ದೇಶ-ವಿದೇಶ

ಇತಿಹಾಸ ನಿರ್ಮಿಸಿದ ಇಸ್ರೋ…..

166

ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ.

ಭಾರತ ಇದುವರೆಗೂ ಅಭಿವೃದ್ಧಿಪಡಿಸಿದ ರಾಕೆಟ್‌ಗಳಲ್ಲೇ ಅತ್ಯಂತ ದೈತ್ಯ ಗಾತ್ರ (200 ಆನೆ ತೂಕದ) ಮತ್ತು ಸೂಪರ್‌ ಪವರ್‌ ಹೊಂದಿರುವ ಜಿಎಸ್‌ಎಲ್‌ವಿ ಮಾರ್ಕ್-3 ಉಡ್ಡಯನ ವಾಹಕವನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆ ಮೂಲಕ, ಇಂಥ ಭಾರೀ ತೂಕದ ರಾಕೆಟ್‌ ಹಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಅಮೆರಿಕ, ರಷ್ಯಾ, ಯುರೋಪ್‌, ಚೀನಾ ಹಾಗೂ ಜಪಾನ್‌ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.

ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್‌, ತನ್ನೊಂದಿಗೆ ಜಿಸ್ಯಾಟ್‌ 19 ಉಪಗ್ರಹ ಕೂಡಾ ಹೊತ್ತೊಯ್ಯಲಿದೆ. ಜಿಸ್ಯಾಟ್‌ 19 ಉಪಗ್ರಹವು, ಅತ್ಯಾಧುನಿಕವಾಗಿದ್ದು, ಡಿಜಿಟಲ್‌ ಇಂಡಿಯಾದ ಕನಸು ನನಸು ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಭಾರತ ಇದುವರೆಗೆ 41 ಉಪಗ್ರಹಗಳನ್ನು ಹಾರಿಬಿಟ್ಟಿದ್ದು, ಅದರಲ್ಲಿ 13 ಸಂಪರ್ಕ ಉಪಗ್ರಹಗಳಾಗಿವೆ.

ಜಿಎಸ್‏ಎಲ್‏ವಿ ಮಾರ್ಕ್ 3 ರಾಕೆಟ್ ಮಹತ್ವ :-

ಸದ್ಯ ಇಸ್ರೋ ಬತ್ತಳಿಕೆಯಲ್ಲಿ ಪಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ ಮಾರ್ಕ್-2 ರಾಕೆಟ್‌ಗಳು 2 ಟನ್‌ ಭಾರ ಹೊತ್ತೊ ಯ್ಯ ಬಲ್ಲದು. ಅದಕ್ಕೂ ಮೇಲ್ಪಟ್ಟಭಾರದ ಉಪಗ್ರಹ ಒಯ್ಯುವ ಸಾಮರ್ಥ್ಯ ಜಿಎಸ್‌ಎಲ್‌ವಿ ಮಾರ್ಕ್ 3ಗೆ ಇದೆ. ಈ ರಾಕೆಟ್‌ ಬಳಕೆಯಿಂದ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಲು ಬೇರೆ ದೇಶಗಳ ಮೇಲೆ ಅವಲಂಬಿಸುವುದು ತಪ್ಪುತ್ತದೆ.

ಜಿಎಸ್‌ಎಲ್‌ವಿ ವಿಶೇಷತೆ:-

ದ್ರವರೂಪದ ಆಮ್ಲಜನಕ ಹಾಗೂ ದ್ರವರೂಪದ ಜಲಜನಕವನ್ನು ಇಂಧನವಾಗಿ ಬಳಸಿ ಕಾರ್ಯನಿರ್ವಹಿಸುವ ಕ್ರಯೋಜೆನಿಕ್‌ ಎಂಜಿನ್‌ ಮೂಲಕ ಪೂರ್ಣಪ್ರಮಾಣದ ರಾಕೆಟ್‌ ಉಡಾವಣೆ ಮಾಡುತ್ತಿರುವುದು ಇದೇ ಮೊದಲು.

