ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಂಬಾ ಸರ್ತಿ ಜೀವನದಲ್ಲಿ ನಮ್ಮನ್ನ ನಾವೇ ಕಡೆಗಾಣಿಸ್ಕೊತೀವಿ. ನಮ್ಮ ಮನೆಯೋರು ಕೂಡ ನಮ್ಮನ್ನ ಎಷ್ಟೋ ಸರ್ತಿ ನೀನು ಸೋಮಾರಿ, ಒಂದು ಕೆಲಸ ಕೂಡ ಗಮನ ಇಟ್ಟು ಮಾಡಲ್ಲಾ ಅಂತೆಲ್ಲಾ ಬೈತಿರ್ತರೆ.
ಆದ್ರೆ ತಮಾಷೆ ಏನಪ್ಪಾ ಅಂದ್ರೆ, ಇಲ್ಲಿರುವ ಕೆಲವು ಗುಣಗಳು ನಮ್ಮಲ್ಲಿದ್ರೆ, ವಿಜ್ಞಾನದ ಪ್ರಕಾರ ನಾವು ನಮಗಿಂತ, ನಾವಂದುಕೊಂಡಿರೋದಕ್ಕಿಂತ ಜಾಸ್ತಿ ಬುದ್ಧಿವಂತ್ರಂತೆ. ಅದು ಹೇಗೆ ಅಂತಿರಾ…..ಮುಂದೆ ಓದಿ
ನಿಮ್ಮಲ್ಲಿ ನೀವೂ ನಕ್ಕು, ನಿಮ್ಮ ಜೊತೆ ಇರೋರನ್ನೂ ನಗಿಸೊ ಸ್ವಭಾವ ಇದ್ದರೆ, ನಿಮ್ಮ ಮೆದುಳು ತುಂಬ ಚನ್ನಾಗಿ ಕೆಲಸ ಮಾಡುತ್ತೆ, ಚುರುಕಾಗಿದೆ ಅಂತ ಅರ್ಥ. 1990 ರಲ್ಲಿ ಮೈಕಲ್ ಎ. ಜಾನ್ ಹೇಳೊ ಪ್ರಕಾರ ನೀವು ಹಾಸ್ಯಭರಿತರಾಗಿದ್ರೆ, ನಿಮ್ಮಲ್ಲಿ ಪ್ರಾಬ್ಲಮ್ ಸಾಲ್ವಿಂಗ್ ಶಕ್ತಿ ಹೆಚ್ಚಂತೆ.
ನಿಮಗೆ ಎಲ್ಲರೂ ಟೆನ್ಷನ್ ಒಳ್ಳೇದಲ್ಲ ಅಂತ ಸುಮಾರ್ ಸರ್ತಿ ಹೇಳಿರ್ತಾರೆ. ಆದರೆ, ಸ್ಟ್ರೆಸ್ನ ಸರಿಯಾಗಿ ನಿಭಾಯಿಸಿದ್ರೆ ಅದರಿಂದ ತುಂಬ ಉಪಯೋಗ ಇದೆಯಂತೆ ಕಣ್ರಿ. ಈ ಸ್ಟ್ರೆಸ್ಸ್ ಲೆವಲ್ ಹಿತ – ಮಿತವಾಗಿದ್ರೆ, ನಮ್ಮ ಎಷ್ಟೋ ದಿನನಿತ್ಯದ ಕೆಲಸಗಳಿಗೆ ಸಹಾಯ ಆಗುತ್ತೆ. ಹಿಂಗೆ ಒಂದು ಸರ್ತಿ, ಇಸ್ರೇಲ್ ಅಲ್ಲಿ ಒಂದ್ಸಲ್ಪ ಜನಕ್ಕೆ ಕಂಪ್ಯೂಟರ್ ಲ್ಯಾಬಲ್ಲಿ ಏನೋ ನೋಡಿ ಅಂತ ಸುಳ್ಳು ಕಂಪ್ಯೂಟರ್ ವೈರಸ್ ಹಬ್ಬಿಸಿಬಿಟ್ರಂತೆ … ಅಲ್ಲಿದವ್ರು ಪಾಪ ಇದನ್ನ ತಾವೇ ಮಾಡಿದ್ದು ಅಂತ ಕಕ್ಕಾಬಿಕ್ಕಿ ಆಗಿ ಅದನ್ನ ಸರಿ ಮಾಡೋ ರೀತಿ ಯೋಚ್ಸಿದ್ರಂತೆ . ಆಗ ಸಂಶೋಧಕರು ಕಂಡು ಹಿಡಿದಿದ್ದೇನಪ್ಪಾ ಅಂದ್ರೆ, ಯಾರು ಟೆನ್ಷನ್ ಮಾಡ್ಕೊಂಡಿದ್ರೋ, ಅವರೇ ಚನ್ನಾಗಿ ಕೆಲಸ ಮುಗಿಸೋದು ಅಂತ. ವಿಚಿತ್ರ ಅಲ್ವಾ?
