ಆಧ್ಯಾತ್ಮ

ವಿಷ್ಣು ಸ್ವರೂಪನಾದ ಶ್ರೀ ಪಾಂಡುರಂಗ ವಿಠಲ ಭಕ್ತಿ ಪಂಥ.

By admin

November 21, 2019

ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what

ವಿಷ್ಣು ಸ್ವರೂಪದ ಪ್ರಮುಖ ವರ್ಗೀಕರಣಕ್ಕೆ ಸೇರಿಲ್ಲದಿದ್ದರೂ, ಅವುಗಳಷ್ಟೇ ಪ್ರಸಿದ್ಧವಾದ ಮತ್ತೊಂದು ಸ್ವರೂಪವೆಂದರೆ ವಿಠಲನದು. ಇವನನ್ನು ‘ನಾದಬ್ರಹ್ಮ’ ಸಂಗೀತ ಅಥವಾ ನಾದದ ಅಧಿಪತಿಯಾದ ವಿಠಲ ಅಥವಾ ವಿಠೋಬ ಎಂದು ಕರೆಯುತ್ತಾರೆ. ವಿಷ್ಣುವಿನ ಮತ್ತೊಬ್ಬ ಪ್ರಸಿದ್ಧ ಭಕ್ತನಾದ ಪುಂಡಲೀಕ ಅಥವಾ ಪುಂಡರೀಕನಿಂದಾಗಿ ಅವನನ್ನು ಪಾಂಡುರಂಗ ವಿಠಲ ಎಂಬ ಹೆಸರಿನಿಂದ ಕರೆಯಲಾಗಿದೆ. ಇದು ವಿಷ್ಣುವಿನ ಮತ್ತೊಂದು ಏಕಮೂರ್ತಿ ಸ್ವರೂಪ. ಐತಿಹಾಸಿಕವಾಗಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ‘ಪಂಡರ್‍ಪುರ್’ ಅಥವಾ ‘ಪಂಡರಾಪುರ’ ಎಂಬಲ್ಲಿ ಮಾತ್ರ ಒಂದು ಪಾಂಡುರಂಗ ವಿಠಲನ ದೇವಸ್ಥಾನವಿದೆ. ಭೀಮಾ ನದಿಯ ಬಲದಂಡೆಯ ಮೇಲೆ ಈ ದೇಗುಲವಿದೆ. ಕೃಷ್ಣಾ ನದಿಯ ಉಪನದಿಯಾದ ಭೀಮಾ ನದಿಯನ್ನು ಪಂಡರಪುರದಲ್ಲಿ ‘ಚಂದ್ರಭಾಗ’ ನದಿಯೆಂದು ಕರೆಯುತ್ತಾರೆ.

ಪಾಂಡುರಂಗ ವಿಠ್ಠಲನ ನೆಲೆವೀಡಾದ ಪಂಡರಪುರ ಮಹಾರಾಷ್ಟ್ರದ ಪ್ರಮುಖ ಯಾತ್ರಾಸ್ಥಳ. ವಿಠ್ಠಲನ ಭಕ್ತರನ್ನು ವಾರ್ಕರಿ ಎಂದೇ ಕರೆಯುತ್ತಾರೆ. ಇವರು ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ.

ಇವರೆಲ್ಲ ತಮ್ಮ ತಮ್ಮ ಊರು, ಪಟ್ಟಣಗಳಿಂದ ಗುಂಪು ಗುಂಪಾಗಿ ಹೊರಟು ಭಕ್ತಿಗೀತೆ, ಅಭಂಗಗಳನ್ನು ಹಾಡುತ್ತ, ವಿಠ್ಠಲನ ನಾಮಸ್ಮರಣೆ ಮಾಡುತ್ತ ಪಂಡರಪುರ ತಲುಪಿ `ಆಷಾಢ ಏಕಾದಶಿ~ಯ ಪವಿತ್ರ ದಿನದಂದು ಪಾಂಡುರಂಗನ ದರ್ಶನ ಪಡೆಯುತ್ತಾರೆ.

ಭಕ್ತಿಯ ಉತ್ಕಟತೆ: ನಾಮಸ್ಮರಣ ಬಲದಿಂದಲೇ ಭಗವಂತನನ್ನು ಕಾಣಬಹುದು ಎಂಬ ಸಂದೇಶನೀಡಿದವನು ಪಾಂಡುರಂಗ. ಅದಕ್ಕೆಂದೇ, ಅಭಂಗಗಳು ಗಾಯನ, ಫುಗಡಿಯ ನೃತ್ಯ, ನಾಮಸ್ಮರಣೆ ಜಯಘೋಷ ಮುಗಿಲು ಮುಟ್ಟುತ್ತದೆ.

ಗುಪ್ತ ಹಾಗೂ ಬಗೆಹರಿದ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕರೆ ನೀಡಿ 9901077772 ಪಂಡಿತ್ ರಾಘವೇಂದ್ರ ಸ್ವಾಮಿ.