ಮನರಂಜನೆ

ಮಾತಿನ ಮಧ್ಯೆ ತಮ್ಮ ಒಳ ಸಂಚನ್ನು ಹೇಳಿ ಬಿಗ್ ಬಾಸಿಗೆ ಸಿಕ್ಕಿಬಿದ್ದ ಭೂಮಿ ಶೆಟ್ಟಿ..! ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ?ತಿಳಿದರೆ ಶಾಕ್ ಆಗ್ತೀರಾ…

By admin

November 23, 2019

ಬಿಗ್ ಬಾಸಿಗೆ ಮೋಸ ಮಾಡಲು ಹೋಗಿ ಭೂಮಿ ಶೆಟ್ಟಿ ಅವರು ಸಿಕ್ಕಿಬಿದ್ದಿದ್ದಾರೆ.. ಹೌದು ಈ ವಾರ ಲಕ್ಸುರಿ ಬಡ್ಜೆಟ್ ಗಾಗಿ ಕಳ್ಳ ಪೊಲೀಸ್ ಟಾಸ್ಕ್ ಒಂದನ್ನು ನೀಡಲಾಗಿತ್ತು.. ಅದರಂತೆ ಶೈನ್ ರಾಜು ತಾಳಿಕೋಟೆ ಚಂದನ್ ಪ್ರಿಯಾಂಕ ಪೊಲೀಸರಾದರೆ ಇತ್ತ ವಾಸುಕಿ ದೀಪಿಕಾ ಕುರಿ ಕಳ್ಳರಾಗಿದ್ದರು‌. ಸುಜಾತ ಪತ್ರಕರ್ತೆಯಾಗಿ ಕಾಣಿಸಿಕೊಂಡರು..

ಇನ್ನುಳಿದಂತೆ ಭೂಮಿ ಪೃಥ್ವಿ ಕಿಶನ್ ಚಂದನ ಹರೀಶ್ ರಾಜ್ ಜನ ಸಾಮಾನ್ಯರಾಗಿದ್ದರು. ಆದರೆ ಜನಸಾಮಾನ್ಯರ ನಡುವೆ ಇದ್ದ ಕಳ್ಳರು ಯಾರೆಂದು ಉಳಿದವರಿಗೆ ತಿಳಿದಿರಲಿಲ್ಲ. ಕಿತ್ತಾಟ ಕಿರುಚಾಟ ಹಾಗೂ ಮನರಂಜನೆಯ ನಡುವೆ ಟಾಸ್ಕ್ ಏನೋ ಸಂಪೂರ್ಣಗೊಂಡಿತು. ಈ ವಾರ ಕ್ಯಾಪ್ಟನ್ ಆಗಿದ್ದ ಶೈನ್ ಅವರು ರಾಜು ತಾಳಿಕೋಟೆ ಅವರಿಗೆ ಬೆಸ್ಟ್ ಪರ್ಫಾರ್ಮರ್ ಕೊಟ್ಟರೆ, ದೀಪಿಕಾರ ಮೈಕ್ ಹಾಳು ಮಾಡಿದ್ದ ಕಾರಣ ಕಿಶನ್ ಅವರಿಗೆ ಕಳಪೆ ಬೋರ್ಡ್ ನೀಡಿದರು.

ಇದೆಲ್ಲದರ ನಡುವೆ ಭೂಮಿ ಶೆಟ್ಟಿ ಅವರು ವಾಸುಕಿ ಮೇಲೆ ಅಧಿಕಾರ ಚಲಾಯಿಸುತ್ತಿದ್ದದ್ದು ನೋಡುಗರಿಗೆ ಹಾಸ್ಯಾಸ್ಪದದಂತೆ ಕಾಣುತ್ತಿದ್ದದ್ದು ಸುಳ್ಳಲ್ಲ. ಜೊತೆಗೆ ಟಾಸ್ಕ್ ನ ಕೊನೆಯ ದಿನವಾದ ನಿನ್ನೆ ಭೂಮಿ ಶೆಟ್ಟಿ ಅವರು ಬಿಗ್ ಬಾಸಿಗೆ ಮೋಸ ಮಾಡಲು ಹೋಗಿ ಸಿಕ್ಕಿಬಿದ್ದರು.

ಹೌದು ಟಾಸ್ಕ್ ಎಲ್ಲಾ ಮುಗಿದ ನಂತರ ವಾಸುಕಿ ಮೇಲೆ ಮಾತಿನ ಪ್ರಹಾರ ನಡೆಸಿದ ಭೂಮಿ ಅವರು. ನೀನು ಕಳ್ಳ ಅಂತ ನನಗೇಕೆ ಮೊದಲೇ ಹೇಳಲಿಲ್ಲ. ನೀನು ಹೇಳಬೇಕಿತ್ತು ಎಂದು ಅಧಿಕಾರ ಚಲಾಯಿಸಿದರು. ಇಲ್ಲ ಬಿಗ್ ಬಾಸ್ ರೂಲ್ಸ್ ಪ್ರಕಾರ ಹೇಳೋ ಹಾಗಿರಲಿಲ್ಲ ಅಲ್ಲವಾ ಅದಕ್ಕೆ ಹೇಳಲಿಲ್ಲ ಎಂದು ವಾಸುಕಿ ಎಷ್ಟೇ ಸಮಾಧಾನದಿಂದ ಹೇಳಿದರೂ. ರೂಲ್ಸ್ ನನಗೂ ಗೊತ್ತು.ಆದರೂ ನೀನು ಹೇಳಬೇಕಿತ್ತು. ಕಳ್ಳ ಆಗಿದ್ದರೆ ಕಣ್ಣಿನ ಮೂಲಕ ನಾನು ಕಳ್ಳ ಅಂತ ಹೇಳಬೇಕು ಎಂದು ಮೊದಲೇ ಹೇಳಿದ್ದೇ ಅಲ್ವಾ. ಎಂದು ಮಾತಿನ ಮಧ್ಯೆ ತಮ್ಮ ಒಳ ಸಂಚನ್ನು ಹೇಳಿಯೇ ಬಿಟ್ಟರು.

ಇದೆಲ್ಲವೂ ಬಿಗ್ ಬಾಸ್ ಕ್ಯಾಮರಾಗಳಲ್ಲಿ ರೆಕಾರ್ಡ್ ಕೂಡ ಆಯಿತು.. ರೂಲ್ಸ್ ಪ್ರಕಾರ ಯಾರಿಗೂ ಹೇಳಬಾರದು ಅಂದರೂ ಕೂಡ ಕಣ್ಸನ್ನೆ ಮೂಲಕ ಹೇಳಬೇಕಿತ್ತು ಎಂದು ಭೂಮಿ ಬಿಗ್ ಬಾಸಿನ ರೂಲ್ಸ್ ಮುರಿದು ಹೊಸ ರೂಲ್ಸ್ ಹುಟ್ಟುಹಾಕಿದ್ದು ಈಗಾಗಲೇ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯ ಶೂಟಿಂಗ್ ನಡೆದಿದ್ದು ಅದರಲ್ಲಿ ಕಿಚ್ಚ ಸುದೀಪ್ ಅವರು ಭೂಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ..