ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನೆಗಳಲ್ಲಿ ಇಲ್ಲದಿರಲು ಸಾಧ್ಯವೇ ಇಲ್ಲ. ಬಹುತೇಕ ಅಡಿಗೆಗಳಲ್ಲಿ ಮೆಂತೆಕಾಳು ತೀರಾ ಅಗತ್ಯ. ರುಚಿಯಲ್ಲಿ ಕಹಿ ಒಗರಿನ ಅನುಭವ ನೀಡುವುದು. ಅದರಲ್ಲಿ ಅನೇಕಾನೇಕ ಆರೋಗ್ಯಕರ ಗುಣಗಳಿವೆ. ಮಧುಮೇಹಿಗಳು (ಸಕ್ಕರೆ ಕಾಹಿಲೆ) ಉಳ್ಳವರು ಪ್ರತಿನಿತ್ಯ ಯಾವುದಾದರೂ ರೂಪದಲ್ಲಿ ಕನಿಷ್ಠ ಒಂದು ಚಮಚ ಮೆಂತ್ಯೆ ಸೇವನೆ ಮಾಡಿದಲ್ಲಿ ಇನ್ಸುಲಿನ್ನನ್ನು ತಯಾರು ಮಾಡುವ ಆಮೈನೋ ಆಸಿಡ್ ಇನ್ಸುಲಿನ್ಉತ್ಪಾದಿಸಿ ಸಕ್ಕರೆ ಕಾಹಿಲೆಯನ್ನು ನಿಯಂತ್ರಣದಲ್ಲಿಡುತ್ತದೆ.
ಅದರಲ್ಲಿ ಅನೇಕಾನೇಕ ಆರೋಗ್ಯಕರ ಗುಣಗಳಿವೆ. ಮೆಂತೆಯನ್ನು ಪ್ರತಿನಿತ್ಯ ಅಡುಗೆ ಅಥವಾ ಹುರಿದು ಪುಡಿ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚದಷ್ಟುಪುಡಿಯನ್ನು ನೀರಿನಲ್ಲಿ ಕದಡಿ ಇಲ್ಲವೇ ನೇರವಾಗಿ ಪಂಚಕಜ್ಜಾಯದಂತೆ ತಿಂದು ನೀರು ಕುಡಿದಲ್ಲಿ ವಾತದೋಷವನ್ನು ನಿವಾರಿಸಬಹುದು. ಆದ್ದರಿಂದ ಆದಷ್ಟು ಇದನ್ನು ಚಳಿ ಮಳೆಗಾಲದಲ್ಲಿ ಬಳಸುವುದು ಸೂಕ್ತ.
ಜೀರ್ಣಕಾರಿಯಾಗಿಯೂ ಬಳಸಬಹುದು: ಅಜಿರ್ಣದಿಂದ ಬಳಲುವವರಿಗೆ ಮೆಂತೆ ಪುಡಿ ತೀರಾ ಸಹಕಾರಿ. ಮೆಂತ್ಯೆಕಾಳುಗಳಲ್ಲಿ ಕ್ಯಾಲ್ಸಿಯಂ ಅತ್ಯಧಿಕವಾಗಿರುತ್ತದೆ.ಹೆರಿಗೆಯಾದ ಹೆಂಗಸರಿಗೆ ಮೆಂತ್ಯೆಕಾಳು ಗಳನ್ನು ನೆನೆಸಿ ಎಳೆತೆಂಗಿನಕಾಯಿಯೊಂದಿಗೆ ನುಣ್ಣಗೆ ಅರೆದು ತೆಳು ಗಂಜಿಯಂತೆ ಮಾಡಿ ಕುಡಿಸಿದಲ್ಲಿ ಹಾಲು ಹೆಚ್ಚಾಗುವುದು.
