ಸ್ಪೂರ್ತಿ

ಜೀವನದಲ್ಲಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂಬುದು ಸತ್ಯ..ಅದಕ್ಕೆ ಸುನಿತಾ ಮಂಜುನಾಥ್ ರವರೇ ನೈಜ್ಯ ಉದಾಹರಣೆ…

By admin

February 18, 2018

ಸಾಕಷ್ಟು ಸಮಾಜಸೇವೆಗಳನ್ನು ಮಾಡಿ ಹೆಸರಾಗಿರುವ ಸುನಿತಾ ಮಂಜುನಾಥ್ ರವರ ಬಹು ದೊಡ್ಡ ಕನಸಿನ ಆಂದೋಲನವೇ “ಕಸದಿಂದ ರಸ” ತಮ್ಮದೇ ಶಾಲೆಯ ಮಕ್ಕಳಿಗೆ ಹುರಿದುಂಬಿಸಿ..‌ ದೇಶದ ಬಗ್ಗೆ ಅಭಿಮಾನವನ್ನು ಹೆಚ್ಚು ಮಾಡುತ್ತಿರುವ ಇವರು ನಿಜಕ್ಕೂ ಗ್ರೇಟ್..

“ಕಸದಿಂದ ರಸ” ಇದು ಒಂದು ಅದ್ಭುತ ಆಲೋಚನೆ “ಸುಮನಾ ಫೌಂಡೇಶನ್” ಸಹಯೋಗದೊಂದಿಗೆ ಸುನಿತಾ ಮಂಜುನಾಥ್ ರವರ “ಚನ್ನಕೇಶವ ಶಿಕ್ಷಣ ಸಂಸ್ಥೆ ವತಿಯಿಂದ” ಸುಮಾರು ದಿನಗಳಿಂದ ಆಂದೋಲನ ಪ್ರಾರಂಭಿಸಿದ್ದರು..

ಚಲನಚಿತ್ರ ಮಂದಿರಗಳಲ್ಲಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ನೀರು ಕುಡಿದು ಬಿಸಾಕಿದ ಖಾಲಿ ಬಾಟಲುಗಳನ್ನು ಸಂಗ್ರಹಿಸುವುದು. ಜೊತೆಗೆ ಎಳನೀರು ಕುಡಿದು ಬಿಸಾಡಿದ ತೆಂಗಿನ ಕಾಯಿಗಳನ್ನು ಸಂಗ್ರಹಿಸಿ, ಅವುಗಳನ್ನು ಬೇಕಾದ ಆಕಾರಕ್ಕೆ ಕಟ್ ಮಾಡಿ , ಮಣ್ಣು ತುಂಬಿ ಚಿಕ್ಕ ಚಿಕ್ಕ ಸಸಿಗಳನ್ನು ನೆಡುವುದು ಈ ಆಂದೋಲನದ ಉದ್ದೇಶವಾಗಿತ್ತು…

ಇಲ್ಲಿಯವರೆಗೆ ಸುತ್ತಮುತ್ತಲಿನ ಪ್ರದೇಶಗಳಿಂದ ಸುನಿತಾ ಮಂಜುನಾಥ್ ಮತ್ತವರ ಸುಮನಾ ಫೌಂಡೇಶನ್ ತಂಡ ಸಾವಿರಕ್ಕೂ ಹೆಚ್ಚು ಬಿಸಾಡಿದ ಬಾಟಲ್ಸ್ ಮತ್ತು ಎಳನೀರಿನ ತೆಂಗಿನಕಾಯಿಗಳನ್ನು ಸಂಗ್ರಹಿಸಿ , ಸಸಿಗಳನ್ನು ನೆಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹವಾದದ್ದು…

ಏನನ್ನೂ ಅಪೇಕ್ಷೆ ಪಡದೇ ಇವರು ಜನರಿಗೆ ಅರಿವು ಮೂಡಿದರೆ ಸಾಕು.. ಈ ಕಾರ್ಯದ ಮುಖ್ಯ ಉದ್ದೇಶ ಪರಿಸರ ಕಾಳಜಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಎನ್ನುತ್ತಾರೆ ಅಂದೋಲನದ ರುವಾರಿ ಸುನಿತಾ ಮಂಜುನಾಥ್..

M Tec ಪದವಿಯನ್ನು ಪಡೆದು.. ಸರ್ಕಾರಿ ಕೆಲಸವನ್ನು ತ್ಯಜಿಸಿ.. ಸಮಾಜದ ಬಗ್ಗೆಗಿನ ಕಾಳಜಿಯಿಂದ ಈ ರೀತಿಯಾದಂತಹ ಆಂದೋಲನಗಳನ್ನು ಮಾಡುತ್ತಾ ಬಂದಿರುವ ಸುನಿತಾ ಮಂಜುನಾಥ್ ರವರ ಪರಿಸರ ಪ್ರೀತಿಗೆ ನಮ್ಮ ಕಡೆಯಿಂದ ಹ್ಯಾಟ್ಸ್ ಆಫ್..