ನೀವು, ಸ್ಕೂಲು- ಕಾಲೇಜಲ್ಲಿ ನಾನು ಯಾವಾಗ್ಲೂ ಕನಸು ಕಾಣ್ತಾ ಲಾಸ್ಟ್ ಬೆಂಚಲ್ಲೇ ಉಳ್ಕೊಂಡ್ಬಿಟ್ಟೆ… ನನ್ನ ಲೈಫ್ ಏನಾಗತ್ತೋ ಅಂತ ಚಿಂತೆ ಮಾಡಿದ್ರೆ, ಇಲ್ಲಿದೆ ನಿಮ್ಗೊಂದು ಒಳ್ಳೆ ಸುದ್ದಿ. ವಿಜ್ಞಾನಿಗಳ ಪ್ರಕಾರ, ಒಂದು ಕೆಲಸ ಮಾಡೋವಾಗ ನಿಮ್ಮ ಗಮನ ಆ ಕಡೆ ಈ ಕಡೆ ಹೋದ್ರೆ, ಒಂದೇ ಸಲಕ್ಕೆ ನಿಮಗೆ ಒಂದಕ್ಕಿಂತ ಹೆಚ್ಚು ಕೆಲಸ ಮಾಡೊ ಶಕ್ತಿ ಇದೆ ಅಂತಂತೆ. ಹಾಗೇ, ಹಗಲುಗನಸು ಕಾಣೋರಿಗೆ, ನೆನಪಿನ ಶಕ್ತಿ ಜಾಸ್ತಿ .
ನಿಮ್ಮ ಕೈಲಿ ಒಂದು ಪುಸ್ತಕ ಇದ್ದುಬಿಟ್ರೆ, ಲೋಕಾನೇ ಮರೆತುಬಿಡ್ತೀರ…ಇದರ ಜೊತೆಗೆ ಸ್ವಲ್ಪ ಕಾಫಿ ಸಿಕ್ಕಿಬಿಟ್ರಂತೂ, ಸ್ವರ್ಗಕ್ಕೆ ಮೂರೇ ಮೆಟ್ಟಿಲು. ಮತ್ತೇನೂ ಬೇಡ, ಯಾರೂ ಬೇಡ ಅಲ್ವಾ?ನೀವು ನಿಮ್ಮ ಜೊತೇನೆ ಜಾಸ್ತಿ ಸಮಯ ಕಳೆಯಕ್ಕೆ ಇಷ್ಟ ಪಡ್ತೀರ. 90 % ಅಂತರ್ಮುಖಿಗಳಿಗೆ ಓದೋ ಹವ್ಯಾಸ ಉಂಟಂತೆ ಹಾಗೇ,ಯಾರು ಚಿಕ್ಕ ವಯಸ್ಸಿಂದ ಓದೋ ಹವ್ಯಾಸ ಬೆಳೆಸಿಕೊಂಡಿರ್ತಾರೋ ಅಂಥಾವರು, ಮುಂದೆ ಬುದ್ದಿವಂತರಾಗಿರ್ತಾರೆ ಮತ್ತು ತಮ್ಮನ್ನ ಚನ್ನಾಗಿ ವ್ಯಕ್ತಪಡಿಸಿಕೊಳ್ತಾರೆ.
ಎಡಚರಿಗೆ ವಿಭಿನ್ನವಾದ ಯೋಚನಾಶಕ್ತಿ ಇರುತ್ತಂತೆ. 90 ರ ದಶಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ,ಎಡಗೈ ಉಪಯೋಗಿಸೋರ ಆಲೋಚನೆಗಳು ಡಿಫರೆಂಟಾಗಿ ಇರೋದ್ರಿಂದ ಅವರು ಎರಡು ಸಂಬಂಧ ಇಲ್ಲದಿರೊ ವಸ್ತುಗಳಲ್ಲೂ ಲಿಂಕ್ ಹುಡುಕ್ತಾರಂತೆ. ಇವರಲ್ಲಿ ಕ್ರಿಯಾಶೀಲತೆ ಜಾಸ್ತಿ ಮತ್ತು ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಬೇಗ ಒಂದು ಉಪಾಯ ಕಂಡು ಹಿಡೀತಾರೆ.
