News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ರಾಜಕೀಯ

ಅಂದು ಈ ಯುವಕನ ಭಾಷಣದಿಂದ,ಪ್ರಧಾನಿ ಮೋದಿ ಮತ್ತು ಗುಜರಾತ್ ಸರ್ಕಾರವೇ ಶೇಕ್ ಆಗಿತ್ತು..!

1494

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಇಡೀ ದೇಶದಲ್ಲಿ ಪ್ರಖರವಾದ ಭಾಷಣ ಮಾಡಿ ಜನರನ್ನ ಸೆಳೀತಿದ್ದ ವ್ಯಕ್ತಿ ಅಂದ್ರೆ ಪ್ರಧಾನಿ ನರೇಂದ್ರ ಮೋದಿ. ತಮ್ಮ ಮೊನಚು ಮಾತುಗಳಿಂದಲೇ ಜನರ ಮನ ಗೆದ್ದು ತಮ್ಮ ಬಹುಮತದಿಂದ, ಯಾವ ಪಕ್ಷಗಳ ಸಹಾಯವಿಲ್ಲದೆ ಅಧಿಕಾರದ ಗದ್ದುಗೆ ಏರಿದ ಜಾದುಗಾರ.

ಆದ್ರೀಗ ಮೋದಿಗಿಂತಲೂ ಪ್ರಖರವಾದ ಮಾತಿನ ಮೋಡಿಗಾರ ಅದೇ ಗುಜರಾತ್​ ನೆಲದಲ್ಲಿ ಜನ್ಮ ತಾಳಿದ್ದಾನೆ. ಇವನು ಗುಜರಾತ್​ನಲ್ಲಿ ದೊಡ್ಡ ಮಟ್ಟದ ಕ್ರಾಂತಿ ಮಾಡೋ ಮೂಲಕ ದೇಶಾದ್ಯಂತ ಮಿಂಚಿನ ಸಂಚಲನ ಮೂಡಿಸಿದ್ದಾನೆ.

ಆತನನೇ ಹಾರ್ದಿಕ್ ಪಟೇಲ್​.. ಪಟೇಲ್ ಸಮುದಾಯದ ವ್ಯಕ್ತಿ. ಈತನ ವಯಸ್ಸು ವಯಸ್ಸು ಎಷ್ಟು ಗೊತ್ತಾ. ಈಗ ಕೇವಲ 24 ವರ್ಷ ಅಷ್ಟೇ. ಆದ್ರೆ ಈ ಯುವಕನ ಒಂದು ಭಾಷಣದ ಕರೆಗೆ ಓಗೊಟ್ಟು ಅಹಮದಾಬಾದ್​​ನಲ್ಲಿ ಜನಸಾಗರವೇ ಸೇರಿತ್ತು.

ಹಾರ್ದಿಕ್ ಪಟೇಲ್ ಭಾಷಣ ಹೇಗಿತ್ತೆಂದ್ರೆ, ಆತನ ಭಾಷಣ ಕೇಳೋದಕ್ಕೆ ಬಂದ ಜನರು ಜಾಗ ಸಾಕಾಗದೇ ನಡು ರಸ್ತೆಯಲ್ಲಿ ನಿಂತು, ಫ್ಲೈ ಓವರ್​ಗಳ ಮೇಲೆ ನಿಂತು, ಹಾರ್ದಿಕ್ ಪಟೇಲ್​ರ ಭಾಷಣ ಕೇಳ್ತಿದ್ರು.

ಈ ನವಯುವಕನ ಕ್ರಾಂತಿಕಾರಿ ಹೆಜ್ಜೆಯನ್ನ ನೋಡಿ ಗುಜರಾತ್​ ಸರ್ಕಾರಾನೇ ಶೇಕ್ ಆಗಿತ್ತು. ಅಷ್ಟೇ ಅಲ್ಲ, ಮೋದಿ ಹುಟ್ಟಿದ ನಾಡಲ್ಲೇ, ಮೋದಿಯನ್ನೇ ಅಲುಗಾಡಿಸೋ ಶಕ್ತಿಯಾಗಿ ಗುಜರಾತ್​ನಲ್ಲಿ ನೆಲೆಯೂರಿದ್ದಾರೆ.

ತಮ್ಮ ಭಾಷಣದಿಂದಲೇ ಜನರನ್ನು ಎತ್ತಿ ಕಟ್ಟಿದ್ದು ಹಾರ್ದಿಕ್ ಪಟೇಲ್’ರನ್ನು ಪರಿಸ್ಥಿತಿ ವಿಕೋಪಕ್ಕೆ ಪೊಲಿಸ್ರು ಬಂಧಿಸ್ತಾರೆ. ಹಾರ್ದಿಕ್ ಪಟೇಲ್​ರನ್ನ ಬಂಧಿಸಿದ್ರು. ಪ್ರತಿಭಟನೆ ನಿಲ್ಲುತ್ತೆ ಅಂತ ಎಲ್ರೂ ಅಂದುಕೊಂಡಿದ್ರು..

