News

ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಕೆಕೆಆರ್ ವಿರುದ್ದ ಗೆದ್ದ RCB – ಉಲ್ಟಾಪಲ್ಟಾ ಆದ ಲೆಕ್ಕಾಚಾರ
ಸಾರಿಗೆ ನೌಕರರಿಗೆ 12.50% ವೇತನ ಹೆಚ್ಚಳ: ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ನೌಕರ ಸಂಘಟನೆಗಳ ಅಸಮಾಧಾನ
ಇತ್ತ ದುಡ್ಡು ಹೋಯ್ತು ಅತ್ತ ಮನೆಯೂ ಇಲ್ಲ; ಸ್ಲಂ ಬೋಡ್೯ ನಂಬಿ ಬೀದಿಗೆ ಬಿದ್ದ ನಿರಾಶ್ರಿತರು
ಚೀನಾದಲ್ಲೇ ಚೀನಾವನ್ನು ಮಣಿಸಿ ಚಿನ್ನ ಗೆದ್ದ ದೀಪಿಕಾ-ಅಂಕಿತಾ-ಕುಂಕುಮ್!
ಸ್ಮಾರ್ಟ್‌ಫೋನ್‌ ಬಳಕೆಯಿಂದಾಗಿ ಗಂಡ-ಹೆಂಡತಿ ಮಧ್ಯೆ ಬಿರುಕು
TVK – 108 ಶಾಸಕರೂ ಸಾಮೂಹಿಕ ರಾಜೀನಾಮೆ ಎಚ್ಚರಿಕೆ..!
ಎಳನೀರು ಕತ್ತರಿಸಿದ ನಂತರ ಎಷ್ಟು ಕಾಲ ತಾಜಾ ಇರುತ್ತದೆ?
ಗೆಲುವಿನ ಖುಷಿಯಲ್ಲಿರುವ ವಿಜಯ್​​ಗೆ ಎದುರಾಯ್ತು ಬ್ಯಾಡ್ ನ್ಯೂಸ್! ಬರೋಬ್ಬರಿ ₹70 ಕೋಟಿ ನಷ್ಟ?
ಮನರಂಜನೆ

ವಿಷ್ಣು ಹಾಡಿಗೆ ಅವಮಾನ ಮಾಡಿದ್ರ!ಹಾಗಾದ್ರೆ ದಿವಾಕರ್ ನಿವೇದಿತಾ ನಡುವೆ ನಡೆದ ವಾಗ್ವಾದ ಏನು?ತಿಳಿಯಲು ಮುಂದೆ ಓದಿ…

506

ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ‌ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ, ಟಕಿಲ,ಜಸ್ಟ್ ಲವ್ ಮತ್ತು ಪರವಶನಾದೇನು ಹಾಡಿಗೆ ಸಮ್ಮತಿ ಸೂಚಿಸಿದರು..

ಮೊದಲಿಗೆ ಕಿಚನ್ ಏರಿಯಾದಲ್ಲಿ ಶೃತಿಯವರು ಲಿಪ್ ಬಾಮ್ ಕಳಿಸಿದ್ದಕ್ಕೆ ಧನ್ಯವಾದ ಹೇಳಿದರು.
ದಿವಾಕರ್ ಅವರು ಸಕ್ಕರೆ ಖಾಲಿಯಾದ ಕಾರಣಕ್ಕೆ ಹಾಲಿಗೆ ಜಾಮೂನು ಪಾಕವನ್ನು ಸುರುವಿ ಕುಡಿದರು..

“ಸವಿ-ಸವಿ ನೆನಪು” ಚಟುವಟಿಕೆಯಲ್ಲಿ ಕ್ಯಾನ್‌ವಾಸ್ ಕುಂಚದ ಮೇಲೆ ಬಣ್ಣವನ್ನು ಬಳಸಿ ಆಟೋಗ್ರಾಫ್ ರಚಿಸುವುದಾಗಿತ್ತು.. ಎಲ್ಲ ಸದಸ್ಯರು ತಮ್ಮದೇ ಆದ ಕಲ್ಪನೆಯಲ್ಲಿ ಆಟೋಗ್ರಾಫ್ ರಚಿಸಿದರು.. ಅದರಲ್ಲಿ ಚಂದನ್ ಮತ್ತು ಜೆಕೆಯವರ ಆಟೋಗ್ರಾಫ್ ಸೃಜನಾತ್ಮಕವಾಗಿತ್ತು..


