ರಾಜಕೀಯ

ಅಂದು ಈ ಯುವಕನ ಭಾಷಣದಿಂದ,ಪ್ರಧಾನಿ ಮೋದಿ ಮತ್ತು ಗುಜರಾತ್ ಸರ್ಕಾರವೇ ಶೇಕ್ ಆಗಿತ್ತು..!

1483

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಇಡೀ ದೇಶದಲ್ಲಿ ಪ್ರಖರವಾದ ಭಾಷಣ ಮಾಡಿ ಜನರನ್ನ ಸೆಳೀತಿದ್ದ ವ್ಯಕ್ತಿ ಅಂದ್ರೆ ಪ್ರಧಾನಿ ನರೇಂದ್ರ ಮೋದಿ. ತಮ್ಮ ಮೊನಚು ಮಾತುಗಳಿಂದಲೇ ಜನರ ಮನ ಗೆದ್ದು ತಮ್ಮ ಬಹುಮತದಿಂದ, ಯಾವ ಪಕ್ಷಗಳ ಸಹಾಯವಿಲ್ಲದೆ ಅಧಿಕಾರದ ಗದ್ದುಗೆ ಏರಿದ ಜಾದುಗಾರ.

ಆದ್ರೀಗ ಮೋದಿಗಿಂತಲೂ ಪ್ರಖರವಾದ ಮಾತಿನ ಮೋಡಿಗಾರ ಅದೇ ಗುಜರಾತ್​ ನೆಲದಲ್ಲಿ ಜನ್ಮ ತಾಳಿದ್ದಾನೆ. ಇವನು ಗುಜರಾತ್​ನಲ್ಲಿ ದೊಡ್ಡ ಮಟ್ಟದ ಕ್ರಾಂತಿ ಮಾಡೋ ಮೂಲಕ ದೇಶಾದ್ಯಂತ ಮಿಂಚಿನ ಸಂಚಲನ ಮೂಡಿಸಿದ್ದಾನೆ.

ಆತನನೇ ಹಾರ್ದಿಕ್ ಪಟೇಲ್​.. ಪಟೇಲ್ ಸಮುದಾಯದ ವ್ಯಕ್ತಿ. ಈತನ ವಯಸ್ಸು ವಯಸ್ಸು ಎಷ್ಟು ಗೊತ್ತಾ. ಈಗ ಕೇವಲ 24 ವರ್ಷ ಅಷ್ಟೇ. ಆದ್ರೆ ಈ ಯುವಕನ ಒಂದು ಭಾಷಣದ ಕರೆಗೆ ಓಗೊಟ್ಟು ಅಹಮದಾಬಾದ್​​ನಲ್ಲಿ ಜನಸಾಗರವೇ ಸೇರಿತ್ತು.

ಹಾರ್ದಿಕ್ ಪಟೇಲ್ ಭಾಷಣ ಹೇಗಿತ್ತೆಂದ್ರೆ, ಆತನ ಭಾಷಣ ಕೇಳೋದಕ್ಕೆ ಬಂದ ಜನರು ಜಾಗ ಸಾಕಾಗದೇ ನಡು ರಸ್ತೆಯಲ್ಲಿ ನಿಂತು, ಫ್ಲೈ ಓವರ್​ಗಳ ಮೇಲೆ ನಿಂತು, ಹಾರ್ದಿಕ್ ಪಟೇಲ್​ರ ಭಾಷಣ ಕೇಳ್ತಿದ್ರು.

ಈ ನವಯುವಕನ ಕ್ರಾಂತಿಕಾರಿ ಹೆಜ್ಜೆಯನ್ನ ನೋಡಿ ಗುಜರಾತ್​ ಸರ್ಕಾರಾನೇ ಶೇಕ್ ಆಗಿತ್ತು. ಅಷ್ಟೇ ಅಲ್ಲ, ಮೋದಿ ಹುಟ್ಟಿದ ನಾಡಲ್ಲೇ, ಮೋದಿಯನ್ನೇ ಅಲುಗಾಡಿಸೋ ಶಕ್ತಿಯಾಗಿ ಗುಜರಾತ್​ನಲ್ಲಿ ನೆಲೆಯೂರಿದ್ದಾರೆ.

ತಮ್ಮ ಭಾಷಣದಿಂದಲೇ ಜನರನ್ನು ಎತ್ತಿ ಕಟ್ಟಿದ್ದು ಹಾರ್ದಿಕ್ ಪಟೇಲ್’ರನ್ನು ಪರಿಸ್ಥಿತಿ ವಿಕೋಪಕ್ಕೆ ಪೊಲಿಸ್ರು ಬಂಧಿಸ್ತಾರೆ. ಹಾರ್ದಿಕ್ ಪಟೇಲ್​ರನ್ನ ಬಂಧಿಸಿದ್ರು. ಪ್ರತಿಭಟನೆ ನಿಲ್ಲುತ್ತೆ ಅಂತ ಎಲ್ರೂ ಅಂದುಕೊಂಡಿದ್ರು..

ಆದ್ರೆ ಹಾಗೆ ಆಗ್ಲೇ ಇಲ್ಲ. ಪೊಲೀಸರು ಹಾರ್ದಿಕ್ ಪಟೇಲ್ರನ್ನ ಬಂಧಿಸಿದ ನಂತರ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ತು.. ಪಟೇಲ್​ ಬೆಂಬಲಿಗರು ಎಲ್ಲೆಡೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ರು. ಗುಜರಾತ್​ ಗೃಹಸಚಿವರ ಮನೆಗೆ ಮುತ್ತಿಗೆ ಹಾಕಿದ್ರು..ಪರಿಣಾಮ ಗುಜರಾತ್​ನಾದ್ಯಂತ ಬಂದ್ ಮಾಡಲಾಯಿತು.

ಈ ಹಾರ್ದಿಕ್ ಪಟೇಲ್​ ಯಾರು ಗೊತ್ತಾ?

ಗುಜರಾತ್​ನಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿ, ಗುಜರಾತ್​ ಸರ್ಕಾರವನ್ನೇ ಗಡ ಗಡ ಅಂತ ಅಲುಗಾಡಿಸಿದ್ದ ಇವರು ಪ್ರಧಾನಿ ನರೇಂದ್ರ ಮೋದಿಗೂ ನುಂಗಲಾರದ ಬಿಸಿ ತುಪ್ಪವಾಗಿದ್ದರು. ಗುಜರಾತ್​ ಜನರನ್ನು ಒಗ್ಗೂಡಿಸಿ, ಮೋದಿ ನೆಲದಲ್ಲೇ ಮೋದಿಗೆ ಸಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದಿದ್ದರು ಈ ಹಾರ್ದಿಕ್ ಪಟೇಲ್​.

ಇವರು 1993 ರಲ್ಲಿ, ಗುಜರಾತ್​ನ ಅಹಮದಾಬಾದ್​ನಲ್ಲಿರೋ ವಿರಾಂಗಾಂ ಅನ್ನೋ ಗ್ರಾಮದಲ್ಲಿ  ಇವರ​ ಜನ್ಮವಾಯಿತು. ಹಾರ್ದಿಕ್ ಪಟೇಲ್ ತಂದೆ ಭಾರತೀಭಾಯ್ ಪಟೇಲ್. ಇವರು​ ಬಿಜೆಪಿಯ ಕಾರ್ಯಕರ್ತರಾಗಿದ್ದರು. ಸಣ್ಣದೊಂದು ನೀರಿನ ವ್ಯಾಪಾರದ ಮೂಲಕ ಬದುಕಿನ ಬಂಡಿ ಸಾಗಿದ್ತಾ ಇತ್ತು ಹಾರ್ದಿಕ್ ಕುಟುಂಬ.

ಹಾರ್ದಿಕ್ ತಮ್ಮ ಪ್ರಾಥಮಿಕ ಶಿಕ್ಷಣವನ್ನ ವೀರಾಂಗಾಂ ಅನ್ನೋ ಊರಿನಲ್ಲೇ ಮುಗಿಸಿ, ಇದಾದ ನಂತರ,  ಬಿಕಾಂ ಪದವಿಯನ್ನೂ ಪಡ್ಕೋತಾರೆ. ಇದೇ ವೇಳೆ ಸರ್ದಾರ್​ ವಲ್ಲಭಾಯ್ ಪಟೇಲ್ ಗ್ರೂಪ್ಸ್​​ ಹೆಸರಿನ ಸಂಘಟನೆಗೆ ಸೇರಿಕೊಳ್ತಾರೆ.