… ಹಾಗಾದ್ರೆ ಈಗ ಹೇಳಿ ನೀವು ಬುದ್ದಿವಂತರಾ, ಅಲ್ವಾ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
9 ವರ್ಷದ ಅಪ್ರಾಪ್ತೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಆತನನ್ನು ಸ್ಥಳೀಯರು ಹಿಡಿದು ಥಳಿಸಿ ಹತ್ಯೆಗೈದ ಘಟನೆ ಪಂಜಾಬ್ನ ಜಲಂಧರ್ ನಲ್ಲಿ ನಡೆದಿದೆ. ಜಲಂಧರ್ ನ ರಾಮ ಮಂಡಿ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಅಲೆಮಾರಿ ಕೂಲಿಕಾರನಾಗಿದ್ದ ಪಪ್ಪು ಕುಮಾರ್(39) 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಪೋಷಕರು ಕೂಡ ಅಲೆಮಾರಿ ಕೂಲಿಕಾರಾಗಿದ್ದು, ಬಾಲಕಿ ಹಾಗೂ ಆರೋಪಿ ನೆರೆಹೊರೆಯ ಮನೆಗಳಲ್ಲಿ ವಾಸವಾಗಿದ್ದರು. ಭಾನುವಾರ ಆರೋಪಿ ತನ್ನ ಮನೆಗೆ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾನೆ. ಈ…
ಶನಿವಾರ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಬಿಗ್ ಬಾಸ್ ಮನೆಯ ಮೊದಲನೇ ದಿನದ ಅನುಭವವನ್ನು ಕೇಳುತ್ತಿರುತ್ತಾರೆ. ಸುದೀಪ್, ಚಂದನ್ ಅವರನ್ನು ಕೇಳಿದಾಗ ಅವರು ಮಹಿಳಾ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟಿದ್ದಾರೆ. ಚಂದನ್ ಅವರ ಮಾತು ಕೇಳಿ ದೀಪಿಕಾ, ಪ್ರಿಯಾಂಕಾ ಹಾಗೂ ಭೂಮಿ ಮೊದಲು ಮುಜುಗರಕ್ಕೆ ಒಳಗಾದರು. ನಂತರ ದೀಪಿಕಾ ನನ್ನ ಮರ್ಯಾದೆ ಹೋಗುತ್ತಿದೆ ಎಂದು ತಮ್ಮ ಮುಖವನ್ನು ಮುಚ್ಚಿಕೊಂಡರು. ಬಿಗ್ ಬಾಸ್ ಮನೆಗೆ ಬಂದ ಮೊದಲನೇ ದಿನ ನಾನು ಮಹಿಳಾ ಸ್ಪರ್ಧಿಗಳನ್ನು ಮಾತನಾಡಿಸಿ ಮಲಗಿದ್ದೆ. ಮರುದಿನ…
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರಪದ್ಧತಿ, ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆಧುನಿಕ ಜೀವನಶೈಲಿಯಲ್ಲಿ ಕಡಿಮೆ ದೇಹದಂಡನೆ ಹಾಗೂ ತಪ್ಪಾದ ಆಹಾರಪದ್ಧತಿಯಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾದುದು ಹೊಟ್ಟೆಯ ಬೊಜ್ಜು. ಇದಕ್ಕೆ ಎರಡು ರೀತಿಯ ಕಾರಣಗಳನ್ನು ಕಾಣಬಹುದು. ಸಬ್ಕ್ಯುಟೆನಿಯಸ್ ಫ್ಯಾಟ್ – ಇದು ಸಾಮಾನ್ಯವಾಗಿ ಕೈ-ಕಾಲುಗಳ ಮೇಲ್ಭಾಗದಲ್ಲಿರುವ ಕೊಬ್ಬಿನಂಶ. ಇದು ಹೊಟ್ಟೆಯ ಚರ್ಮದ ಒಳಭಾಗದಲ್ಲಿ ಬಂದಲ್ಲಿ ಅಷ್ಟೆಲ್ಲ ತೊಂದರೆ ಆಗುವುದಿಲ್ಲ. ಶೇ. 80ರಷ್ಟು ಜನರಲ್ಲಿ ಇದಕ್ಕಿಂತ ಜಾಸ್ತಿ ಹೊಟ್ಟೆಯ ಬೊಜ್ಜಿಗೆ ಮುಖ್ಯ ಕಾರಣ ವಿಸರಲ್ ಫ್ಯಾಟ್. ಇದು ಹೊಟ್ಟೆಯ…
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಹಾಗೂ ಪರಿಸರದ ಮೇಲೆ ಇರುವ ಪ್ರೀತಿಯಿಂದ ಅರಣ್ಯ ಇಲಾಖೆ ನೆರವಿಗೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಅವರ ಈ ಕಾರ್ಯಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರು ಕೂಡ ಕೈ ಜೋಡಿಸಿದ್ದಾರೆ. ಹೌದು, ದರ್ಶನ್ ಅವರು ತಮ್ಮ ಸಫಾರಿಯ ವೇಳೆ ಸೆರೆ ಹಿಡಿದಿದ್ದ ಫೋಟೋವನ್ನು ನಟ ಚಿಕ್ಕಣ್ಣ 1 ಲಕ್ಷ ರೂ. ನೀಡಿ ಖರೀದಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿ ಟ್ವೀಟ್ ಮಾಡಿರುವ ದರ್ಶನ್, ‘ನಮ್ಮ…
ಎಲ್ಲಾ ಕಾಲದಲ್ಲೂ ಸುಲಭವಾಗಿ ದೊರೆಯುವ ಖರ್ಜೂರ ವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.ಡ್ರೈಫ್ರುಟ್ಗಳು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅಸಿಡಿಟಿ ಮತ್ತು ಎದೆ ಉರಿ ಇದ್ದರೆ ಒಂದು ಖರ್ಜೂರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ…
Why did India fight for freedom from British?