ಸ್ಪೂರ್ತಿ

ಗಾರ್ಡನ್ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ 4 ವರ್ಷಗಳಲ್ಲಿ ಯಶಸ್ಸು ಕಂಡಿದ್ದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

By admin

January 24, 2018

ಪ್ರತಿ ಒಬ್ಬ ಮನುಷ್ಯನಿಗೂ ತನ್ನದೆಯಾದ ಅಸೆ ಆಕಾಂಕ್ಷೆಗಳು ಇರುತ್ತವೆ ಅದರ ಜೊತೆಗೆ ಒಂದು ದೊಡ್ಡ ಕನಸು ಕೂಡ ಇರುತ್ತದೆ. ಇವುಗಳ ನಡುವೆ ತನ್ನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿ ಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ. ಆದರೆ ಅವುಗಳಿಗೆಲ್ಲ ಒಂದು ಅವಕಾಶ ಅನ್ನೋದು ಸಿಗಲೇ ಬೇಕು ಅಲ್ವಾ.? ಅಂತಹ ಅವಕಾಶ ಸಿಕ್ಕಾಗ ಅದನ್ನು ಸದೋಪಯೋಗ ಪಡಿಸಿ ಕೊಂಡರೆ ಯಶಸ್ಸು ಸಿಗುತ್ತದೆ.

ನಿಮಗೆ ಒಬ್ಬ ವ್ಯಕ್ತಿಯ ಬಗ್ಗೆ ಹಾಗು ಆತನ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ತಿಳಿಸುತ್ತೇವೆ. ಹೆಸರು ರಂಭು ಎಂಬುದಾಗಿ ತಾನು ಕೂಲಿ ಕೆಲಸ ಜೀವನ ಸಾಗಿಸುತ್ತಿದ್ದ. ಒಬ್ಬರ ಕೈ ಕೆಳಗೆ ಗಾರ್ಡನ್ ಕೆಲಸ ಮಾಡುತ್ತಿದ್ದ ಇವರು 4 ವರ್ಷಗಳಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಾರೆ. ಅದಕ್ಕೆ ಕಾರಣ ತನ್ನ ಶ್ರಮ ಅನ್ನಬಹುದು.

ಹೀಗೆ ಗಾರ್ಡನ್ ಕೆಲಸ ಮಾಡುತ್ತೀರ ಬೇಕಾದರೆ ತನ್ನ ಯಜಮಾನ ಇವನಿಗೆ ಒಂದು ಅವಕಾಶವನ್ನು ಕೊಡುತ್ತಾರೆ. ದೊಡ್ಡ ದೊಡ್ಡ ಮನೆಗಳ ಮುಂದೆ ಗಾರ್ಡನ್ ಕೆಲಸ ಮಾಡುವುದನ್ನು ಸ್ವಂತಕ್ಕೆ ಮಾಡಿ ಕೊಳ್ಳುವ ಹಾಗೆ. ಇದನ್ನು ಒಪ್ಪಿದ ರಂಭು ತಾನು ಸ್ವತಃ ಈ ಕೆಲಸವನ್ನು ಮಾಡಲು ಮುಂದಾಗುತ್ತಾನೆ. ಶ್ರಮದ ಜೊತೆ ಅದೃಷ್ಟ ಇದ್ದರೆ ಆ ಮನುಷ್ಯನ ಜೀವನ ಶೈಲೀನೇ ಬದಲಾಗುತ್ತದೆ ಅನ್ನಬಹುದು.

ಹೀಗೆ ಕಾಲ ಕ್ರಮೇಣ ತನ್ನೊಂದಿಗೆ 4 ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಾನೆ. ದಿನಗಳು ಉರುಳಿದಂತೆ. ಈ ಕೆಲಸದಲ್ಲಿ ಉತ್ತಮ ಆದಾಯ ಬರುತ್ತದೆ. ಸೈಕಲ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದವ ಮೋಟಾರ್ ಬೈಕ್ ತಗೆದು ಕೊಳ್ಳುತ್ತಾನೆ. ತನ್ನ ಕೆಲಸದಲ್ಲಿ ಅಭಿವೃದ್ಧಿಯಾಗುತ್ತಲೇ ದೊಡ್ಡ ಉದ್ಯಮಿಯಾಗಿ ತನ್ನೊಂದಿಗೆ ೧೫-೨೦ ಜನ ಕೆಲಸ ಮಾಡುವವರಿದ್ದಾರೆ,. ಈಗ ಯಾವುದೇ ಕೆಲಸಕ್ಕೆ ಹೋದರು ಕಾರಿನಲ್ಲೇ ಹೋಗುತ್ತಾರೆ.

ಹಾಗು ತಾನು ಬೆಳೆದು ಕೊಂಡು ಬಂದ ದಾರಿಯನ್ನು ಮಾತ್ರ ಮರೆತಿಲ್ಲ ಈಗಲೂ ಕೂಡ ತಾವೇ ಸ್ವತಃ ಗಾರ್ಡನ್ ಕೆಲಸವನ್ನು ತಮ್ಮ ಸಿಬ್ಬಂದಿ ಜೊತೆ ಮಾಡುತ್ತಾರೆ. ಅದೇನೇ ಇರಲಿ ಅವಕಾಶದ ಜೊತೆ ಶ್ರಮ ಹಾಗು ಅದೃಷ್ಟ ಇದ್ದರೆ ವ್ಯಕ್ತಿ ಯಶಸ್ಸನ್ನು ಕಾಣೋದ್ರಲ್ಲಿ ಬೇರೆ ಸಂದೆಹನೆ ಇಲ್ಲ ಅಂತಾನೆ ಹೇಳಬಹುದು.