ಆದ್ರೆ ಕೆಲವು ಕಾರಣಗಳಿಂದ, ತಮಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಅಂತ ಹೇಳಿ, 2011 ರಲ್ಲಿ ಆ ಸಂಘಟನೆಯನ್ನು ಬಿಟ್ಟು 2015 ರ ಜುಲೈನಲ್ಲಿ ಪಾಟಿದಾರ್​ ​ಅನಾಮತ್ ಆಂದೋಲನ್​ ಸಮಿತಿ ಅನ್ನೋ ಹೊಸ ಸಂಘಟನೆಯನ್ನು ಶುರು ಮಾಡ್ತಾರೆ. ಹಳ್ಳಿ ಹಳ್ಳಿಗೆ ಹೋಗಿ, ಪಟೇಲ್​ ಸಮುದಾಯದ ಬಗ್ಗೆ ಜಾಗೃತಿ ಮೂಡಿಸ್ತಾರೆ.

ಈ ಹಾರ್ದಿಕ್ ಪಟೇಲ್​ ಪಟೇಲ್ ಗುಜರಾತ್ನಲ್ಲಿ ಹಿರೋ ಆಗಿದ್ದು ಹೇಗೆ ಗೊತ್ತಾ?

ಗುಜರಾತ್​ನ ಅಹಮದಾಬಾದ್​ನಲ್ಲಿ, ಆಗಸ್ಟ್​ 17, 2015 ನೇ ತಾರೀಕು  ಒಂದು ಬೃಹತ್​ ಸಮಾವೇಶವನ್ನ ಮಾಡ್ತಾರೆ. ಆ ಸಮಾವೇಶದಲ್ಲಿ ತಮ್ಮ ಮೊನಚು ಮಾತುಗಳಿಂದ ರಾಜಕೀಯ ಪಕ್ಷಗಳನ್ನ ತಿವೀತಾರೆ. ಈ ಭಾಷಣ ​ಹಾರ್ದಿಕ್ ಪಟೇಲ್​ರನ್ನ​ ರಾತ್ರೋ ರಾತ್ರಿ ಹೀರೋ ಮಾಡಿಬಿಟ್ಟಿತ್ತು..

ಅವರ ಭಾಷಣ ಹೇಗಿತ್ತೆಂದ್ರೆ, ನಿಮ್ಮಲ್ಲಿ ನಾವು ಭಿಕ್ಷೆ ಬೇಡುತ್ತಿಲ್ಲ. ಮೀಸಲಾತಿ ಪಡೆಯುವುದು ನಮ್ಮ ಅಧಿಕಾರ. ಇಲ್ಲದಿದ್ದರೆ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಪಟೇಲ್ ಹಿತ ಕಾಯುವವರು ಮಾತ್ರ ಪಟೇಲರನ್ನು ಆಳಬೇಕು. ದೇಶದ ಯುವಕರು ಬೀದಿಯಲ್ಲಿ ನಿಂತು ಹಕ್ಕಿಗಾಗಿ ಒತ್ತಾಯಿಸಿದಾಗ ಹಕ್ಕು ನೀಡದಿದ್ದರೆ, ನಕ್ಸಲೈಟ್, ಭಯೋತ್ಪಾದಕರಾಗುತ್ತಾರೆ. ಹೀಗೆ ತಮ್ಮ ಮೊನಚಾದ ಭಾಷಣದಿಂದ ಅಂದು ಇಡೀ ಗುಜರಾತ್ ಜನರನ್ನು ತನ್ನತ್ತ ಸೆಳೆದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಈ ದೇವಸ್ಥಾನದಲ್ಲಿ ದೇವರಿಗೆ ಕೊಡೋ ಕಾಣಿಕೆ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..?ಏನದು..?ಮುಂದೆ ಓದಿ…

    ಹಿಂದೂ ರಾಷ್ರ ಭಾರತದಲ್ಲಿ ದೇವಾಲಯಗಳು, ಭಾರತದ ಜನರ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿವೆ.ಭಾರತದಲ್ಲಿ ಎಲ್ಲಿ ಹೋದರು ದೇವಾಲಯಗಳ ಕಾಣಸಿಗುತ್ತವೆ. ಜನ ಎಷ್ಟೇ ಕಷ್ಟ ಸುಖಗಳಿದ್ದರೂ ಮನಸ್ಸಿನ ನೆಮ್ಮದಿಗಾಗಿ ದೇವಾಲಯಗಳಿಗೆ ಹೋಗುತ್ತಾರೆ.

  • ಸುದ್ದಿ

    ಅವನ್ಯಾವನೋ ಯಶ್ ಅಂತೆ.. ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಇಲ್ಲದಿದ್ದರೆ ಯಶ್ ಗತಿ? ಎಂದು HDKಯಿಂದ ಧಮಕಿ..!

    ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ. ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ. ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ…

  • ಉಪಯುಕ್ತ ಮಾಹಿತಿ

    ವಾರದಲ್ಲಿ ಯಾವದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ wha ಈ ಪ್ರಪಂಚ ವಿಭಿನ್ನವಾದ…

  • ಸುದ್ದಿ

    ಬರ್ಗರ್ ತಿಂದ ತಕ್ಷಣವೇ ಆಟೋ ಚಾಲಕನ ಬಾಯಿಂದ ರಕ್ತ ಹೊರಬಂತು…ಕಾರಣ?

    ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್‍ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್‍ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು. ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ…

  • ವಿಸ್ಮಯ ಜಗತ್ತು

    ಚಿಕ್ಕ ರಂದ್ರ ಮಾಡಿ ವೀರ್ಯವನ್ನು ತುಂಬಿದ 21 ದಿನಗಳ ನಂತರ ಹೊರಬಂದದ್ದು ಏನ್ ಅಂತ ತಿಳಿದರೆ ಬೆಚ್ಚಿ ಬಿಳ್ತೀರಾ

    ಪ್ರತಿದಿನ ನಾವು ಯಾವುದಾದರೊಂದು ಪ್ರಯೋಗಳನ್ನು ಮಾಡುತ್ತಿರುತ್ತಾರೆ ವಿಧವಿಧವಾದ ವಸ್ತುಗಳ ಮೇಲೆ ಪ್ರಯೋಗಗಳನ್ನು ಮಾಡುತ್ತಾರೆ. ಕೆಲವರು ಮನುಷ್ಯರ ಮೇಲೆ ಪ್ರಯೋಗ ಮಾಡಿದರೆ ಇನ್ನು ಕೆಲವರು ಮನುಷ್ಯನರ ಆಲೋಚನೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ಪ್ರಯೋಗ ಮಾಡುವ ಕೆಲವರು ವಿಚಿತ್ರವಾದ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ರೀತಿಯ ವಿಚಿತ್ರ ಪ್ರಯೋಗಗಳಲ್ಲಿ ಒಂದು ನಾವು ತಿಳಿಸಿಕೊಡುತ್ತೇವೆ ನೋಡಿ. ಒಬ್ಬ ವ್ಯಕ್ತಿಗೆ ಪ್ರಯೋಗಗಳ ಮೇಲೆ ಅವುಗಳನ್ನು ಮಾಡುವುದರ ಮೇಲೆ ತುಂಬಾ ಹುಚ್ಚು ಆಸಕ್ತಿ ಹುಚ್ಚು ಎಷ್ಟರ ಮಟ್ಟಿಗೆ ಇದೆ ಅಂದರೆ ಕೋಳಿ ಮೊಟ್ಟೆಯಲ್ಲಿ ಮನುಷ್ಯರನ್ನು ಹುಟ್ಟಿಸಬೇಕು…

  • ಆಧ್ಯಾತ್ಮ

    ಶ್ರೀ ಲಲಿತಾಸಹಸ್ರನಾಮ ಸ್ತೋತ್ರಂ ಅರ್ಥ

    ಪಂಡಿತ್ ರಾಘವೇಂದ್ರ ಸ್ವಾಮಿಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whatಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ…