ಜ್ಯೋತಿಷ್ಯ

ದಿನ ಭವಿಷ್ಯ ಶನಿವಾರ…ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

By admin

April 14, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಶನಿವಾರ, 14/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

ಸೂರ್ಯೋದಯ06:08:40 ಸೂರ್ಯಾಸ್ತ18:46:04 ಹಗಲಿನ ಅವಧಿ12:37:24 ರಾತ್ರಿಯ ಅವಧಿ11:21:42 ಚಂದ್ರಾಸ್ತ17:16:30 ಚಂದ್ರೋದಯ29:42:29*

ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್ ತಿಂಗಳು (ಅಮಾವಾಸ್ಯಾಂತ್ಯ):ಚೈತ್ರ ತಿಂಗಳು (ಹುಣ್ಣಿಮಾಂತ್ಯ):ವೈಶಾಖ ಪಕ್ಷ : ಕೃಷ್ಣ ಪಕ್ಷ ತಿಥಿ : ತ್ರಯೋದಶಿ ನಕ್ಷತ್ರ :ಉತ್ತರಭಾಧ್ರಪದ ಯೋಗ : ಇಂದ್ರ ಪ್ರಥಮ ಕರಣ : ವಾಣಿಜ  ವಿಷ್ಠಿ ಸೂರ್ಯ ರಾಶಿ : ಮೇಷ ಚಂದ್ರ ರಾಶಿ : ಮೀನ

ಮುಹೂರ್ತ

ರಾಹು ಕಾಲ09:18 – 10:53ಅಶುಭ ಯಮಘಂಡ ಕಾಲ14:02 – 15:37ಅಶುಭ ಗುಳಿಕ ಕಾಲ06:09 – 07:43 ಅಭಿಜಿತ್12:02 -12:53ಶುಭ ದುರ್ಮುಹೂರ್ತ07:50 – 08:40ಅಶುಭ

ಮೇಷ:-

ವಿವಾಹ ಅಪೇಕ್ಷೆಯುಳ್ಳ ವಧು-ವರರಿಗೆ ಖಂಡಿತವಾಗಿಯೂ ಆತುರ ಸಲ್ಲದು. ತಾಳ್ಮೆಯಿಂದ ಕಣಕರುಚಿ ಎನ್ನುವಂತೆ ಇನ್ನು ಸ್ವಲ್ಪದಿನ ಕಾಯುವುದರಿಂದ ಉತ್ತಮ ಜೀವನ ಸಂಗಾತಿಯನ್ನು ಪಡೆದುಕೊಳ್ಳುವಿರಿ.

ವೃಷಭ :-

ಸಾಮಾಜಿಕ ಕಾರ್ಯಗಳಿಂದ ನಿಮಗೆ ಹೆಚ್ಚಿನದಾದ ಪ್ರಶಂಸೆ ಸಿಗಲಿದೆ. ನಿಮ್ಮ ಬರವಣಿಗೆಗಳು ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು.

ಮಿಥುನ:

ಸಾಂಸಾರಿಕ ಜೀವನದ ಗೊಂದಲಗಳು ಕಡಿಮೆಯಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ಆರೋಗ್ಯದಲ್ಲಿ ತುಸು ಏರು-ಪೇರಾಗುವುದು. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕಟಕ :-

ಮನೆಯ ಮಕ್ಕಳ ವಿಷಯದಲ್ಲಿ ಉದಾಸೀನ ಮಾಡುವುದರಿಂದ ಹಿರಿಯರಿಗೆ ಕಳಂಕ ಬರುವ ಸಾಧ್ಯತೆ ಇದ್ದು, ಮಕ್ಕಳನ್ನು ಕರೆದು ಈ ಬಗ್ಗೆ ಬುದ್ಧಿವಾದವನ್ನು ಹೇಳುವುದು ಒಳ್ಳೆಯದು. ಮನಸ್ಸಿಗೆ ಒಗ್ಗದ ಜವಾಬ್ದಾರಿಗಳನ್ನು ಹೊರಬೇಡಿ.