ಆದ್ರೆ ಹಾಗೆ ಆಗ್ಲೇ ಇಲ್ಲ. ಪೊಲೀಸರು ಹಾರ್ದಿಕ್ ಪಟೇಲ್ರನ್ನ ಬಂಧಿಸಿದ ನಂತರ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ತು.. ಪಟೇಲ್​ ಬೆಂಬಲಿಗರು ಎಲ್ಲೆಡೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ರು. ಗುಜರಾತ್​ ಗೃಹಸಚಿವರ ಮನೆಗೆ ಮುತ್ತಿಗೆ ಹಾಕಿದ್ರು..ಪರಿಣಾಮ ಗುಜರಾತ್​ನಾದ್ಯಂತ ಬಂದ್ ಮಾಡಲಾಯಿತು.

ಈ ಹಾರ್ದಿಕ್ ಪಟೇಲ್​ ಯಾರು ಗೊತ್ತಾ?

ಗುಜರಾತ್​ನಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿ, ಗುಜರಾತ್​ ಸರ್ಕಾರವನ್ನೇ ಗಡ ಗಡ ಅಂತ ಅಲುಗಾಡಿಸಿದ್ದ ಇವರು ಪ್ರಧಾನಿ ನರೇಂದ್ರ ಮೋದಿಗೂ ನುಂಗಲಾರದ ಬಿಸಿ ತುಪ್ಪವಾಗಿದ್ದರು. ಗುಜರಾತ್​ ಜನರನ್ನು ಒಗ್ಗೂಡಿಸಿ, ಮೋದಿ ನೆಲದಲ್ಲೇ ಮೋದಿಗೆ ಸಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದಿದ್ದರು ಈ ಹಾರ್ದಿಕ್ ಪಟೇಲ್​.

ಇವರು 1993 ರಲ್ಲಿ, ಗುಜರಾತ್​ನ ಅಹಮದಾಬಾದ್​ನಲ್ಲಿರೋ ವಿರಾಂಗಾಂ ಅನ್ನೋ ಗ್ರಾಮದಲ್ಲಿ  ಇವರ​ ಜನ್ಮವಾಯಿತು. ಹಾರ್ದಿಕ್ ಪಟೇಲ್ ತಂದೆ ಭಾರತೀಭಾಯ್ ಪಟೇಲ್. ಇವರು​ ಬಿಜೆಪಿಯ ಕಾರ್ಯಕರ್ತರಾಗಿದ್ದರು. ಸಣ್ಣದೊಂದು ನೀರಿನ ವ್ಯಾಪಾರದ ಮೂಲಕ ಬದುಕಿನ ಬಂಡಿ ಸಾಗಿದ್ತಾ ಇತ್ತು ಹಾರ್ದಿಕ್ ಕುಟುಂಬ.

ಹಾರ್ದಿಕ್ ತಮ್ಮ ಪ್ರಾಥಮಿಕ ಶಿಕ್ಷಣವನ್ನ ವೀರಾಂಗಾಂ ಅನ್ನೋ ಊರಿನಲ್ಲೇ ಮುಗಿಸಿ, ಇದಾದ ನಂತರ,  ಬಿಕಾಂ ಪದವಿಯನ್ನೂ ಪಡ್ಕೋತಾರೆ. ಇದೇ ವೇಳೆ ಸರ್ದಾರ್​ ವಲ್ಲಭಾಯ್ ಪಟೇಲ್ ಗ್ರೂಪ್ಸ್​​ ಹೆಸರಿನ ಸಂಘಟನೆಗೆ ಸೇರಿಕೊಳ್ತಾರೆ.

ಆದ್ರೆ ಕೆಲವು ಕಾರಣಗಳಿಂದ, ತಮಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಅಂತ ಹೇಳಿ, 2011 ರಲ್ಲಿ ಆ ಸಂಘಟನೆಯನ್ನು ಬಿಟ್ಟು 2015 ರ ಜುಲೈನಲ್ಲಿ ಪಾಟಿದಾರ್​ ​ಅನಾಮತ್ ಆಂದೋಲನ್​ ಸಮಿತಿ ಅನ್ನೋ ಹೊಸ ಸಂಘಟನೆಯನ್ನು ಶುರು ಮಾಡ್ತಾರೆ. ಹಳ್ಳಿ ಹಳ್ಳಿಗೆ ಹೋಗಿ, ಪಟೇಲ್​ ಸಮುದಾಯದ ಬಗ್ಗೆ ಜಾಗೃತಿ ಮೂಡಿಸ್ತಾರೆ.

ಈ ಹಾರ್ದಿಕ್ ಪಟೇಲ್​ ಪಟೇಲ್ ಗುಜರಾತ್ನಲ್ಲಿ ಹಿರೋ ಆಗಿದ್ದು ಹೇಗೆ ಗೊತ್ತಾ?

ಗುಜರಾತ್​ನ ಅಹಮದಾಬಾದ್​ನಲ್ಲಿ, ಆಗಸ್ಟ್​ 17, 2015 ನೇ ತಾರೀಕು  ಒಂದು ಬೃಹತ್​ ಸಮಾವೇಶವನ್ನ ಮಾಡ್ತಾರೆ. ಆ ಸಮಾವೇಶದಲ್ಲಿ ತಮ್ಮ ಮೊನಚು ಮಾತುಗಳಿಂದ ರಾಜಕೀಯ ಪಕ್ಷಗಳನ್ನ ತಿವೀತಾರೆ. ಈ ಭಾಷಣ ​ಹಾರ್ದಿಕ್ ಪಟೇಲ್​ರನ್ನ​ ರಾತ್ರೋ ರಾತ್ರಿ ಹೀರೋ ಮಾಡಿಬಿಟ್ಟಿತ್ತು..

ಅವರ ಭಾಷಣ ಹೇಗಿತ್ತೆಂದ್ರೆ, ನಿಮ್ಮಲ್ಲಿ ನಾವು ಭಿಕ್ಷೆ ಬೇಡುತ್ತಿಲ್ಲ. ಮೀಸಲಾತಿ ಪಡೆಯುವುದು ನಮ್ಮ ಅಧಿಕಾರ. ಇಲ್ಲದಿದ್ದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಪಟೇಲ್ ಹಿತ ಕಾಯುವವರು ಮಾತ್ರ ಪಟೇಲರನ್ನು ಆಳಬೇಕು. ದೇಶದ ಯುವಕರು ಬೀದಿಯಲ್ಲಿ ನಿಂತು ಹಕ್ಕಿಗಾಗಿ ಒತ್ತಾಯಿಸಿದಾಗ ಹಕ್ಕು ನೀಡದಿದ್ದರೆ, ನಕ್ಸಲೈಟ್, ಭಯೋತ್ಪಾದಕರಾಗುತ್ತಾರೆ. ಹೀಗೆ ತಮ್ಮ ಮೊನಚಾದ ಭಾಷಣದಿಂದ ಅಂದು ಇಡೀ ಗುಜರಾತ್ ಜನರನ್ನು ತನ್ನತ್ತ ಸೆಳೆದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು

    ಸಾಮಾಜಿಕ ತಾಣಗಳಾದ ವಾಟ್ಸ್ ಅಪ್ ಮತ್ತು ಅಂತರ್ಜಾಲದಲ್ಲಿ ಕೊರೋನಾ ವೈರಸ್ ಕುರಿತಂತೆ ಹಲವು ಸಂಗತಿಗಳು ಹರಡುತ್ತಿವೆ. ಇವುಗಳಲ್ಲಿ ಕೆಲವು ನಿಜವಾದರೆ, ಹಲವು ಮಾಹಿತಿಗಳು ಆಧಾರರಹಿತವಾಗಿವೆ. ಯಾವಾಗ ಕರೊನಾ ಮಹಾಮಾರಿ ವಿಶ್ವದಾದ್ಯಂತ ಹಬ್ಬಲು ಆರಂಭಿಸಿದೆಯೋ ಆ ಸಂದರ್ಭದಲ್ಲಿ ಈ ಮಾರಕ ವೈರಾಣುವಿಗೆ ಸಂಬಂಧಿಸಿದಂತಹ ವಿಚಾರ ತಿಳಿಯುವುದು ಅಷ್ಟೇ ಮಹತ್ವದ್ದಾಗಿದೆ. ವಿಜ್ಞಾನ ಪ್ರಸಾರದ ಹಿರಿಯ ವಿಜ್ಞಾನಿ ಡಾ. ಟಿ.ವಿ. ವೆಂಕಟೇಶ್ವರನ್ ಈ ವೈರಸ್ ಕುರಿತ ಸಂಶೋಧನೆಯ ಬಳಿಕ ನಮಗೆ ಹಲವು ಫಲಶ್ರುತಿಗಳನ್ನು ತಿಳಿಯಪಡಿಸಿದ್ದಾರೆ. ಸೋಂಕು: ಈ ವೈರಾಣು ಗಂಟಲು ಮತ್ತು ಶ್ವಾಸಕೋಶದಲ್ಲಿನ…