ಈ ವೇಳೆಯಲ್ಲಿ ನಿವೇದಿತಾ ಅವರು ಪೇಂಟ್ ಸುರುವಿ ಹೋಗಿದ್ದಕ್ಕೆ ಕಣ್ಣೀರು ಹಾಕಿದ್ದು ತರ್ಕಕ್ಕೆ ನಿಲುಕದ್ದು. ಈ ಹುಡುಗಿ ಇಷ್ಟೊಂದು ಸೂಕ್ಷ್ಮವಾ ಎಂಬ ಪ್ರಶ್ನೆ ಮೂಡಿದ್ದಂತೂ ನಿಜ!

“ನನ್ನ ಬಿಗ್‌ಬಾಸ್ ಮನೆ” ಚಟುವಟಿಕೆಯಲ್ಲಿ ಬಿಗ್‌ಬಾಸ್ ಕೇಳಿದ 30ಪ್ರಶ್ನೆಗಳಲ್ಲಿ ಜೆಕೆಯವರು 15, ಶೃತಿ-ದಿವಾಕರ್ 10, ಮತ್ತು ಚಂದನ್ -ನಿವೇದಿತಾ 14 ಪ್ರಶ್ನೆಗಳಿಗೆ ಸರಿಯುತ್ತರ ಕೊಟ್ಟರು.

“ನನ್ನ ಹಾಡು ನನ್ನದು” ಉಳಿದ ಮೂರು ದಿನಗಳಲ್ಲಿ ಬೆಳಿಗ್ಗೆ ಹಾಕುವ ಮೂರು ಹಾಡನ್ನು ಸೂಚಿಸಲು ಬಿಗ್‌ಬಾಸ್ ಹೇಳಿದ್ದರು..ಆಗ ಚಂದನ್ ತಮ್ಮ ಟಕೀಲ ಸಿನಿಮಾದ ಹಾಡು ಮತ್ತು ಜೆಕೆ ತಮ್ಮ ಜಸ್ಟ್ ಲವ್ ಚಿತ್ರದ ಹಾಡಿಗೆ ಸಮ್ಮತಿ ಸೂಚಿಸಿದರು..

ನಿವೇದಿತಾ ಮೆಲೊಡಿ ಹಾಡಿಗೆ ಮತ್ತು ದಿವಾಕರ್ ವಿಷ್ಣುವರ್ಧನ್ ಅವರ ಹಾಡನ್ನು ಕೇಳಿದಾಗ ವಾಗ್ವಾದ ಶುರುವಾಯಿತು..

ನಿವೇದಿತಾ : ಮೆಲೊಡಿ ಸಾಂಗ್ ಇರಲಿ
ದಿವಾಕರ್: ಯಜಮಾನ ಮೂವಿ ನಮ್ಮ ಮನೆಯಲಿ ಸಾಂಗ್ ಇರಲಿ

ನಿವೇದಿತಾ: ವಿಷ್ಣುವರ್ಧನ್ ಅವರದ್ದೇ ಯಾವುದಾದರೂ ಮೆಲೊಡಿ ಸಾಂಗ್ ಹೇಳಿ.
ದಿ: ೩ದಿನವಾದ್ಮೇಲೆ ಮೆಲೊಡಿ ಸಾಂಗ್ ಹಾಕಿಸಿಕೊಡ್ತಿನಿ ಬಿಡು.. ಇವಾಗ ಇದು ಇರಲಿ..

ನಿವೇದಿತಾ: actually daily ಈ ಸಾಂಗ್ ಹಾಕಿ ಅಂತ ಬಿಗ್‌ಬಾಸ್ ಗೆ ಕೇಳ್ತಿದ್ದೆ.
ಜೆಕೆ: ನಂದು ಬೇಡ, ವಿಷ್ಣು ದು,ಟಕೀಲ, ಮೆಲೊಡಿ ಇರಲಿ.

