ಜ್ಯೋತಿಷ್ಯ

ಸೋಮವಾರದ ದಿನ ಭವಿಷ್ಯ..?ಹೇಗಿದೆ ನೋಡಿ ನಿಮ್ಮ ರಾಶಿ ಭವಿಷ್ಯ…

By admin

March 19, 2018

ಇಂದು ಸೋಮವಾರ , 19/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ದುಡುಕು ತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ತಾಳ್ಮೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಹೊಸ ಉತ್ಸಾಹದಿಂದ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಸಿದ್ಧಿಯಾಗಲಿದೆ. ಅನಿರೀಕ್ಷಿತವಾಗಿ ಸಂಚಾರ ಒದಗಿ ಬಂದೀತು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಸದ್ಯದಲ್ಲೇ ಶುಭವಾರ್ತೆ ಇದೆ. ಅತಿಥಿಗಳ ಆಗಮನವಿದೆ.

ವೃಷಭ :-

ಗಳು ಮನೆಯಲ್ಲಿ ನಡೆಯಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪ್ರಯತ್ನಬಲಕ್ಕೆ ಒತ್ತು ನೀಡಿರಿ. ಆಗಾಗ ಕಿರಿಕಿರಿ ತೋರಿ ಬಂದರೂ ಕಾರ್ಯಸಾಧನೆಯಾಗುತ್ತದೆ. ಸ್ನೇಹಿತರೊಂದಿಗೆ ದಿನವನ್ನು ಸಂತೋಷದಿಂದ ಕಳೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಓಡಾಟ, ಜತೆಗೆ ಮಕ್ಕಳ ಸಲುವಾಗಿ ವ್ಯಾಪಾರ ಮಾಡುವ ಸಾಧ್ಯತೆ. ಉತ್ತಮ ಆರೋಗ್ಯ.

ಮಿಥುನ:

ಕಾರ್ಯಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ಅನುಸರಿಸಿದ ಮಾರ್ಗಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ. ಕಚೇರಿಯಲ್ಲಿ ನಿಮ್ಮ ಸ್ಥಾನ ಮಾನಗಳು ಗಟ್ಟಿಯಾಗುವ ಜತೆಗೆ ಕಾರ್ಯ ಬಾಹುಳ್ಯ ಅಧಿಕವಾಗಲಿದೆ. ವೃತ್ತಿರಂಗದಲ್ಲಿ ಪ್ರಗತಿ ಮುನ್ನಡೆಯಲಿದೆ. ನವದಂಪತಿಗಳಿಗೆ ಹನಿಮೂನ್‌ ಭಾಗ್ಯ ವಿರುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ ವಿರುತ್ತದೆ. ಭೂ, ಗೃಹ ಖರೀದಿಗಳಿಗೆ ಅನುಕೂಲವಾದೀತು.

ಕಟಕ :-

ಮಿತ್ರರ ಸಹವಾಸದಿಂದ ಅಪವಾದ ಭೀತಿ ತಂದೀತು. ದಂಪತಿಗಳಿಗೆ ಸಂತಾನಕ್ಕೆ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ವ್ಯಾಪಾರ, ವ್ಯವಹಾರಗಳನ್ನು ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ. ಕಚೇರಿ ಕೆಲಸಗಳ ಸುಗಮತೆಗೆ ಸಹವರ್ತಿಗಳ ಸಲಹೆ ಸಹಕಾರ ಕೋರಲಿದ್ದೀರಿ. ಸಂಗಾತಿಗೆ ಹೊಸ ಉದ್ಯೋಗದಿಂದ ಸಂತೋಷ. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಟ್ಟು ಕಾರ್ಯನಿರ್ವಹಿಸುವುದು ಒಳಿತು.

 

 ಸಿಂಹ:

ಉದ್ಯೋಗದಲ್ಲಿ ಸ್ಥಾನ ಮಾನಗಳು ಅಧಿಕಗೊಳ್ಳುವುದು. ರೈತಾಪಿ ವರ್ಗದವರಿಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ತೊಡಕುಗಳು ಎದುರಾದೀತು. ಅನ್ನಪೂರ್ಣೇಶ್ವರಿಯ ಆರಾಧನೆಯಿಂದ ಸಮೃದ್ಧಿ. ಹಣದ ಹೂಡಿಕೆಯಲ್ಲಿ ಜಾಗ್ರತೆ ಇರಲಿ. ದಾಯಾದಿಗಳ ಕಿರಿಕಿರಿಯಿಂದ ಕೆಲಸಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ. ಸಮಾಜ ಸೇವೆಯಲ್ಲಿ ಧನವಿನಿಯೋಗವಾದೀತು. ದಿನಾಂತ್ಯ ಶುಭವಿದೆ.

ಕನ್ಯಾ :-

ವಿವಿಧ ರೀತಿಯಲ್ಲಿ ಧನಾಗಮನವಿದೆ. ಶುಭಮಂಗಲ ಕಾರ್ಯಗಳಿಗಾಗಿ ಆಗಾಗ ಸಂಭ್ರಮಿಸುವಂತಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಭವಿಷ್ಯಕ್ಕಾಗಿ ಪರದೇಶಕ್ಕೆ ಹೋಗುವ ಸಾಧ್ಯತೆ ಇದೆ. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಹೊಸ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಸಂಗಾತಿಯ ಇಷ್ಟಾರ್ಥಗಳನ್ನು ಈಡೇರಿಸಲಿದ್ದೀರಿ. ಆಭರಣ ಖರೀದಿ ಸಾಧ್ಯತೆ.

ತುಲಾ:

ಒದಗಿಬಂದಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಸ್ನೇಹಿತನ ಸಹಾಯಕ್ಕೆ ನಿಲ್ಲಬೇಕಾದ ಅವಕಾಶ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗದ ಅವಕಾಶ ದೊರೆತು ನೆಮ್ಮದಿ ಮೂಡುವುದು. ತನ್ನವರ ಅಭಿವೃದ್ಧಿ ಇದ್ದರೂ ಎಲ್ಲದರಲ್ಲೂ ಆಲಸ್ಯ, ನಿರಾಸಕ್ತಿ ಇರುವುದು. ಸಂಚಾರದಲ್ಲಿ ಆಗಾಗ ಅಡಚಣೆಗಳು ಕಂಡು ಬಂದಾವು. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಸಾರ್ಥಕ್ಯ ಪಡೆದಾರು.

ವೃಶ್ಚಿಕ :-

ವಾದೀತು. ಹಿಂದಿನಿಂದ ನಿಂದಿಸುವವರು ಇದ್ದರೂ ತಾಳ್ಮೆ-ಸಮಾಧಾನದಿಂದ ಮುಂದುವರಿಯಬೇಕಾದೀತು. ಮಾತಿನಿಂದ ಕಾರ್ಯಸಾಧಿಸಬೇಕಾಗುತ್ತದೆ. ಅಧಿಕಾರಿ ವರ್ಗದವರಿಗೆ ತುಸು ಸಮಾಧಾನಕರ. ಲಲಿತ ಕಲೆಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಮುಖ್ಯವಾದ ವಿಷಯವೊಂದರ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕಾದೀತು. ಭಾವೋದ್ವೇಗ ತಗ್ಗಿಸಿಕೊಳ್ಳುವಿರಿ.