  • ಸುದ್ದಿ

    ಪೊಲೀಸರ ನಿರ್ಲಕ್ಷ್ಯ. ಪಾಕ್ ಪರ ಘೋಷಣೆ ಕೂಗಿದ್ದ ದೇಶದ್ರೋಹಿ ವಿದ್ಯಾರ್ಥಿಗಳ ಬಿಡುಗಡೆ!ಕಿಡಿಕಾರಿದ ವಕೀಲರು.

    ಪಾಕ್ ಪರವಾಗಿ ಘೋಷಣೆಯನ್ನು ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಇಂದು ಜಾಮೀನು ನೀಡಿದೆ. ಹೌದು ಹುಬ್ಬಳಿಯ ನ್ಯಾಯಾಲಯ ಜೆಎಂಎಫ್‍ಸಿ-2 ಇಂದು ಜಾಮೀನಿನ ಮೇಲೆ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದೆ. ಇದು ಪೋಲೀಸರ ನಿರ್ಲ್ಯಕ್ಷ ಹಾಗೂ ಇವರ ಸೋಮಾರಿತನದಿಂದ ದೇಶದ್ರೋಹಿ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಜಾಮೀನಿನ ಮುಖಾಂತರ ಹೊರಗಡೆ ಬಂದಿದ್ದಾರೆ ಇದರ ವಿರುದ್ಧ ವಕೀಲ ಸಂಘದ ಅಧ್ಯಕ್ಷ ಅಶೋಕ್ ಕಿಡಿಕಾರಿದ್ದಾರೆ. ಹುಬ್ಬಳಿ ಗ್ರಾಮೀಣದ ಪೊಲೀಸರು ಸರಿಯಾದ ಸಮಯಕ್ಕೆ ಚಾರ್ಜ್ ಶೀಟ್ ಸಲ್ಲಿಸದೇ ಇರುವ ಕಾರಣ ನ್ಯಾಯಾಲಯ ದೇಶ…

  • ಸುದ್ದಿ

    ಬಿಗ್ ಶಾಕಿಂಗ್!ತರಗತಿಯಲ್ಲೇ ಕುಡಿದು ರಂಪಾಟ ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿನಿಯರು…

    ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಕ್ಲಾಸ್ ರೂಂನಲ್ಲಿ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಜಯವಾಡ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ ಸೇವನೆ ಮಾಡಿ ಕುಡಿದಿದ್ದಾರೆ. ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್ ಬೆರೆಸಿಕೊಂಡು ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುವಾಗಲೇ ಸೇವಿಸಿದ್ದಾರೆ. ಮದ್ಯ ಸೇವನೆ ಬಳಿಕ ತರಗತಿಯಲ್ಲಿ ತೂರಾಡುತ್ತಾ ಏನೇನೋ ಮಾತನಾಡಲು…

  • ಸಿನಿಮಾ

    ದನದ ಮಾಂಸ ತಿನ್ನುತ್ತಿದ್ದ, ಯಾರಿಗೆ ಟೀ ತಂದುಕೊಡುತ್ತಿದ್ದ ಅಂತ ಗೊತ್ತಿದೆ ಅಂತ ದರ್ಶನ್ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ..!

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದು, ಅವರ ಬೆಂಬಲಕ್ಕೆ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ನಿಂತಿದ್ದಾರೆ. ಅದರಲ್ಲೂ ದರ್ಶನ್ ಹಾಗೂ ಯಶ್ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದು, ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಗೆಲುವಿಗೆ ಇದು ಅಡ್ಡಗಾಲಾಗಬಹುದೆಂಬ ಆತಂಕ…

  • ಸುದ್ದಿ

    ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ನೂರಾರು ಎಕರೆ ಬೆಳೆ ನಾಶ…!

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಹಂತದ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾಳಾಗಿದೆ. ರಾಯಚೂರಿನ ಗೋನಾಳ ಬಳಿ ನಿರ್ಮಾಣ ಹಂತದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆಗೆ ನೀರನ್ನು ಹರಿಸಿರುವುದರಿಂದ ಹತ್ತಿ, ತೊಗರಿ ಸೇರಿ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ 126 ಕಿ.ಮೀ ನಿಂದ 186 ಕಿ.ಮೀ ವರೆಗಿನ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಇನ್ನೂ ನಡೆದಿದೆ. ಅಧಿಕಾರಿಗಳು ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ…