ಹಣ ಕಾಸು

ಜಿಎಸ್‍ಟಿ ತೆರಿಗೆ(ನಾಳೆ ಜುಲೈ1)ರಿಂದ ಈ ಸೇವೆಗಳು ದುಬಾರಿಯಾಗಲಿವೆ!

1840

ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ  ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ ಎಂಬ ಮಾಹಿತಿಯನ್ನು ಮುಂದೆ ಓದಿ….

*ದುಬಾರಿಯಾಗಲಿರುವ ಸೇವೆಗಳು:-

ನೋಟ್ ಬ್ಯಾನ್ ಆದ ನಂತರ  ಬ್ಯಾಂಕ್ ವ್ಯವಹಾರಗಳ ಮತ್ತು , ಎಟಿಎಂ ನಿಂದ ಹಣ ತೆಗೆಯುವವರ  ಮೇಲೆ ಲಿಮಿಟ್ ಹೇರಿದ್ದ ಬ್ಯಾಂಕ್‍ಗಳು ಈಗ ಜಿಎಸ್‍ಟಿ ತೆರಿಗೆ ಹೆಸರಲ್ಲಿ ಹೆಚ್ಚುವರಿ ಸೇವಾ ತೆರಿಗೆ ವಿಧಿಸಲು ಮುಂದಾಗಿವೆ.

ಬ್ಯಾಂಕ್ ನ ಯಾವ ಯಾವ ಸೇವೆಗಳು ದುಬಾರಿ?

 

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಿರ್ವಹಣೆಗೆ ಸೇವಾ ತೆರಿಗೆ ಹೆಚ್ಚಳವಾಗಲಿದೆ. ಜೊತೆಗೆ  4 ಬಾರಿ ಎಟಿಎಂ ವಿತ್‍ಡ್ರಾ ಲಿಮಿಟ್ ಮುಗಿದ್ಮೇಲೆ,ಮಾಡುವೆ ಪ್ರತಿ ವಿತ್‍ಡ್ರಾಗೂ  ಶುಲ್ಕ ಕಟ್ಟಬೇಕು. ಪೆಟ್ರೋಲ್ ಹಾಕಿಸಿದ್ರೆ, ಶಾಪಿಂಗ್, ಹೋಟೆಲ್‍ನಲ್ಲಿ ಕಾರ್ಡ್ ಉಜ್ಜಿದ್ರೂ ಸರ್ವಿಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ನಿಮ್ಮ ವಿಮೆ(ಇನ್ಸುರೆನ್ಸೆ)ಮೇಲೆ ಜಿಎಸ್ಟಿ ಪ್ರಭಾವ

ನೀವು ವಿಮೆ(ಇನ್ಸುರೆನ್ಸೆ) ಮಾಡಿಸಿದ್ರೆ  ಪ್ರತಿ ಕಂತಿನ ಮೇಲೆ ಸೇವಾ ತೆರಿಗೆ ಹಾಗೂ  ಇನ್ಶುರೆನ್ಸ್ ಚೆಕ್ ರೂಪದಲ್ಲಿ, ನಗದು ರೂಪದಲ್ಲಿ ಹಣ ಕಟ್ಟಿದ್ರೂ ಸೇವಾ ತೆರಿಗೆ  ಹೆಚ್ಚಳವಾಗಲಿದೆ.

 ರೈತರನ್ನು ಬಿಡದ ಜಿಎಸ್ಟಿ:-

ಅನ್ನದಾತ ರೈತರು ವ್ಯವಸಾಯಕ್ಕಾಗಿ ಬಳಸುವ ರಾಸಾಯನಿಕ ಗೊಬ್ಬರ, ಯಂತ್ರಗಳ ಮೇಲೂ ಜಿಎಸ್‍ಟಿ ತೆರಿಗೆ ಬೀಳಲಿದೆ. ಹೊಸ ಟ್ರ್ಯಾಕ್ಟರ್ ಮತ್ತು ಬಿಡಿಭಾಗಗಳು ಖರೀದಿಗೂ ತೆರಿಗೆ ಹೊರೆ ಬೀಳಲಿದೆ. ಬೆಳೆಗಳಿಗೆ ಬಳಸುವ ಕ್ರಿಮಿನಾಶಕಗಳ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ತೆರಿಗೆ ಹೊರೆ ಬೀಳಲಿದೆ.