ಮಹಿಳೆಗೆ ಮುಟ್ಟಿನ ಸಮಯದಲ್ಲಿ ಮೆಂತೆ ಮತ್ತು ಜೀರಿಗೆಯನ್ನು ಒಂದೊಂದು ಚಮಚದಷ್ಟು ಹುರಿದು ಕಷಾಯ ಮಾಡಿ ಕುಡಿದಲ್ಲಿ ಹೊಟ್ಟೆ ನೋವಿನ ಪ್ರಮಾಣ ಹಾಗೂ ಅತ್ಯಧಿಕ ರಕ್ತಸ್ರಾವದ ಪ್ರಮಾಣ ಕಡಿಮೆಯಾಗುವುದು. ಹೆರಿಗೆ ನಂತರ ಮಹಿಳೆಯರಲ್ಲಿ ಸಾಮಾನ್ಯವಾಗಿ ಗರ್ಭಾಶಯದ ಪ್ರಮಾಣ ದೊಡ್ಡದಾಗುತ್ತದೆ.ಆಗ ಪ್ರತಿನಿತ್ಯ ಮೆಂತೆ ಸೇವನೆ ಗರ್ಭಾಶಯವನ್ನು ಮೊದಲಿನ ಸಹಜ ಸ್ಥಿತಿಗೆ ತರುವುದರಲ್ಲಿ ಸಹಕಾರಿ.
ಮೆಂತೆ ಕಾಳುಗಳಲ್ಲಿ ಹೆಚ್ಚಿನ ನಾರಿನಂಶ ಮತ್ತು ಆಂಟಿ ಆಕ್ಸಿಡೆಂಟುಗಳು ಇರುವುದರಿಂದ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಇದು ಹೊರಚೆಲ್ಲಬಹುದಾಗಿದೆ. ಆಹಾರದಲ್ಲಿ ಮೆಂತೆ ಉಪಯೋಗಿಸುವುದರಿಂದ ಹೊಟ್ಟೆಯಲ್ಲಿ ಸೇರಿದ ಆಮ್ಲವು ಅನ್ನನಾಳದಲ್ಲಿ ಹೋಗಿ ಸೇರದಂತೆ ಜಾಗ್ರತೆ ವಹಿಸುತ್ತದೆ. ಆಮಶಂಕೆಯೆಂಬ ಭೇದಿಯಿಂದ ಬಳಲುವವರುಈ ಪುಡಿಯನ್ನು ತಯಾರಿಸಿಟ್ಟುಕೊಂಡು ಒಂದು ಕಪ್ ಮೊಸರಿನಲ್ಲಿ ಒಂದು ಚಮಚದಷ್ಟು ಮೆಂತೆ ಪುಡಿಯನ್ನು ಮಿಶ್ರಣ ಮಾಡಿ ಕುಡಿದಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಹಾಗೂ ಆಮಶಂಕೆಯಿಂದಾಗುವ ಹೊಟ್ಟೆ ಉರಿ ಕಡಿಮೆ ಮಾಡುತ್ತದೆ.
