರತೀತಿ ಕೂಡ ಇದೆ.

ಇವೆಲ್ಲವನ್ನೂ ಒಡಗೂಡಿ ನರಕಾಸುರನನ್ನು ವಧೆ ಮಾಡಿದ ದಿನವೂ ಇದೇ ಎಂದೂ ಹೇಳುವುದುಂಟು. ಹತ್ತು ಹಲವಾರು ಕಥೆಗಳನ್ನು ದೀಪಾವಳಿ ಹೊಂದಿದ್ದರೂ, ಇವೆಲ್ಲರ ಅರ್ಥ ಒಂದೇ ಒಳ್ಳೆಯದರ ಗೆಲುವು. ನಮ್ಮೆಲ್ಲರ ಮನಸ್ಸಿನ ವಿಕಾರಗಳಾದ ಕಾಮ, ಕ್ರೋಧ ಮದ, ಮತ್ಸರಗಳನ್ನು ಜುಸಿ.(ಬಲಿಯಾಗಿಸಿ), ಹೊಸ ತನದಿಂದ ಉತ್ತಮ ವಿಚಾರಗಳ ಉಗಮವಾಗಬೇಕು. ಮನದ ಕೊಳೆಯನ್ನು ಕಳಚಿ ಶುಭ್ರ ಬಟ್ಟೆಯ ತೊಡುವ ಹಾಗೆ, ನಿರಾಕಾರ ಜ್ಯೋತಿಯಷ್ಟೇ ಪರಿಶುದ್ಧ ಮನಸ್ಸನ್ನು ಪಡೆಯುವುದು. ನೀರು ತುಂಬುವ ಆಚರಣೆಂದ ಆರಂಭವಾಗುವ ಈ ಹಬ್ಬದ ಪ್ರತಿದಿನಕ್ಕೂ ಅದರದೇ ಆದ ವೈಶಿಷ್ಟ್ಯತೆ ಇದೆ.

ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ದೀಪಾವಳಿ ಹಬ್ಬದ ಸಂಭ್ರಮ-ಸಡಗರವನ್ನು ಇಮ್ಮಡಿಗೊಳಿಸಲು ಸುರಕ್ಷಿತವಾಗಿ ಆಚರಿಸುವುದು ಕೂಡ ಮುಖ್ಯ.
ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವ ಭರಾಟೆಯಲ್ಲಿ ಮಕ್ಕಳು ಕಣ್ಣು, ಕೈ, ಕಾಲಿಗೆ ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಪಟಾಕಿ ಸಿಡಿಸುವಾಗ ಏನು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಅಮೋದ್ ನಾಯಕ್ ಹೇಳುತ್ತಾರೆ.
– ಪಟಾಕಿ ಸಿಡಿಸುವಾಗ ಮಕ್ಕಳು ಪಟಾಕಿಯಿಂದ ಕನಿಷ್ಠ ತೋಳಿನಷ್ಟು ದೂರದಲ್ಲಿರಬೇಕು.
– ಪಟಾಕಿ ಹೊಡೆಯುವಾಗ ಸಡಿಲ ಬಟ್ಟೆಗಳನ್ನು ಧರಿಸಬೇಡಿ.
-ರಕ್ಷಕ ಕವಚಗಳನ್ನು ದೇಹಕ್ಕೆ ಧರಿಸಿಕೊಳ್ಳಿ.
-ಬೇಡದ ವಸ್ತುಗಳು ದೇಹಕ್ಕೆ ಬಿದ್ದರೆ ನೀರಿನಿಂದ ತೊಳೆಯಿರಿ.
-ರಕ್ಷಾ ಫಲಕವಾಗಿ ಕಾಂಟಾಕ್ಸ್ಟ್ ಬದಲು ಗ್ಲಾಸುಗಳನ್ನು ಧರಿಸಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.
ಆಲೂಗಡ್ಡೆ ಮತ್ತು ಈರುಳ್ಳಿಯನ್ನು ನೀವು ಏತಕ್ಕಾಗಿ ಬಳಸುತ್ತೀರಿ..? ಇಂಥದ್ದೊಂದು ಪ್ರಶ್ನೆ ಕೇಳಿದರೆ ಯಾರೇ ಆದರೂ ಅಡುಗೆ ತಯಾರಿಸಲು ಬಳಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಆಲೂಗಡ್ಡೆ ಮತ್ತು ಈರುಳ್ಳಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ.
ಮೂಗುತಿಯೆಂದರೆ ಕೇವಲ ಸಾಂಪ್ರದಾಯಿಕ ಮಹಿಳೆಯರು ಮಾತ್ರ ಹಾಕಿಕೊಳ್ಳುವುದು, ಆಧುನಿಕ ಮಹಿಳೆಯರು ಮೂಗುತಿ ಧರಿಸುವುದಿಲ್ಲ. ಅವರು ಇದರಿಂದ ದೂರು ಇರುತ್ತಾರೆ ಎನ್ನುವ ಕಾಲವಿತ್ತು. ಆದರೆ ಕ್ರಮೇಣ ಮೂಗುತಿ ಕೂಡ ಒಂದು ಫ್ಯಾಷನ್ ಆಗುತ್ತಾ ಹೋಯಿತು. ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಮೂಗುತಿ ಸುಂದರಿ ಎಂದು ಕರೆಯಲ್ಪಡುತ್ತಿದ್ದಳು. ಆಕೆಯನ್ನು ನೋಡಿಯೋ ಗೊತ್ತಿಲ್ಲ. ಮೂಗುತಿ ಮಾತ್ರ ಒಂದು ಫ್ಯಾಷನ್ ಆಗಿ ಬೆಳೆಯಿತು.
ಹೆದ್ದಾರಿಗಳ ಮೇಲೆ ಬಿಳಿ, ಹಳದಿ ಬಣ್ಣಗಳಲ್ಲಿ ಹಾಕುವ ಹಲವು ವಿಧದ ಪಟ್ಟೆಗಳನ್ನು ಸಹ ಎಲ್ಲರೂ ನೋಡಿಕೊಂಡು ಹೋಗಬೇಕು. ಇಷ್ಟಕ್ಕೂ ಆ ಪಟ್ಟೆಗಳನ್ನು ಯಾಕೆ ಹಾಕುತ್ತಾರೆ? ಅವುಗಳ ಉಪಯೋಗವೇನು ಎಂದು ಈಗ ತಿಳಿದುಕೊಳ್ಳೋಣ.
ನೀವು ಪೂರ್ವ ಜನ್ಮದಲ್ಲಿ ಏನ್ಮಾಡಿದಿರಾ ನಿಮಗೆ ಗೊತ್ತಿದಿಯ ? ಅದೇನಂದ್ರೆ ಯಾರಿಗಾದ್ರು ಪೂರ್ವ ಜನ್ಮದ ಜ್ಞಾನ ಇರುತ್ತಾ? ಎಂದು ಕೆಳುತ್ತಿದ್ದೀರಿ . ನಿಜವಾಗಿಯೂ ಇರುವುದಿಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನಡೆದಿರುವ ಘಟನೆಗಳೇ ನೆನಪು ಇರುವುದಿಲ್ಲ.. ಇನ್ನು ಪೂರ್ವ ಜನ್ಮದ ವಿಷಯಗಳು ಹೇಗೆ ನೆನಪಿರುತ್ತವೆ ..
ನಟ, ನಟಿಯರು ಶೂಟಿಂಗ್ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್ ಖಾನ್ ಕೂಡಾ ಸೇರ್ಪಡೆಯಾಗಿದ್ದಾರೆ.