ಸ್ಪೂರ್ತಿ

ಓ ದೇವ್ರೇ ಇವರೇನಪ್ಪಾ ಭಾರತದಲ್ಲಿರೋ ಯಾವ ಡಿಗ್ರಿಯನ್ನು ಬಿಟ್ಟಿಲ್ಲಾ..!ಇವ್ರು ಮಾಡಿರೋ ಪದವಿಗಳ ಬಗ್ಗೆ ಕೇಳ್ತಾ ಹೋದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ…

By admin

January 18, 2018

ಹತ್ತನೇ ತರಗತಿ ಓದಿ, ಒಂದು ಡಿಗ್ರಿ ತಗೊಳಷ್ಟರಲ್ಲಿ ಸಾಕಾಗಿ ಹೋಗಿರುತ್ತೆ.ಆದ್ರೆ ಈ ವ್ಯಕ್ತಿ ಭಾರತದಲ್ಲಿರೋ ಹಲವಾರು ಡಿಗ್ರಿ (ಪದವಿ)ಗಳನ್ನು ಮಾಡಿ ಮುಗಿಸಿದ್ದಾರೆ.ಇವರು ಎಷ್ಟು ಓದಿದ್ದಾರೆಂದ್ರೆ ಇವರು ಹೆಸರು ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ.

ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ :-

ಹೌದು, ಶ್ರೀಕಾಂತ್ ಜಿಕ್ಖರ್ರವರು ಭಾರತದ ಅತಿ ಹೆಚ್ಚಿನ ವಿದ್ಯಾರ್ಹತೆಯುಳ್ಳ ವ್ಯಕ್ತಿಯಾಗಿ ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಅನ್ನು ಹೊಂದಿದ್ದಾರೆ. ಎಮ್. ಬಿ. ಬಿ. ಎಸ್  ಮತ್ತು ಎಮ್. ಡಿ. ಇಂದ ಶುರು ಮಾಡಿದ ಇವರು ಎಲ್. ಎಲ್. ಬಿ ಮಾಡಿ ಕಾನೂನನ್ನು ಕೂಡ ಓದಿದ್ದಾರೆ. ನಂತರ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ(ಎಲ್. ಎಲ್. ಎಮ್) ಯನ್ನು ಪಡೆಯುತ್ತಾರೆ. ಹಾಗೂ ಇವರು ಬಿಸ್ನೆಸ್  ಆಡಳಿತ ಮತ್ತು ಪತ್ರಿಕೋದ್ಯಮದಲ್ಲಿಯು ಮಾಸ್ಟರ್ಸ್ ಅನ್ನು ಹೊಂದಿದ್ದಾರೆ .

ಅಷ್ಟೇ ಅಲ್ಲದೆ ಇವರು ಇನ್ನೂ ಬರೋಬ್ಬರಿ ಹತ್ತು ವಿಷಯಾಗಳ್ಲಲ್ಲಿ ಮಾಸ್ಟರ್ಸ್ ಪದವಿ ಯನ್ನು ಹೊಂದಿದ್ದಾರೆ…

ಎಂ. ಎ. ಸಾರ್ವಜನಿಕ ಆಡಳಿತ ,

ಎಂ. ಎ.ಸಮಾಜ ಶಾಸ್ತ್ರ ,

ಎಂ. ಎ. ಅರ್ಥ ಶಾಸ್ತ್ರ ,

ಎಂ. ಎ. ಸಂಸ್ಕೃತ,

ಎಂ. ಎ. ಇತಿಹಾಸ,

ಎಂ. ಎ. ಆಂಗ್ಲ ಸಾಹಿತ್ಯ ,

ಎಂ. ಎ. ತತ್ವ ಶಾಸ್ತ್ರ ,

ಎಂ. ಎ.ರಾಜ್ಯ ಶಾಸ್ತ್ರ ,

ಎಂ. ಎ.ಪ್ರಾಚೀನ ಭಾರತೀಯ ಇತಿಹಾಸ ,

ಸಂಸ್ಕೃತಿ ಮತ್ತು ಪುರಾತನ ಶಾಸ್ತ್ರ ,

ಎಂ. ಎ.ಮನೋವಿಜ್ಞಾನ . ಮತ್ತು ಇವರು ಯಾವುದೇ ಪದವಿಗಿಂತ ಉನ್ನತ ಪದವಿಯಾದ ಡಿ.ಲಿಟ್ (ಡಾಕ್ಟರ್ ಆಫ್ ಲೆಟರ್ಸ್) ಅನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಸಾಕಷ್ಟು ಪದವಿಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ಇವರು ಹಲವಾರು ಪದವಿಗಳಲ್ಲಿ ಪ್ರಥಮ ಶ್ರೇಣಿ /ಪ್ರಥಮ ದರ್ಜೆಯನ್ನು ಗಳಿಸಿದ ಹೆಮ್ಮೆ ಇವರದಾಗಿದೆ.

ಐಎಎಸ್ ಮತ್ತು ಐಪಿಎಸ್ :-

1978 ರಲ್ಲಿ ಅವರು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ (IPS)ಯನ್ನು ಬರೆದು,ಇಂಡಿಯನ್ ಸಿವಿಲ್ ಸರ್ವಿಸ್ (ಐಪಿಎಸ್) ನಲ್ಲಿ ಆಯ್ಕೆಯಾದರು. ನಂತರ ಐಪಿಎಸ್ ಹುದ್ದೆಗೆ ರಾಜಿನಾಮೆ ನೀಡಿ,ಮತ್ತೆ 1980ರಲ್ಲಿ ಭಾರತೀಯ ಸಿವಿಲ್ ಸರ್ವೀಸ್ ಪರೀಕ್ಷೆ (IAS) ಪರೀಕ್ಷೆಯನ್ನು ಬರೆದ್ರು.ಅದರಲ್ಲೂ ಕೂಡ  ಐಎಎಸ್ ಆಫಿಸರ್ ಆಗಿ ಆಯ್ಕೆ ಆದ್ರು.ಆದರೆ ನಾಲ್ಕು ತಿಂಗಳ ನಂತರ ತಮ್ಮ ಐಎಎಸ್ ಹುದ್ದೆಗೂ ರಾಜೀನಾಮೆ ನೀಡಿದ್ರು.

ಕಿರಿಯ ವಯಸ್ಸಿನ ಎಂಎಲ್ಎ :-

1980ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ,ತಮ್ಮ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಗೆದ್ದು, ತಮ್ಮ 26ನೇ ವಯಸ್ಸಿನಲ್ಲೇ,ಎಂಎಲ್ಎ ಆಗಿ  ಆಯ್ಕೆ ಆದ್ರು.ಹಾಗೂ ಭಾರತದಲ್ಲೇ ಅತೀ ಕಿರಿಯ ವಯಸ್ಸಿನ ಎಂಎಲ್ಎ ಎಂಬ ಹೆಸರಿಗೆ ಪಾತ್ರರಾದ್ರು ಕೂಡ. ತರುವಾಯ ಆ ಸಮಯದಲ್ಲಿ  14 ಶಾಸಕಾಂಗಗಳನ್ನು ಹೊಂದಿರುವ ಸರ್ಕಾರದ, ಅತ್ಯಂತ ಶಕ್ತಿಶಾಲಿ ಸರ್ಕಾರಿ ಮಂತ್ರಿಯಾದರು.

ಭಾರತದಲ್ಲಿ 52,000 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯಗಳಲ್ಲಿ ಇವರದು ಒಂದು ವೈಯುಕ್ತಿಕ ಗ್ರಂಥಾಲಯ ಸೇರಿದೆ.ಶ್ರೀಕಾಂತ್ ಜಿಕ್ಖರ್ರವರು ಒಬ್ಬ ಶಿಕ್ಷಣತಜ್ಞ, ವರ್ಣಚಿತ್ರಕಾರ, ವೃತ್ತಿಪರ ಛಾಯಾಗ್ರಾಹಕ, ಮತ್ತು ನಟರು ಕೂಡ ಆಗಿದ್ದರುಇವರು 1992-98ರವರೆಗೆ ಭಾರತ ರಾಜ್ಯಾಂಗದ ಸದಸ್ಯರಾಗಿದ್ದರು. ಅವರು 1992 ರಲ್ಲಿ ನಾಗಪುರದಲ್ಲಿ ಸಂದಿಪಾನಿ ಎಂಬ ಶಾಲೆ ಸ್ಥಾಪಿಸಿದರು.ದುರದೃಷ್ಟಕರ ಎಂದರೆ ತಮ್ಮ 49ನೇ ವಯಸ್ಸಿನಲ್ಲಿ ಕಾರ್ ಅಪಘಾತವೊಂದರಲ್ಲಿ ತೀರಿಕೊಂಡ್ರು.