ನಿವೇದಿತಾ:no problem ಯಾವುದಾದರೂ ಹಾಕೊಳ್ಳಿ!
ಚಂ: ಟಕೀಲ ಬೇಡ, ಫೀನಾಲೆಗೆ ಹಾಕೋಣ..
ದಿ: ಇವಳ್ದೆ ಹಾಕಿ, ನಂದು ಮನೆಗೆ ಹೋಗಿ ಕೇಳ್ಕೊತೀನಿ.
ನಿವೇದಿತಾ: ಇಷ್ಟೊತ್ತು ನೀವು ಹೇಳಾಯ್ತಲ್ವಾ!(ಇಲ್ಲಿಂದ ಶುರುವಾಯ್ತು)
ದಿ: ನೀ ಮುನಿಸ್ಕೊತಿಯಲ್ಲ..
ನೀ: ನೀನೇ ಮುನಿಸ್ಕೊಂಡು ರೇಗಾಡ್ತಿದೀಯಾ!
ದಿ: ನೀನು ಮಾತಾಡೋಕೆ ಬಿಟ್ರೆ ಮಾತಾಡಿಬಿಡ್ತಿಯಾ!
ನೀ: ಏನು ಹೇಳಿದ್ದು.
ದಿ: ಇಂತದ್ದು ಮಾತಾಡೋಕೆ ಬಿಟ್ರೆ ಮಾತಾಡ್ತಿಯಾ..
ನೀ: ಸುಮ್ನೆ ರೇಗಾಡ್ತಾರೆ.. ಒಂದು ಒಳ್ಳೆಯದು ಹೇಳ್ತಿದ್ರೆ!
ದಿ: ಸುಮ್ನೆ ತಲೆ ತಿಂತಾಳೆ!
ನೀ: ನೀವ್ಯಾಕೆ ತಲೆ ಕೊಡ್ತಿರಿ ನನಗೆ ತಿನ್ನೋಕೆ
ದಿ: ಮೆಂಟಲ್ ತರ ಆಡಬಾರದು.
ನೀ: ಯಾರ್ ಮೆಂಟಲ್ ಯಾರ್ ಮೆಂಟಲ್, ಮೆಂಟಲ್-ಗಿಂಟಲ್ ಅಂತೆಲ್ಲ ಹೇಳಬಾರ್ದು ಚಂದನ್
ದಿ: ಹೇಳು ಮಗ ಚಂದನ್ ಸಾಂಗ್ ಅವಳದ್ದೆ
ನೀ: ಯಾರು ಹೇಳ್ತಾರೆ ಅವರೇ ಮೆಂಟಲ್ ಆಗಿರ್ತಾರೆ.
ದಿ: ಏನ್ ಕಂಯ್ಯಾ ಕಂಯ್ಯಾ ಅಂತೀಯಾ
ನೀ: ಕಂಯ್ಯಾ ಕಂಯ್ಯಾ ಮಾಡಿಸ್ತಿರೋದು ಯಾರು..
ಬೇಗ ಹೇಳಿ
ಚಂ: ಜೆಕೆ ಲೈನ್ ಹಾಡ್ಬೇಕಂತೆ ಬನ್ನಿ, ನೀವಿ ನೀನು ಬಾ
ನೀ: ನಾನು ಬರಲ್ಲ
ಚಂ: ಏ!
ನೀ: ಎದ್ದು ಬರುತ್ತಾ, ತಲೆ ತಿಂತಾರೆ ಅಂತ ಯಾಕೆ ಕೊಡ್ಬೇಕು.
ದಿ: ಏನಾದರೂ ಹೊಸದು ಹೇಳು, ಹೇಳಿದ್ದೆ ಹೇಳ್ತಿಯಲ್ಲ.
ನೀ: ಚಂದನ್ ಗೆ ಹೊಡೆಯುತ್ತಿದ್ದಾಗ
ದಿ: ಸಿಟ್ಟು ಬಂದು ಹೊಡೆಯೋದಂತೆ..
ನೀ: ಚಂದನ್ ನಕ್ಕಿದ್ದಕ್ಕೆ ಹೊಡೆದಿದ್ದು, ನಿಮ್ಮ ಮೇಲಿನ ಸಿಟ್ಟಿಗೆ ಹೊಡೆದಿಲ್ಲ..
ದಿ: ಬೊರ್ ಹೊಡೆಯುತ್ತೆ ಜನರಿಗೆ.
ನೀ: ವಾಯಲಿನ್ ತರ ಕುಯ್ತಾರೆ.. ವಿಶ್ ಹೇರ್ ಬಂತು.
ಯಾರ ಸಾಂಗ್ ಕೂಡ ಪ್ಲೆ ಮಾಡ್ಬೇಡಿ. ನನ್ನ ಸಾಂಗ್ ಪ್ಲೆ ಮಾಡಿ..
ದಿ: ಹೊಟ್ಟೆ ಉರಿ
ನೀ: ನಾನು ನಿಮ್ಮ ಸಾಂಗ್ ಹಾಕ್ಬೇಡ ಅಂದ್ನಾ? ವಿಶ್ ಮಾಡೋಕೆ ಬಿಟ್ಟಿಲ್ಲ ಅಂದ್ರೆ ಕರ್ಸ್ ಆಗುತ್ತೆ..
ದಿ: ಡಬ್ಬ ಎಲ್ಲ‌ ಹೇಳ್ಬೇಡ, ನೀನು ಡವ್ ರಾಣಿ,ದಡ್ಡಿಯಂತೂ ಅಲ್ಲ,ಬುದ್ಧಿವಂತೆ.
ನೀ: ಚಂದನ್ ಕೈಯಿಂದ ಬಿಡಿಸಿಕೊಂಡು ಅಳ್ತಾ ಬೆಡ್‌ರೂಮ್ ಏರಿಯಾಗೆ ಹೋಗಿ ಅಲ್ಲಿಂದ ಕ್ಯಾಪ್ಟನ್ ರೂಮಿಗೆ ಹೋಗ್ತಾರೆ..