ಮೆಂತೆಯಿಂದ ಕಾಫಿಯನ್ನು ಸಹ ಮಾಡಬಹುದು. ಅಗತ್ಯ ಸಾಮಗ್ರಿಗಳು: ಮೆಂತೆ ಕಾಳು, ಒಣಶುಂಠಿ ಇವೆರಡನ್ನೂ ಮಿಶ್ರಣ ಮಾಡಿ ಕಬ್ಬಿಣದ ಬಾಣಲೆಯಲ್ಲಿ ಹುರಿದು ಪುಡಿ ಮಾಡಿ ಒಂದು ಖಾಲೀ ಬಾಟಲಿಯಲ್ಲಿ ಮಿಶ್ರಣವನ್ನು ತುಂಬಿಡಿ. ಒಂದು ಕಪ್ ಹಾಲಿಗೆ ಅರ್ಧ ಚಮಚದಷ್ಟು ಪುಡಿಯನ್ನು ಹಾಕಿ ಕುದಿಸಿರಿ. ಸಿಹಿ ಬೇಕೆನಿಸಿದರೆ ರುಚಿಗೆ ತಕಷ್ಟು ಬೆಲ್ಲ ಅಥವಾ ಕಲ್ಲುಸಕ್ಕರೆ ಉತ್ತಮ. ತಾಜಾತನದ ಘಮ ಬೇಕೆನಿಸಿದರೆ ಒಂದು ಚೂರು ತುರಿದ ಹಸಿಶುಂಠಿಯನ್ನು ಹಾಲು ಕುದಿಯುವಾಗ ಬಳಸಬಹುದು. ಹೀಗೆಮೆಂತೆಯ ಲಾಭಗಳು ಅಪಾರ. ನೀವೂ ಮಾಡಿ ನೋಡಿ: ಮೆಂತ್ಯೆ ಯಿಂದ ಇನ್ನು ಹಲವಾರು ಖ್ಯಾದ್ಯಗಳನ್ನು ತಯಾರಿಸಿ ಸೇವಿಸಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(27 ಡಿಸೆಂಬರ್, 2018) ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬದ ಸದಸ್ಯರು ನಿಮ್ಮ ಜೀವನದಲ್ಲಿ ಒಂದು…
ಪ್ರಸ್ತುತ ಬಹುತೇಕ ಅಗತ್ಯ ಕೆಲಸಗಳು ಸ್ಮಾರ್ಟ್ಫೋನ್ ಡಿವೈಸ್ ಮೂಲಕವೇ ಮಾಡಿಬಿಡಬಹುದಾಗಿದ್ದು, ಅದಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಆಪ್ಸ್ಗಳು ಅತ್ಯುತ್ತಮ ಸಾಥ್ ನೀಡುತ್ತಿವೆ. ಈ ನಿಟ್ಟಿನಲ್ಲಿ ಇದೀಗ ಜನಪ್ರಿಯ ಟಾಟಾಸ್ಕೈ ಡಿಟಿಎಚ್ ಸಂಸ್ಥೆಯು ವಾಟ್ಸಪ್ ಪ್ಲಾಟ್ಫಾರ್ಮ್ ಬಳಸಿಕಂಡು ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆ ನೀಡಲು ಮುಂದಾಗಿದೆ , ಹೌದು, ಟಾಟಾಸ್ಕೈ ಸಂಸ್ಥೆಯು ಈಗ ವಾಟ್ಸಪ್ ಬ್ಯುಸಿನೆಸ್ ಅಕೌಂಟ್ ಅನ್ನು ತೆರೆದಿದ್ದು, ಈ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಅಗತ್ಯ ಸೇವೆ ನೀಡಲು ಸಜ್ಜಾಗಿದೆ. ಗ್ರಾಹಕರು ತಮ್ಮ ಟಾಟಾಸ್ಕೈ ಅಕೌಂಟ್ನ…