ಆಭರಣ ಪ್ರಿಯರಿಗೆ ತೆರಿಗೆ :-

ಆಭರಣ ಪ್ರಿಯರು ಇನ್ಮುಂದೆ ಸ್ವಲ್ಪ ಯೋಚನೆ ಮಾಡಿ ಚಿನ್ನ ಕೊಳ್ಳಬೇಕಾಗಬಹುದು. ಏಕೆಂದರೆ  ಚಿನ್ನದ ಮೇಲೆ ಮತ್ತು ಮೇಕಿಂಗ್ ಮೇಲೆ ತೆರಿಗೆ ಬೀಳಲಿದೆ. ಬೆಳ್ಳಿ ಮೇಲೆಯೂ  ಜಿಎಸ್‍ಟಿ ತೆರಿಗೆ ಬೀಳಲಿದೆ.

ಮಹಿಳೆಯರ ಇನ್ಮುಂದೆ ಮೇಕಪ್ ಮಾಡಕ್ಕೂ ಮುಂಚೆ ಯೋಚನೆ ಮಾಡಿ:-

ಮಹಿಳೆಯರ ಮೇಕಪ್ ಐಟಮ್ಸ್, ಬ್ಯೂಟಿ ಪಾರ್ಲರ್ ಸೇವೆಗಳು ದುಬಾರಿಯಾಗಲಿವೆ. ಮೆನಿಕ್ಯೂರ್, ಪೆಡಿಕ್ಯೂರ್, ಸುಗಂಧ ದ್ರವ್ಯಗಳ, ಮೇಕಪ್ ಸಾಧನಗಳ, ಸ್ಕಿನ್ ಕೇರ್ ಸನ್‍ಸ್ಕ್ರೀನ್ ಮೇಲೆ  ಜಿಎಸ್‍ಟಿ ಬೀಳಲಿದೆ. ಇನ್ನು ಲೆದರ್ ಬ್ಯಾಗ್ ಹಾಗೂ ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲೆ ಕೂಡ ಜಿಎಸ್‍ಟಿ ತೆರಿಗೆ ಹೆಚ್ಚಲಿದೆ.

ಜಿಎಸ್‍ಟಿಯಿಂದ ವಿನಾಯಿತಿ ಪಡೆಯಲಿರುವ ವಸ್ತುಗಳು ಯಾವುವು ಗೊತ್ತಾ…

ಮಹಿಳೆಯರ ಬಳೆ, ಕುಂಕುಮ ಹಾಗೂ ಬಿಂದಿಗೆ ಜಿಎಸ್‍ಟಿ ತೆರಿಗೆಯಿಂದ ವಿನಾಯಿತಿ ಸಿಕ್ಕಿದೆ.

ಕುಡುಕರ ನಶೆ ಇಳಿಸಲಿರುವ ಜಿಎಸ್ಟಿ..

ತುರಾಡೋ ಕುಡುಕರಿಗೆ ಶಾಕ್ ಕೊಡಲಿರುವ  ಜಿಎಸ್‍ಟಿ ಜಾರಿಯಾದ್ಮೇಲೆ ಮದ್ಯ ತಯಾರಿಸೋ ಕಂಪನಿಗಳಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಇದನ್ನ ಸರ್ವೀಸ್ ಟ್ಯಾಕ್ಸ್ ಹೆಸರಲ್ಲಿ ವಸೂಲಿ ಮಾಡಲು ಕಂಪನಿಗಳು ನಿರ್ಧರಿಸಿವೆ. ಮದ್ಯ ತಯಾರಿಕಾ ಕಂಪನಿಗಳ ಪ್ರಕಾರ ಉತ್ಪಾದನಾ ತೆರಿಗೆ ಹೆಚ್ಚಾಗಲಿದ್ದು, ಈ ಹೊರೆಯನ್ನ ತಪ್ಪಿಸಲು ರಮ್, ಜಿನ್ನು, ವೈನ್, ಬಿಯರ್, ವಿಸ್ಕಿ ದರ ಹೆಚ್ಚಿಸಿ ಅದನ್ನ ಸೇವಾದರ ಹೆಸರಲ್ಲಿ ಗ್ರಾಹಕರಿಂದಲೇ ವಸೂಲಿ ಮಾಡಲು ಕಂಪನಿಗಳು ತೀರ್ಮಾನಿಸಿವೆ.

ನಟ ನಟಿಯರ ಮೇಲೆ ಜಿಎಸ್ಟಿ ತೆರಿಗೆ


ಜಿಎಸ್‍ಟಿ ಯಿಂದ 20 ಲಕ್ಷಕ್ಕೂ ಅಧಿಕ ಸಂಭಾವನೆ ಪಡೆಯುವ  ನಟ ನಟಿಯರಿಗೂ ಬಿಸಿ ತಟ್ಟಲಿದೆ. ನಟ ನಟಿಯರ ಸಂಭಾವನೆ ಮೇಲಿನ ತೆರಿಗೆ ಹೆಚ್ಚಳವಾಗಿದೆ.

ಆನ್‍ಲೈನ್ ಬುಕ್ಕಿಂಗ್ ಮತ್ತು  ವ್ಯವಹಾರದ ಮೇಲೆ ಜಿಎಸ್ಟಿ ಬರೆ

ಜುಲೈ 1 ರಾ ನಂತರ  ಆನ್‍ಲೈನ್ ವ್ಯವಹಾರದ ಮೇಲೆ 1% ತೆರಿಗೆ ನಿಗದಿಯಾಗಿದೆ. ನಷ್ಟ ಸರಿದೂಗಿಸಲು ಆನ್‍ಲೈನ್ ಬುಕಿಂಗ್ ಕಂಪನಿಗಳ ವಸ್ತುಗಳ ಮೇಲಿನ ಬೆಲೆ ಏರಿಕೆಯಾಗಲಿದೆ.

ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್:-

ಜುಲೈ 1ರಿಂದ ದೇಶಾದ್ಯಂತ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಜಾರಿಯಾಗ್ತಿದ್ದು, ಎಲ್ಲಾ ವಸ್ತುಗಳು ಒಂದೇ ತೆರಿಗೆ ವ್ಯಾಪ್ತಿಗೆ ಬರಲಿವೆ. ಇದ್ರಿಂದ ಮನೆ ಖರೀದಿ ಕಡಿಮೆಯಾಗಲಿದೆ ಎನ್ನಲಾಗಿದೆ.

ಕನಸಿನ ಮನೆ ನಿರ್ಮಾಣ ಕಷ್ಟ :-

 

ಕಟ್ಟಡಕ್ಕೆ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಲಿದ್ದು, ಕಟ್ಟಡ ರಿಪೇರಿಗಾಗಿ ಪಡೆಯುವ ಸಾಲದ ಮೇಲೆ ಸಹ ಜಿಎಸ್ಟಿ ತೆರಿಗೆ ಬೀಳಲಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರೈತರಿಗೆ ಬಂಪರ್ ಸುದ್ದಿ ಕೊಟ್ಟ ಕುಮಾರಣ್ಣ..!

    ಡಿಸೆಂಬರ್ ಒಳಗೆ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ, ಸಾಲಮನ್ನಾ ಫಲಾನುಭವಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದ ಸಿಎಂ, ಡಿಸೆಂಬರ್ ಒಳಗೆ ರೈತರ ಬೆಳೆ ಸಾಲಮನ್ನಾ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಬ್ಯಾಂಕುಗಳಿಗೆ 4 ಕಂತುಗಳಲ್ಲಿ ರೈತರ ಸಾಲ ಮನ್ನಾದ ಮೊತ್ತವನ್ನು ಪಾವತಿಸಲು ಚಿಂತನೆ ನಡೆದಿತ್ತಾದರೂ, 2 ಕಂತುಗಳಲ್ಲಿ ಸಾಲಮನ್ನಾ ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಿ ಡಿಸೆಂಬರ್ ಒಳಗೆ ಸಂಪೂರ್ಣವಾಗಿ…

  • ಸುದ್ದಿ

    ಮೆಟ್ರೋದಲ್ಲಿ ತೊಂದರೆಯುಂಟಾಗಿ – ಟ್ರ್ಯಾಕ್ ಮೇಲೆ ನಡೆದು ಸಾಗಿದ ಪ್ರಯಾಣಿಕರು….!

    ನವದೆಹಲಿ: ದೆಹಲಿ ಮೆಟ್ರೋ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಹಳದಿ ಮಾರ್ಗದ ಮೆಟ್ರೋ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಹಳಿ ಮೇಲೆ ನಡೆದುಕೊಂಡು ಹೋಗಿ ನಿಲ್ದಾಣ ತಲುಪಿದ್ದಾರೆ. ಮಂಗಳವಾದ ಬೆಳಗ್ಗೆ ಸುಮಾರು 9.30ಕ್ಕೆ ಹಳದಿ ಮಾರ್ಗದಲ್ಲಿ ಕುತಬ್ ಮಿನಾರ್ ನಿಲ್ದಾಣದಿಂದ ಮೆಟ್ರೋ ರೈಲು ನಿಧಾನವಾಗಿ ಚಲಿಸುತ್ತಿತ್ತು. ಹೀಗೆ ಚಲಿಸುತ್ತಿರುವಾಗಲೇ ಸುಲ್ತಾನಪುರ ನಿಲ್ದಾಣಕ್ಕೆ ಮೊದಲೇ ನಿಂತಿದೆ. ಕೊನೆಗೆ ಎಮೆರ್ಜೆನ್ಸಿ ಗೇಟ್‍ನಿಂದ ಪ್ರಯಾಣಿಕರನ್ನು ಹೊರ ಬಂದು, ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ…

  • ಸುದ್ದಿ

    ಫಿಕ್ಸ್ ಆಯ್ತು ಲೋಕಸಭಾ ಎಲೆಕ್ಷನ್ ದಿನಾಂಕ?ಕರ್ನಾಟಕದಲ್ಲಿ ಯಾವಾಗ ಗೊತ್ತಾ ಎಲೆಕ್ಷನ್?ಈ ಸುದ್ದಿ ನೋಡಿ

    2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಮಾ.10 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಿದ್ದು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ದೆಹಲಿ ವಿಜ್ಞನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, 2019 ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ದೇಶಾದ್ಯಂತ ಒಟ್ಟಾರೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಏ. ರಂದು 11 ಮೊದಲ ಹಂತದ ಮತದಾನ…

  • ಆರೋಗ್ಯ

    ಬೆಳ್ಳುಳ್ಳಿಯಲ್ಲಿರುವ ಪ್ರಮುಖ ಆರೋಗ್ಯಗುಣಗಳು ತಿಳಿಯಲು…! ಈ ಲೇಖನವನ್ನು ಓದಿ…

    ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಬೆಳ್ಳುಳ್ಳಿಯ ವಿವರಣೆ ಅದರ ಔಷಧೀಯ ಗುಣಗಳ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ.

  • ಜ್ಯೋತಿಷ್ಯ

    ಮಂತ್ರಾಲಯದ ಶ್ರೀ ರಾಯರನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Wednesday, December 1, 2021) ನೀವು ಚೈತನ್ಯದಿಂದ ತುಂಬಿರುತ್ತೀರಿ ಮತ್ತು ಇಂದು ಅಸಾಮಾನ್ಯವಾದದ್ದೇನಾದರೂ ಸಾಧಿಸುತ್ತೀರಿ. ನಿಮ್ಮ ಮೂಲಕ ಹಣವನ್ನು ಉಳಿಸಲು ಮಾಡಲಾಗಿರುವ ಪ್ರಯತ್ನವು ಇಂದು ವಿಫಲವಾಗಬಹುದು, ಹೇಗಾದರೂ, ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ, ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುತ್ತದೆ. ಪತ್ನಿಯೊಂದಿಗೆ ಜಗಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ಜೀವನದಲ್ಲಿ ಮಹತ್ವದ ವಿಷಯವೆಂದರೆ ನಾವು ಮಾರ್ಪಡಿಸಲು ಸಾಧ್ಯವಿಲ್ಲದ ವಿಷಯಗಳನ್ನು ಒಪ್ಪಿಕೊಳ್ಳಲು ಕಲಿಯುವುದಾಗಿದೆ. ನಿಮ್ಮ ಕಣ್ಣುಗಳು ಅದೆಷ್ಟು ಪ್ರಕಾಶಮಾನವಾಗಿವೆಯೆಂದರೆ ಅವು ನಿಮ್ಮ ಪ್ರೇಮಿಯ…