ಅಲ್ಲಿ ಚಂದನ್ ಅವರು ಸಮಾಧಾನ ಮಾಡಿ ಸಮಸ್ಯೆಯನ್ನು ಬಗೆಹರಿಸ್ತಾರೆ..
ಅಂತೂ-ಇಂತೂ ವಿಷ್ಣುವರ್ಧನ್ ಹಾಡು ಕ್ಯಾನ್ಸಲ್ ಆಗೋಯ್ತು..ಇಲ್ಲಿ ಯಾರ ತಪ್ಪಿದೆ ನೀವೆ  ನಿರ್ಧರಿಸಿ..

ಕೃಪೆ:ಉದಯ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದತ್ತಾತ್ರೇಯ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Wednesday, December 8, 2021) ಮನರಂಜನೆ ಮತ್ತು ಮೋಜಿನ ಒಂದು ದಿನ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ನಿಮ್ಮ ವರ್ತನೆಯಲ್ಲಿ, ವಿಶೇಷವಾಗಿ ನಿಮ್ಮ ಸಂಗಾತಿಯ ಜೊತೆ, ತಾಳ ತಪ್ಪದಿರಲಿ. ಇಲ್ಲವಾದರೆ ಅದು ಮನೆಯಲ್ಲಿನ ಶಾಂತಿಯನ್ನು ಹಾಳಾಗಿಸಬಹುದು. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಯಾರಾದರೂ ಕೆಲಸದಲ್ಲಿ ನಿಮಗೆ ಅಡ್ಡಿ ಮಾಡಬಹುದು – ಆದ್ದರಿಂದ ಏನಾಗುತ್ತದೆ ಎನ್ನುವುದರ ಬಗ್ಗೆ ಗಮನವಿರಲಿ. ಹೆಚ್ಚು ಜನರನ್ನು ಭೇಟಿಯಾದಾಗ ಅಸಮಾಧಾನಗೊಳ್ಳುವಂತಹ ವ್ಯಕ್ತಿತ್ವ ನಿಮ್ಮದು ಮತ್ತು ನಿಮಗಾಗಿ ಸಾಮ್ಯವನ್ನು ತೆಗೆಯಲು ಪ್ರಯತ್ನಿಸುತ್ತೀರಿ. ಈ ಸಂದರ್ಭದಲ್ಲಿ…

  • ಸುದ್ದಿ

    ಗುಂಡೇಟಿಗೆ ಬಲಿಯಾದ ಟಿಕ್ ಟಾಕ್ ಖ್ಯಾತಿಯ ಮೋಹಿತ್…..!

    ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದ 24 ವರ್ಷದ ಮೋಹಿತ್ ಮೋರ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಟಿಕ್ ಟಾಕ್ ಮೂಲಕ ಅರ್ಧ ಮಿಲಿಯನ್ ಸಂಖ್ಯೆಯ ಫಾಲೋಯರ್ಸ್ ಗಳನ್ನು ಹೊಂದಿರುವ ಮೋಹಿತ್ ಅವರು ಫಿಟ್ ನೆಸ್ ಗೆ ಸಂಬಂಧಿಸಿದಂತೆ ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು. ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ನಜಾಫ್ ಗಡದಲ್ಲಿ ಅವರು ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಏಕಾಏಕಿ ಮೂರು ಜನ ದಾಳಿ ಮಾಡಿದ್ದು, ಸಿಸಿ ಟಿವಿಯಲ್ಲಿ…

  • Cinema

    ಸೂಪರ್​ಸ್ಟಾರ್​ ರಜನೀಕಾಂತ್​ ಆಗಾಗ ಹಿಮಾಲಯಕ್ಕೆ ಹೋಗಿ ಬರುತ್ತಿರುತ್ತಾರೆ ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಸೂಪರ್​ಸ್ಟಾರ್​ ರಜನೀಕಾಂತ್​ ಆಗಾಗ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ಬರುತ್ತಾರೆ. ವಿಶೇಷವಾಗಿ ತಮ್ಮ ಸಿನಿಮಾಗಳು ಬಿಡುಗಡೆ ಆಗುವ ಮುಂಚೆ ಹಾಗೂ ತಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ರಜನಿ ಹಿಮಾಲಯಕ್ಕೆ ಭೇಟಿ ಕೊಡುತ್ತಾರೆ. ಕೆಲ ದಿನಗಳ ಹಿಂದೆ ಸ್ವತಃ ರಜನಿ ಅವರೇ ಹಿಮಾಲಯಕ್ಕೆ ಹೋಗುವುದಾಗಿ ತಿಳಿಸಿದ್ದರು.