ಒಂದು ಏಡಿ ಬೆಲೆ ಎಷ್ಟಿರಬಹುದು…? ಜಾಸ್ತಿಅಂದರೆ ಭಾರತದಲ್ಲಿ ನಾವು ಸಾವಿರ ಲೆಕ್ಕದಲ್ಲಿ ಅಂದಾಜು ಹಾಕಬಹುದೇನೋ… ಆದರೆ, ಜಪಾನಿನಲ್ಲಿ ಒಂದು ಏಡಿ ಬಿಕರಿಯಾದ ಬೆಲೆ ಕೇಳಿದರೆ ತಲೆತಿರುಗುವುದು ಗ್ಯಾರಂಟಿ…! ಯಾಕೆಂದರೆ, ಇಲ್ಲಿ ಬೃಹತ್ ಏಡಿಮಾರಾಟವಾಗಿದ್ದು ಬರೋಬ್ಬರಿ 32 ಲಕ್ಷಕ್ಕೆ…! ಜಪಾನಿನ ಬಿಡ್ಡರ್ ಒಬ್ಬರು42 ಯುಎಸ್ ಡಾಲರ್ ಅಂದರೆ ಸರಿಸುಮಾರು ಭಾರತದ 32,61,216 ರೂಪಾಯಿಗೆ ಈ ಹಿಮ ಏಡಿಯನ್ನು ಹರಾಜಿನಲ್ಲಿ ಖರೀದಿಸಿದ್ದಾರೆ. ಪಶ್ಚಿಮ ಟೊಟೊರಿ ಪ್ರಾಂತ್ಯದಲ್ಲಿ ಈ ವಾರದಿಂದ ಚಳಿಗಾಲದ ಮತ್ಸ್ಯ ಬೇಟೆ ಆರಂಭವಾಗಿದೆ. ಈ ವೇಳೆ, ಈ ಬೃಹತ್ ಪ್ರಮಾಣದ ಏಡಿ…
ಐಪಿಎಲ್ 12 ನೇ ಆವೃತ್ತಿಯ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಐಪಿಎಲ್ – 2019 ರ ಪಂದ್ಯಗಳು ಮಾರ್ಚ್ 23 ರಿಂದ ಶುರುವಾಗಲಿದೆ. ಉದ್ಘಾಟನೆ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವೀಟರ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 17 ಪಂದ್ಯಗಳ ವೇಳಾಪಟ್ಟಿಯನ್ನು ಟ್ವಿಟ್ ಮಾಡಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೆ ಪಂದ್ಯಗಳು ನಡೆಯಲಿವೆ. ಕೊಲ್ಕತ್ತಾ, ಚೆನ್ನೈ,…
ನಿಮ್ಮಲ್ಲಿ ಬಹಳಷ್ಟು ಜನ ಈ ಹಣ್ಣನ್ನ ತಿಂದೇ ಇರುವುದಿಲ್ಲ. ಇನ್ನೂ ಕೆಲವರು ಈ ಹಣ್ಣನ್ನು ತಿಂದರೂ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಈ ಹಣ್ಣನ್ನ ಸ್ಟಾರ್ ಫ್ರೂಟ್ ಅಂತ ಕರೆಯುತ್ತಾರೆ. ಈ ಹಣ್ಣು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ಸಿಗುವುದಿಲ್ಲ. ಈ ಹಣ್ಣು ನಮ್ಮ ದೇಶದೇ ಆದರೂ ಸಹ ಕೇವಲ ಕೆಲವು ಊರುಗಳಲ್ಲಿ ಮಾತ್ರ ಈ ಹಣ್ಣನ್ನ ಬೆಳೆಯುತ್ತಾರೆ. ಇನ್ನೂ ನಮ್ಮ ದೇಶದಿಂದ ಬೇರೆ ದೇಶಗಳಿಗೆ ಈ ಹಣ್ಣು ಎಕ್ಸ್ಪೋರ್ಟ್ ಕೂಡ ಆಗುತ್ತದೆ. ಈ ಸ್ಟಾರ್ ಫ್ರೂಟ್ ಅನ್ನ…
ಪ್ಲಾಸ್ಟಿಕ್ ಬಾಟಲಿಗಳನ್ನು ಮರಳಿನಿಂದ ತುಂಬಿಸಿಲಾಗುತ್ತದೆ, ನಂತರ ಬಾಟಲಿಗಳನ್ನು ಮೇಲೆ ತೋರಿಸಿರುವ ಚಿತ್ರದಂತೆ ಸಾಲಲ್ಲಿ ಜೋಡಿಸಲಾಗುತ್ತದೆ, ಮರಳು ಮತ್ತು ಸಿಮೆಂಟ್ ಅನ್ನು ಬೆರೆಸಿ ನಿರ್ಮಾಣಗೊಂಡ ಬಾಟಲಿಯ ಗೋಡೆಯ ಮೇಲೆ ಹಾಕಲಾಗುತ್ತದೆ, ಇದು ಬಾಟಲಿಗಳನ್ನು ಹಿಡಿದಿಡಲು ಸಹಕಾರಿಯಾಗುರ್ತದೆ ಹಾಗು ಘನ ಗೋಡೆಯನ್ನು ಹೊಂದುತ್ತದೆ.