Place

ಕೇದಾರನಾಥ ದೇವಾಲಯ

41

ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ.



ಪ್ರಾಯಶ: ಕೇದಾರನಾಥ ತಲುಪುವುದು ಬಹುತೇಕರಿಗೆ ಬಲು ಕಷ್ಟಕರವಾಗಿದೆ. ಏಕೆಂದರೆ ಇಲ್ಲಿರುವ ವಿಪರೀತ ಹವಾಮಾನ. ಒಮ್ಮೊಮ್ಮೆ ಮೇಘಗಳ ಸ್ಫೋಟವಾಯಿತೆಂದರೆ ಸಾಕಷ್ಟಿ ನೀರು ಹಾಗೂ ಕಲ್ಲು ಬಂಡೆಗಳು ಕೇದಾರನಾಥಕ್ಕೆ ನುಗ್ಗುವುದು ಸಾಮಾನ್ಯ. ಕಳೆದ 2013 ರಲ್ಲಿ ಕೇದಾರನಾಥವು ಅತಿ ಭೀಕರವಾದ ನೆರೆಗೆ ಒಳಗಾಗಿತ್ತು.


ಕೇದಾರನಾಥ ಪಟ್ಟಣದ ಅನೇಕ ಕಟ್ಟಡಗಳು ಹಾಗೂ ಇತರೆ ರಚನೆಗಳಿಗೆ ಸಿಕ್ಕಾಪಟೆ ಹಾನಿ ಉಂಟಾದರೂ ಕೇದಾರನಾಥ ದೇವಾಲಯಕ್ಕೆ ಅಷ್ಟೊಂದು ಹೇಳಿಕೊಳ್ಳುವ ಹಾನಿಯಾಗಿರಲಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎತ್ತರದ ಪರ್ವತದಿಂದ ಹರಿದು ಬರುತ್ತಿದ್ದ ರಭಸದ ಜಲಧಾರೆಗೆ ದೊಡ್ಡದಾದ ಬಂಡೆಯೊಂದು ಅಡ್ಡ ನಿಂತು ದೇವಾಲಯಕ್ಕೆ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕೆಲ ಪಂಡಿತರು ಹೇಳುವ ಪ್ರಕಾರ, ಸಾಕ್ಷಾತ್ ಶಿವನೆ ಇಲ್ಲಿ ಕೇದಾರ ಖಂಡದ ಅಧಿದೇವನಾಗಿ ನೆಲೆಸಿರುವುದರಿಂದ ಮುಂದೆಯೂ ಈ ದೇವಾಲಯಕ್ಕೆ ಯಾವ ರೀತಿಯ ಹಾನಿಯೂ ಉಂಟಾಗುವುದಿಲ್ಲವಂತೆ. 2013 ರಲ್ಲಿ ಇಲ್ಲಿ ಪ್ರವಾಹ ಜರುಗಿದ ನಂತರ ಸಾಕಷ್ಟು ಹಾನಿಯುಂಟಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಅಸು ನಿಗಿದ್ದರು. ಹೀಗಾಗಿ ದೇವಾಲಯ ಮರು ನಿರ್ಮಾಣದ ಕೂಗೆದ್ದಿತ್ತು.

ಆದರೆ ಶಸ್ತ್ರಜ್ಞರು, ಪಂಡಿತರು, ವಿದ್ವಾಂಸರು ಹೇಳುವಂತೆ ಇಲ್ಲಿ ಈಗಾಗಲೆ ಸಾಕಷ್ಟು ದೇಹಗಳು ಭೂಮಿಯಲ್ಲಿ ಹಾಗೆಯೆ ಹೂತು ಹೋಗಿರುವುದರಿಂದ ನಕಾರಾತ್ಮಕ ಶಕ್ತಿಯು ಸಾಕಷ್ಟಿದ್ದು ಮೊದಲು ಪ್ರತಿ ಕಳೆಬರವನ್ನು ತೆಗೆದು ನಂತರ ಸ್ಥಳವನ್ನು ಶುದ್ಧಗೊಳಿಸಿ ನಂತರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಈ ದೇವಾಲಯದ ಮರು ನಿರ್ಮಾಣದ ಕಾರ್ಯ ಕೈಗೊಳ್ಳಬೇಕೆನ್ನುವುದು ಅವರ ಅಭಿಪ್ರಾಯವಾಗಿದೆ. ಭಕ್ತರ ಭಕ್ತಿ ಪರೀಕ್ಷಿಸುವ ಅಮರನಾಥ ಇನ್ನು ಈ ಸ್ಥಳಕ್ಕೆ ಸಂಬಂಧಿಸಿದಂತೆ ಕಥೆ ಏನೆಂದರೆ, ಹಿಂದೆ ಪಾಂಡವರು ಕುರುಕ್ಷೇತ್ರದ ಯುದ್ಧದ ನಂತರ ಶಿವನನ್ನು ದರ್ಶಿಸಿ ತಮ್ಮ ಮೇಲೆ ಬಂದೊದಗಿರುವ ಹತ್ಯಾ ಪಾಪಗಳಿಂದ ಮುಕ್ತರಾಗಬೇಕೆಂದು ಬಯಸಿದ್ದರು ಹಾಗೂ ಆ ಕಾರ್ಯದ ನಿಮಿತ್ತ ಕಾಶಿಗೆ ತೆರಳಿದ್ದರು. ಇದನ್ನರಿತ ಶಿವ ಅವರಿಗೆ ಕಾಣದ ಎತ್ತಿನ ವೇಶದಲ್ಲಿ ಉತ್ತರಾಖಂಡದ ಸ್ಥಳಕ್ಕೆ ತೆರಳಿದ್ದ.



ಈ ವಿಷಯ ತಿಳಿದುಕೊಂಡ ಪಾಂಡವರು ತಮ್ಮ ಪ್ರಯತ್ನ ಬಿಡದೆ ಉತ್ತರಾಖಂದ ಆ ಸ್ಥಳಕ್ಕೆ ತೆರಳಿ ಕಾಶಿಯಿಂದ ಬಂದ ಮಾರು ವೇಶದ ಶಿವನನ್ನು ಎತ್ತಿನ ರುಪದಲ್ಲಿರುವುದನ್ನು ಗಮನಿಸಿದರು. ಹೀಗೆ ಈ ಎತ್ತು ಕಂಡ ಸ್ಥಳವು ಗುಪ್ತಕಾಶಿಯಾಯಿತು. ನಂತರ ಅವರು ಶಿವನನ್ನು ಮೆಚ್ಚಿಸಿ ಅವನ ಆಶೀರ್ವಾದ ಪಡೆದು ಮೋಕ್ಷ ಹೊಂದಿದರು. ಇದಕ್ಕೆ ಸಂಕೇತವಾಗಿಯೆ ಇಲ್ಲಿ ತ್ರಿಕೋನಾಕಾರದ ಶಿವಲಿಂಗನನ್ನು ಕೇದಾರನಾಥನಾಗಿ ಪೂಜಿಸಲಾಗುತ್ತದೆ. ಈ ಸ್ಥಳದ ಮಹಿಮೆಯೆಂದರೆ ಯಾರು ಈ ಶಿವನನ್ನು ಭಕ್ತಿಯಿಂದ ಪೂಜಿಸುವರೊ ಅವರ ಎಲ್ಲ ಕರ್ಮಗಳು ಬಿಳುಚಿಕೊಂಡು ನಂತರ ಅವರು ತೀರಿ ಹೋದ ಮೇಲೆ ಕೈಲಾಸವನ್ನು ಸೇರುತ್ತಾರೆಂಬ ಪ್ರತೀತಿಯಿದೆ.


ಕೇದಾರನಾಥಕ್ಕೆ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗಿನ ಸಮಯ ಅನುಕೂಲ ಎನ್ನಬಹುದು. ಆದರೂ ಮಳೆಯ ಮುನ್ಸೂಚನೆಗಳನ್ನು ಆಧರಿಸಿ ಪ್ರವಾಸ ಯೋಜಿಸಿದರೆ ಉತ್ತಮ. ಮಂದಾಕಿನಿ ತಟದಲ್ಲಿರುವ ಕೇದಾರನಾಥಿಗೆ ರಸ್ತೆ ಮಾರ್ಗದಿಂದ ಹೋಗಬಹುದಾದರೂ ಕೊನೆಯ 14 ಕಿ.ಮೀ ಚಾರಣದ ಮೂಲಕವೆ ಪ್ರವೇಶಿಸಬೇಕು. ಏಕೆಂದರೆ ಅಷ್ಟೊಂದು ಕಠೋರವಾಗಿದೆ ಇಲ್ಲಿನ ಭೂಪ್ರದೇಶಗಳು. ಉತ್ತರಾಖಂಡದ ಪ್ರಭಾವಶಾಲಿ ದೇವಾಲಯಗಳು ಮುಂದೆ ಚಳಿಗಾಲದ ಸಮಯದಲ್ಲಿ ಇಲ್ಲಿ ವಿಪರಿತವಾದ ಹವಾಮಾನವಿರುತ್ತದೆ. ಎಲ್ಲ ಸ್ಥಳಗಳು ಮಂಜುಗಟ್ಟಿರುತ್ತವೆ ಹಾಗೂ ಈ ಸಂದರ್ಭದಲ್ಲಿ ಯಾವುದೆ ರಸ್ತೆ ಮಾರ್ಗಗಳು ಗೋಚರಿಸುವುದಿಲ್ಲ. ಈ ಆರು ತಿಂಗಳುಗಳ ಕಾಲ ಕೇದಾರನಥ ದೇವಾಲಯದಲ್ಲಿರುವ ಎಲ್ಲ ವಿಗ್ರಹಗಳನ್ನು ಉಖಿಮಠದಲ್ಲಿ ತಂದಿರಿಸಿ ಪೂಜಿಸಲಾಗುತ್ತದೆ.


About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಮೊಬೈಲ್‌ನಲ್ಲಿ ಮಾತನಾಡಿದ್ರೆ ಬೀಳುತ್ತೆ ಭಾರಿ ದಂಡ..!ತಿಳಿಯಲು ಈ ಲೇಖನ ಓದಿ ..

    ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮದೋರಾ ಗ್ರಾಮದ ಪಂಚಾಯಿತಿ ವಿವಾದಾತ್ಮಕ ತೀರ್ಮಾನ ಕೈಗೊಂಡಿದೆ. ಗ್ರಾಮದ ಹುಡುಗಿಯರು ಮೊಬೈಲ್ ನಲ್ಲಿ ಮಾತನಾಡುವುದು ಕಂಡು ಬಂದರೆ ಅವರಿಗೆ ೨೧ ಸಾವಿರ ರೂ. ದಂಡ ವಿಧಿಸಲಾಗುವುದೆಂದು ಎಚ್ಚರಿಸಿದೆ.

  • Sports, ಕ್ರೀಡೆ

    ಎಬಿ ಡಿ ವಿಲಿಯರ್ಸ್ ಆರ್ ಸಿ ಬಿ ಮತ್ತು ದಕ್ಷಿಣ ಆಫ್ರಿಕಾ ತಂಡ ದಿಲ್ಲಿ ತಮ್ಮ ಪಾತ್ರವನ್ನು ಇಲ್ಲಿ ಹೇಳಿದ್ದಾರೆ

    ಅವರಿಗೆ ಭವಿಷ್ಯ ಏನೆಂದು ಖಚಿತವಾಗಿಲ್ಲ ಆದರೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರು ರಾಷ್ಟ್ರೀಯ ತಂಡದಲ್ಲಿ ಮತ್ತು ಅವರ ಐಪಿಎಲ್ ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭವಿಷ್ಯದ ಸೆಟ್‌ಅಪ್‌ನಲ್ಲಿ ಆಡಲು ಪಾತ್ರವನ್ನು ಹೊಂದಿರುತ್ತಾರೆ ಎಂದು ವಿಶ್ವಾಸ ಹೊಂದಿದ್ದಾರೆ. ಸಮಕಾಲೀನ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಡಿವಿಲಿಯರ್ಸ್ ಕಳೆದ ವರ್ಷ ನವೆಂಬರ್‌ನಲ್ಲಿ ಎಲ್ಲಾ ರೀತಿಯ ಆಟದಿಂದ ನಿವೃತ್ತರಾಗಿದ್ದರು. “ಎಸ್‌ಎ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ನಾನು ಇನ್ನೂ ಒಂದು ಪಾತ್ರವನ್ನು ವಹಿಸುತ್ತೇನೆ…

    Loading

  • ಸುದ್ದಿ

    ಇಷ್ಟುದಿನ ಸಗಣಿಗೆ ಮಾತ್ರ ಬೇಡಿಕೆ ಇತ್ತು ಆದರೆ ಈಗ ನಾಯಿ ಮಲಕ್ಕೂ ಬಂತು ಬೇಡಿಕೆ! ಏನ್ ಕಾಲ ಬಂತು ಗುರು..,

    ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಸಾಕುವ ಜಮಾನ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಜನ ಅಲೆದಾಡುತ್ತಾರೆ. ಸಗಣಿಯನ್ನು ರಸಗೊಬ್ಬರವಾಗಿ ಕೃಷಿಗಳಿಗೆ ಬಳಸುವುದರಿಂದ ಸದ್ಯ ಇದಕ್ಕೆ ಬೇಡಿಕೆ ಇದೆ. ಇದರಂತೆಯೇ ಇದೀಗ ನಾಯಿಗಳ ಮಲಕ್ಕೂ ಬೇಡಿಕೆಯಿದೆ. ಹೌದು. ಪಿಲಿಫೈನ್ಸ್ ಶಾಲೆಯೊಂದರ ವಿದ್ಯಾರ್ಥಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದು, ಅದರಲ್ಲಿ ನಾಯಿಗಳ ಮಲದಿಂದಲೂ ಉಪಯೋಗವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾಯಿಗಳ ಮಲಕ್ಕೂ ಹೆಚ್ಚಿನ ಬೇಡಿಕೆ ಬರಬಹುದಾದ ಸಾಧ್ಯತೆಗಳಿವೆ. ಸಿಮೆಂಟ್ ನೊಂದಿಗೆ ನಾಯಿ ಮಲವನ್ನು ಮಿಕ್ಸ್ ಮಾಡಿ ಇಟ್ಟಿಗೆ…

  • ವಿಸ್ಮಯ ಜಗತ್ತು

    ಸತ್ತುಹೋದ ಪ್ರೇಯಸಿ ಹಾವಿನ ರೂಪದಲ್ಲಿ ಬಂದಿದ್ದಾಳೆಂದು..!ಅದರೊಂದಿಗೆ ಈ ಯುವಕ ಹೇಗೆ ಜೀವನ ನಡಿಸುತ್ತಿದ್ದಾನೆ ಗೊತ್ತಾ..?

    ಥೈಲ್ಯಾಂಡ್ ಮೂಲದ ಈ ಯುವಕನ ವಿಷಯದಲ್ಲಿ ಇದೇ ನಡೆದಿದೆಯಾ..? ಎಂದರೆ… ಅದಕ್ಕೆ ಉತ್ತರ ಹೌದು ಎಂದೇ ಅನ್ನಿಸುತ್ತದೆ..! ಬೇಕಿದ್ದರೆ ಆತನ ಕಥೆಯನ್ನು ನೀವೂ ಓದಿ..!

  • ಸಿನಿಮಾ

    ರಿತೇಶ್‌ಗೆ ಐಶಾರಾಮಿ ಕಾರ್‌ ಬರ್ತಡೇ ಗಿಫ್ಟ್ ನೀಡಿದ ಪತ್ನಿ,ಕಾರಿನ ಬೆಲೆ ಎಷ್ಟು ಗೊತ್ತಾ..?ತಿಳಿಯಲು ಇದನ್ನು ಓದಿ..

    ಎಲೊನ್ ಮಸ್ಕ್ ಅವರ ಟೆಸ್ಲಾ ಮೋಟಾರ್ಸ್ ಸದ್ಯದಲ್ಲೇ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಭಾರತದ ರಸ್ತೆಗಿಳಿಸುವುದಾಗಿ ಹೇಳಿದೆ. ಇನ್ನೊಂದ್ಕಡೆ ನಟ ರಿತೇಶ್ ದೇಶ್ಮುಖ್ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್ ಯು ವಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  • ಕ್ರೀಡೆ

    ನಿಮ್ಮ ಬಾಲ್ಯದ ಈ ಆಟಗಳು ನೆನಪಿದೆಯಾ ???

    ಗೋಲಿ ಆಟ : ಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತರ ಬೀಳುವದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತಯ ಇನ್ನೊಬ್ಬರ ಗೋಲಿಗೆ ಹೊಡೆಯುವರು. ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೊರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮ ಗೋಲಿಗೆ ಹೊಡೆದ ಹೊಡೆತದ ಗುರು ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು. ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡುಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.