  • ತಂತ್ರಜ್ಞಾನ

    ನಿಮ್ಮ ಫೇಸ್ ಬುಕ್ ಪ್ರೊಫೈಲ್ ಫೋಟೋ ಬಗ್ಗೆ, ಇನ್ಮೇಲೆ ನೀವು ತಲೆ ಕೆಡಿಸ್ಕೋಬೇಡಿ!ಏಕೆ ಗೊತ್ತಾ….

    ಫೇಸ್‌ಬುಕ್ನಲ್ಲಿ ಪ್ರೊಫೈಲ್ ಚಿತ್ರವನ್ನು ನಾವು ಹಾಕುವುದಕ್ಕೆ ಮುಂಚೆ ಹಿಂಜರಿಯುವುದು ಸಹಜ.ನಿಮಗೆಲ್ಲಾ ಗೊತ್ತಿರುವ ಹಾಗೆ ಕೆಲವರು ಪ್ರೊಫೈಲ್ ಫೋಟೋಗಳನ್ನು ದುರುಪಯೋಗ ಮಾಡಿಕೊಳ್ಳುವ ತುಂಬಾ ಘಟನೆಗಳು ನಡೆಯುತ್ತಿರುತ್ತವೆ.

  • ಸುದ್ದಿ

    ಎನ್ ಡಿಎ 2.0 ತನ್ನ ಮೊದಲ ಐದು ವರ್ಷಗಳ ಆರ್ಥಿಕ ಕಾರ್ಯತಂತ್ರ ಯೋಜನೆ ಜಾರಿಗೆ ತರಲಿ: ಕಿರಣ್ ಮಜುಂದಾರ್ ಶಾ ಹೆಳಿಕೆ…..

    ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದಡಿ 2014ರ ಲೋಕಸಭೆ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಎದುರಿಸಿತ್ತು. ಆಂತರಿಕ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನತೆಗೆ ನೀಡಿತ್ತು. ಇದೀಗ ಎನ್ ಡಿಎ ಸರ್ಕಾರ ಮತ್ತೊಂದು ಬಾರಿ 5 ವರ್ಷಗಳ ಅವಧಿಗೆ ಅಧಿಕಾರದ ಗದ್ದುಗೆ ಏರಲು ಹೊರಟಿದೆ. ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಬಯೋಕಾನ್ ಅಧ್ಯಕ್ಷೆ…

  • inspirational, ಸುದ್ದಿ

    ಬಿಗ್ ಶಾಕ್..!ಅಡುಗೆ ಅನಿಲ ಬಳಕೆದಾರರ ಜೇಬಿಗೆ ಬೀಳಲಿದೆ ಕತ್ತರಿ…ತಿಳಿಯಲು ಈ ಲೇಖನ ಓದಿ…

    ಏಪ್ರಿಲ್ 1ರಿಂದ ವಾಹನ ಚಲಾಯಿಸಲು ನೈಸರ್ಗಿಕ ಅನಿಲ ಬಳಸುತ್ತಿರುವವರು ಹಾಗೂ ಅಡುಗೆ ಅನಿಲ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಏಪ್ರಿಲ್ 1ರಂದು ಸ್ಥಳೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ದರ ಪರಿಷ್ಕರಣೆಯಾಗಲಿದೆ. 2 ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಏರಿಕೆ ಮಾಡುವ ಸಾಧ್ಯತೆ ಇದೆ. ಬೆಲೆ ಏರಿಕೆ ಕಾರಣ:- ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊಡೆತ ಬೀಳಲಿದೆ. ಆದ್ರೆ ಅನಿಲ ಕ್ಷೇತ್ರಗಳಲ್ಲಿ 10 ಬಿಲಿಯನ್ ಡಾಲರ್ ನಷ್ಟು ಭಾರೀ ಮೊತ್ತ ಹೂಡಿಕೆ ಮಾಡಲು ಮುಂದಾಗಿರುವ ಖಾಸಗಿ ಕಂಪನಿ ರಿಲಯೆನ್ಸ್ ಇಂಡಸ್ಟ್ರೀಸ್…