ಧನಸ್ಸು:

ಹಣಕಾಸಿನ ಅಡಚಣೆಗಳು ದೂರವಾಗಲಿವೆ. ಜೀವನದಲ್ಲಿ ಬದಲಾವಣೆ ತರುವ ಘಟನೆಯೊಂದು ಎದುರಾಗುವ ಸಾಧ್ಯತೆ ಇದೆ. ಸಂಪನ್ಮೂಲಗಳು ಕೂಡಿಬರಲಿವೆ. ಉನ್ನತ ಹುದ್ದೆಯ ಲಾಭ ಅಧಿಕಾರಿ ವರ್ಗದವರಿಗೆ ಸಿಗಲಿದೆ. ನ್ಯಾಯಾಲಯದ ಕೆಲಸಕಾರ್ಯಗಳು ಯಶಸ್ಸನ್ನು ತರಲಿವೆ. ಆಗಾಗ ದೇಹಾರೋಗ್ಯದ ಬಗ್ಗೆ ಗಮನ ಹರಿಸಿರಿ. ದಿನಾಂತ್ಯ ಸಿಹಿವಾರ್ತೆ ಇದೆ.

ಮಕರ :-

ಆತ್ಮೀಯರೊಂದಿಗೆ ಹಣಕಾಸಿನ ಪರಿಸ್ಥಿತಿ ಚರ್ಚಿಸಲಿದ್ದೀರಿ. ನಿವೇಶನ ಕೊಳ್ಳುವ ವಿಚಾರ ಮುಂದೂಡುವ ಬದಲಾಗಿ ಹೊಂದಾಣಿಕೆಯಿಂದ ಮುಂದುವರೆಯುವುದು ಸೂಕ್ತ. ಆರೋಗ್ಯ ಉತ್ತಮವಾಗಿರುವುದು. ಹಿತವಾದ ಮಾತಿನಿಂದ ಗೌರವವನ್ನು ಸಂಪಾದಿಸಲಿದ್ದೀರಿ. ಅನಾರೋಗ್ಯದ ಬಗ್ಗೆ ದೂರ ಸಂಚಾರದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ನಿರುದ್ಯೋಗಿಗಳಿಗೆ ಆಗಾಗ ಕಾಯುವ ಪರಿಸ್ಥಿತಿಯಿಂದ ಸಮಾಧಾನ ಸಿಗದು.

ಕುಂಭ:-

ನಿಶ್ಶಕ್ತಿ ತೋರಿ ಬಂದರೂ ಆರೋಗ್ಯ ಭಾಗ್ಯ ಸುಧಾರಿಸಲಿದೆ. ದೂರ ಸಂಚಾರದಲ್ಲಿ ಕಾಳಜಿ ವಹಿಸಬೇಕು. ಹೆಂಡತಿಯಿಂದ ಶುಭವನ್ನು ಕೇಳುವಿರಿ. ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ. ಸಮಾಜ ಸೇವೆಯ ನಿಮಿತ್ತ ಹೆಚ್ಚಿನ ಓಡಾಟ ಮಾಡಬೇಕಾದೀತು. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಮಿತ್ರರೊಬ್ಬರು ಸನಿಹಕ್ಕೆ ಬರುವ ಸಾಧ್ಯತೆ. ಆರ್ಥಿಕ ಅನುಕೂಲತೆಗಳು ಸಹಜವಾಗಿರುವುದು.

ಮೀನ :-

ಗಳು ತಮ್ಮ ಪ್ರಯತ್ನಬಲಕ್ಕೆ ವಿಶ್ವಾಸವಿಡಬೇಕಾಗುತ್ತದೆ. ಶ್ರೀದೇವತಾದರ್ಶನ ಭಾಗ್ಯವಿರುತ್ತದೆ. ಆರ್ಥಿಕ ಕೊರತೆಗಳು ಕಂಡು ಬಂದರೂ ಧನಾಗಮನದಿಂದ ಉಪಶಮನವಾಗುತ್ತವೆ. ಹೊಸ ನಿರ್ಮಾಣ ಕಾರ್ಯಗಳ ಬಗ್ಗೆ ಒಪ್ಪಂದ ಏರ್ಪಟ್ಟು ಸಂತೋಷ ತರುವುದು. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಪ್ರಶಸ್ತಿ, ಗೌರವಾದರಗಳು ಲಭ್ಯ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ.