ಆರೋಗ್ಯ

ಕಪ್ಪು ಉಪ್ಪಿನ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನಿಮ್ಗೆಗೊತ್ತಾ..?ತಿಳಿಯಲು ಈ ಲೇಖನ ಓದಿ…

By admin

December 23, 2017

ಉಪ್ಪು ಎಷ್ಟು ಅನಿವಾರ್ಯ ಎಂಬುದು ತಿಳಿದ ವಿಷಯವೇ. ಆದರೆ ಕಪ್ಪು ಉಪ್ಪು ಸಹ ಭಾರತೀಯರಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕಪ್ಪು ಉಪ್ಪು ಸಹ ಔಷಧೀಯ ಗುಣಗಳ ಆಗರವೇ ಆಗಿದೆ.  ಹಿಮಾಲಯದ ಕಪ್ಪು ಉಪ್ಪು ಅಥವಾ ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ಭಾರತೀಯ ಕಪ್ಪು ಉಪ್ಪು ಎಂದೇ ಪ್ರಚಲಿತದಲ್ಲಿದೆ.

ಕಪ್ಪು ಉಪ್ಪುನ್ನು ಆಯುರ್ವೇದದಲ್ಲಿ ದೇಹವನ್ನು ತಂಪಾಗಿಸುವ ಪಧಾರ್ಥ ಎಂದು ಹೇಳಲಾಗಿದೆ ಮತ್ತು ಇದನ್ನು ಜೀರ್ಣಕ್ರಿಯೆಗಾಗಿ ಬಳಸಲಾಗುತ್ತದೆ. ಇದು ವಾಯು ಮತ್ತು ಎದೆಯುರಿ ನಿವಾರಣೆಯಲ್ಲಿ ಇದು ತುಂಬಾ ಉಪಯೋಗಕಾರಿ. ಗಳಗಂಡ ರೋಗವನ್ನು ಗುಣಪಡಿಸಲು ಜಮ್ಮುವಿನಲ್ಲಿ ಇದನ್ನು ಬಳಸಲಾಗುತ್ತದೆ.ದಂತಮಂಜನವನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ.

ಕಪ್ಪು ಉಪ್ಪಿನ ಉಪಯೋಗಗಳು:-

1.ವಾಯು ಸಂಬಂಧಿತ ರೋಗಗಳನ್ನು ನಿವಾರಿಸುತ್ತದೆ :-

ಇದು ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಮೂಲಕ ವಾಯು ಸಂಬಂಧಿತ ರೋಗಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.

2.ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರವನ್ನು ಶಮನಗೊಳಿಸುತ್ತದೆ.ಕಪ್ಪು ಉಪ್ಪನ್ನು ಪ್ರಮುಖವಾಗಿ ಮಲಬದ್ಧತೆ, ಹೊಟ್ಟೆ ನೋವು, ಮತ್ತು ಅನೇಕ ಉದರ ಸಂಬಂಧಿತ ಕಾಯಿಲೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

3.ಉಸಿರಾಟದ ತೊಂದರೆ ನಿವಾರಣೆ :-

ಕಟ್ಟಿರುವ ಮೂಗು ಮತ್ತು ನೋಯುತ್ತಿರುವ ಗಂಟಲ ಕಾರಣದಿಂದಾಗಿ ಉಸಿರಾಟದ ತೊಂದರೆಗಳನ್ನು ಎದುರಿಸುತ್ತಿದ್ದಲ್ಲಿ ಇದು ನಿವಾರಕವಾಗಿ ಕೆಲಸ ಮಾಡುತ್ತದೆ.

4.ಮಧುಮೇಹವನ್ನು ನಿಯಂತ್ರಿಸುತ್ತದೆ :-

ಸಕ್ಕರೆ ಕಾಯಿಲೆಯನ್ನು ಹೊಂದಿರುವವರಿಗೆ ಇನ್ಸುಲಿನ್ ಪ್ರಮಾಣ ಕಡಿಮೆ ಇರುವ ಕಾರಣ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಕಲ್ಲು ಉಪ್ಪು ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೆ ಇದು ಪ್ರಯೋಜನಕಾರಿಯಾಗಿದೆ.

5. ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ :-

ನಿಮ್ಮ ಚರ್ಮವನ್ನು ಕಾಂತಿಯುತವನ್ನಾಗಿಸಲು ನಿಮ್ಮ ಕ್ಲೆನ್ಸರ್ ಅಥವಾ ಸ್ಕ್ರಬ್‌ಗೆ ಸ್ವಲ್ಪ ಪ್ರಮಾಣದಲ್ಲಿ ಈ ಉಪ್ಪನ್ನು ಸೇರಿಸಿ ಬಳಸುವುದರಿಂದ ಮುಚ್ಚಿಕೊಂಡಿರುವ ಚರ್ಮದ ರಂಧ್ರಗಳು ಮತ್ತು ಮೊಡವೆಗಳು ಹಾಗೂ ಎಣ್ಣೆಯುಕ್ತ ಚರ್ಮದಿಂದ ಮುಕ್ತಿಹೊಂದಬಹುದು.

 

6.ಚರ್ಮದ ಮತ್ತು ಪಾದದ ಆರೋಗ್ಯಕ್ಕೆ ಸಹಾಯಕಾರಿ :-

ಇದು ಬಿರುಕು ಬಿಟ್ಟಿರುವ ಪಾದ ಮತ್ತು ಊದಿಕೊಂಡಿರುವ ಪಾದ, ಹಾಗೂ ಮೊಡವೆಗಳ ನಿವಾರಣೆಗೆ ಇದು ಸಹಾಯಕಾರಿಯಾಗಿದೆ ಸ್ನಾನದ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಸ್ನಾನ ಮಾಡುವ ಮೂಲಕ ಚರ್ಮದ ಕಾಯಿಲೆಗಳಿಂದ ಮುಕ್ತಿಹೊಂದಬಹುದು.

7.ಕೂದಲು ಉದುರುವಿಕೆಯನ್ನು ನಿಲ್ಲಿಸುತ್ತದೆ :-

ನೀವು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಉಪ್ಪು ನಿಮಗೆ ಸಹಾಯಕಾರಿಯಾಗುತ್ತದೆ. ನಿಮ್ಮ ಸ್ನಾನದ ನೀರಿಗೆ ಉಪ್ಪನ್ನು ಹಾರಿ ತಲೆ ಸ್ನಾನ ಮಾಡುವುದರಿಂದ ನಿಮ್ಮ ಕುದಲಿನ ಬೆಳವಣಿಗೆಯನ್ನು ಹೆಚ್ಚುಸುವುದಷ್ಟೇ ಅಲ್ಲ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.