 ಸಿಂಹ:

ಸ್ನೇಹಿತರು ನಿಮ್ಮ ಸಹಾಯಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನಸಹಕಾರ ನೀಡಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿಯು ದೊರೆಯುವ ಸಾಧ್ಯತೆ ಇರುತ್ತದೆ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿ.

ಕನ್ಯಾ :-

ಸ್ವತಂತ್ರವಾಗಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಲು ಇದು ಸರಿಯಾದ ಸಮಯವಲ್ಲ. ಮತ್ತೊಬ್ಬರ ಪಾಲುದಾರಿಕೆಯೊಂದಿಗೆ ಆರಂಭಿಸುವುದು ಉತ್ತಮ. ಎಲ್ಲರ ಸಲಹೆಗಳನ್ನು ಅಲಿಸಿ ಆದರೆ ನಿಮ್ಮ ಯೋಜನೆಯಂತೆ ಕಾರ್ಯರೂಪಕ್ಕೆ ತನ್ನಿ.

ತುಲಾ:

ಸಮಯ ಪ್ರಜ್ಞೆಯಿಂದ ಇತರರೊಡನೆ ವ್ಯವಹರಿಸಿ. ಸ್ನೇಹಿತರೊಂದಿಗೆ ಮೋಜ ಮಸ್ತಿನ್ನು ಅನುಭವಿಸುವಿರಿ. ನಿಮ್ಮ ಕೆಲಸಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ಇರುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ.

ವೃಶ್ಚಿಕ :-

ಅನುಭವಿಗಳ ಸಲಹೆಪಡೆದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವರು.

ಧನಸ್ಸು:

ಆದಾಯಕ್ಕೆ ಹೇಗೆ ಹೊಸ ಹೊಸ ದಾರಿ ಕಂಡಂತೆ ಖರ್ಚಿಗೂ ಕೂಡಾ ಹೊಸ ದಾರಿ ಕಾಣಲಿವೆ. ಖರ್ಚಿನ ಕಡಿವಾಣ ಹಾಕಲು ಪ್ರಯತ್ನಿಸದಿದ್ದಲ್ಲಿ ಕೂಡಿಟ್ಟ ಹಣ ಕೂಡಾ ಕರಗುವ ಸಾಧ್ಯತೆ ಇದೆ. ಸೋಮಾರಿತನ ಹಾನಿ ಮಾಡುವುದು.

ಮಕರ :-

ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಸಂಸಾರದಲ್ಲಿದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲಾ ರೀತಿಯ ಸಹಾಯಗಳನ್ನು ಸ್ವೀಕರಿಸಿ.

ಕುಂಭ:-

ಪ್ರಯತ್ನಂ ಸರ್ವತೇ ಸಾಧನಃ..ಪರಿಶ್ರಮವೇ ಯಶಸ್ಸಿನ ಗುಟ್ಟೆಂದು ಚೆನ್ನಾಗಿ ಅರಿತಿರುವ ನಿಮಗೆ ಯೋಗ್ಯ ಪ್ರತಿಫಲ ದೊರೆಯುವುದು. ಕಾರ್ಯ ಒತ್ತಡ ಎಷ್ಟೇ ಇದ್ದರೂ ಕೂಡಾ ಮನಸ್ಥಿತಿಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಮನೋಧೈರ್ಯವನ್ನು ಇತರರು ಮೆಚ್ಚುವರು.

ಮೀನ :-

ನೀವು ಸರ್ಕಾರಿ ಕೆಲಸದಲ್ಲಿ ಉನ್ನತಹುದ್ದೆಯಲ್ಲಿದ್ದರೆ ಮುಂಬಡ್ತಿ ಸದ್ಯದಲ್ಲೆ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲಾ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ದೆಯೇ ಅವಶ್ಯಕತೆ ಇದೆ. ಅವರಿವರ ಮಾತುಗಳಿಗೆ ಕಿವಿಗೊಡದಿರಿ.