ಜಿಎಸ್‏ಎಲ್‏ವಿ ಮಾರ್ಕ್ 3 ದೇಶದ ಅತ್ಯಂತ ದೈತ್ಯ ರಾಕೆಟ್‌ ಆಗಿದೆ. ಜತೆಗೆ ಅತ್ಯಂತ ಕುಬ್ಜ ರಾಕೆಟ್‌ ಕೂಡ ಹೌದು. ಎತ್ತರ 43 ಮೀಟರ್‌. (ಪಿಎಸ್‌ಎಲ್‌ವಿ ರಾಕೆಟ್‌ 44.4 ಮೀಟರ್‌ ಎತ್ತರವಿದೆ).
ಭೂಸ್ಥಿರ ವರ್ಗಾವಣೆ ಕಕ್ಷೆಗೆ 4 ಟನ್‌, ಕೆಳ ಭೂ ಕಕ್ಷೆಗೆ 8 ಟನ್‌ ತೂಕದ ಉಪಗ್ರಹ ಒಯ್ಯುವ ಸಾಮರ್ಥ್ಯ ಹೊಂದಿದೆ.

ಜಿಸ್ಯಾಟ್‌ 19 ವಿಶೇಷತೆ:-ಜಿಸ್ಯಾಟ್‌-19, ಉಪಗ್ರಹ ಆಧರಿತ ಧ್ವನಿ, ವೇಗದ ಇಂಟರ್ನೆಟ್‌ ಹಾಗೂ ವಿಡಿಯೋದಂತಹ ಅತ್ಯಂತ ಸುರಕ್ಷಿತ ಸೇವೆ ಆರಂಭಿಸುವ ನಿಟ್ಟಿನಲ್ಲಿ ಮೊದಲ ಉಪಗ್ರಹ . ಈ ಹಿಂದೆ ಉಡಾವಣೆ ಮಾಡಲಾದ 6-7 ಉಪಗ್ರಹಗಳಿಗೆ ಒಂದು ಜಿಸ್ಯಾಟ್‌- 19 ಸಮ. ಜಿಸ್ಯಾಟ್‌ 19ರಲ್ಲಿ ಟ್ರಾನ್ಸ್‌ಫಾಂಡರ್‌ಗಳು ಇರುವುದಿಲ್ಲ. ಈ ಹಿಂದಿನ ಉಪಗ್ರಹಗಳಲ್ಲಿ 1 ರೇಡಿಯೋ ಸಂಕೇತ ಕಳುಹಿಸುವ ವ್ಯವಸ್ಥೆ ಇದ್ದರೆ ಈ ಉಪಗ್ರಹದಲ್ಲಿ ಒಮ್ಮೆಗೆ 8 ರೇಡಿಯೋ ಸಂಕೇತ ಕಳುಹಿಸುವ ವ್ಯವಸ್ಥೆ ಇದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಎಸ್ಎನ್ಎಲ್ ಬಳಸುತ್ತಿರುವ ಗ್ರಾಹಕರಿಗೊಂದು ಸಂತಸದ ಸುದ್ದಿ ..!ಸುಳ್ಳು ವದಂತಿಗಳಿಗೆ ಬ್ರೇಕ್….

    ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮುಚ್ಚಲಾಗುತ್ತದೆ ಎಂದು ಹೇಳಲಾಗಿದ್ದು, ಈ ಕುರಿತಾಗಿ ಸಂಸ್ಥೆಯ ಕರ್ನಾಟಕ ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆಯನ್ನು ಮುಚ್ಚಲಾಗುತ್ತದೆ ಎಂಬ ವದಂತಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದು, ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವ ವದಂತಿ ನಿಜವಲ್ಲ. ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಕೆಲವರು ಬಿಎಸ್ಎನ್ಎಲ್ ಮುಚ್ಚುವ ಕುರಿತು ವದಂತಿ ಹರಡುತ್ತಿದ್ದಾರೆ. ಸಂಸ್ಥೆಯ ಸೇವೆ…

  • ಸಿನಿಮಾ

    ಮಗನಂತಿರುವ ದರ್ಶನ್ ಚುನಾವಣೆಯಲ್ಲಿ ನಿಂತಿರುವ ಸುಮಲಾತರವರ ಪರ ನಿಲ್ತಾರ? ದರ್ಶನ್ ಹೇಳಿದ್ದೇನು ಗೊತ್ತಾ?

    ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸುವುದು ಖಚಿತವಾಗಿದ್ದು, ಕಾಂಗ್ರೆಸ್ ನಿಂದ ಟಿಕೆಟ್ ಸಿಗಲಿ ಬಿಡಲಿ. ತಾವು ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರಣಕ್ಕೆ ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗಿದ್ದು, ಈ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರ್ ಜೆಡಿಎಸ್ ನಿಂದ ಕಣಕ್ಕಿಳಿಯಲಿದ್ದಾರೆ….

  • ಸುದ್ದಿ

    ಆನ್​ಲೈನ್​ನಲ್ಲಿ ಬುಕ್ ಮಾಡಿದ್ದು ಸ್ಯಾಮ್​ಸಂಗ್ ಫೋನ್​ : ಡೆಲಿವರಿ ಬಾಯ್​ ಬಿಜೆಪಿ ಸಂಸದನ ಕೈಗೆ ತಂದುಕೊಟ್ಟಿದ್ದೇನು ಗೊತ್ತಾ

     ಬಿಜೆಪಿ ಸಂಸದರೊಬ್ಬರು ಆನ್​ಲೈನ್ ದೋಖಾಕ್ಕೆ ಒಳಗಾದವರ ಪಟ್ಟಿಗೆ ಸೇರಿದ್ದಾರೆ. ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​ಬೇಕು ಎಂಬ ಆಸೆಯಿಂದ ಇದೇ ಮೊದಲ ಬಾರಿಗೆ ಅವರು ಆನ್​ಲೈನ್ ಮೂಲಕ ಅದನ್ನುಖರೀದಿಸಿದ್ದರು. ಡೆಲಿವರಿ ಬಾಯ್​ ಬಂದು ಆ ಪಾರ್ಸೆಲನ್ನು ತಂದುಕೈಗಿಟ್ಟು ಹೋದರು. ಹೊಸ ಸ್ಮಾರ್ಟ್​​ಫೋನ್ ಕೈ ಸೇರಿದ ಖುಷಿಯಲ್ಲಿದ್ದರು ಸಂಸದರು. ಹಾಗಾಗಿ ಡೆಲಿವರಿ ಬಾಯ್ ಎದುರೇ ಆ ಪಾರ್ಸೆಲ್ಬಿಚ್ಚಿ ನೋಡುವ ಗೋಚಿಗೆ ಹೋಗಿರಲಿಲ್ಲ.ಸೋಮವಾರ ಬೆಳಗ್ಗೆ ಎಂದಿನಂತೆ ದಿನಚರಿಆರಂಭಿಸಿದ ಸಂಸದರು, ಆ ಪಾರ್ಸೆಲ್ಬಿಚ್ಚಿ ನೋಡಿದರು. ಸ್ಯಾಮ್​ಸಂಗ್ ಫೋನ್ಬಾಕ್ಸ್ ಇರಬೇಕಾದಲ್ಲಿ, ರೆಡ್​ಮಿ 5ಎಫೋನಿನ ಬಾಕ್ಸ್ ಇತ್ತು! ಇದೇಕೇಹೀಗಾಯಿತು,…

  • ಸ್ಪೂರ್ತಿ

    ದೇಶ ಕಾಯೋ ಈ ಸೈನಿಕ ತನ್ನ ಊರಿಗಾಗಿ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ನೀವು ಈ ರೀತಿಯ ಸ್ಟೋರಿಯನ್ನು ಸಿನಿಮಾದಲ್ಲಿ ಅಥವಾ ಕಥೆ ಬರಹಗಳಲ್ಲಿ ನೋಡಿರುತ್ತೀರಿ ಆದರೆ ನಿಜ ಜೀವನದಲ್ಲಿ ಇವರು ಮಾಡಿರುವಂತ ಕೆಲಸಕ್ಕೆ ನೀವು ಹೆಮ್ಮೆ ಪಡುತ್ತೀರ. ಪ್ರಸ್ತುತ ದಿನಗಳಲ್ಲಿ ಜನರು ತಮ್ಮ ಬಗ್ಗೆ ಹಾಗು ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಾರೆ ವಿನಃ ತಾವು ವಾಸಿಸುವಂತ ಅಕ್ಕ ಪಕ್ಕದ ವಾತಾವರಣದ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ ಅಂತಹದರಲ್ಲಿ ಇವರು ಮಾಡಿರುವಂತ ಕೆಲಸ ನಿಜಕ್ಕೂ ಅದ್ಭುತವಾದದ್ದು ಅನ್ನಬಹುದು. 4 ಲಕ್ಷ ರೂಗಳ ದಾನ… ಹೆಸರು ಭಗೂರಾಮ್ ಮೌರ್ಯ ವಾರಣಾಸಿಯಿಂದ 20…

  • ಸುದ್ದಿ

    ಇದೊಂದು ಭಯಾನಕ ಸುದ್ದಿ ; ನೀವು ಶೌಚಾಲಯಕ್ಕೆ ಹೋಗುವ ಮುನ್ನ ಇದನ್ನೊಮ್ಮೆ ಓದಿ…!

    ಇದೊಂದು ಭಯಾನಕ ಸುದ್ದಿ.  ಎಲ್ಲರೂ ಭಹಯಬೀಳುವಂತಹ  ಸುದ್ದಿಯೇ. ಹೆಬ್ಬಾವೊಂದು ಮನೆಯೊಳಗಿನ ಶೌಚಾಲಯದಲ್ಲಿ ಇಲಿ ಬೇಟೆಯಾಡಿದಂತಹ ದಿಗಿಲುಗೊಳ್ಳುವಂತಹ ಸಂಗತಿ. ಇದು ನಡೆದಿರುವುದು ಆಸ್ಟ್ರೇಲಿಯಾದ ಕೈನ್ಸ್‌ನಲ್ಲಿ. ಇಲ್ಲಿನ ಜನ್ನಾ ಎಂಗ್ಲರ್ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಇವರಿಗೆ ಶೌಚಾಲಯದೊಳಗೆ ಏನೋ ಶಬ್ದ ಆದಂತೆ  ಕಂಡಿತು. ತಕ್ಷಣ ಏನದು ಎಂದು ನೋಡಿದಾಗ ಅಲ್ಲಿನ  ದೃಶ್ಯವನ್ನು ಕಂಡು ಇವರು ಒಂದು ಕ್ಷಣ ಭಯಬೀತರಾಗಿದ್ದರು. ಯಾಕೆಂದರೆ, ಶೌಚಾಲಯದೊಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಇಲಿ ಬೇಟೆಯಲ್ಲಿ ತೊಡಗಿತ್ತು….

  • ಸುದ್ದಿ

    ರೈಲ್ವೇ ಆಸ್ಪತ್ರೆಯಲ್ಲಿ ಕೇವಲ ಒಂದು ರೂಪಾಯಿಗೆ ಹೆರಿಗೆ ಮಾಡಿದ ವೈದ್ಯರು..ನಿಜಕ್ಕೂ ಅಚ್ಚರಿಯೇ ಹೌದು….!

    ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಿಗ್ಗೆ ಮುಂಬೈನಲ್ಲಿ ನಡೆದಿದೆ. ಮುಂಬೈನ 1 ರೂಪಾಯಿ ಕ್ಲಿನಿಕ್ ಮಹಿಳೆಯ ನೆರವಿಗೆ ಬಂದಿದೆ. ಕರ್ಜನತ್ ನಿಂದ ಪರೇಲ್ ಗೆ ಹೊರಟಿದ್ದ ಸುಭಂತಿ ಪಾತ್ರಾ ಅವರಿಗೆ ಥಾಣೆಯ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಒಂದು ರೂಪಾಯಿ ಚಿಕಿತ್ಸಾಲಯದ ಕಾರ್ಯನಿರ್ವಹಣಾಧಿಕಾರಿ  ಡಾ ರಾಹುಲ್ ಗುಳೆ ತಿಳಿಸಿದ್ದಾರೆ. ಸುಮಾರು 35 ಕಿ.ಮೀ. ದೂರದ ಊರಿಗೆ ಪ್ರಯಾಣಿಸುವಷ್ಟರಲ್ಲಿ ಸುಭಂತಿಗೆ ಹೆರಿಗೆ ನೋವು…